Advertisement

ಅಂಕಣ

ಭಾವಾತಿರೇಕ ಎಂಬ ಖಾಯಿಲೆ: ಸುಕನ್ಯಾ ಕನಾರಳ್ಳಿ ಅಂಕಣ

ಭಾವಾತಿರೇಕ ಎಂಬ ಖಾಯಿಲೆ: ಸುಕನ್ಯಾ ಕನಾರಳ್ಳಿ ಅಂಕಣ

ಈಗ ಬದುಕಿನ ಈ ಹಂತದಲ್ಲಿ ಅವರ ಕಾಳಜಿ ಒಂದೇ. ಬದುಕಿನುದ್ದಕ್ಕೂ ತಮ್ಮ ತಂಗಿಯರ ಬದುಕನ್ನು ದಡ ಹತ್ತಿಸಲು ಕಳೆದಾಗಿದೆ. ಅವರೆಲ್ಲ ತನ್ನನ್ನು ಪ್ರೀತಿಯಿಂದ ನೋಡಿಕೊಂಡರೂ ಸಹ ಈಗ ತನ್ನದೇ ಒಂದು ನೆಲೆ ಬೇಕೆನ್ನಿಸಿದೆ. ತನಗೆ ನಾಲ್ಕು ಗೋಡೆ, ಒಂದು ತಾರಸಿಯಾದರೂ ಇರುವ ಮನೆ ಕಟ್ಟಿಕೊಂಡು ಉಳಿದ ಬದುಕನ್ನು ಒಬ್ಬಳೇ ಕಳೆಯಲು ಒಂದು ಸೈಟು ಬೇಕು, ಅಷ್ಟೇ. ಅಸಂಖ್ಯಾತ ವಿದ್ಯಾರ್ಥಿಗಳು, ಸಾಹಿತ್ಯ ವಲಯದ ಹಲವಾರು ಆಪ್ತರು, ಭೋಪರಾಕ್ ಹೇಳುತ್ತಿರುವ ಅಪಾರವಾದ ಸ್ನೇಹಿತರ ಬಳಗ… ಇಷ್ಟೆಲ್ಲ ಇದ್ದು ಸುಮಾರು ಎಪ್ಪತ್ತರ ದಶಕದ ವಯಸ್ಸಿನ ಆಕೆ ಹೀಗೆ ಬಹಿರಂಗವಾಗಿ ಹೇಳಿಕೊಳ್ಳಬೇಕಾಯಿತೆ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ

read more
ಬದುಕು ಈಗ ತುಂಬ ಸುಲಭ…: ವಿನಾಯಕ ಅರಳಸುರಳಿ ಅಂಕಣ

ಬದುಕು ಈಗ ತುಂಬ ಸುಲಭ…: ವಿನಾಯಕ ಅರಳಸುರಳಿ ಅಂಕಣ

ಕಾಲ ಬದಲಾಯಿತು. ಆಧುನಿಕತೆ ಎದ್ದು ನಿಂತಿತು. ಕಟ್ಟಿಗೆ ಕಡಿಯುವುದು ಕಷ್ಟ ಎಂದು ಗೀಝರ್ ಬಂತು. ಮತ್ತಿ ಸೊಪ್ಪು ಸಿಗುತ್ತಿಲ್ಲ ಎಂದು ಶ್ಯಾಂಪೂ ಬಂತು. ಅಮ್ಮ ಊರಲ್ಲಿದ್ದಾಳೆ ಎಂದಾಗ ಜೊಮ್ಯಾಟೋ ಬಂತು. ಕಾಲಿಗೆ ಬದಲಾಗಿ ಕಾರು ಬಂತು. ಸಾಕ್ಷಾತ್ ದ್ವಾಪರ ಯುಗದ ಕಾಳಿಂಗವೇ ಮೆಟ್ರೋದ ರೂಪ ತಾಳಿ ಹರಿದು ಬಂತು. ಎಲ್ಲವೂ ಸುಲಭವಾಯಿತು. ಸುಲಲಿತವಾಯಿತು. ಇಡೀ ಪ್ರಪಂಚವೇ ಬೆರಳ ತುದಿಯಲ್ಲಿ ಸಿಕ್ಕಿಕೊಂಡಿತು. ಮನುಷ್ಯ ಲೋಕದ ಬಾವುಟವೊಂದು ಚಂದ್ರನ ಅಂಗಳದಲ್ಲಿ ಪಟಪಟಿಸಿತು. “ವಿ ಆರ್ ಅಡ್ವಾನ್ಸ್ಡ್.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

read more
ನೀಲು ಮತ್ತು ಲೂಸಿ: ಸುಕನ್ಯಾ ಕನಾರಳ್ಳಿ ಅಂಕಣ

ನೀಲು ಮತ್ತು ಲೂಸಿ: ಸುಕನ್ಯಾ ಕನಾರಳ್ಳಿ ಅಂಕಣ

ಲೂಸಿ ನಿಸರ್ಗದ ಕಂದ. ಹಳ್ಳಿಗಾಡಿನ ಮಳೆಬಿಸಿಲ ಕರುಣೆಯಲ್ಲಿ ಮಿಂದು ಹದವಾಗಿ ಅರಳಿದ್ದವಳು. ಕವಿ ಹೇಳುವಂತೆ ಅವಳಿಗೆ ಮೂರು ವರ್ಷವಿರುವಾಗ ಪ್ರಕೃತಿ ಈ ಸುಂದರ ಜೀವದ ಹೊಣೆ ಸಂಪೂರ್ಣವಾಗಿ ಹೊತ್ತುಕೊಳ್ಳಲು ಮುಂದೆ ಬಂತಂತೆ. ಬೆಟ್ಟ ನದಿ, ಗಿಡ ಮರ ಎಲ್ಲವೂ ತಮ್ಮ ಸತ್ವವನ್ನು ಅವಳಿಗೆ ಧಾರೆಯೆರೆದವಂತೆ. ಪ್ರಕೃತಿಯ ಅಂತಶ್ಚೇತನವೇ ಅವಳಲ್ಲಿ ಪೂರ್ತಿಯಾಗಿ ಮೈದಳೆಯಿತಂತೆ. ಇಷ್ಟೆಲ್ಲಾ ರೀತಿಯಲ್ಲಿ ನಳನಳಿಸಿದ ಲೂಸಿ ಬದುಕಿದ್ದು ಮಾತ್ರ ಕೆಲವೇ ವರ್ಷಗಳು. ಕೊನೆಯ ಐದನೆಯ ಪದ್ಯದಲ್ಲಿ ಕವಿ ಸಾವು ಮತ್ತು ಅಗಲಿಕೆಗಳು ತರುವ ವಿಷಾದದ ಆಳವನ್ನು ತೆರೆದಿಡುತ್ತಾನೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೆಂಟನೆಯ ಬರಹ

read more
ತಂತ್ರಜ್ಞಾನದ ಬಿಗಿಮುಷ್ಟಿಯಲ್ಲಿ ಕಲಿಕೆ: ಡಾ. ವಿನತೆ ಶರ್ಮ ಅಂಕಣ

ತಂತ್ರಜ್ಞಾನದ ಬಿಗಿಮುಷ್ಟಿಯಲ್ಲಿ ಕಲಿಕೆ: ಡಾ. ವಿನತೆ ಶರ್ಮ ಅಂಕಣ

ಆಧುನಿಕತೆಯನ್ನು ಹಿಗ್ಗಿಸುತ್ತಾ ನಾವೆಷ್ಟು ಮುನ್ನಡೆಯುತ್ತಿದ್ದೇವೊ ಅಷ್ಟೆ ಪ್ರಮಾಣದಲ್ಲಿ ನಮ್ಮ ಅವಲಂಬನೆಗಳೂ ಹೆಚ್ಚುತ್ತಿವೆ. ಕಾರ್ಪೊರೇಟ್, ಐಟಿ ವಲಯದಲ್ಲಿ ಕೆಲಸ ಮಾಡುವವರು ದಿನವೂ ಕುಡಿಯುವ ಕಾಫಿ ಅವಲಂಬನೆ, ನರ್ಸರಿ ಮಕ್ಕಳ ಕೈಯಲ್ಲಿ ಇರುವ ಐಪ್ಯಾಡ್ ಅವಲಂಬನೆ, ತನ್ನ ಇಡೀ ಯೂನಿವರ್ಸಿಟಿ ಡಿಗ್ರಿ ಕಲಿಕೆಯನ್ನು ಕೈಯಲ್ಲಿರುವ ಫೋನ್ ಮೂಲಕವೇ ಮಾಡಿ ಮುಗಿಸುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ, ಚಲಿಸುತ್ತಿರುವ ಬಸ್ಸಿನಲ್ಲಿ ಕೂತಿರುವ ಪ್ರಯಾಣಿಕನೊಬ್ಬ ಕೂತ ಜಾಗದಲ್ಲೆ ಲ್ಯಾಪ್-ಟಾಪ್ ಮತ್ತು ಹೆಡ್‌ಫೋನ್ಸ್ ಬಳಸುತ್ತಾ ಮೀಟಿಂಗ್‌ನಲ್ಲಿ ಭಾಗವಹಿಸುವುದು ಅದರ ಜೊತೆಗೆ ಸ್ಯಾಂಡ್ವಿಚ್ ತಿಂದು ಮುಂದಿನ ಮೀಟಿಂಗ್‌ಗೆ ತಯಾರಾಗುವುದು ಆಧುನಿಕತೆಯ ಕೆಲ ತಲ್ಲಣಗಳು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
ವಿದ್ಯೆ ಹಾಗೂ ವಿವೇಕ – ಒಟ್ಟಿಗೆ ಇರುವುದಿಲ್ಲವೆ?: ಡಾ. ಎಲ್.ಜಿ. ಮೀರಾ ಅಂಕಣ

ವಿದ್ಯೆ ಹಾಗೂ ವಿವೇಕ – ಒಟ್ಟಿಗೆ ಇರುವುದಿಲ್ಲವೆ?: ಡಾ. ಎಲ್.ಜಿ. ಮೀರಾ ಅಂಕಣ

ವಿದ್ಯೆ ಮತ್ತು ವಿವೇಕದ ಪ್ರಶ್ನೆ ಬಂದಾಗ ನಮ್ಮ ಗ್ರಾಮೀಣ ಜನರಲ್ಲಿ ಸಾಕಷ್ಟು ವಿವೇಕವಿರುವುದನ್ನು ನಾವು ಗಮನಿಸುತ್ತೇವೆ. ಉದಾಹರಣೆಗೆ, ಭೂಮಿಯನ್ನು ಲಾಭ ತರುವ ಸರಕು ಎಂದು ನೋಡದೆ ತಾಯಿ ಎಂದು ಕರೆಯುವುದು, ಪರಿಸರವನ್ನು ಹಾನಿಗೊಳಪಡಿಸದಿರುವುದು, ಪ್ರಾಣಿ-ಪಕ್ಷಿ- ಪುಟ್ಟ ಪುಟ್ಟ ಜೀವಗಳಿಗೂ ತಮ್ಮ ಬದುಕಿನಲ್ಲಿ ಸ್ಥಳಾವಕಾಶ ಮಾಡಿಕೊಡುವುದು, ಮಣ್ಣು ಅಂದರೆ ನಗರದವರಂತೆ ಅಸಹ್ಯ ಪಟ್ಟುಕೊಳ್ಳದೆ ಇರುವುದು, ಮನೆಯಲ್ಲಿ ಮಾಡುವ ಸರಳ ಅಡಿಗೆಗಳಲ್ಲಿ ಸಂತೋಷವನ್ನು ಕಾಣುವುದು‌, ದೊಡ್ಡ ದೊಡ್ಡ ಕುಟುಂಬಗಳಲ್ಲಿ ಹೊಂದಿಕೊಂಡು ಹೋಗುವುದು‌ – ಇಂತಹ ಅನೇಕ ಜೀವನ ವಿವೇಕದ ನಿದರ್ಶನಗಳನ್ನು ನಾವು ಅವಿದ್ಯಾವಂತರಾದ ನಮ್ಮ ಹಳ್ಳಿಗರಲ್ಲಿ ಕಾಣಬಹುದು.‌
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

read more
ಸೀರೆ ಪುರಾಣ!: ಸುಕನ್ಯಾ ಕನಾರಳ್ಳಿ ಅಂಕಣ

ಸೀರೆ ಪುರಾಣ!: ಸುಕನ್ಯಾ ಕನಾರಳ್ಳಿ ಅಂಕಣ

ಸೀರೆ ಎನ್ನುವುದು ಒಬ್ಬ ಗಂಡಸಿನ ತಲೆಯಲ್ಲಿ ಹುಟ್ಟಿದ ಪರಿಕಲ್ಪನೆ ಎನ್ನುವ ಗುಮಾನಿ ನನಗಿದೆ. ದಿನನಿತ್ಯ ರೈಲಿನಲ್ಲಿ ಹೋಗುವ ಹೆಣ್ಣುಮಕ್ಕಳಿಗಂತೂ ಅದೊಂದು ಮಹಾ ಪಿರಿಪಿರಿಯೇ. ಜನರಲ್ ಬೋಗಿಯಲ್ಲಿ ಇದ್ದು ಜನಜಂಗುಳಿ ಹೆಚ್ಚಿದ್ದರಂತೂ ಸೊಂಟ ಚಿವುಟುವ, ಬೆನ್ನಿಗೆ ಕಚಗುಳಿಯಿಟ್ಟಂತೆ ಮುಟ್ಟುವ ದೌರ್ಜನ್ಯಗಳಿಗೆ ಲೆಕ್ಕವೇ ಇಲ್ಲ. ಮುಂಬಯಿಯಂತಹ ಮಹಾ ನಗರಗಳಲ್ಲಿ ದಿನನಿತ್ಯದ ಮೆಟ್ರೋ ಹೆಂಗಸರು ಬಿಗಿಯಾದ ಜೀನ್ಸ್ ಮತ್ತು ಶರ್ಟ್ ತೊಟ್ಟು ಮೇಲೊಂದು ಲಳಲಳ ಎನ್ನುವಂಥದ್ದೇನೋ ಹಾಕಿಕೊಳ್ಳಲು ಇಷ್ಟಪಡುತ್ತಾರೆ ಎಂದು ಸುದ್ದಿಪತ್ರಿಕೆಯಲ್ಲಿ ಓದಿದ ನೆನಪು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more
ಅಹಮ್ಮಿಗೊಂದು ಪೆಟ್ಟು ಕೊಡುವ ಸಮಯ…: ಜಯಲಕ್ಷ್ಮಿ ಪಾಟೀಲ್ ಅಂಕಣ

ಅಹಮ್ಮಿಗೊಂದು ಪೆಟ್ಟು ಕೊಡುವ ಸಮಯ…: ಜಯಲಕ್ಷ್ಮಿ ಪಾಟೀಲ್ ಅಂಕಣ

“ಒಮ್ಮೆ ಬ್ಯಾಸಿಗಿ ಮದ್ಯಾನದಾಗ ಆಯಿ ಹಳ್ಳಕ್ಕ ನೀರ ತರಾಕ ಹೋಗಿ, ಜೋಡಗೊಡಾ ಹೊತ್ತು ಹೊಡಮಳ್ಳಿ ಬರೂದ್ರಾಗ ಮುತ್ತ್ಯಾ ಹೊಲದಿಂದ ಬಂದಬಿಟ್ಟಾನವ್ವಿ. ನೀರಡಿಶ್ಯಾನ. ಮನ್ಯಾಗ ಕುಡ್ಯಾಕ ಮುಕ್ಕ್ ನೀರಿಲ್ಲ. ಮುತ್ತ್ಯಾ ತಾಪಗೆದ್ದು, “ಹಾಂ ಅಧೆಂಗ ನೀ ಇಟ್ಟ್ ತಡಾ ಮಾಡೀದಿ ಬರಾಕ! ನಡಿ ರಂಡಿ ನೀ ಅದ ಹಳ್ಳದ್ ದಂಡ್ಯಾಗ ಇರು. ಅಲ್ಲೇ ನಿಂದ್ರು. ದsರ್’ಕರ್ತಾ ಕೊಡಾ ಕೆಳಗಿಳಿಶಿ ಕುಂತೆಪಾ ಅಂದ್ರ ನಿನ್ನ ಸಿಗದು ಅಗಶಿ ಬಾಗಲಕ್ಕ ತೋರ್ಣಾ ಕಟ್ತತೀನಿ ಹುಶಾರ್!” ಅಂತಂದು, ಕೊಡದ ದರ್ಶಿಲೆ ಆಯಿನ್ನ ಕಾದ ಉಸಕಿನ ಮ್ಯಾಲ ಬರೆಗಾಲಿಲೇ ನಿಂದ್ರಿಶಿದ್ನಂತ.”
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

read more
ಅರಮನೆ-ಗುರುಮನೆಗಳ ನಡುವೆ: ಸುಕನ್ಯಾ ಕನಾರಳ್ಳಿ ಅಂಕಣ

ಅರಮನೆ-ಗುರುಮನೆಗಳ ನಡುವೆ: ಸುಕನ್ಯಾ ಕನಾರಳ್ಳಿ ಅಂಕಣ

ಕೊನೆಗೆ ಕುಡಿದು ಮತ್ತೇರಿದ ಅರಮನೆಯ ಸೈನಿಕರು ಬಂದು ಬೆಕೆಟ್ಟನನ್ನ ಎಲ್ಲರೆದುರು ಕೊಲ್ಲುತ್ತಾರೆ. ಬಿಷಪ್ಪನೊಬ್ಬ ಗುರುಮನೆಯೊಳಗೆ ಹುತಾತ್ಮನಾಗಿ ತನ್ಮೂಲಕ ಸಂತನೊಬ್ಬ ಉದಯಿಸಿದ್ದೇನೋ ನಿಜ. ಆದರೆ ಅರಮನೆ ಗೆದ್ದಂತಾಯಿತೆ? ಹೇಡಿ ಸೈನಿಕರು ಏನೇನೋ ಬಡಬಡಿಸುತ್ತಾ ತಾವೆಸಗಿದ ಘೋರ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಒಬ್ಬನಂತೂ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದರೂ ಬಿಷಪ್ ತಪ್ಪಿಸಿಕೊಳ್ಳಲಿಲ್ಲವಲ್ಲಾ? ತಾವೇನು ಮಾಡುವ ಹಾಗಿತ್ತು? ಹಾಗಾಗಿ ಅದೊಂದು ಆತ್ಮಹತ್ಯೆ ಎಂದು ಸಹ ಅರ್ಥೈಸುತ್ತಾನೆ. ಬಡಹೆಂಗಸರ ಮೇಳ ತಮ್ಮ ಬದುಕಿನಲ್ಲಿ ಸುಖ ಸಂತೋಷಗಳೊಂದೂ ಇಲ್ಲ, ತಾವು ಏನನ್ನೂ ಬದಲಾಯಿಸಲು ಅಸಮರ್ಥರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತಾರನೆಯ ಬರಹ

read more
ಬೆಂಗಳೂರು ಟೂ ಶಿವಮೊಗ್ಗ…: ವಿನಾಯಕ ಅರಳಸುರಳಿ ಅಂಕಣ

ಬೆಂಗಳೂರು ಟೂ ಶಿವಮೊಗ್ಗ…: ವಿನಾಯಕ ಅರಳಸುರಳಿ ಅಂಕಣ

ತನ್ನ ದಾರಿಯಲ್ಲಿ ಸಿಗುವ ಪ್ರತಿಯೊಂದು ಪುಟ್ಟ ಪಟ್ಟಣದ ನಿಲ್ದಾಣವನ್ನೂ ಹೊಕ್ಕು, ಆತಿಥ್ಯ ಸ್ವೀಕರಿಸಿ, ಟಾಟಾ ಹೇಳಿಯೇ ಅದು ಹೊರಡುವುದು. ಅಂಥಾ ನಿಲ್ದಾಣಗಳಲ್ಲಿ ನುಗ್ಗಿ ಹತ್ತಿಕೊಳ್ಳುವ, ಉದ್ಯೋಗಕ್ಕಾಗಿ ಪಕ್ಕದೂರಿನ ಶಾಲೆಗೋ, ಆಚೆ ಪಟ್ಟಣಕ್ಕೋ ಹೋಗುವ ಉದ್ಯೋಗಿಗಳು. ಬೆಂಗಳೂರಿನಷ್ಟು ಕಿಕ್ಕಿರಿಯದ, ಬರೀ ಆಕಾಶ ಕಾಣುವಷ್ಟು ಗಗನಚುಂಬಿಗಳಿರುವ ಕಟ್ಟಡಗಳ ಸಮುದ್ರವಲ್ಲದ, ಎಲ್ಲವನ್ನೂ ಮಾರಾಟಕ್ಕಿಡದ, ಕೊಂಚ ಸಾಗಿದರೆ ಮುಗಿದು ಹೋಗಿ ಕಾಡು, ಮರಗಳ ಹಳ್ಳಿಯೊಂದು ಪ್ರತ್ಯಕ್ಷವಾಗುವ ಈ ಪುಟ್ಟ ಪಟ್ಟಣದಲ್ಲಿ ಬದುಕು ಕಟ್ಟಿಕೊಂಡ ಇವರೆಲ್ಲ ಎಷ್ಟು ಪುಣ್ಯಾತ್ಮರಲ್ಲವೇ ಎಂದುಕೊಳ್ಳುವಾಗಲೇ ಅವರು ಬಸ್ಸಿಳಿದು ಹೆದ್ದಾರಿಯಿಂದ ಕವಲೊಡೆದ ರಸ್ತೆಯೊಂದರಲ್ಲಿ ನಡೆಯುತ್ತ ಮರೆಯಾಗುತ್ತಾರೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ