Advertisement
ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ಡಾ. ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

ತರ್ಪಣ

ತರ್ಪಣ ಬಿಟ್ಟು ಬಿಟ್ಟು ಕೈಯೆಲ್ಲ ನಡುಕ
ಕಣ್ಣುಗಳು ಮಸಕು ಮಂಜು
ಕಾಲಿಲ್ಲದ ಮುಂಡ ಶಿರವಿರದ ದೇಹ
ಸುತ್ತೆಲ್ಲ ಆಕ್ರಂದನ ಮಹಾ’ಲಯ’ ತರ್ಪಣ ತಾನೇ ನೇಯ್ದ ಬಲೆಯಲ್ಲಿ ಬಂಧಿ
ಬಿದ್ದ ಮಿಕಗಳ ವಿರಾಟ್ ಸ್ವರೂಪ
ದಿಕ್ಕುಗಾಣದೆ ಜೇಡ ಅಬ್ಬೆಪಾರಿ ಕಂಗಾಲು

ಕೌರವೇಂದ್ರನ ಅಕ್ಷೋಹಿಣಿ ಅಳಿದಿದೆ ರಣರಂಗವೆಲ್ಲ ಮರುಳುಗಳ ನರ್ತನ
ಪ್ರತಿಷ್ಠೆಗೆ ಬಿದ್ದ ಆಘಾತ ಏಟಿಗೆ ಎದಿರೇಟು ಓಡಿದವರು
ಬೆರಸಿದವರು ಸುಸ್ತೋ ಸುಸ್ತು
ನೋಡುವ ಮಂದಿಗೆ ಆತಂಕ ದಿಗಿಲು

ಕಂಡವರ ಮಕ್ಕಳ ಬಾವಿಗೆ ತಳ್ಳಿ
ಆಳ ನೋಡುವ ಮಂದಿ
ಅಂಡಲೆಯುವ ಅಶ್ವತ್ಥಾಮರು
ಉಯ್ಯಾಲೆಯಲ್ಲಿ ಮೇಲೇರಿದವರು
ಕೆಳಗೆ ಇಳಿಯದೆ ಇರಲಾದೀತೇ

About The Author

ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ