Advertisement

Tag: kendasampige

ಅವ್ವ ಮತ್ತು ಅವಳ ಕಾಪಿಟ್ಟ ಟ್ರಂಕು

ಅವಳು ಸತ್ತು, ಅವಳ ತಿಥಿ ಮಾಡಿದ ಮೇಲೆ ನಾನು ಮಾಡಿದ ಮೊದಲ ಕೆಲಸ ಅವಳ ಟ್ರಂಕನ್ನು ಮನೆಯಿಂದ ಸ್ವಲ್ಪ ದೂರದಲ್ಲಿದ್ದ ವೃದ್ಧಾಶ್ರಮಕ್ಕೆ ಕೊಟ್ಟು ಟ್ರಂಕಲ್ಲಿ ಸಿಕ್ಕ ಐನೂರು ರುಪಾಯಿಯ ಮಾಸಲು ನೋಟನ್ನು ಆಶ್ರಮಕ್ಕೆ ಕೊಟ್ಟಿದ್ದು, ಆಮೇಲೆ ತಡೆಯಲಾರದೆ ಅವಳ ಇಷ್ಟದ ಕೆಂಪು ಕಾಟನ್ ಸೀರೆ, ಅವಳ ಆರೆಂಜ್ ಕಲರಿನ ಜಾಕೆಟ್, ಅವಳು ಬಳಸುತ್ತಿದ್ದ ಉಮಾ ಗೋಲ್ಡ್ ಬಳೆ ತೆಗೆದುಕೊಂಡೆ, ಅವು ಇನ್ನೂ ನನ್ನ ಬೀರುವಿನಲ್ಲಿದೆ, ಆ ಜಾಕೆಟ್ ಸೀರೆ ಈಗಲೂ ಮುಟ್ಟಿದರೆ ಅವಳ ಕೊನೆಯೇ ಕಾಣದ ಮಮತೆಯಿಂದ ಮೈ ತಡುವಿಕೆ ನೆನಪಾಗುತ್ತದೆ, ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
ಜಯರಾಮಚಾರಿ ಬರಹ

Read More

‘ವಾಟ್ ದ ಹೆಕ್’ ಅಮ್ಮಾ…

‘ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆಯ ಕಂತು

Read More

ನಂಜುಂಡಿ ಕಲ್ಯಾಣವೂ ಮತ್ತು ‘ಮಿಲ್ಟ್ರೀ’ ಗ್ಯಾಂಗೂ

ಅಂತೂ ನಮ್ಮೂರಿಗೆ ನಂಜುಂಡಿ ಕಲ್ಯಾಣದ ಭಾಗ್ಯ. ಬರೋಬ್ಬರಿ ಒಂದು ವರ್ಷದ ನಂತರ. ಆದರೂ ನಮ್ಮ ಜನಕ್ಕೆ ಅದು ರಿಲೀಜ್ ಪಿಕ್ಚರ್. ಜಟಕಾ ಲೌಡ್ ಸ್ಪೀಕರ್ ಕಟ್ಟಿಕೊಂಡು ಸುತ್ತ ಹತ್ತೂರುಗಳಿಗೆ ಹೋಗಿ… “ಪ್ರೀಯ ಕಲಾಭಿಮಾನಿಗಳೆ.. ಕಲಾ ರಸಿಕರೆ.. ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ.. ಮತ್ತೆ ಮತ್ತೆ ನೋಡಲೇಬೇಕಾದ ಸಿನೇಮಾ..” ಎನ್ನುತ್ತ.. “ಮರೆಯದಿರಿ.. ಮರೆತು ನಿರಾಶರಾಗದಿರಿ..…” ಎನ್ನುವ ನೊಟೀಸ್ ನೀಡಿ ಮರಳಿತು. ಸೈಕಲ್ ರಂಗ ಬಸ್ ಸ್ಟಾಪು ಸಲೂನು ಕೂಟು ಸರ್ಕಲ್‌ಗಳಲ್ಲಿ ಪೋಸ್ಟರ್ ಅಂಟಿಸಿದ.
ಲಿಂಗರಾಜ ಸೊಟ್ಟಪ್ಪನವರ ಬರೆದ ಪ್ರಬಂಧ

Read More

ಒಂದೊಂದು ಕತೆಯೂ ಮತ್ತೊಂದರ ಕೊಂಡಿಯೋ ಎಂಬಂಥ ಸೂಕ್ಷ್ಮ ನೇಯ್ಗೆ

ಪೂರ್ಣಿಮಾ ತನ್ನ ಹುಟ್ಟೂರಿನ ನೆಲದ ಮನುಷ್ಯರನ್ನು ಕತೆಯೊಳಗೆ ತಂದಿದ್ದಾರೆ. ಬರಿಯ ಪಾತ್ರಗಳನ್ನಷ್ಟೇ ಅವರು ತಂದಿಲ್ಲ, ಅವರ ಬದುಕಿನ ಎಳೆಗಳನ್ನು ತಂದಿದ್ದಾರೆ. ಕತೆಗಾರ್ತಿ ಮಾಡಬೇಕಾದ ಕೆಲಸವಿದು. ಕತೆಯ ಮೂಲಕ ಬದುಕನ್ನು, ಭ್ರಮೆಗಳನ್ನು, ನಂಬಿಕೆಗಳನ್ನು, ಅವತಾರಗಳನ್ನು, ಆಕಸ್ಮಿಕಗಳನ್ನು, ಅರ್ಥವಂತಿಕೆಯನ್ನು ವಿವರಿಸುತ್ತಾ ಹೋಗುವುದು, ಇಷ್ಟನ್ನೂ ಪೂರ್ಣಿಮಾ ಸರಳವಾಗಿ ಮಾಡಿದ್ದಾರೆ. ಹಾಗಾಗಿ ಈ ಕತೆಗಳು ನಮ್ಮನ್ನು ಸೆಳೆಯುತ್ತವೆ.
ಪೂರ್ಣಿಮಾ ಮಾಳಗಿಮನಿ ಬರೆದ “ಡೂಡಲ್‌ ಕಥೆಗಳು” ಕೃತಿಗೆ ಗೋಪಾಲ ಕೃಷ್ಣ ಕುಂಟಿನಿ ಬರೆದ ಮುನ್ನುಡಿ

Read More

ಸರಿರಾತ್ರಿಯಲಿ.. ಹುಳ ಹುಪ್ಪಟೆಗಳ ಸಂಗದಲಿ…

ಮನೆಗೆ ಒಂದು ಗಂಡು ಬೇಕು ಅನ್ನುವ ಮೋಹ ಜನರಿಗೆ ಇನ್ನೂ ಕಡಿಮೆಯಾಗಿಲ್ಲ. ವಯಸ್ಸಾದ ಮೇಲೆ ನೋಡಿಕೊಳ್ಳುತ್ತಾರೆ ಎಂಬ ಭ್ರಮೆ ಹಳ್ಳಿಯಲ್ಲಿ ಇನ್ನೂ ಇದೆ. ಎಷ್ಟೋ ವಯಸ್ಸಾದವರನ್ನು ಒಂದೋ ಹೊರ ಹಾಕಿದ್ದಾರೆ ಇಲ್ಲವೇ ಮಕ್ಕಳೇ ಹಳ್ಳಿ ಬಿಟ್ಟು ದೂರ ಇದ್ದಾರೆ. ಇದು ಗಂಡು ಹಡೆದವರ ಭಾಗ್ಯ! ಹಾಗಂತ ಎಲ್ಲ ಗಂಡು ಮಕ್ಕಳು ಹಾಗಿಲ್ಲ ಬಿಡಿ. ಹೆಣ್ಣು ಕರುಳಿನ ಗಂಡು ಹುಡುಗರು ಇನ್ನೂ ಇರುವುದಕ್ಕೆ ಮಳೆ ಬೆಳೆ ಆಗುತ್ತಿರುವುದು!
ಗುರುಪ್ರಸಾದ್‌ ಕುರ್ತಕೋಟಿ ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ