Advertisement

Tag: ಕೆಂಡಸಂಪಿಗೆ

ನೀ ದೇಹದೊಳಗೋ, ದೇಹ ನಿನ್ನೊಳಗೋ: ರಾಮ್ ಪ್ರಕಾಶ್ ರೈ ಕೆ ಸರಣಿ

ಇನ್ನೇನು ಶ್ರದ್ಧಾಂಜಲಿಗೆ ಒಳಗಾದ ಎಂದು ಭಾವಿಸುವಾಗಲೇ, ವೈದ್ಯಕೀಯ ವಿಜ್ಞಾನದ ಎಲ್ಲಾ ಊಹೆಗಳ ಪೊರೆಯ ಸರಿಸಿ ಮತ್ತೆ ಎದ್ದು ಬರುತ್ತಾನೆ. ಆದರೆ ಆತ ತನ್ನ ಪೂರ್ವ ನೆನಪುಗಳೆಲ್ಲವನ್ನೂ ಕಳೆದುಕೊಂಡಿರುತ್ತಾನೆ. ತನ್ನ ಮಾತಾ ಪಿತರ ಸಹಿತವಾಗಿ. ವೈದ್ಯಕೀಯ ವಿಜ್ಞಾನವೇ ನಂಬಲಾರದಂತೆ ಆತ ಬದಲಾಗಿರುತ್ತಾನೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಮೊಹರಂ ಎಂದರೆ ನಮ್ಮೂರಲ್ಲಿ “ಬಾಬಯ್ಯನ ಹಬ್ಬ”: ಸುಮಾ ಸತೀಶ್ ಬರಹ

ಜಾತಿ ಧರ್ಮಗಳ ಬೇಲಿ ಕಳಚಿ, ಅಪ್ಪಟ ಮನುಷ್ಯತ್ವ ತೋರುವ ಮುಗ್ಧ ಮನಗಳ ನಂಬಿಕೆಯಿದು. ಇದು ಮುಸಲ್ಮಾನರ ಹಬ್ಬ. ಆದರೆ ಇಲ್ಲಿ ಅದನ್ನು ಆಚರಿಸುವವರು ಹಿಂದೂಗಳು. ಇದು ಊರ ಮಂದಿಗೆ ಮನರಂಜನೆಯೂ ಹೌದು ಭಕ್ತಿ ಸಮರ್ಪಣೆಯೂ ಹೌದು. ಎರಡೂ ಮಿಳಿತಗೊಂಡ ವಿಶಿಷ್ಟ ಪದ್ಧತಿಯಿದು. ಊರ ಜನರೆಲ್ಲಾ ಒಂದು ವಾರ ಒಂದೆಡೆ ಸೇರಿ ನಲಿಯಲು ಅವಕಾಶ ಕಲ್ಪಿಸುತ್ತದೆ ಬಾಬಯ್ಯನ ಹಬ್ಬ. ಪರಿಷೆಯ ಪರಿಸರವೊಂದು ಪಸರಿಸುತ್ತದೆ.
ಮೊಹರಂ ಹಬ್ಬದ ಆಚರಣೆಯ ಕುರಿತು ಸುಮಾ ಸತೀಶ್ ಬರಹ

Read More

ಬದುಕಿನ ವರ್ಷಕಾಲದ ವಸಂತೋತ್ಸವ: ಸುಮಾವೀಣಾ ಸರಣಿ

ಇಂಥ ಮಳೆಯಲ್ಲಿ ಶಾಲೆಗೆ ಹೋಗುವುದೇ ದೊಡ್ಡ ಸಮಸ್ಯೆ. ಎಂಥ ಚಿಕ್ಕ ಹೊಂಡವಿದ್ದರೂ ಸರಿ ಪೇಪರಿನ ದೋಣಿಗಳನ್ನು ತೇಲಿಬಿಡುವ ನಗರದ ಹುಡುಗರ ಆಟ ಒಂದೆಡೆಯಾದರೆ ಬೆಟ್ಟ ಗುಡ್ಡಗಳ ತಪ್ಪಲಲ್ಲಿ ಹಳ್ಳ ತೋಡಿನ ಪಕ್ಕದಲ್ಲಿ ತೋಟದ ಮನೆಗಳವರ ಕಷ್ಟ ಹೇಳತೀರದು. ರಭಸದ ಮಳೆ ಬಂದರೆ ಒಂದೋ ಗುಡ್ಡ ಕುಸಿಯುವ ಭೀತಿ. ಇಲ್ಲವೇ ಮಳೆ ನೀರು ಮನೆಗೆ ನುಗ್ಗುವ ಭೀತಿ ಸ್ವಲ್ಪ ಮಳೆ ಬಂದರೂ ಸೇತುವೆಗಳು ತೇಲುವ ಹಾಗಾಗುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ನಮ್ಮನು ಪ್ರಭಾವಿಸಿದ ಮೇಷ್ಟ್ರುಗಳಿವರು…: ಬಸವನಗೌಡ ಹೆಬ್ಬಳಗೆರೆ ಸರಣಿ

ಒಂದು ಮಗು ದಿನದ 24 ಗಂಟೆಯಲ್ಲಿ‌ ಶಾಲೆಯಲ್ಲಿ ಬರೀ 8 ಗಂಟೆ ಇರುತ್ತಾನೆ. ಆದರೆ ಇನ್ನುಳಿದ 16 ಗಂಟೆ ಮನೇಲಿ ಇರುತ್ತಾನೆ. ಸಮಾಜದಲ್ಲಿರುವ ಉಳಿದವರೂ ಕೂಡ ಮಕ್ಕಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ‘ಸಂಗದಂತೆ ಬುದ್ಧಿ ಊಟದಂತೆ ಲದ್ಧಿ’ ಎಂಬಂತೆ ಸಹವಾಸವೂ ಕೂಡ ಮುಖ್ಯ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರೇಣುಕಾ ಹೆಳವರ ಕತೆ

ಅಷ್ಟೊಂದು ಪ್ರೀತಿಸಿ ನನಗೋಸ್ಕರ ಸಾಯಲೂ ಕೂಡ ಮುಂದಾಗಿದ್ದ ಮಹೇಶ್ ಇವನೇನಾ ಎಂದು ಗಂಗಾ ದಂಗುಬಡಿದು ಹೋದಳು. ಗಂಗಾ ಹಾಸ್ಟೆಲ್‌ನಲ್ಲಿ ಓದಿದ ಹುಡುಗಿ, ಈ ಜಗತ್ತಿನ ಎಲ್ಲ ಆಯಾಮಗಳ ಅರಿವು ಕೂಡ ಅವಳಿಗಿತ್ತು. ಆದರೂ ಅವನ ಮಾತಿನ ಬಾಣ ಅವಳ ಎದೆಯಲ್ಲಿ ಹೊಕ್ಕು ರಕ್ತಕಾರುವಂತೆ ಚುಚ್ಚುತ್ತಿತ್ತು. “ಮಹೇಶ ನಿಜಕ್ಕೂ ನನ್ನ ಪ್ರೀತಿಸಿದ್ನಾ..? ಅಥವಾ ನನ್ನ ರೂಪ ಪಡಿಯೋಕೆ ನಾಟ್ಕಾ ಆಡಿದ್ನಾ?
ನಾನು ಮೆಚ್ಚಿದ ನನ್ನ ಕತೆಯ ಸರಣಿಯಲ್ಲಿ ರೇಣುಕಾ ಹೆಳವರ ಕತೆ “ಗಿಳಿಯು ಪಂಜರದೊಳಿಲ್ಲ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ