Advertisement

Tag: ಕೆಂಡಸಂಪಿಗೆ

ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ

‘ಟಿ ಎಸ್ ಎಲಿಯಟ್ ಹೇಳುವ ಪ್ರತಿಭೆ ಮತ್ತು ಪರಂಪರೆ ಅಥವಾ ಪರಂಪರೆ ಮತ್ತು ಪ್ರತಿಬೆ ಒಂದನ್ನೊಂದು ನುಂಗಲು ಹೊರಟಿರುವ ಎರಡು ಹಲ್ಲಿಗಳ ಹಾಗೆ. ಯಾವುದು ತಿನ್ನುತ್ತಿರುವುದು, ಯಾವುದು ಸಾಯುತ್ತಿರುವುದು ಎಂದು ಗೊತ್ತಾಗುವುದಿಲ್ಲ. ಕನ್ನಡದ ದೊಡ್ಡ ಕಥೆಗಾರ್ತಿಯೊಬ್ಬಳು ಸುಳಿಯಲ್ಲಿ ಸಿಲುಕಿ ಮೃತಳಾದ ನದಿಯ ಪಕ್ಕದಲ್ಲೇ ಕುಳಿತು ಕನ್ನಡದ ಎಳೆಯ ಕಥೆಗಾರ ನಚಿಕೇತ ತನ್ನ ಹೊಸ ಕಥೆಗಳನ್ನು ಬರೆಯುತ್ತಿದ್ದಾನೆ.
ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಸುಳಿಹೊಳೆ ಕಥಾಧಾಮ” ನಿಮ್ಮ ಓದಿಗೆ

Read More

ಹಾಡಬೇಕು ನಾವೀಗ ಗೆಳತಿಯರೇ ಸ್ತ್ರೀಸಖ್ಯಗೀತೆಯ..: ಎಲ್.ಜಿ.ಮೀರಾ ಅಂಕಣ

ಹೆಂಗಸರು ಇದೇ ರೀತಿ ತಮ್ಮ ಸಂಜೆಗಳನ್ನು ಕಳೆಯಲು ಸಾಧ್ಯವೇ? ಅಡಿಗೆಮನೆಯ ಜವಾಬ್ದಾರಿ, ಮಕ್ಕಳ ದೇಖರೇಖಿ, ನೆಂಟರಿಷ್ಟರ ಉಪಚಾರ ಮುಂತಾದವುಗಳು ಹೆಣ್ಣಿನ ಸಂಜೆ, ಇಳಿಸಂಜೆಗಳನ್ನು ಕಬಳಿಸುವುದು ವಾಸ್ತವ ಸಂಗತಿ. ಸಂಜೆ ಗಂಡು ಮಾಡುವ `ಚಿಲ್ಲಿಂಗ್’ ಚಟುವಟಿಕೆಗಳನ್ನು ಹೆಣ್ಣು ಮಾಡಿದರೆ ಅವಳನ್ನು ಬೀದಿ ಬಸವಿ, ಬೇಜವಾಬ್ದಾರಿ ಹೆಣ್ಣು, ಚೆಂಗ್ಲು ಹೊಡೆಯುವವಳು ಎಂದೆಲ್ಲ ಅಂದು ಆಡಿ ಕೆಟ್ಟ ಹಣೆಪಟ್ಟಿಗಳನ್ನು ಹಚ್ಚಲಾಗುತ್ತದೆ. ಸನ್ನಿವೇಶ ಹೀಗಿರುವಾಗ, ಹೆಣ್ಣುಗಳು ಸಾಯಂಕಾಲಗಳಲ್ಲಿ ಮನೆಯಿಂದ ಹೊರಗೇ ಬರದಿರುವಾಗ ಅವರ ನಡುವೆ ಸ್ನೇಹ ಸಂಬಂಧಗಳು ಮೂಡುವುದು ಹೇಗೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಹಿಂಗೊಂದಿತ್ತು ಕಾಲ…: ವಸಂತಕುಮಾರ್‌ ಕಲ್ಯಾಣಿ ಬರಹ

ತರಕಾರಿ ಗುಣಮಟ್ಟ ನೋಡುವುದು, ಚೌಕಾಶಿ ಮಾಡುವುದು ಮೊದಲಾದರಲ್ಲಿ ತೊಡಗಿಕೊಂಡರೆ, ಈ ಸಮೂಹದಲ್ಲಿದ್ದ ರಾಮಕ್ಕ, ಚೆನ್ನಮ್ಮಕ್ಕ, ಜೊತೆ ಇನ್ನೊಬ್ಬರು ಇದ್ದರು -ಒಂದು ಹೂವಿನ ಹೆಸರು ಅವರದು- ಯಾವ ಮಾಯದಲ್ಲೋ ಎರಡು ಬದನೆಕಾಯಿಯನ್ನೋ, ಒಂದು ಮಾವಿನ ಹಣ್ಣನ್ನೋ ‘ಅಬೇಸ್’ ಮಾಡಿ ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಗಾಡಿ ಹೋದ ನಂತರ ಉಳಿದವರಿಗೆ ತಮ್ಮ ಕೈಚಳಕದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದೂ, ಉಳಿದವರು ಅದಕ್ಕೆ ಕೊಂಕಿನ, ಮೆಚ್ಚುಗೆಯ ಮಾತಾಡುತ್ತಾ ಒಂದಷ್ಟು ಸಮಯ ಕಳೆಯುತ್ತಿದ್ದರೆ, ನಮ್ಮಮ್ಮ ಪಾಪ ಭೀರು, “ಪಾಪ ಯಾಕೆ ಹಾಗೆ ಮಾಡಿದೆ, ಈ ಬಿಸಿಲಿನಲ್ಲಿ ಸುತ್ತುವ ಅವನಿಗೆ ನಷ್ಟವಾಯಿತಲ್ಲ” ಎಂದು ಕೊರಗುತಿದ್ದರು.
ವಸಂತಕುಮಾರ್‌ ಕಲ್ಯಾಣಿ ಬರಹ ನಿಮ್ಮ ಓದಿಗೆ

Read More

ನೀಲಿ ಜಗತ್ತು: ಸುಧಾ ಆಡುಕಳ ಅಂಕಣ

“ಇಕಾ, ನೀನು ಇದನ್ನೊಂದು ಸಲ ಓದು. ಬರೀ ನಿನ್ನ ಶಾಲೆ ಪುಸ್ತಕ ಓದಿ ಹಾಳಾಗಬೇಡ. ಇದನ್ನು ಓದಿದ್ರೆ ನಿಂಗೂ ಮಾನ, ಮರ್ಯಾದೆ ಎಲ್ಲ ಮರೆತುಹೋಗ್ತದೆ.” ಎನ್ನುತ್ತಾ ಹೆಣ್ಣು ಗಂಡುಗಳೆರಡು ವಿಚಿತ್ರ ಭಂಗಿಯಲ್ಲಿರುವ ಪುಸ್ತಕವನ್ನು ಅವಳೆಡೆಗೆ ಹಿಡಿದ. ಅದನ್ನು ನೋಡಿದ್ದೇ ನೀಲಿಯ ಎದೆಯಲ್ಲಿ ನಡುಕ ಪ್ರಾರಂಭವಾಗಿ ಇದ್ದೆನೋ ಬಿದ್ದೆನೋ ಎಂದು ಮನೆಯೆಡೆಗೆ ಓಡತೊಡಗಿದಳು. ಆನಂದನ ಅಮ್ಮನಿಗೆ ಇವೆಲ್ಲವನ್ನೂ ಹೇಳಬೇಕೆಂದು ಎಷ್ಟೋ ಸಲ ಅಂದುಕೊಂಡಳಾದರೂ ಮಗನನ್ನು ದನಕ್ಕೆ ಬಡಿಯುವಂತೆ ಬಡಿಯುವ ಅವಳು ಇಂಥ ಸುದ್ದಿ ಕೇಳಿದರೆ ಅವನನ್ನು ಕೊಂದೇಬಿಟ್ಟಾಳೆಂದು ಸುಮ್ಮನಾದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಕಂಬನಿ ಮಿಡಿದ ಕರಾಳ ದಿನ: ಪೂರ್ಣೇಶ್‌ ಮತ್ತಾವರ ಸರಣಿ

ಹೊರಗೆ ನೋಡಿದರೆ ಚಂದಿರನ ಬೆಳಕಿತ್ತು! ನಮ್ಮೆದೆಗಳಲ್ಲಿ ಆವರಿಸಿದ್ದ ಗಾಢಾಂಧಕಾರವನ್ನು ಬಡಿದೋಡಿಸಲಾಗದ ಆ ಬೆಳಕು ಶೋಕ ಸೂಚನೆಗೆ ಹೊತ್ತಿಸಿದ್ದ ಸೊಡರಿನಂತೆಯೇ ನಮಗೆ ಗೋಚರಿಸಿತ್ತು! ಮಲಗ ಹೊರಟರೆ ಅವನದೇ ನೆನಪುಗಳು. ನಿದ್ದೆ ಬರುವಂತಿರಲಿಲ್ಲ… ಬಂದ ಅಲ್ಪ ಸ್ವಲ್ಪ ನಿದ್ದೆಯಲ್ಲೂ ಹೊರಗೆ ಅವನು ಬಂದಂತೆ, ನೋಡಿ ನಾವು ಅಚ್ಚರಿಪಟ್ಟಂತೆ, ಓಡಿ ಹೋಗಿ ಅಪ್ಪಿದಂತೆ ಕನಸುಗಳು.. ಎಚ್ಚರಗೊಂಡು ಕುಳಿತು, ಒಡನೆಯೇ ಬಾಗಿಲು ತೆರೆದು ಹೊರ ನಡೆದರೆ, “ಪ್ರಸನ್ನ, ಪ್ರಸನ್ನ,…” ಎಂದು ಕರೆದರೆ…. ಅಲ್ಲಿ ಅವನಿಲ್ಲ!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಎಂಟನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ