Advertisement

Tag: ಕೆಂಡಸಂಪಿಗೆ

ಬುದ್ಧನಿಲ್ಲ ಇಲ್ಲಿ!: ಸುಕನ್ಯಾ ಕನಾರಳ್ಳಿ ಅಂಕಣ

ಮೂರನೆಯ ದಿನದ ಹೊತ್ತಿಗೆ ಹಕ್ಕಿಯಂತೆ ಹಾರಿದರೆ ಮತ್ತೆ ಮರಳುವುದಿಲ್ಲ ಎಂದು ನೂರು ಬಾರಿ ಶಪಥ ಮಾಡಿದ್ದೆ. ಅಷ್ಟರ ಹೊತ್ತಿಗೆ ಇಂಗ್ಲಿಷ್ ಪ್ರವಚನ ಯಾಕೋ ಕೃತಕವೆನ್ನಿಸಿತ್ತು. ಅದೇ ದನಿ ಹಿಂದಿಯಲ್ಲಿ ಕೇಳಿಸಿಕೊಳ್ಳುತ್ತಿದ್ದವರ ಕಡೆಯಿಂದ ಬಂದಾಗ ಅರೆ, ಇದರಲ್ಲಿ ಸಾಕಷ್ಟು ಜೀವಂತಿಕೆ ಇದೆಯಲ್ಲ ಅಂತನ್ನಿಸಿ ಕೊನೆಯ ಪ್ರವಚನವನ್ನು ಕೇಳಲು ಹಿಂದಿಯ ಕಡೆಗೆ ಹೋಗಲು ಪ್ರಯತ್ನಿಸಿದೆ. ‘ಆಚಾರ್ಯರನ್ನು ಕೇಳಿ,’ ಎಂಬ ಆದೇಶ ಬಂತು. ಸರಿ, ಕೇಳಿದೆ. ಪ್ರೈಮರಿ ಸ್ಕೂಲಿನಲ್ಲಿ ‘ಮಿಸ್, ಮಿಸ್, ನಂಗೆ ಬಾತ್ ರೂಮಿಗೆ ಹೋಗಬೇಕು, ಅರ್ಜೆಂಟೂ…’ ನೆನಪಿಗೆ ಬಂದು ಮುಖದಲ್ಲಿ ನಗು ಮೂಡಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿಮೂರನೆಯ ಬರಹ

Read More

ಆಪ್ತವಾಗಿದ್ದ ಆಪ್ತರಂಗ ಪ್ರಯೋಗಗಳು: ಚಿತ್ರಾ ವೆಂಕಟರಾಜು ಸರಣಿ

ಮೂರನೇ ಬೆಲ್‌ ಆದ ತಕ್ಷಣ ನಟ ನಿಧಾನವಾಗಿ ಪ್ರೇಕ್ಷಕರ ಕೈಹಿಡಿದು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ನಟ ಪಾತ್ರದಲ್ಲಿ ಇಳಿಯುತ್ತಿದ್ದಂತೆ ಪ್ರೇಕ್ಷಕನೂ ತನ್ನನ್ನು ಮರೆಯುತ್ತಾನೆ. ನಟರೊಂದಿಗೆ – ನಿರ್ದೇಶಕರು ತಮ್ಮ ತಮ್ಮ ಕಲ್ಪನೆಯಲ್ಲಿ ಇಷ್ಟು ತಿಂಗಳೂ ಕಟ್ಟಿದ ನಾಟಕ ಪ್ರೇಕ್ಷಕರೊಂದಿಗೆ ಸಂವಾದಕ್ಕಿಳಿಯುತ್ತದೆ. ನೋಡಿದ ನಾಟಕಗಳಲ್ಲಿ ಕೆಲವೇ ಕೆಲವು ಪ್ರಯೋಗಗಳು ನಾಟಕ ಮುಗಿದ ಎಷ್ಟೋ ವರ್ಷಗಳ ನಂತರವೂ ನೆನಪಿನ ಭಾಗವಾಗಿ ಭದ್ರವಾಗಿರುತ್ತದೆ ಎಂದರೆ ಆ ಮಾಧ್ಯಮಕ್ಕಿರುವ ಶಕ್ತಿ ಅಂಥದ್ದು! ಆ ಪ್ರಯೋಗಗಳು ಹೇಗಿತ್ತು ಎಂದರೆ ಹೇಳಲು ಬರುವುದಿಲ್ಲ…
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಹರ್ಷದ ಕೂಳನ್ನು ನೆಚ್ಚಿಕೊಂಡು ವರ್ಷದ ಕೂಳನ್ನು  ಕಳೆದುಕೊಳ್ಳಬಾರದಂತೆ!!: ಬಸವನಗೌಡ ಹೆಬ್ಬಳಗೆರೆ ಸರಣಿ

ನನಗೆ ತೊಂದರೆ ಆಗುತ್ತಿದ್ದುದು ನನ್ನ ಸಂಬಂಧಿಕರ ಮನೆಯಿಂದ ಬರುತ್ತಿದ್ದ 3 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಲು ತುಂಬಾ ತಡವಾಗಿ ಬರುತ್ತಿದ್ದರು. ಇದರಿಂದ ನನಗೆ ಅವರು ಹೋಗುವವರೆಗೂ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡಿದ್ದ ರೂಮಿನಲ್ಲಿ ಒಂದೇ ಹಾಲ್ ಇದ್ದುದ್ದರಿಂದ ಮಕ್ಕಳ ಎದುರಿಗೆ ಹೋಗಿ ಅಡುಗೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿ ಅವರು ಹೋಗುವವರೆಗೂ ಕಾಯಬೇಕಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ತ್ಯಾಗಕ್ಕಿಲ್ಲಿ ಬೆಲೆಯಿದೆಯೇ?: ಜಯಲಕ್ಷ್ಮಿ ಪಾಟೀಲ್ ಅಂಕಣ

ಸಮಾಜಘಾತುಕ ಕೆಲಸಗಳಿಗಾಗಿ, ಯಾರದೋ ತೇಜೋವಧೆಗಾಗಿ, ಜಾತಿಯನ್ನು ಜರಿಯುವುದಕ್ಕಾಗಿ, ಜಾತಿಯನ್ನಿಟ್ಟುಕೊಂಡು ಮೆರೆಯುವುದಕ್ಕಾಗಿ, ಇನ್ನೊಬ್ಬರ ವಯಕ್ತಿಕ ಬದುಕಿನ ಬಗ್ಗೆ ನಮಗೇನೂ ಗೊತ್ತಿಲ್ಲದಿದ್ದರೂ ಎಲ್ಲ ಬಲ್ಲವರಂತೆ ಆಡಿಕೊಳ್ಳುವುದಕ್ಕಾಗಿ, ಸಂವಿಧಾನವು ದೇಶದ ಸುವ್ಯವಸ್ಥೆಗೊಂದು ರಾಜಮಾರ್ಗ ಎನ್ನುವುದು ತಿಳಿದಿದ್ದರೂ ಅದನ್ನು ವಿಷ’ಯ ಮಾಡಿಕೊಂಡು ಕಿತ್ತಾಡುವುದಕ್ಕಾಗಿ, ರಾಜಕೀಯ ಪಕ್ಷಗಳ ಮೇಲಿನ ಕುರುಡುಮೋಹದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಹೆಸರುಗಳಿಗೆ ಮಸಿ ಬಳಿಯುವುದರ ಮೂಲಕ ಸಾಮಾಜಿಕ ವಾತಾವರಣವನ್ನು ಹದಗೆಡಿಸಿ ದ್ವೇಷವನ್ನು ಹರಡುವುದಕ್ಕಾಗಿ, ಇತಿಹಾಸ ತಿರುಚುವ ಮೂಲಕ ಏನೋ ಮಹತ್ತರವಾದುದನ್ನು ಕಡೆದು ಗುಡ್ಡೆ ಹಾಕಿದೆ ಎಂಬಂತಾಡುವುದು, ಎಂಥಾ ನಾಚಿಗ್ಗೇಡಿತನ ಅನ್ನುವ ಅರಿವಾದರೂ ಇರಬೇಕಲ್ಲವೆ?
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ಡಾ. ದಿಲೀಪ್‌ ಎನ್ಕೆ ಬರೆದ ಈ ಭಾನುವಾರದ ಕತೆ “ಭೈರೂಪ”

ಎದ್ದು ಬಿದ್ದು ತಕಥೈ ಕುಣಿದು, ನೆಗೆದು, ಹತ್ತಿರ ಸುಳಿದು ಒಂದೊಂದೂ ಒಂದೊಂದು ಆತ್ಮಗಳಂತೆ ಪೀಡಿಸುತ್ತಿರುವ ವಂದನಾಳ ಬಟ್ಟೆಬರೆಗಳು, ದಿನೋಪಯೋಗಿ ವಸ್ತುಗಳು, ಆಕೆಯ ಸಹಜವಾದ ವಿವಿಧ ಭಂಗಿಗಳು…… ತಲೆಯನ್ನು ಆ್ಯಸಿಡ್‌ಗೆ ಅಜ್ಜಿದಂತೆ. ಅಸಂಖ್ಯ ಸುತ್ತಿಗೆಗಳು ಹೃದಯಕ್ಕೆ ಗುಕ್ಕು ಗುಕ್ಕನೆ ಗುದ್ದಿದಂತೆ. ಯಪ್ಪಾ… ಎನ್ನುತ್ತಾ ರೆಪ್ಪೆಯನ್ನು ಬಿಗಿಹಿಡಿದು ಅಭಿ ಹೊರಳಾಡಿದ. ಆದರೇನು? ವಂದನಾಳ ಮಾತುಕತೆಗಳು, ನಗು-ರಾಗ-ರಗಳೆಗಳು ಈ ಎಲ್ಲಕ್ಕೂ ರೆಕ್ಕೆ ಬಂದು ಅವು ಅಭಿಯ ಸುತ್ತ ಗಸ್ತು ಹೊಡೆಯುತ್ತಲೇ ಇದ್ದವು.
ಡಾ. ದಿಲೀಪ್‌ ಎನ್ಕೆ ಕತೆ “ಭೈರೂಪ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ