Advertisement

Tag: ಜುಲೇಖಾ ಬೇಗಂ

ಪ್ರೀತಿಯ ಸುಳಿಯಲ್ಲಿ ಸಿಲುಕಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಂದಹಾಗೆ ಅವಳು ಬೇರಾರೂ ಅಲ್ಲ. ಕಂಪೆನಿಯ ಮಾಲೀಕರಾದ ಮಾಂಡ್ರೆ ಕವಿಗಳ ಮಗಳು, ಭಾಗೀರಥಿಯನ್ನೇ. ನಾನು ಹೌಹಾರಿಹೋದೆ. ಅವನೂ ಏನೂ ಸಾಮಾನ್ಯನಲ್ಲ; ಕಂಪೆನಿಯಲ್ಲಿ ಮಾಂಡ್ರೆ ಕವಿಗಳಿಗೆ ಬಲಗೈ ಆಗಿದ್ದ. ಏನೇ ಹೊಸ ನಾಟಕಗಳ ಸ್ಕ್ರಿಪ್ಟ್ ಬರೆಯುವುದಕ್ಕೆ ಜಕ್ಲಿ ಈಶ್ವರನೇ ಬರಬೇಕಿತ್ತು. ಅಕ್ಷರವಂತೂ ಅದ್ಭುತವಾಗಿತ್ತು. ‘ಕವಿಗಳಿಗೆ ವಿಷಯ ಗೊತ್ತಾ?’ ಎಂದು ಕೇಳಿದೆ. ಜಕ್ಲಿ ಈಶ್ವರ ‘ಇಲ್ಲ’ ಎಂದ. ‘ಅವರ ಮಗಳಿಗೆ, ಆ ಹುಡುಗಿಗೆ?’ ಎಂದೆ. ತಲೆಯಲ್ಲಾಡಿಸಿದ. ಅಂದರೆ ಅವಳಿಗೆ ಗೊತ್ತಿಲ್ಲದೆ ಅವಳನ್ನು ಪ್ರೀತಿಸುವುದು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನೇಳನೆಯ ಕಂತು

Read More

ಕುಣಿಯಬೇಕಿದ್ದ ಕಾಲುಗಳ ಕಟ್ಟಿ…: ಜುಲೇಖಾ ಬೇಗಂ ಜೀವನ ವೃತ್ತಾಂತ

ಸರಿ, ಮಳೆ ನಿಂತು ಮನೆ ತಲುಪುವ ಹೊತ್ತಿಗೆ ರಾತ್ರಿ ಎಂಟರ ಹೊತ್ತು. ದೊಡ್ಡ ರಾದ್ಧಾಂತವೇ ಆಗಿತ್ತು. ‘ಯಾಕಿಷ್ಟು ತಡವಾಯ್ತು?’ ಪ್ರಶ್ನೆ ಗಡುಸಾಗಿಯೇ ಕೇಳಿಸಿತು. ಏನು ಉತ್ತರಿಸಬೇಕೆಂದು ತೋರದೆ, ಬೇಬಿಯಕ್ಕನೊಂದಿಗೆ ಪಿಚ್ಚರ್ ನೋಡುವುದಕ್ಕೆ ಹೋಗಿದ್ದೆ ಎಂದುಬಿಟ್ಟೆ. ನಂತರ ಕೇಳಿದ್ದು, ಕೆನ್ನೆಯ ಮೇಲೆ ಬಿದ್ದ ಛಟಾರ್ ಎಂಬ ಏಟಿನ ದನಿಯಷ್ಟೇ! ‘ಹೇಳದೆ ಕೇಳದೆ ಇನ್ನೆಲ್ಲಿಯೂ ಹೋಗಕೂಡದು. ಡಾನ್ಸ್ ಕ್ಲಾಸ್ ಸೇರಿಸಿಯೇ ತಪ್ಪು ಮಾಡಿದೆ’ ಎಂದು ಹೇಳಿದ್ದರೆ ಅತ್ತು ಸುಮ್ಮನಾಗುತ್ತಿದ್ದೆ.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹದಿನಾರನೆಯ ಕಂತು

Read More

ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ…: ಜುಲೇಖಾ ಬೇಗಂ ಜೀವನ ವೃತ್ತಾಂತ

ನನ್ನ ಬೆಳವಣಿಗೆಯನ್ನು ಅವಳಿಗಿಂತ ಚೆನ್ನಾಗಿ ಗುರುತಿಸಬಲ್ಲ ಬೇರಾರೂ ಇರಲಿಲ್ಲ. ನಾನು ಕಲಾವಿದೆಯಾಗಬೇಕೆಂದೇ ಅವಳ ಒತ್ತಾಯವೂ ಇತ್ತು. ಒಬ್ಬರಿಗಿಂತ ಇಬ್ಬರು ಲೇಸೆಂಬ ಮಾತು ನನಗೆ ಹೊಂದಿದ್ದೇ ಈಗ! ‘ಐದು ವರ್ಷದ ಹಿಂದೆಯೇ ನೀನು ಪಾತ್ರದಲ್ಲಿ ಕಳೆದುಹೋಗುತ್ತಿದ್ದೆ. ಇನ್ನು ಇಷ್ಟೆಲ್ಲ ಕಷ್ಟಪಟ್ಟು, ನಾಟಕಗಳಲ್ಲಿ ಅಭಿನಯಿಸಿ ಅನುಭವ ಪಡ್ಕೊಂಡಿದ್ದೀಯಾ. ದೊಡ್ಡ ಮಟ್ಟಕ್ಕೆ ಬೆಳೀಬೇಕು ಕಣೆ’ ಎಂದು ಬೆಂಬಲವಾಗಿ ನಿಂತು, ‘ನೀನು ಮಾಂಡ್ರೆಯಂತಹ ದೊಡ್ಡ ಕವಿಗಳ ಜೊತೆಯಲ್ಲಿ ಪಳಗಬೇಕು. ಕಲಿಯೋಕೆ ಸಾಕಷ್ಟಿರುತ್ತೆ’ ಅಂತಲೂ ದಾರಿ ತೋರಿದಳು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ”

Read More

ಹಾರಿಹೋದ ಪ್ರಾಣಪಕ್ಷಿ!: ಜುಲೇಖಾ ಬೇಗಂ ಜೀವನ ವೃತ್ತಾಂತ

ಆವತ್ತು ಸೋಮವಾರ. ಮುರುಡಯ್ಯನವರು ಸ್ನಾನ ಮುಗಿಸಿಕೊಂಡು ಕಾಲುದಾರಿಯನ್ನು ಹತ್ತಿ ಮೇಲೆ ಬರುತ್ತಿದ್ದರು. ‘ಅಂಕದ ಪರದೆ ಜಾರಿದ ಮೇಲೆ, ನಾಟಕವಿನ್ನು ಉಳಿದಿಹುದೇ?’ ಎಂದು ಹಾಡುತ್ತಾ ಮುರುಡಯ್ಯನವರು ಹೆಬ್ಬೆಟ್ಟು ಎಡವಿ ಧೊಪ್ಪೆಂದು ಕೆಳಗೆ ಬಿದ್ದಿದ್ದರು. ಅದನ್ನು ನೋಡಿದ ಕಂಪೆನಿಯ ಕೆಲವರು ಎತ್ತುವುದಕ್ಕೆಂದು ಮುಂದಾದರು. ಆಗ ಮುರುಡಯ್ಯನವರು ಏನೂ ಇಲ್ಲವೆಂಬಂತೆ ತಲೆಯಾಡಿಸುತ್ತಾ, ‘ವಹಿಸಿದ ಪಾತ್ರ ತೀರಿದ ಮೇಲೆ’ ಎಂದಿದ್ದಷ್ಟೇ, ಪ್ರಾಣಪಕ್ಷಿ ಹಾರಿಹೋಗಿತ್ತು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ

Read More

ಅಂದುಕೊಂಡಿದ್ದು ಆಗೇಹೋಯಿತು!: ಜುಲೇಖಾ ಬೇಗಂ ಜೀವನ ವೃತ್ತಾಂತ

ಜುಬೇದಾಬಾಯಿ ಅವರನ್ನು ಮಾಕನೂರು ಭರಮಣ್ಣ ಅವರು ಅಪಹರಿಸಲು ಸಾಧ್ಯವಿರಲಿಲ್ಲ. ಅವರು ಪಾತ್ರಕ್ಕಾಗಿ ಹುಡುಕಾಡುತ್ತಿದ್ದರು; ನಾನೂ ಕಾಯುತ್ತಿದ್ದೆ. ರೋಗಿ ಬಯಸುವುದಕ್ಕೂ ವೈದ್ಯ ಹೇಳುವುದಕ್ಕೂ ಸರಿ ಹೋದರೆ ಇನ್ನೇನು? ಖುಷಿಯಿಂದ ಕುಪ್ಪಳಿಸಿದೆ. ಎರಡು ನಿಮಿಷ ಭೂಮಿಕೆಯಲ್ಲಿ ಇರುತ್ತಿದ್ದೆನೊ ಇಲ್ಲವೊ, ಆದರೆ ಆನಂದಿಸಿದೆ. ಮಾತಿಲ್ಲದ ಮುಖ್ಯ ಪಾತ್ರ ನನಗೆ ಸಿಕ್ಕಿತಲ್ಲಾ ಎಂಬ ಸಂಭ್ರಮ. ಉಳಿದವರೆಲ್ಲ, ‘ನಿಂಗೆ ಕೊಂಬು ಬರಬಾರದವ್ವಾ’ ಎಂದು ಛೇಡಿಸುತ್ತಾ, ನಗಿಸುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹನ್ನೆರಡನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ