Advertisement

Tag: Kannada Literature

ಇಳಿ ವಯಸ್ಸಿನ ಕಾಠಿಣ್ಯ ಸ್ವಾರ್ಥ ಇತ್ಯಾದಿ

ಜಗತ್ತಿನಲ್ಲಿ ಮನುಷ್ಯ ಬಂದಿರುವುದು, ಇರುವುದು, ಮಾಗಬೇಕಾದದ್ದು ಕೇವಲ ನಾಲ್ಕು ದಿನದ ಅತಿಥಿಯಾಗಿ ಮಾತ್ರ. ಸದಾ ಕಾಲದ ಜಹಗೀರ್‌ದಾರಿ ಅವನಿಗಿಲ್ಲ. ಇದು ಎಲ್ಲರಿಗೂ ಗೊತ್ತಾಗಲೆಂದೇ ಸಾವಿನ ಸಮಯದಲ್ಲಿ ಸೃಷ್ಟಿ ಒಂದು ಉಪಾಯ ಮಾಡಿದೆ. ಮನುಷ್ಯನಿಗೆ ಪ್ರಾಣ ಹೋಗಿದೆ ಎಂದು ಗೊತ್ತಾದ ಮೇಲೂ ಯಾರಿಗೂ ಗೊತ್ತಾಗದಂತೆ ಕೆಲಕಾಲ ಕ್ಷೀಣವಾಗಿ ಪ್ರಾಣ ಇರುತ್ತದೆ. ದೇಹದಲ್ಲಿ ಶಾಖ ಕೂಡ ಇರುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಆರನೆಯ ಪ್ರಬಂಧ ನಿಮ್ಮ ಓದಿಗೆ

Read More

ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕಥೆ

ಇಲ್ಲ! ಅಪ್ಪ ಪೇಟೆಗೆ ಹೋದ ಸಮಯ ನೋಡಿ ಇಲ್ಲಿಗೆ ಓಡಿ ಬಂದು ಪುಟ್ಟ ಮಗುವಾಗಿದ್ದ ನನ್ನನ್ನು ಎತ್ತಿ ಮುದ್ದಾಡಿದ ವ್ಯಕ್ತಿ ಇವನಲ್ಲ. ಬಿಡುವಿಲ್ಲದ ಮನೆಗೆಲಸದ ವೇಳೆಯಲ್ಲೂ ‘ಎತ್ತಿಕೋ’ ಎಂದು ಅಮ್ಮನನ್ನು ಪೀಡಿಸುತ್ತಿದ್ದಾಗ “ಇತ್ತ ಕೊಡಿ. ನಾನು ನೋಡಿಕೊಳ್ತೇನೆ” ಎಂದು ನನ್ನನ್ನು ಎತ್ತಿಕೊಂಡು, ತೋಟದಲ್ಲೆಲ್ಲ ತಿರುಗಾಡಿ ಬಾಳೆಹೂವಿನ ಜೇನು ನೆಕ್ಕಿಸಿದವನೂ ಇವನಲ್ಲ ಎಂದುಕೊಳ್ಳುತ್ತಿದ್ದಂತೆ ಕತ್ತಲಲ್ಲಿ ಭೂಮಿಯನ್ನು ಥರಗುಟ್ಟಿಸುವ ಸದ್ದು ನಮ್ಮೆಲ್ಲರನ್ನೂ ಇಡಿಯಾಗಿ ಅಲುಗಾಡಿಸಿತು.
ಸುಭಾಷ್ ಪಟ್ಟಾಜೆ ಬರೆದ ಈ ಕಥೆ “ಗೋಡೆ”

Read More

ಬಿಸಿಲು ಮೂಡುವ ಹೊತ್ತಿಗೆ, ಕೈಯಲ್ಲೊಂದು ಹೊತ್ತಿಗೆಯಿರಲಿ

ಇತ್ತೀಚೆಗೆ ಇತ್ತ ನಾಟಕವೂ ಅಲ್ಲದ, ಅತ್ತ ಸರಳ ಓದುವಿಕೆಯೂ ಅಲ್ಲದ ಮಧ್ಯಮಾರ್ಗದಲ್ಲಿ ನಿಂತ ಆಡಿಯೋ ಪುಸ್ತಕಗಳ ಭರಾಟೆಯೂ ಹೆಚ್ಚಿದೆ. ಕೆಲಸ ಮಾಡುತ್ತಲೇ ಕೇಳಿಸಿಕೊಳ್ಳಬಹುದು. ವಿಚಾರ ತಿಳಿಯಬಹುದು ಎಂಬ ಸಕಾರಾತ್ಮಕ ಅಂಶಗಳ ಬೆಂಬಲವಿದ್ದರೂ, ಏಕಾಂತದಲ್ಲಿ ಈ ಜಗದ ಪರಿವೆ ಇಲ್ಲದೆ, ಮನೋಲೋಕದಲ್ಲಿ ಪಾತ್ರವೇ ನಾವಾಗಿ ವಿಹರಿಸುವ ‘ಓದಿ’ನ ಆನಂದವನ್ನು ಎಂದಿಗೂ ಅವು ನೀಡಲಾರವು. ನಮ್ಮ ಕಲ್ಪನೆಯಲ್ಲಿ ಪಾತ್ರಗಳಿಗೆ ರೂಪ, ಬಣ್ಣ, ನಿಲುವು ಸಿಕ್ಕಂತೆಯೇ ಅವುಗಳಿಗೆ ಧ್ವನಿಯೂ ಲಭಿಸಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

Read More

ಸಕೀನಾಳ ಮುತ್ತು: ರಮ್ಯತೆಯ ಹಿಂದಿನ ಅಸಂಗತತೆ

ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ.
ವಿವೇಕ ಶಾನಭಾಗ ಬರೆದ “ಸಕೀನಾಳ ಮುತ್ತು” ಕಾದಂಬರಿಯ ಕುರಿತು ನಾಗರೇಖಾ ಗಾಂವಕರ ಬರಹ

Read More

ದಡ ಮುಟ್ಟದ ದೋಣಿಗಳಲ್ಲಿ ಕೂತು…

ಒಂದಾದ ನಂತರ ಒಂದರಂತೆ ಮೂರು ಮಕ್ಕಳನ್ನು ಮಾಡಿಕೊಂಡು ನಂತರ ತಮ್ಮತಮ್ಮ ಕೆಲಸ, ಕಾರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ಕೇವಲ ಒಂದು ದಿನದ ಹಿಂದೆ ಮಾತಾಡಿದ್ದಷ್ಟೇ ಅಲ್ಲ, ಮನೆಗೆ ಬಂದು ಸಹಾಯ ಮಾಡಬೇಕು ಎಂದು ನನ್ನನ್ನು ದುಂಬಾಲುಬಿದ್ದ ಅಪ್ಪಟ ಶ್ರೀಸಂಸಾರಿಯಂತೆ ಕಾಣುವ ವಿನಯ, ಅಲಿಶಾ ಜತೆ ನಿಜವಾಗಿಯೂ ಒಂದು ಬದ್ಧ ಸಂಬಂಧದಲ್ಲಿದ್ದಾನೆಯೇ?
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಆರನೆಯ ಕಂತು ನಿಮ್ಮ ಓದಿಗಾಗಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ