Advertisement

Tag: ಡಾ. ಚಂದ್ರಮತಿ ಸೋಂದಾ

ಅಚ್ಚಿಯ ಮದುವೆ….: ಚಂದ್ರಮತಿ ಸೋಂದಾ ಕಾದಂಬರಿಯ ಪುಟಗಳು

ಊರಲ್ಲಿ ಗೌಡ್ರ ಮನೆ ಅಂತ ಇದ್ದಿದ್ದೆ ಎರಡು. ಗಂಡುಹುಡುಗ್ರು ಶಾಲಿಗೆ ಬಂದ್ರೂ ಅವ್ರ ಹೆಣ್ಮಕ್ಳನ್ನ ಕಳುಸ್ತಿರ್ಲೆ. ಬ್ರಾಹ್ಮಣ ಹೆಣ್ಮಕ್ಳಷ್ಟೆ ಶಾಲಿಗೆ ಹೋಗ್ತಿದ್ದ. ಅಚ್ಚಿ ಕಲಿಯದ್ರಲ್ಲಿ ಹುಷಾರಿತ್ತು. ಗೊತ್ತಾಗದಿದ್ನ ಕೇಳಕ್ಕೆ ಅಣ್ಣ ಹ್ಯಾಂಗೂ ಮನೇಲಿದ್ದ. ಎರಡನೇ ತರಗತಿ ಮುಗದಾಗ ಕೂಸು ದೊಡ್ಡಾತು ಅಂತ ಸೀರೆ ಉಡಸಕ್ಕೆ ಶುರುಮಾಡಿದ್ದ. ಇಲ್ಲಿವರಿಗೆ ಅಕ್ಕಯ್ಯದಿಕ್ಳು ಹಾಕಿಬಿಟ್ಟ ಅಂಗಿನ ಅಮ್ಮ ಸರಿಮಾಡಿಕೊಡ್ತಿತ್ತು, ಅದ್ನೇ ಅಚ್ಚಿ ಮನೇಲಿ ತೊಟ್ಗಳ್ತಿತ್ತು. ಶಾಲಿಗೆ ಹೋಪ್ಲೆ ಅಂತ ತಂದಿದ್ದ ಎರಡೂ ಅಂಗಿ ಹರದುಹೋಗಿತ್ತು. ಅಂಟವಾಳಕಾಯಿ ಹಾಕಿ ಬಟ್ಟೆ ತೊಳದ್ರೂ ಚೊಕ್ಕ ಆಗದು ಅಷ್ಟರಲ್ಲೇ ಇತ್ತು.
ಡಾ. ಚಂದ್ರಮತಿ ಸೋಂದಾ ಹೊಸ ಕಾದಂಬರಿ “ದುಪಡಿ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಮಾಗಿ ಮಾವ ಬಂದ ಮಂಜು ಗಿಂಜು ತಂದ: ಚಂದ್ರಮತಿ ಸೋಂದಾ ಸರಣಿ

ಉಳಿದ ದಿನಗಳಲ್ಲಿ ಸ್ನಾನಮಾಡಲು ಹಿಂದೇಟು ಹಾಕುತ್ತಿದ್ದ ನಾವು ಚಳಿಗಾಲದಲ್ಲಿ ಮಾತ್ರ ಸ್ನಾನ ಮಾಡಲು ನಾಮುಂದು ತಾಮುಂದು ಎಂದು ಓಡುತ್ತಿದ್ದೆವು. ಮೈ ಮೇಲೆ ಬಿಸಿನೀರು ಸುರಿದುಕೊಳ್ಳುವುದು ಬಹಳ ಆಪ್ಯಾಯಮಾನ ಎನಿಸುತ್ತಿತ್ತು. ʻಅದೆಷ್ಟು ಹೊತ್ತು? ನಿಂದೊಳ್ಳೆ ಊರ್ಮಿಳೆ ಸ್ನಾನ ಆಯ್ತುʼ ಅಂಥ ಅಮ್ಮನಿಂದ ಮಂತ್ರಾಕ್ಷತೆ ಸಿಗುವುದೂ ಇತ್ತು. ಚಿಕ್ಕವರಿರುವಾಗ ಇದರ ಅರ್ಥ ಗೊತ್ತಿರಲಿಲ್ಲ, ಆಮೇಲೆ ತಿಳಿಯಿತು. ರಾಮಲಕ್ಷ್ಮಣರು ಸೀತೆಯೊಂದಿಗೆ ವನವಾಸಕ್ಕೆ ಹೋಗುವಾಗ ಊರ್ಮಿಳೆ ಸ್ನಾನ ಮಾಡುತ್ತಿದ್ದಳಂತೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹನ್ನೆರಡನೆಯ ಕಂತು

Read More

ʻಬಾಳೆ ಪಣ್ಣದೊಂದು ರುಚಿ…ʼ: ಡಾ. ಚಂದ್ರಮತಿ ಸೋಂದಾ ಸರಣಿ

ಮಲೆನಾಡಿನ ಊರುಗಳಲ್ಲಿ ಬಾಳೆಹಣ್ಣನ್ನು ಅಕ್ಕಿಯೊಂದಿಗೆ ರುಬ್ಬಿ ರೊಟ್ಟಿ, ದೋಸೆ, ಸುಟ್ಟೇವು ಎನ್ನುವ ತಿಂಡಿಗಳನ್ನು ಮಾಡುತ್ತಾರೆ. ಬಾಳೆಹಣ್ಣಿನ ರೊಟ್ಟಿ, ದೋಸೆಗಳೆಂದರೆ ಹಿರಿಯರಿಂದ ಕಿರಿಯರವರೆಗೆ ಪ್ರಿಯವಾದ ತಿಂಡಿ. ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಎರಡು ಹೊಟ್ಟೆ. ಬಾಳೆಹಣ್ಣಿನ ಕಡುಬು ಹಲಸಿನಹಣ್ಣಿನ ಕಡುಬಿನಷ್ಟೆ ರುಚಿಯಾದ ಸಿಹಿತಿಂಡಿ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಭಾಷೆಯ ಭಾವಯಾನ: ಡಾ. ಚಂದ್ರಮತಿ ಸೋಂದಾ ಸರಣಿ

ನಮಗೆ ಅಗತ್ಯವಿಲ್ಲದ ಪದಗಳ ಬಳಕೆಯ ವಿಷಯದಲ್ಲಿ ಸರಿ. ಆದರೆ ದಿನನಿತ್ಯದ ವ್ಯವಹಾರದಲ್ಲಿ ಬಳಸುವ, ನಾವು ಉಪಯೋಗಿಸುವ ವಸ್ತುಗಳ ವಿಷಯವೇ ಬೇರೆ. ಅನೇಕ ಪದಗಳನ್ನು ಕನ್ನಡದಲ್ಲಿ ಹೇಳಲು ಕಷ್ಟಪಡುತ್ತೇವೆ. ಯಾಕೆಂದರೆ ನಮಗೆ ಅವೆಲ್ಲ ಮರೆತೇ ಹೋಗುತ್ತಿವೆ. ಇಂಗ್ಲಿಷ್‌ ಪದಗಳು ಆ ಸ್ಥಾನವನ್ನು ಆಕ್ರಮಿಸಿವೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತನೆಯ ಕಂತಿನಲ್ಲಿ ದಿನನಿತ್ಯ ಕನ್ನಡ ಭಾಷೆಯ ಬಳಸುವಿಕೆಯ ಕುರಿತ ಬರಹ ನಿಮ್ಮ ಓದಿಗೆ

Read More

ʻಕೆರೆಯಂ ಕಟ್ಟಿಸು ಬಾವಿಯಂ ಸವೆಸುʼ: ಚಂದ್ರಮತಿ ಸೋಂದಾ ಸರಣಿ

ಗದ್ದೆಯ ಕೆಲಸ ಮಾಡಿ ದಣಿದ ಎತ್ತುಗಳು ಒಮ್ಮೆ ಕೆರೆಯಲ್ಲಿ ಈಜಾಡಿ ಬಂದರೆ ದಣಿವೆಲ್ಲ ಮಾಯ. ಮೇಯಲು ಬಿಟ್ಟ ದನಗಳು ಕೆರೆಯಲ್ಲಿ ನೀರು ಕುಡಿದೇ ಮನೆಕಡೆ ಮುಖಮಾಡುತ್ತಿದ್ದವು. ಇನ್ನು ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ಝಾಂಡಾ ಹೊಡೆದಿರುವ ಎಮ್ಮೆಗಳನ್ನು ಕೆರೆಯಿಂದ ಎಬ್ಬಿಸುವುದೇ ಕಷ್ಟದ ಕೆಲಸ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಎಂಟನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ