Advertisement
ಕತೆಗಾರ ಡಾ. ರಾಜಶೇಖರ ನೀರಮಾನ್ವಿ ನಿಧನ…

ಕತೆಗಾರ ಡಾ. ರಾಜಶೇಖರ ನೀರಮಾನ್ವಿ ನಿಧನ…

ನಿಸ್ಸಂಶಯವಾಗಿ ಕನ್ನಡದ ಕೆಲವೇ ಕೆಲವು ಮೇರು ಕಥನ ಪತಿಭೆಗಳಲ್ಲಿ ಡಾ. ರಾಜಶೇಖರ್ ನೀರಮಾನ್ವಿ ಒಬ್ಬರು. ಒಂದರ್ಥದಲ್ಲಿ ಅತ್ಯಂತ ಕಡಿಮೆ ಬರೆದ ನಮ್ಮ ಕಾಲದ ಬಹಳ ದೊಡ್ಡ ಲೇಖಕ. ಇನ್ನೊಂದರ್ಥದಲ್ಲಿ ಜೀನಿಯಸ್. ಸದಾ ಕಾಡುವ ಆ ನಿಗೂಢ ಗುಣ ಅವರ ಬರಹ ಮತ್ತು ಬದುಕಿಗಿರುವುದರಿಂದಲೇ, ಅವರನ್ನು ಮರೆಯುವುದು ಯಾರಿಗೂ ಅಷ್ಟು ಸುಲಭವಲ್ಲ!

ಇವರ ಒಂದು ಕಥೆಯನ್ನು ಆಧರಿಸಿ ಖ್ಯಾತ ನಿರ್ದೇಶಕ ಬಸು ಚಾಟರ್ಜಿ ಹಿಂದಿ ಸಿನಿಮಾ ಮಾಡಿದ್ದಾರೆ.

ಒಂದು ಅನಿರೀಕ್ಷಿತ ಅಪಘಾತದ ನಂತರ ನೀರ ಮಾನ್ವಿಯವರು ೫೦ ವರ್ಷ ಏನೂ ಬರೆಯದೆ ಮೌನವಾಗುಳಿದರು. ಅಪಾರ ಕ್ರಿಯಾಶೀಲ ಒತ್ತಡವಿದ್ದೂ, ಏನೂ ಮಾಡದೇ ಸುಮ್ಮನಿರುವುದು, ನಿಜಕ್ಕೂ ಆಘಾತಕಾರಿ ಅನುಭವ ಹಾಗೂ ಕನ್ನಡ ವಾಚಕ ಪ್ರಪಂಚದ ದುರಾದೃಷ್ಟವೇ ಸೈ.

ಕನ್ನಡದ ದೊಡ್ಡ ವಿಮರ್ಶಕರಂತೆ ಇವರನ್ನು ‘ನವ್ಯ ಕತೆಗಾರ’ ಎಂದು ಕರೆಯಲು ನನ್ನ ಮನಸ್ಸು ಯಾಕೊ ಒಪ್ಪುತ್ತಿಲ್ಲ… ಸಾರಿ..

ಈ ಅಪರೂಪದ ಹಿರಿಯ ಸಾಹಿತ್ಯ ಸಂಗಾತಿಗೆ ಅಂತಿಮ‌ ನಮನಗಳು.

-ಆರಿಫ್‌ ರಾಜಾ, ಕವಿ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ