Advertisement

Tag: kendasampige

ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಆಗಸ್ಟ್ ಹದಿನೈದು”

ಎಲ್ಲಿಂದಲೋ ಸಿನೆಮಾ ಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ…’ ತಲೆಯೆತ್ತಿ ನೋಡಿದ. ಆಕಾಶದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ. ಲಕ್ಷೋಪಲಕ್ಷ ನಕ್ಷತ್ರಗಳು, ಬೊಂಬಾಯಿನಲ್ಲಿ ವಿದ್ಯುದ್ದೀಪಮಾಲೆಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸರ್ಗಕ್ಕೆ ಮಾನವನ ಸ್ಪರ್ಧೆಯಿಲ್ಲ. ಬೊಂಬಾಯಿನಲ್ಲಿ ವಿದ್ಯುದ್ದೀಪಗಳ ಗೊಂದಲಕ್ಕೆ ಸಿಕ್ಕಿ ಆಕಾಶ ಕೆಂಪಾಗಿತ್ತು.
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್‌ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಈ ಸಂಕಲನದ “ಆಗಸ್ಟ್ ಹದಿನೈದು” ಕತೆ ನಿಮ್ಮ ಓದಿಗೆ

Read More

ನಡುವೆ ಹತ್ತಿದವರು ನಡುವೆಯೇ ಇಳಿದುಹೋದರು: “ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್‌ ಕಲ್ಯಾಣಿ ಬರಹ

ಹೀಗೆ ಕಾಲ ಓಡಿತು. ಪತ್ರಗಳು ನಿಂತು ಹೋದವು. ಫೋನ್ ನಿಂತುಹೋಯಿತು. ಅವರವರ ಕೆಲಸದಲ್ಲಿ ಅವರವರು ಬ್ಯುಸಿ ಆದರು. ಓದು, ಕೆಲಸ ಹುಡುಕುವುದು, ಹಣಕಾಸಿನ ತಾಪತ್ರಯದಲ್ಲಿ ನಾವುಗಳು ಊರಿಗೆ ಹೋಗಿ ಬರುವುದು ಕಡಿಮೆಯಾಯಿತು. ಊರಿನಲ್ಲಿ ಮೊದಲು ದೊಡ್ಡ ದೊಡ್ಡಮ್ಮ, ನಂತರ ಹಿರಿಯಕ್ಕ ತೀರಿಕೊಂಡ ಸುದ್ದಿ ಹೇಗೋ ನಮ್ಮನ್ನು ತಲುಪಿತು. ಅಲ್ಲಿಗೂ ಇವಳು ಹೆಚ್ಚು ಹೋಗಿ ಬಂದು ಮಾಡುತ್ತಿರಲಿಲ್ಲ, ತನ್ನ ಗಂಡನ ಮುಂದೆ ತಾಯಿ ಮನೆಯ ಹೀನಾಯ ಪರಿಸ್ಥಿತಿ ಕಾಣಬಾರದೆಂದು ಭಾವಿಸಿ…. ಅವಳ ತಮ್ಮ ಹೆಂಡತಿಯೊಂದಿಗೆ ಕಿರಿಕಿರಿ ಮಾಡಿಕೊಂಡ. ಕುಡಿತ ಹೆಚ್ಚಾಯಿತು. ಬದುಕು ಮೂರಾ ಬಟ್ಟೆಯಾಯಿತು.
“ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್‌ ಕಲ್ಯಾಣಿ ಬರಹ

Read More

ರುಕ್ಮಣಮ್ಮಜ್ಜಿಯ ನೆನಪುಗಳು….: ಸುಮಾ ಸತೀಶ್ ಸರಣಿ

ಅಂಗಡೀಗೇ ಮಾರಾಕೆ ಮಾತ್ರ ನಮ್ಮಜ್ಜೀ ತಿಂಡೀಗ್ಳು ಮೀಸ್ಲಲ್ಲ. ಮಾರಾಕಿಂತ ರವಷ್ಟು ಜಾಸ್ತೀನೆ ದಾನ ಮಾಡ್ತಿತ್ತು. ಒಂದು ಬೇಸನ್ ತಿಂಡಿ ಮಾರಾಕಿಟ್ರೆ, ಎಲ್ಡು ಬೇಸನ್ ಅವ್ರಿವ್ರಿಗೆ ಕೊಡೋಕೇ ಸಾಲ್ತಿರ್ಲಿಲ್ಲ. ಆದ್ರೂ ಒಲೆ ಮುಂದೆ ಕುಂತ್ಕಣಾಕೆ ಎಂದ್ರೂ ಬ್ಯಾಸ್ರ ಪಟ್ಟಿದ್ದಿಲ್ಲ. ಪಕ್ಕದ್ ಮನ್ಯಾಗಿದ್ದ ವಾರ್ಗಿತ್ತೀಗೆ ಮನೆ ತುಂಬಾ ಮಕ್ಳು. ಅದ್ರಾಗೂ ಸಾಲಾಗಿ ಒಂಬತ್ತು ಹೆಣ್ಣುಮಕ್ಕಳು. ಅದ್ಕೇಯಾ ತಿಂಡೀ ತೀರ್ಥದಾಗೆ ಕೈ ಬಿಗಿ ಮಾಡ್ತಿದ್ರು. ನಮ್ಮಜ್ಜೀ ಜೀವ ನಿಲ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಅಜ್ಜಿ ರುಕ್ಮಣ್ಣಮ್ಮನವರ ಕುರಿತು ಬರೆದಿದ್ದಾರೆ

Read More

ಬಲ್ಲಿರೇನು ಕಾಡ ಹಣ್ಣುಗಳ ರುಚಿಯ?: ರೂಪಾ ರವೀಂದ್ರ ಜೋಶಿ ಸರಣಿ

ಎಳೆಯ ಕಾಯಿಗಳು ಬಲಿತು, ಕರ್ರಗೆ ಹೊಳೆಯುವ ಆ ಹಣ್ಣುಗಳು ಕಣ್ಣಿಗೆ ಬಿದ್ದರೆ ಮುಗಿಯಿತು. ಸ್ಪರ್ಧೆಗೆ ಬಿದ್ದವರಂತೇ, ನುಗ್ಗಿ ನುಗ್ಗಿ ಹಣ್ಣುಗಳನ್ನು ಕೊಯ್ದು ಚಪ್ಪರಿಸುತ್ತಿದ್ದೆವು. ಹುಳಿಯ ಜೊತೆಗೆ ಸವಿ ಬೆರೆತ ಆ ಮಧುರ ರುಚಿ ನೆನೆದರೆ, ಈಗಲೂ ಬಾಯಲ್ಲಿ ನೀರೂರುತ್ತದೆ. ಈ ಕವಳಿ ಕಾಯಿ ಕೊಯ್ದರೆ, ಹಾಲಿನಂಥ ಜಿಗುಟು ವಸರುತ್ತದೆ. ಈ ಜಿಗುಟಿನಿಂದ ನಮ್ಮ ಅಂಗಿಯೆಲ್ಲ ಕಲೆಯಾಗಿ, ಮನೆಯಲ್ಲಿ ನಿತ್ಯ ಬೈಗುಳದ ಹೂ ತಲೆಗೇರುತ್ತಿತ್ತು. ಆ ರುಚಿ ಹಣ್ಣಿನ ಮುಂದೆ, ಬೈಗುಳ, ಬಡಿತ ಇವೆಲ್ಲ ಯಾವ ಲೆಕ್ಕದ್ದು ಹೇಳಿ?
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಐದನೆಯ ಕಂತು

Read More

ಅನ್ನ, ನೀರಿಗೇಕೆ ಅನಾದರ ತೋರುವಿರಿ?: ಬಸವನಗೌಡ ಹೆಬ್ಬಳಗೆರೆ ಸರಣಿ

ದಿನಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿಯೊಂದರ ಪ್ರಕಾರ 2019 ರಲ್ಲಿ ಜಗತ್ತಿನಾದ್ಯಂತ 93.1 ಕೋಟಿ ಟನ್‌ನಷ್ಟು ಆಹಾರ ಪೋಲಾಗಿದೆ! ಇದೇ ವರ್ಷ 69 ಕೋಟಿ ಜನರು ಆಹಾರದ ಕೊರತೆ ಎದುರಿಸಿದ್ದಾರೆ!! ಇದರಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣವೇ ಹೆಚ್ಚು ಎಂಬ ವರದಿಯಿದೆ. ಭಾರತದಲ್ಲಿ ಮನೆಗಳಲ್ಲಿ ಪೋಲಾಗುವ ಆಹಾರದ ಪ್ರಮಾಣ ವಾರ್ಷಿಕ ತಲಾವಾರು 50 ಕೆಜಿಯಷ್ಟು ಎಂದು ಅಂದಾಜಿಸಲಾಗಿದೆಯಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ