Advertisement

Tag: Nature

ಸುಂದರ ಕಾಡಿನ ರೋಚಕ ಕಥೆಗಳು-5: ರೂಪಾ ರವೀಂದ್ರ ಜೋಶಿ ಸರಣಿ

ನಮ್ಮಲ್ಲಿ ತಂಪು ಜಾಸ್ತಿಯಾದ್ದರಿಂದ ಹಾವುಗಳು ಹೆಚ್ಚಾಗಿ ಇರಲಿಲ್ಲವೆನ್ನಿಸುತ್ತದೆ. ಒಂದು ನಿರುಪದ್ರವಿ ಹಾವಿನ ಬಗ್ಗೆ ಹೇಳಬೇಕು ಅದೆಂದರೆ ಹಸಿರು ಹಾವು. ಹಸಿರು ದಂಟಿಗೆ ಸುತ್ತಿಕೊಂಡು, ಸಪೂರ ಕೋಲಿನಂತೇ ಡೊಂಕಾಗಿ ನಿಂತು ಹುಳ ಹುಪ್ಪಡಿ ಹಿಡಿಯುವ ಈ ಹಾವನ್ನು ಗುರುತಿಸುವುದೇ ಕಷ್ಟ. ನಾವೇ ಅದೆಷ್ಟೋ ಸಲ, ಮುಳ್ಳಣ್ಣು ಕೊಯಿದು ಕೊಳ್ಳುವಾಗಲೋ, ಜಾಜಿ ಹೂ ಕೊಯ್ಯುವಾಗಲೋ ಟೊಂಗೆಯ ಜೊತೆಗೇ ಎಳೆದು ಬಿಡುತ್ತಿದ್ದೆವು. ಆಗ ಅದು ಗಾಬರಿಬಿದ್ದು, ಸರಕ್ಕನೆ ಕೆಳಗಿಳಿದು ಓಡುತ್ತಿತ್ತು. ಅದು ಹೋಗಿ ಎಷ್ಟು ಹೊತ್ತಿನ ತನಕ, ನಾವು ಜೀವ ಬಾಯಿಗೆ ಬಂದವರಂತೇ ಭಯದಿಂದ ಇಷ್ಟಗಲ ಕಣ್ಣುಮಾಡಿ ಮಾತು ಮರೆತು ನಿಂತಿರುತ್ತಿದ್ದೆವು!!
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

Read More

ಹಿಡಿಯಷ್ಟು ಪ್ರೀತಿ ಕಡಲಿನಷ್ಟಾಯ್ತು: ಮಹಾಲಕ್ಷ್ಮೀ. ಕೆ. ಎನ್. ಬರಹ

ಮೋಡ ಕಪ್ಪಾದಾಗ ಮಳೆ ಬಂದೇಬರುತ್ತೆ ಅನ್ನೋ ಮುನ್ಸೂಚನೆ ಇರುತ್ತೆ, ಕಾಲೇಜಿನಲ್ಲಿ ಸ್ವಲ್ಪ ಮೈ ಬೆಚ್ಚಗಾದಾಗ ಮನೆಗೆ ಹೋಗುವಷ್ಟರಲ್ಲಿ ಇವತ್ತು ಜ್ವರ ಬಂದೇ ಬರುತ್ತೆ ಅಂತ ಗೊತ್ತಾಗುತ್ತೆ, ಇವತ್ತು ರೆಕಾರ್ಡ್ ಬುಕ್ ಮರೆತುಬಂದಿದ್ದೀನಿ ಲೆಕ್ಚರರ್ ಹತ್ತಿರ ಬೈಗುಳಗಳು ಕಾದಿದೆ ಅಂತ ಗೊತ್ತಾಗುತ್ತೆ, ಆದರೆ ಪ್ರೀತಿ ಹುಟ್ಟುವ ಘಳಿಗೆ ಯಾರಿಗೆ ತಾನೇ ತಿಳಿದೀತು? ಕೆಲವೊಮ್ಮೆ ಮೆಚ್ಚುಗೆಯಲ್ಲಿ ಮುಗುಳ್ನಕ್ಕು ಪ್ರಾರಂಭವೇ ಇಲ್ಲದೆಯೇ ಅಲ್ಲಿಗೇ ಮುಕ್ತಾಯವಾಗಬಹುದು.
ಪ್ರೇಮಿಗಳ ದಿನಕ್ಕೆ ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

Read More

ಬದುಕ ಬೆಳಗಿಸುವ ಸರಳ ಸೂತ್ರಗಳು

ಮೊಗ್ಗು ಸಹಜವಾಗಿ ಬಿರಿದಾಗಲೇ ಹೂವಾಗುವುದು. ಬಗೆಬಗೆಯ ಸಸ್ಯವರ್ಗಗಳು ಸೇರಿಯೇ ಕಾಡಾಗುವುದು, ಮರಕ್ಕೆ ಭೂಮಿಯಾಸರೆ, ಮರವು ಬಳ್ಳಿಗಾಸರೆಯಾದರೆ ಹೂ, ಕಾಯಿ, ಹಣ್ಣುಗಳು ಸಕಲ ಜೀವಿಗಳಿಗಾಸರೆಯಾಗಿ ಪೊರೆಯುತ್ತವೆ. ಇಲ್ಲಿ ಎರೆಹುಳುವಿನಿಂದ ಹಿಡಿದು ಚಿಟ್ಟೆಗೂ, ಹುಲಿಗೂ, ಹುಲ್ಲಿಗೂ ಅದರದೇ ಆದ ಕೆಲಸಗಳಿವೆ. ಯಾವುದೂ ಮುಖ್ಯವಲ್ಲ; ಯಾವುದೂ ಅಮುಖ್ಯವಲ್ಲ. ಮನುಷ್ಯನ ಕೆಲಸಕ್ಕೂ, ಕಾಯಕಕ್ಕೂ ಅನ್ವಯಿಸಿಕೊಳ್ಳಬೇಕಾದ ಮಾತುಗಳಿವು.
ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ಉತ್ತಮ ಪೂರ್ವಜರಾಗುವುದು ಹೇಗೆ?

ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.
ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಕೀಟಹಾರಿ ನಾಚಿಕೆ ಮುಳ್ಳು ಮತ್ತು ಘಾಟಿ ಕೋಳಿ: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥಾನಕ

“ಒಮ್ಮೆ ಹೊರ ಜಗಲಿಯಲ್ಲಿ ಕುಳಿತು ಸುಮ್ಮನೆ ರಸ್ತೆ ನೋಡುತ್ತಿರಬೇಕಾದರೆ ಅಚಾನಕ್ಕಾಗಿ ಕೋಳಿ ವಿಚಿತ್ರವಾಗಿ ಶಬ್ದ ಹೊರಡಿಸಲಾರಂಭಿಸಿತು. ನೋಡ ನೋಡುತ್ತಿದ್ದಂತೆ ಅನತಿ ದೂರದಲ್ಲೇ ಹದ್ದೊಂದು ನೆಲದ ಮಟ್ಟಕ್ಕೆ ಹಾರಿದ್ದು ಕಂಡಿತು. ಮರಿಗಳು ಅವಕ್ಕಾಗಿ ಹೇಂಟೆಯ ಹೊಟ್ಟೆಯೊಳಗಡೆ ಮುದುಡಿಕೊಂಡವು. ಎರಡು ಮರಿಗಳು ತುಂಬಾ ದೂರದಲ್ಲಿದ್ದರಿಂದ ಅವುಗಳಿಗೆ ಕೂಡಿಕೊಳ್ಳಲಾಗಲಿಲ್ಲ.”

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ