Advertisement

Tag: kendasampige

ಬೋಧಿಸುವಾಗ ಮಕ್ಕಳನ್ನು ನಿಭಾಯಿಸಿದ ರೀತಿ..: ಬಸವನಗೌಡ ಹೆಬ್ಬಳಗೆರೆ ಸರಣಿ

ಒಬ್ಬ ಹುಡುಗ ಮಾತ್ರ ‘ಡ್ಯಾನ್ಸಿಂಗ್’ ಪದ ಹೇಳಿದಾಗ ಜಾಸ್ತಿಯೇ ಕುಣಿಯುತ್ತಾ ಬಂದು ನನ್ನ ಹತ್ತಿರವೇ ಬಂದುಬಿಟ್ಟ. ನನಗೆ ತಕ್ಷಣಕ್ಕೆ ಸಿಟ್ಟು ಬಂದು ಒಂದು ಏಟನ್ನು ಕೊಟ್ಟುಬಿಟ್ಟೆ. ಅವನು ಜೋರಾಗಿ ಅಳಲು ಶುರು ಮಾಡಿದ. ಹಿಂದೆ ಪಾಠ ನೋಡಲು ಕುಳಿತ ಲೆಕ್ಚರ್ ನನಗೆ ಬಯ್ಯುತ್ತಾರೆಂದು ನಾನು ತಕ್ಷಣ ಅಳುತ್ತಿದ್ದ ಹುಡುಗನ ಬಳಿ ಹೋಗಿ ಮತ್ತೆ ಟಚ್ ಮಾಡಿದಂತೆ ಮಾಡಿ ‘ಬೀಟಿಂಗ್’ ಎಂದು ಹೇಳಿದೆ. ಹುಡುಗರೂ ‘ಬೀಟಿಂಗ್…… ಬೀಟಿಂಗ್’ ಎಂದರು. ಅವನು ಅಳುವುದನ್ನು ತೋರಿಸಿ ‘ಕ್ರೈಯಿಂಗ್.. ಕ್ರೈಯಿಂಗ್’ ಎಂದು ಹೇಳಿದೆನು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಮನಸ್ಸರಳಿಸುವ ಮೋಹಕ ರಂಗೋಲಿ: ಸುಮಾವೀಣಾ ಸರಣಿ

ಭಾರತೀಯ ರಂಗೋಲಿಗಳಲ್ಲಿ ಪರ್ವತ ಪ್ರಾಂತ್ಯ, ಕರಾವಳಿ ಮತ್ತು ಮೈದಾನ ಪ್ರಾಂತ್ಯಗಳಲ್ಲಿ ವಿಭಿನ್ನವಾಗಿ ಮೂಡಿಬರುತ್ತವೆ. ಪರ್ವತ ಪ್ರಾಂತ್ಯ ಅಂದರೆ ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಇಲ್ಲಿ ಬಿಡಿಸುವ ರಂಗೋಲಿ ರೇಖೆಗಳನ್ನು ಕೂಡಿಕೊಂಡಿದ್ದು ಅಗಲದ್ದಾಗಿರುತ್ತದೆ. ಚಿಕ್ಕಚಿಕ್ಕ ರೇಖೆಗಳನ್ನು ಬಳಸಿ ಬಂಗಾಳ ಮತ್ತು ಬಿಹಾರ ಪ್ರಾಂತ್ಯದವರು ಬಿಡಿಸುತ್ತಾರೆ. ಇವೆರಡರ ಜೊತೆಗೆ ಬಳ್ಳಿಗಳ ರಂಗೋಲಿ ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿದೆ. ಕೇರಳದವರ ಪುಷ್ಪರಂಗೋಲಿಯಂತೂ ವಿಶ್ವವಿಖ್ಯಾತ. ಓಣಂ ಆಚರಣೆಯ ಅವಿಭ್ಯಾಜ್ಯ ಅಂಗ ಎಂದರೆ ಈ ಪುಷ್ಪರಂಗೋಲಿ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನೆಂಟನೆಯ ಬರಹ ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವನರಾಗ ಶರ್ಮಾ ಕತೆ

ಭೂಮಿ ಕಂಪಿಸುತ್ತಿದೆ. ಇಮಾರತುಗಳು, ಗಿಡಮರಗಳು ಅಲುಗಾಡುತ್ತಿವೆ. ಏನಾಗುತ್ತಿದೆ? ಎಂಬುದೇ ತಿಳಿಯದೇ ಎಲ್ಲರೂ ಒಂದು ಕ್ಷಣ ದಂಗಾದರು. ಮರುಕ್ಷಣದಲ್ಲಿಯೇ ತೀವ್ರ ಭೂಕಂಪದ ಅನುಭವ ಆಗುತ್ತಿದ್ದಂತೆ, ಕೆಲವರ ಮೊಬೈಲಿನಲ್ಲಿ ಕರಾವಳಿಯಲ್ಲಿ ತ್ಸುನಾಮಿ ಎರಗಿದ ಮೆಸೇಜ್ ಬರತೊಡಗಿದಾಗ ಎದೆ ಬಡಿತ ಜೋರಾಯಿತು. ಮಾತು ಹೊರಡುತ್ತಿಲ್ಲ. ಮುಕುಲ ಇಲ್ಲಿಂದ 35-40 ಕಿಮಿ ದೂರದ ತುಕುಶಿಕ ನಗರದ ಕಂಪನಿಯ ಆಫೀಸಿನಲ್ಲಿದ್ದಳು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ವನರಾಗ ಶರ್ಮಾ ಕತೆ “ವಿಪ್ಲವ” ನಿಮ್ಮ ಓದಿಗೆ

Read More

ರೋಸೀ ಮತ್ತು ಪೂರ್ವಜರ ಸಮಾಧಿಗಳು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ರೋಸೀ ಇದ್ದ ವಾಹನ ನೇರವಾಗಿ ಮಾರಿಕುಪ್ಪಮ್ ದಾಟಿ ಅರ್ಧ ಕಿಲೋಮೀಟರ್ ದೂರ ದಕ್ಷಿಣಕ್ಕೆ ಸಾಗಿ ದೊಡ್ಡದಾದ ಮತ್ತು ಎತ್ತರವಾದ ಗಣಿ ತ್ಯಾಜ್ಯದ ಗುಡ್ಡವನ್ನು ಸುತ್ತಾಕಿಕೊಂಡು ಪೂರ್ವಕ್ಕೆ ತಿರುಗಿ ಲಕ್ಷ್ಮೀಸಾಗರ ರಸ್ತೆಯಲ್ಲಿ ಒಂದು ಕಿ.ಮೀಟರ್ ದೂರ ಸಾಗಿ ರಸ್ತೆಯಲ್ಲಿ ನಿಂತುಕೊಂಡಿತು. ರೋಸೀ ಜೊತೆಗಿದ್ದ ಮಣಿ ವಾಹನದಿಂದ ಕೆಳಕ್ಕಿಳಿದು ವಾಹನದ ಬಾಗಿಲು ತೆರೆದು ರೋಸೀಯನ್ನು ಕೆಳಕ್ಕೆ ಇಳಿಯಲು ಸಹಾಯ ಮಾಡಿದ.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ

Read More

ಆಸ್ಟ್ರೇಲಿಯಾ ಗ್ರೇಟ್ ಎಂದ ಚುನಾವಣೆ ಫಲಿತಾಂಶ: ಡಾ. ವಿನತೆ ಶರ್ಮ ಅಂಕಣ

ಅದೆಷ್ಟೋ ಆಸ್ಟ್ರೇಲಿಯನ್ನರಿಗೆ ಮೇ ಮೂರರ ಶನಿವಾರ ರಾತ್ರಿ ಜಾಗರಣೆ ಆಯ್ತೆಂದು ಕಾಣುತ್ತದೆ. ಚುನಾವಣಾ ಫಲಿತಾಂಶದ ಮುಖ್ಯ ಅಂಶಗಳು ಗೊತ್ತಾಗಿತ್ತು. ಲೇಬರ್ ಪಕ್ಷ ಮುನ್ನಡೆ ಸಾಧಿಸಿತ್ತು. ವಿಜಯೋತ್ಸಾಹದ ಮುಖ ಹೊತ್ತು ಬೀಗುತ್ತಾ ಪ್ರಧಾನಿ ಆಲ್ಬಾನೀಸಿ ಮಾಧ್ಯಮಗಳ ಮುಂದೆ ಎದೆಯುಬ್ಬಿಸಿಕೊಂಡು ನಿಂತು ಆಸ್ಟ್ರೇಲಿಯನ್ನರಿಗೆ ಧನ್ಯವಾದ ಹೇಳಿದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ