Advertisement

Tag: kendasampige

ಹೊನ್ನೆಯ ಹಾಡಿನಂಥಾ ಆತ್ಮಕಥನ: ಕೆ.ಎನ್.ಲಾವಣ್ಯ ಪ್ರಭಾ ಬರಹ

ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಆಕಾಶವಾಣಿ ಗಾಯಕಿಯಾಗಿ ಭಾವಗೀತೆಯನ್ನು ಪಿ. ಕಾಳಿಂಗರಾವ್ ಅವರ ಜೊತೆಯಲ್ಲಿ ಹಾಡಿ ಪ್ರಚಾರ ನೀಡಿದ್ದು ಮೊದಲಿಗೆ ಲೀಲಾವತಿಯವರೇ. ಭಾವಗೀತೆ ಭಕ್ತಿಗೀತೆ ಕೀರ್ತನೆಗಳು ವಚನಗಳು ಗಜಲ್‌ಗಳು ಜನಪದಗೀತೆಗಳು, ರವೀಂದ್ರ ಸಂಗೀತ ಹೀಗೆ ಬೇರೆ ಭಾಷೆಯ ಇತರ ಪ್ರಾಕಾರಗಳನ್ನೂ ಕಲಿತು ಹಾಡಿರುವುದಲ್ಲದೇ ಮಕ್ಕಳ ಕತೆಗಳು ರಂಗರೂಪಕಗಳು ಎಲ್ಲಾ ರೀತಿಯಲ್ಲಿ ಅವರು ಆಕಾಶವಾಣಿಯಲ್ಲಿ ಕೆಲಸ ನಿರ್ವಹಿಸುತ್ತಲೇ ಮುಂದೆ ಆಕಾಶವಾಯ ಸಂಗೀತ ಸಂಯೋಜಕಿಯೂ ಆಗುತ್ತಾರೆ.
ಎಚ್. ಆರ್. ಲೀಲಾವತಿ ಆತ್ಮಕಥನ “ಹಾಡಾಗಿ ಹರಿದಾಳೆ” ಕೃತಿಯ ಕುರಿತು ಕೆ.ಎನ್.ಲಾವಣ್ಯ ಪ್ರಭಾ ಬರಹ

Read More

ಕೊಕ್….ಕೊಕ್ಕ್… ಕುಕ್ಕುಟಾಯಣ: ವಸಂತಕುಮಾರ್ ಕಲ್ಯಾಣಿ ಪ್ರಬಂಧ

ಸುಮಾರು ನಾಲ್ಕು ಮೂವತ್ತಕ್ಕೆ ಯಾವುದೋ ಕನಸಿನ ಲೋಕದಲ್ಲಿದ್ದವನಿಗೆ, ಎಂಪಿ ಶಂಕರ್ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರೆಲ್ಲ ಒಟ್ಟಿಗೆ ಗಹಗಹಿಸಿ ನಕ್ಕ ಹಾಗೆ ದನಿ ಕೇಳಿ ಎಚ್ಚರವಾಯಿತು. ಕೆಲಕ್ಷಣದ ನಂತರ ಅದು ಚೇಚಿ ಮನೆಯ ಕೋಳಿಯ ಕೂಗು ಎಂಬ ಕಟು ವಾಸ್ತವ ಅರಿವಿಗೆ ಬಂತು. ಸರಿ ‘ಸುಸು’ ಮಾಡಿ ನೀರು ಕುಡಿದು ಮಲಗಿದರಾಯಿತು ಎಂದು, ಎಲ್ಲ ಮುಗಿಸಿ ಮಲಗಿದರೆ, ಅದರ ಆರ್ಭಟ ಇನ್ನಷ್ಟು ಹೆಚ್ಚಾಯಿತು.
ವಸಂತಕುಮಾರ್ ಕಲ್ಯಾಣಿ ಪ್ರಬಂಧ ನಿಮ್ಮ ಓದಿಗೆ

Read More

ಎಸ್. ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ

ಆಹಹಹಾ, ಯಾಕಮ್ಮಣ್ಣಿ ಬಂದ್ಬಿಡು, ಅಯ್ಯೋ ಅಯ್ಯೋ ಅಯ್ಯೋ…., ಕೇಳಿಸ್ಕೊಂಡ್ಯೇನೋ ಕೆಪ್ರ, ಮನೆಹಾಳಿ, ಗೆಣಸು ಕೀಳು ಹೋಗು, ಚಿನಾಲಿ, ಚಂಗ್ಲು… ಹೀಗೆ ಅವಳ ಶಬ್ದಕೋಶದ ತುಂಬ ಆ ಪಾತ್ರದ ಮಾತುಗಳದ್ದೇ ಪಾರಮ್ಯ. ಕತ್ತೆ, ಕೋತಿ, ಗೂಬೆ ಎನ್ನುವ ಮೂರು ಪದದಿಂದಾಚೆ ಬೈಗುಳವೇ ಆಡಿ, ಕೇಳಿ ಗೊತ್ತಿಲ್ಲದ ಮನೆಯಲ್ಲಿ, ಇವಳ ಈ ಹೊಸ ವ್ಯಾಕರಣ, ಶಬ್ದಕೋಶ ಅಸಮಾಧಾನದ ಹೊಗೆ ಹಬ್ಬಿಸಿತ್ತು.
ಎಸ್ ನಾಗಶ್ರೀ ಅಜಯ್ ಬರೆದ ಈ ಭಾನುವಾರದ ಕತೆ “ಹೆಜ್ಜೆ ಮೂಡದ ಹಾದಿ” ನಿಮ್ಮ ಓದಿಗೆ

Read More

ಜೀವಜಾಲದ ಪ್ರೋಗ್ರಾಮಿಂಗ್‌ನ ವಿಸ್ಮಯ: ಸತೀಶ್‌ ತಿಪಟೂರು ಬರಹ

ವ್ಯಕ್ತಿ ಪ್ರಕೃತಿಯು ತನ್ನ ಪರಿಸರದ ಪ್ರಭಾವದ ವಿರುದ್ಧ ಪ್ರತಿಭಟಿಸಿ, ಸೆಣೆಸಿ ತನ್ನದೇ ನಡೆಗಳ ದಾರಿಯಲ್ಲಿ ಚಲಿಸಲು ಯಾವುದೋ ಒಂದು ಆಂತರಿಕ ಸೆಳೆತವಿರಬೇಕು. ಈ ಸೆಳೆತ ಇಂದು ನೆನ್ನೆಯದಲ್ಲ; ಇನ್ನೂ ಹಿಂದಿನದು, ಬಹುದೂರ ಕಾಲ ಹಿಂದಿನದು. ಎಂದೋ ಯಾವ ಕಾಲದಲ್ಲೋ ಯರ‍್ಯಾರ ಕಾಲ-ದೇಶ-ಪ್ರಭಾವ-ಪ್ರವಾಹಗಳ ಹರಿವಿನಲ್ಲೋ ಮೊಳೆತಿದ್ದಿರಬೇಕು. ಹೀಗೆ ಕಾಲಾಂತರ ಕಾದು ಕಾದು ತನ್ನನ್ನು ತಾನು ಅರಿವಿನಲ್ಲಿ ಕಂಡುಕೊಂಡುದುದು. ಇದು ಮೊಳೆತು ಬೆಳೆದು ವಿಕಾಸವಾಗಬಹುದಾದ ಬೀಜರೂಪ ಮಾತ್ರ. ಇದು ಬೆಳೆದು ಬೃಹತ್ ವೃಕ್ಷವಾಗಲು ಏನೆಲ್ಲಾ ಒದಗಿ ಬರಬೇಕೋ?
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿ ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ

Read More

ಸುಲಭವಾಗಿಯೇ ಬಿದ್ದ ಸೀಲು!: ಗುರುಪ್ರಸಾದ ಕುರ್ತಕೋಟಿ ಸರಣಿ

ಚೆನ್ನೈನಲ್ಲಿ ತಮಿಳು ಬರದಿದ್ದರೆ ತುಂಬಾ ಕಷ್ಟ ಅಂತ ಗೊತ್ತಿತ್ತು. ಕಾರಿನಲ್ಲಿಯೇ ಅಲ್ಲಿಗೆ ಹೊಗಿದ್ದ ನಾವು ಅಲ್ಲೊಬ್ಬರಿಗೆ ಹೊಟೇಲ್‌ಗೆ ಹೇಗೆ ಹೋಗೋದು ಅಂತ ಮಾರ್ಗದರ್ಶನ ಕೇಳಿದ್ದಕ್ಕೆ ತಮಿಳಿನಲ್ಲೇ ವಿವರಣೆ ನೀಡಿದರು. ತಮಿಳು ಬರೋದಿಲ್ಲ ಅಂತ ಹೇಳುವಷ್ಟು ಮಾತ್ರ ತಮಿಳು ಕಲಿತಿದ್ದ ನಾನು ಹಾಗೆ ಹೇಳಿ ಅವರ ಬಳಿ ಹಿಗ್ಗಾಮುಗ್ಗ ಬೈಸಿಕೊಂಡೆ. ಚೆನ್ನೈಗೆ ಬಂದವರು ಯಾಕೆ ಬೇಗನೆ ತಮಿಳು ಕಲಿಯುತ್ತಾರೆ ಅಂತ ಆಗ ನನಗೆ ತಿಳಿಯಿತು! ಬೆಂಗಳೂರಿನಲ್ಲೂ ಕನ್ನಡ ಮಾತಾಡದ ನಮ್ಮ ಕನ್ನಡಿಗರಿಗೆ ಹೀಗೆಯೇ ಬೈಯಬೇಕು ಅಂತ ಅಂದುಕೊಂಡೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ನಾಲ್ಕನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ