Advertisement

Tag: ಕೆಂಡಸಂಪಿಗೆ

ಪ್ರಸಿದ್ಧ ಫೋಟೋದ ಹಿಂದಿನ ರಹಸ್ಯ: ಶೇಷಾದ್ರಿ ಗಂಜೂರು ಸರಣಿ

ಆ ಫೋಟೊ ನೋಡಿದ ತಕ್ಷಣವೇ ಅವಳಿಗೆ ಅದು ಕಂಡಿತು. ಆ ಫೋಟೋದಲ್ಲಿನ ಸ್ಪಷ್ಟತೆ, ಅದರಲ್ಲೂ ಫ್ರಾಂಕ್ಲಿನ್‌ಳಂತಹ ಅನುಭವ-ಪಾಂಡಿತ್ಯ ಎರಡೂ ಇದ್ದ ಮೇಧಾವಿಗೆ, ಒಂದರೆ ಕ್ಷಣ ಅವಳ ಉಸಿರುಗಟ್ಟಿಸಿರಬಹುದು. ಆ ಫೋಟೋ ಮುಖಾಂತರ, ಡಿಎನ್‌ಎ ಗಟ್ಟಿದನಿಯಲ್ಲಿ, ಖಡಾಖಂಡಿತವಾಗಿ ಸಾರುತ್ತಿತ್ತು: “ನಾನೊಂದು ಸುರುಳಿ!”. ಪೈಥಾಗೊರಾಸನಿಂದ ಹಿಡಿದು, ಕೊನೆಗೂ ಡಾರ್ವಿನ್ನನವರೆಗೆ ಸಾವಿರಾರು ವರ್ಷಗಳ ಸಿದ್ಧಾಂತಗಳ, ಮೆಂಡೆಲ್-ಮಾರ್ಗನ್ ಅಂತಹವರ ಪ್ರಯೋಗಗಳ ಗುರಿಯ ಸ್ವರೂಪದ ದರ್ಶನವಾಗಿತ್ತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”ಯಲ್ಲಿ ಹೊಸ ಬರಹ

Read More

ಕರುಣಾಳು ಬಾ ಬೆಳಕೆ-ನವೋದಯ ಕನ್ನಡ ಕಾವ್ಯದಲ್ಲಿ ಪ್ರಾರ್ಥನೆ: ಸುಕನ್ಯಾ ಕನಾರಳ್ಳಿ ಅಂಕಣ

ನಾಗರಿಕತೆಯ ಇತಿಹಾಸ ಬರ್ಬರತೆಯ ಇತಿಹಾಸವೂ ಹೌದು ಎಂದು ಕಾರ್ಲ್ ಮಾರ್ಕ್ಸ್ ಹೇಳುತ್ತಾನೆ. ವೈಚಾರಿಕತೆ, ವಿಜ್ಞಾನ, ತಂತ್ರಜ್ಞಾನಗಳು ಹೊರಗಿಂದ ಬಂದು ಎರಡು ದಿನವಿದ್ದು ಮರಳಿ ಹೋದ ನೆಂಟರಾಗಿರಲಿಲ್ಲ. ಬದಲಿಗೆ ನಮ್ಮ ದೃಷ್ಟಿಕೋನಗಳನ್ನೇ ಪಲ್ಲಟಿಸಿದ, ಅಸಹನೆ ಮತ್ತು ಕ್ರೌರ್ಯಗಳನ್ನು ಸಾಮಾನ್ಯವಾಗಿಸಿದ ಪ್ರಚಂಡ ಶಕ್ತಿಯವು. ಯಂತ್ರವೇ ಬೃಹತ್ತಾಗಿ ಬೆಳೆದು ಮನುಷ್ಯ ಕುಲವನ್ನು ಆತ್ಮಹೀನವಾಗಿಸುವ ನಾಗರಿಕತೆ ಎಂಬ ದಮನಶಕ್ತಿಯ ಬಗ್ಗೆ ಎಚ್ಚರಿಸಲು ಇಂಗ್ಲೀಷ್ ರೊಮ್ಯಾಂಟಿಕ್ಕರು ಪ್ರಕೃತಿಯ ದನಿಯಾದ ಕಾವ್ಯವನ್ನೇ ಬಳಸಿಕೊಂಡರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಏಳನೆಯ ಬರಹ

Read More

‘ಡಿಸೆಂಬರ್ ಬಂದಿತು, ಚಳಿಯಾಕೆ ಬಂದಳು’: ಮಹಾಲಕ್ಷ್ಮೀ ಕೆ.ಎನ್.‌ ಬರಹ

ಈ ಬೆಟ್ಟಕ್ಕೆ, ಆ ಮರಕ್ಕೆ, ಹೆಂಚಿನ ಪುಟ್ಟ ಮನೆಗೆ ಹಿಮದ ಹೊದಿಕೆ ಬಂದುಬಿಡುತ್ತೆ. ನಮ್ಮನ್ನೂ ಆ ಹೊದಿಕೆ ಆವರಿಸಿಬಿಡುತ್ತದೆ. ವಿಸ್ಮೃತ ದೃಶ್ಯವನ್ನು ತಂದಿಟ್ಟುಬಿಡುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲಾ ಹಿಮಮಣಿ ಕಾಲಿಗೆ ಮುತ್ತಿಡುತ್ತದೆ. ಎಳೆಕೂಸಿನ ಕೈ ಕಾಲುಗಳ ಮೆತ್ತಗೆ ಹಿಡಿದು ತೊಳೆಯುವಂತೆ ನಮ್ಮನ್ನು ತಣ್ಣಗೆ ಸೋಕಿ ತೊಳೆಯುತ್ತದೆ ಮಂಜು. ಹಿಮವು ನೆಲದ ಮೇಲೆ ಆವರಿಸಿದಾಗ ಧ್ವನಿ ಹೀರಿಕೊಳ್ಳುವ ಸಾಧನವಾಗಿ ಕಾರ್ಯನಿರ್ವಹಿಸುವುದರಿಂದ ಇಷ್ಟು ದಿನದ ಸದ್ದು ಸಪ್ಪಳ ಸುಮ್ಮನಾಗುತ್ತದೆ.
ಡಿಸೆಂಬರ್‌ ಚಳಿಯ ಕುರಿತು ಮಹಾಲಕ್ಷ್ಮೀ ಕೆ.ಎನ್.‌ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವೈದೇಹಿ ಬರೆದ ಕತೆ

ಯಾಕೋ ನನಗೆ ಕೋರ್ಟುಮನೆ ಅಲೆದೇ ಸೋತು ಕುಸಿದುಹೋಗಿದ್ದ ಅಪ್ಪನ ಹೋರಾಟದ ಬಗ್ಗೆ ಹೇಳಲೇಬೇಕೆನಿಸಿತು. ಆಸ್ತಿಗಾಗಿ ಕುಟುಂಬದಲ್ಲೇ ಒಂದು ಆತ್ಮಹತ್ಯೆ ಆಯಿತು, ಒಂದು ಕೊಲೆ ಆಯಿತು, ಇದೆಲ್ಲ ನಮ್ಮ ಮಟ್ಟಿಗೆ ಎಂಥ ದೊಡ್ಡದು ಯೋಚಿಸಿ. ಅಪ್ಪ ಕಡೆಕಡೆಗೆ ತಮ್ಮದೇ ಕುಟುಂಬದೊಂದಿಗೆ ಕೋರ್ಟುಕಚೇರಿ ವ್ಯಾಜ್ಯ ಯಾಕಾದರೂ ಬೇಕಿತ್ತು ಅಂತ ಕೊರಗುತಿದ್ದರು ಅಷ್ಟಿಷ್ಟಲ್ಲ. ಹಾಗೆಂದು ‘ಜಗಳ ಬೇಡ, ಎಲ್ಲ ನಿಮಗೇ, ತಕೊಳ್ಳಿ’ ಅಂತ ಬಿಟ್ಟುಕೊಟ್ಟರೇನು? ಇಲ್ಲವಲ್ಲ. ಅದು ಸಾಧ್ಯವೂ ಇಲ್ಲ. ‘ಒಂದು ರೀತಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ಕತೆಯಂತೆ ನಾವೆಲ್ಲ.
ನಾನು ಮೆಚ್ಚಿದ ನನ್ನ ಕಥಾ ಸರಣಿಯ ಕೊನೆಯ ಕಂತಿನಲ್ಲಿ ವೈದೇಹಿ ಬರೆದ ಕತೆ “ಅಮುದ ಹೇಳಿದ ಕತೆ”

Read More

ಭಕ್ತೆ-ಕಾವ್ಯ: ಸುಕನ್ಯಾ ಕನಾರಳ್ಳಿ ಅಂಕಣ

ಪ್ರಾಪಂಚಿಕ ಮದುವೆಗೆ ಬೆಚ್ಚಿ ಬೀಳುತ್ತಿದ್ದ ನಿದರ್ಶನಗಳಲ್ಲಿ ಸುಮಾರು ಹದಿನೇಳನೆಯ ಶತಮಾನದ ಕೇರಳದಲ್ಲಿದ್ದ ಅನುಭಾವಿನಿ ನಂಗ ಪೆಣ್ಣು ಒಂದು ಉತ್ತಮ ಉದಾಹರಣೆ. ಕೊಚ್ಚಿನ್ ರಾಜಾಸ್ಥಾನವಾದ ತ್ರಿಪ್ಪುನಿತ್ತುರದಲ್ಲಿದ್ದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದ ಈಕೆಯ ಮದುವೆಯ ದಿನ ಭರ್ಜರಿ ಮೆರವಣಿಗೆಯಲ್ಲಿ ವಧುವಿನ ಮನೆಗೆ ಬರುತ್ತಿದ್ದ ವರನಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿ ತ್ರಿಪ್ಪುನಿತ್ತುರದಲ್ಲಿದ್ದ ದೇವಸ್ಥಾನದ ವಿಷ್ಣುವಿನಲ್ಲಿ ಲೀನವಾಗಿದ್ದಳು. ಈಗಲೂ ನಂಗ ಪೆಣ್ಣು ಹಬ್ಬದ ದಿನದಂದು ಮೂರ್ತಿಯನ್ನು ವರನಾಗಿ ಮೆರವಣಿಗೆಯಲ್ಲಿ ಅವಳ ತಂದೆಯ ಮನೆಗೆ ಹೊತ್ತೊಯ್ಯಲಾಗುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಆರನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ