Advertisement

Tag: ಅಬ್ದುಲ್ ರಶೀದ್

ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ

‘ನೀನು ಏನು ಬೇಕಾದರೂ ಮಾಡು, ಆದರೆ ನಿನ್ನ ಅವೆರೆಡನ್ನು ಮಾತ್ರ ಸಾರ್ವಜನಿಕವಾಗಿ ತೋರಿಸಬೇಡ ಎಂದು ಎಷ್ಟೇ ಬೇಡಿಕೊಂಡರೂ ಸಾಕುಂತಲೆ ರೊಚ್ಚಿಗೆದ್ದಾಗಲೆಲ್ಲಾ ಬೇಕಂತಲೇ ಅವುಗಳನ್ನು ದೊಡ್ಡದಾಗಿ ತೋರಿಸಿ ನನ್ನನ್ನು ಬೆಂಕಿಯ ಬಾಣಲೆಯಲ್ಲಿ ಹುರಿಯುತ್ತಿದ್ದಳು. ಅವಳಿಗೆ ನಿಜವಾಗಿಯೂ ಸಿಟ್ಟು ಬಂದಿತ್ತು. ಆಕೆಗೆ ನಾನು ಅಂದರೆ ಬಹಳ ದೊಡ್ಡ ಎಡವಟ್ಟುಗಳ ಒಂದು ದೊಡ್ಡ ಮೊತ್ತ. ಒಂದು ಎಡವಟ್ಟಿನ ನಂತರ ಇನ್ನೊಂದು ಅದರ ನಂತರ ಮತ್ತೊಂದು ಮಗದೊಂದು ನೂರಾ ಒಂದು….
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಒಂಟಿ ಪಿಶಾಚಿ” ನಿಮ್ಮ ಓದಿಗೆ

Read More

‘ಮೋಹಿತ’ನ ಮೋಹಕ ಕವಿತೆಗಳು: ಅಬ್ದುಲ್‌ ರಶೀದ್‌ ಕವನ ಸಂಕಲನಕ್ಕೆ ಎಸ್‌. ಮಂಜುನಾಥ್‌ ಮುನ್ನುಡಿ

ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ? ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು.
ಅಬ್ದುಲ್‌ ರಶೀದ್‌ ಕವನ ಸಂಕಲನ “ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನ ಹುರಿ”ಗೆ ಎಸ್‌. ಮಂಜುನಾಥ್‌ ಬರೆದ ಮುನ್ನುಡಿ

Read More

‘ಹೂವಿನ ಕೊಲ್ಲಿʼ ಅನ್ನುವ ದ್ವೀಪ: ಅಬ್ದುಲ್ ರಶೀದ್ ಕಾದಂಬರಿಗೆ ಬಿ.ವಿ.ರಾಮಪ್ರಸಾದ್ ಪ್ರಸ್ತಾವನೆ

“ಈ ಕಾದಂಬರಿಯ ನಿರೂಪಣೆಯ ವೈಶಿಷ್ಠ್ಯ ಇರುವುದು ಎಲ್ಲಿಯೂ ಪಾತ್ರಗಳ ಮೇಲೆ, ಅವುಗಳ ನಡೆಗಳ ಮೇಲೆ, ನಂಬಿಕೆಗಳ ಮೇಲೆ ‘ನೈತಿಕʼ ಅಥವಾ ‘ವೈಚಾರಿಕʼ ಟಿಪ್ಪಣಿಯನ್ನು ಮಾಡದೇ ಇರುವುದು. ‘ಇವರೆಲ್ಲಾ ಎಂತಾ ಮೂಢನಂಬಿಕೆ ಜನಾರಿʼ ಎಂದೆಲ್ಲಾ ಹೇಳದೇ ಇರುವುದು. ಇಲ್ಲಿ ನಿರೂಪಕ ಇದ್ದು ಕೂಡ ಇಲ್ಲ ಅನ್ನುವ ಹಾಗೆ ಪಾತ್ರಗಳು ತಮ್ಮ ಪಾಡಿಗೆ ತಾವಿದ್ದಾವೆ ಅನಿಸುತ್ತದೆ”
ಕನ್ನಡದ ಕಥೆಗಾರ ಅಬ್ದುಲ್ ರಶೀದ್ ದಶಕಗಳ ಹಿಂದೆ ಬರೆದಿದ್ದ, ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದ ‘ಹೂವಿನಕೊಲ್ಲಿ’ ಕಾದಂಬರಿ ಈಗ ಪರಿಷ್ಕೃತಗೊಂಡು ಮರುಮುದ್ರಣಗೊಳ್ಳುತ್ತಿದೆ. ಪರಿಷ್ಕೃತ ಕಾದಂಬರಿಯಲ್ಲಿ ಪ್ರಕಟವಾಗಿರುವ ಡಾ. ಬಿ.ವಿ.ರಾಮಪ್ರಸಾದ್ ಅವರ ಪ್ರಸ್ತಾವನೆ ಇಲ್ಲಿದೆ.

Read More

ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕಥೆ

ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು.
ಅಬ್ದುಲ್‌ ರಶೀದ್‌ ಬರೆದ ಕಥೆ “ಅಂತಾರಾಷ್ಟ್ರೀಯ ಕುಂಬಳಕಾಯಿ”

Read More

ತೀರಿಹೋದ ತಿರುಮಲೇಶರ ಕುರಿತು

ಇದೇನು ನನ್ನ ವೈಯುಕ್ತಿಕ ಅನಿಸಿಕೆ ಅಲ್ಲ. ಕಾವ್ಯ ಪ್ರತಿಭೆಯ ಜೊತೆಜೊತೆಗೇ ಅದರ ದುಪ್ಪಟ್ಟು ವ್ಯಾಮೋಹಗಳೂ ಇದ್ದರೆ ಮಾತ್ರ ಕವಿಗಳು ಇಂತಹ ಖಿನ್ನತೆಗಳಿಂದ ಪಾರಾಗುತ್ತಾರೆ ಎಂದು ನಾನು ಯೌವನದಲ್ಲಿ ಓದಿರುವ ಸಂಸ್ಕೃತ ಕಾವ್ಯಮೀಮಾಂಸೆಗಳು ಹೇಳಿದ್ದವು. ಬಹುಶಃ ತಿರುಮಲೇಶರು ಪಾಶ್ಚಾತ್ಯ ಕಾವ್ಯ ಮೀಮಾಂಸೆಗೆ ಹೆಚ್ಚು ಒತ್ತುಕೊಟ್ಟಿದ್ದರು ಅನಿಸುತ್ತದೆ ಇರಲಿ ಬಿಡಿ.
ಕೆ.ವಿ. ತಿರುಮಲೇಶರ ಕುರಿತು ಅಬ್ದುಲ್‌ ರಶೀದ್‌ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ