ಉಪಾಸೊ: ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ
ಅತ್ತ ಶಡ್ಡುವಿನ ಪ್ರೇಮ ಭಂಗಪಡಿಸಲು ಮುಂದಾಗಲಾರದೆ ಇತ್ತ ಗಂಡ ಊರಿಗೆ ಬಹಿಷ್ಕಾರ ಹಾಕುವುದನ್ನು ನೋಡಲಾರದ ಸಂಕಟದಲ್ಲಿ ಜಾನಕೆ ನರಳುತ್ತಿದ್ದಳು. ಅವಳ ಸನಿಹ ನಿದ್ದೆ ಸುಳಿಯದು. ಹೊರಳಾಡಿ ಮಗ್ಗಲು ಬದಲಿಸಿದಳು. ನಿಟ್ಟುಸಿರುಬಿಟ್ಟಳು. ಶ್ವಾಸ ಎದೆಯೊಳಗೆ ಸಿಕ್ಕಿದಂತಾಗಿ ಎದ್ದು ಕೂತಳು. ಹೊಸ್ತಿಲ ಪಕ್ಕ ಉರಿಯುತ್ತಿದ್ದ ನಂದಾದೀಪದ ಮಂದ ಬೆಳಕಿನಲ್ಲಿ ಚಾಪೆಯ ಮೇಲೆ ಅಂಗಾತ ಮಲಗಿದ್ದ ಉಪಾಸೊ ಅಂಕಣ ದಿಟ್ಟಿಸುತ್ತಿದ್ದ. ಹಗಲಲ್ಲಿ ಹಗುರಾಗಿ ಕಾಣುತ್ತಿದ್ದ ಹಗರಣಗಳು ರಾತ್ರಿ ಕತ್ತಲಲ್ಲಿ ಕಾಮದಂತೆ ತೀವ್ರವಾಗಿ ಕಾಡುತ್ತಿದ್ದವು. ನಿದ್ದೆಯಿಲ್ಲದ ನಿಶ್ಯಬ್ದ ಏಕಾಂತದಲ್ಲಿ ನೆನಪುಗಳು ಕಿಕ್ಕಿರಿಯುತ್ತಿದ್ದವು.
ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ ನಿಮ್ಮ ಓದಿಗೆ

