ಪ್ರಾಣಿ ಒಡನಾಟದಲ್ಲಿನ ಮನುಷ್ಯರ ಸಂಕಟ: ಡಾ. ವಿನತೆ ಶರ್ಮ ಬರೆಯುವ ಅಂಕಣ
ಕಾಡಿನ ರಸ್ತೆಯಲ್ಲಿ ಹೋಗುವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ಆಹಾರ ಕೊಡಬಾರದು ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದರೂ ಅಲ್ಲಲ್ಲಿ ಜನ ವಾಹನಗಳನ್ನು ನಿಲ್ಲಿಸಿದ್ದರು. ಪ್ರಾಣಿಗಳು ಕಾಣಿಸುತ್ತಿವೆ ಎಂದು ಖುಷಿ. ಹತ್ತಿರ ಬರುವ ಮಂಗಗಳಿಗೆ ಹಣ್ಣು, ಸ್ನ್ಯಾಕ್ಸ್ ಕೊಡುವುದು ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಇದ್ದ, ಮಂಗಗಳನ್ನೇ ನೋಡುತ್ತಿದ್ದ ಜಿಂಕೆಗಳನ್ನು ಕರೆಯುವುದು ನಡೆದಿತ್ತು. ಇಷ್ಟಾದ ನಂತರ ಹೀಗೆಯೆ ಹಣ್ಣು ತೋರಿಸಿ ಕರೆದರೆ ಆನೆ, ಕಾಡೆಮ್ಮೆ ಕೂಡ ಬರಬಹುದು ಎನ್ನಿಸಿತು. ಅವುಗಳ ಸ್ವಾಭಾವಿಕ ಆಹಾರ ಪ್ರದೇಶಗಳನ್ನು ಈಗ ಲಂಟಾನಾ ಪೊದೆಗಳು ಆಕ್ರಮಿಸಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಕನಕ ದಾಸರಲ್ಲಿನ ಜೀವನ ವಿವೇಕ ವ್ಯಾಪ್ತಿ; ಕನ್ನಡಿಗರ ಪ್ರಾಪ್ತಿ: ಎಲ್. ಜಿ. ಮೀರಾ ಅಂಕಣ
ಇವತ್ತಿಗೆ ಕನಕದಾಸರು ಹೇಗೆ ಪ್ರಸ್ತುತ ಎಂದು ನಾವು ನೋಡುವುದಾದರೆ, ಜಾತಿ ಕುಲ ಆಚಾರವನ್ನು ಮೀರಿದ ವಿವೇಕ ಮನುಷ್ಯನಿಗೆ ಮುಖ್ಯ ಎಂದು ಅವರು ಹೇಳಿದ ಮಾತು ಎಲ್ಲ ಕಾಲಕ್ಕೂ ಯೋಗ್ಯ. ನಂದಾದೀಪದಂತಹ ಮಾತು ಅದು. ಇಂದಿನ ಸಾವಯವ ಆಹಾರದ ಕಸರತ್ತು ಅವರು ಎಂದೋ ಹೇಳಿದ `ರಾಮಧಾನ್ಯಚರಿತ್ರೆ’ಯನ್ನು ನೆನಪಿಸುವುದಿಲ್ಲವೇ? ಚೆಲುವ ಕನ್ನಡ ನುಡಿಯ ಲಯಗಾರಿಕೆಯನ್ನು ಅರಿತು ಅವರು ಬಳಸಿದ ಪದಗಳು, ಹಾಡಿದ ಪದ್ಯಗಳು ಇಂದು ಗಾದೆ ಮಾತುಗಳಂತೆ ಬಳಕೆಯಾಗುತ್ತಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಬದುಕಿನ ಬಣ್ಣಗಳು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಆದರೆ ಈ ಸಮುದ್ರವನ್ನು ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಿಲ್ಲ ಅನ್ನುವ ಅರಿವು ನನಗೆ ಯಾವತ್ತೋ ಆಗಬೇಕಿತ್ತು. ಸುಮ್ಮನೆ ದಡದಲ್ಲಿ ಕಾಯುತ್ತಾ ಕುಳಿತೆ. ಅವಳಿಗೆ ಕನಸಿತ್ತು ಸ್ಪಷ್ಟವಾದ ಗುರಿಯಿತ್ತು. ತನ್ನ ಸುತ್ತ ಇರುವ ಮಿತಿಗಳನ್ನು ಮೀರುವ ತುಡಿತವಿತ್ತು. ಅವಳ ಪಾತ್ರ ವಿಶಾಲವಿತ್ತು. ನಾನು ಒಡ್ಡಿದ ಬೊಗಸೆಗೆ ಹೆಚ್ಚು ಹೊತ್ತು ನಿಲ್ಲಲಾರಲು ಅನ್ನುವುದು ಗೊತ್ತಾಗಬೇಕಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎಂಟನೆಯ ಬರಹ
ಅಕ್ಕ ಕೇಳವ್ವ, ನಾನೊಂದು ಕನಸು ಕಂಡೆ!: ಸುಕನ್ಯಾ ಕನಾರಳ್ಳಿ ಅಂಕಣ
ಗಂಡಸು-ಸಮಾಜ ಹೆಣ್ಣಿಗೆ ತನಗೆ ಬೇಕಾದ ಕನಸನ್ನು ಕಾಣಲೂ ಸುಲಭವಾಗಿ ಬಿಡುವುದಿಲ್ಲ. ಅವಳ ತನ್ಮಯತೆಯೂ ಆವನಿಗೆ ಅಪಾಯದಂತೆಯೇ ಕಾಣಿಸುತ್ತದೆ. ಅವನು, ಅವನು ಕಟ್ಟಿದ ಮನೆ, ಅವನಿಂದ ಹುಟ್ಟಿದ ಮಕ್ಕಳು, ಇತ್ಯಾದಿಗಳ ಸುತ್ತಲೇ ಅವಳ ಬದುಕು ಗಿರಕಿ ಹೊಡೆಯುತ್ತಿರಬೇಕು. ಅವಳು ಅದೂ ಇದೂ ಎಂದು ಗೊಣಗೊಣವೆನ್ನುತ್ತಿರಬೇಕು. ಅವನು ಯಾಂತ್ರಿಕವಾಗಿ ಹೂಂಗುಡುತ್ತಾ ಪೇಪರ್ ಓದುತ್ತಲೊ, ಟಿವಿ ನೋಡುತ್ತಲೊ, ಫೋನಿನಲ್ಲಿ ಮಾತಾಡುತ್ತಲೊ ಇರಬೇಕು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನೈದನೆಯ ಬರಹ
ಕ್ರೌರ್ಯಕ್ಕೆ ಸಿಕ್ಕ ಮಕ್ಕಳು…: ಜಯಲಕ್ಷ್ಮಿ ಪಾಟೀಲ್ ಅಂಕಣ
ನಮ್ಮಲ್ಲೂ ಕೆಲಸ ಕೇಳಿ ಬಂದ ನೂರಾರು ಜನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ ರಾಜಕಾರಣಿ ಇದ್ದಾನೆ, ಹೈಸ್ಕೂಲು ಓದುತ್ತಿದ್ದ ದಾನಮ್ಮ ಎಂಬ ಹೆಣ್ಣುಮಗುವನ್ನು ಅತ್ಯಾಚಾರವೆಸಗಿ ಕೊಂದ ಸಹಪಾಠಿಗಳಿದ್ದಾರೆ, ಸೌಜನ್ಯಾ ಎಂಬ ಹುಡುಗಿ ಕಾಲೇಜಿಗೆ ಹೋದವಳು ಮರಳಿ ಮನೆ ತಲುಪದಂತೆ ಅತ್ಯಾಚಾರವೆಸಗಿ ಕೊಂದುಹಾಕಿದ ದುರುಳರಿದ್ದಾರೆ, ಜಾತಿಯ ಕಾರಣಕ್ಕಾಗಿ ಕರುಳ ಕುಡಿಯನ್ನೆ ಹೊಸಕಿಹಾಕಿದ ಹೆತ್ತವರಿದ್ದಾರೆ, ಧರ್ಮದ ಹೆಸರಲ್ಲಿ ಒಂಬತ್ತು ವರ್ಷದ ಹೆಣ್ಣುಮಗುವಿನ ಮೇಲೆ ದೇವಸ್ಥಾನದಲ್ಲೆ ಮುಗಿಬಿದ್ದು ಅತ್ಯಾಚಾರವೆಸಗಿದ ಮಹಾಮಹಿಮರಿದ್ದಾರೆ, ಹೆಂಗಸರು ಮನೆಯ ಹೊರಗೆ ದುಡಿಯತೊಡಗಿದರೆ ಅತ್ಯಾಚಾರಗಳಾಗುವುದು ಸಹಜ ಎಂಬರ್ಥದಲ್ಲಿ ಮಹಾಜ್ಞಾನಿ ರಾಜಕಾರಣಿಯೊಬ್ಬ ಹೇಳಿಕೆ ನೀಡಿ ಮೀಸೆ ತಿರುವುತ್ತಾನೆ…
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ
ಅದೇ ದಾರಿ… ಅದೇ ತಿರುವು…: ವಿನಾಯಕ ಅರಳಸುರಳಿ ಅಂಕಣ
ರಾತ್ರಿಯಾದರೆ ಸಾಕು, ಒಂದೊಂದು ಮನೆಯೂ ಒಂದೊಂದು ಬೆಳಕಿನ ಡಬ್ಬಿ. ಒಂದೊಂದು ಕಿಟಕಿಯಲ್ಲಿ ಕತ್ತಲು, ಇನ್ನೊಂದರಲ್ಲಿ ಬೆಳಕು. ಆ ಬೆಳಕಿನ ಪರದೆಯ ಹಿಂದೆಯೇ ಕಪ್ಪು ನೆರಳಾಗಿ ಕದಲುವ ಮನುಷ್ಯರು. ವಾಹನಗಳ ಭರಾಟೆ ತಗ್ಗಿರುವ ರಾತ್ರಿ ಹತ್ತರ ನೀರವದಲ್ಲಿ ಸಮೀಪದಲ್ಲೇ ಕೇಳಿಸುವ ರೈಲಿನ ಕೇಕೆ. ಅರೆರೇ, ರೈಲಿನ ಹಳಿ ಇಷ್ಟು ಹತ್ತಿರದಲ್ಲೇ ಇದೆಯೇ? ಈ ಕ್ಷಣಕ್ಕೆ ಕೇಳಿಸಿದ ಕೇಕೆಯಲ್ಲೇ ಅದು ಹಾದು ಹೋಗಲಿರುವ ನದಿ-ಬೆಟ್ಟ-ಸುರಂಗ-ಕಾಡುಗಳ ಸುಂದರ ಪ್ರಯಾಣದ ಕಲ್ಪನೆಯಾಗಿ ಮನಸ್ಸಿನಲ್ಲೇನೋ ಖುಷಿಯ ಭಾವ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
ಸಮರ್ಥ ಕೆಲಸದ ಗುಟ್ಟು… ಎಂದಾದರೂ ಆದೀತೇ ರಟ್ಟು?: ಎಲ್.ಜಿ.ಮೀರಾ ಅಂಕಣ
ಆ ಇಬ್ಬರು ಹಿರಿಯ ಅಧ್ಯಾಪಕಿಯರ ಮುಖ ನೋಡಿದೆ. ಅವರಲ್ಲೊಬ್ಬರು `ಹೇ… ಸುಲಭ ಇದು. ನೋಡಿ, ಒಬ್ರು ಈ ಕಡೆ, ಇನ್ನೊಬ್ರು ಆ ಪಕ್ಕದ ಕುರ್ಚೀಲಿ ಕೂತ್ಕೊಳಿ. ನಾನು ಇಲ್ಲಿ ಕೂತ್ಕೋತೀನಿ. ನೂರರಿಂದ ಶುರುವಾಗೋ ಅರ್ಜಿ ಎಲ್ಲಾ ನೀವು ತಗೊಳ್ಳಿ, ಇನ್ನೂರರಿಂದ ಶುರುವಾಗೋದು ನೀವು, ಮುನ್ನೂರರಿಂದ ಶುರುವಾಗೋದು ನಾನು ತಗೋತೀನಿ.. ಬೇಗ ಬೇಗ ಇವುಗಳನ್ನ ನಾವು ಪ್ರತ್ಯೇಕ ಮಾಡ್ಬಹುದು’ ಅಂದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತಾರನೆಯ ಬರಹ
ಕೆಂಪು ಕಾರು: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ
ಹೊಸ ಕಾರ್ ಬುಕ್ ಮಾಡಿ ಈ ಕಾರನ್ನು ಎಕ್ಸ್ಚೇಂಜ್ನಲ್ಲಿ ಕೊಡುವ ಮಾತುಕತೆ ಆದ ನಂತರ ಮೊದಲಿನ ಲವಲವಿಕೆಯನ್ನು ಈ ಕಾರು ಕಳೆದುಕೊಂಡು ಬಿಟ್ಟಿತು ಅಂತ ಯಾಕೋ ನನ್ನ ಮನಸ್ಸಿಗೆ ತೀವ್ರವಾಗಿ ಅನ್ನಿಸಿತು. ಮರುದಿನ ಕಾರ್ ಸ್ಟಾರ್ಟ್ ಮಾಡುವಾಗ ಇಂಜಿನ್ ಶಬ್ಧ ಬೇರೆಯೇ ತರಹ ಕೇಳಿಸಿದ ಹಾಗಾಯ್ತು. ಏನೋ ಸಮಸ್ಯೆ ಆಗಿದೆ ತೋರಿಸಿಕೊಂಡು ಬನ್ನಿ ಅಂದ ಹೆಂಡತಿ ಮಾತಿಗೆ ಇಲ್ಲ ಅನ್ನಲಾಗದೆ ಸುರತ್ಕಲ್ ಪೇಟೆಗೆ ಒಂದು ಸುತ್ತು ಹಾಕಿ ಬಂದು ಏನಾಗಿಲ್ಲ ಅಂತೆ, ಅಂತ ಸುಳ್ಳು ಹೇಳಿದ್ದರ ಹಿಂದೆ ಕಾರ್ ಮೇಲೆ ನನಗಿದ್ದ ನಂಬಿಕೆಯೇ ಕಾರಣವಾಗಿತ್ತು.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಏಳನೆಯ ಬರಹ
ಬುದ್ಧನಿಲ್ಲ ಇಲ್ಲಿ!: ಸುಕನ್ಯಾ ಕನಾರಳ್ಳಿ ಅಂಕಣ
ಮೂರನೆಯ ದಿನದ ಹೊತ್ತಿಗೆ ಹಕ್ಕಿಯಂತೆ ಹಾರಿದರೆ ಮತ್ತೆ ಮರಳುವುದಿಲ್ಲ ಎಂದು ನೂರು ಬಾರಿ ಶಪಥ ಮಾಡಿದ್ದೆ. ಅಷ್ಟರ ಹೊತ್ತಿಗೆ ಇಂಗ್ಲಿಷ್ ಪ್ರವಚನ ಯಾಕೋ ಕೃತಕವೆನ್ನಿಸಿತ್ತು. ಅದೇ ದನಿ ಹಿಂದಿಯಲ್ಲಿ ಕೇಳಿಸಿಕೊಳ್ಳುತ್ತಿದ್ದವರ ಕಡೆಯಿಂದ ಬಂದಾಗ ಅರೆ, ಇದರಲ್ಲಿ ಸಾಕಷ್ಟು ಜೀವಂತಿಕೆ ಇದೆಯಲ್ಲ ಅಂತನ್ನಿಸಿ ಕೊನೆಯ ಪ್ರವಚನವನ್ನು ಕೇಳಲು ಹಿಂದಿಯ ಕಡೆಗೆ ಹೋಗಲು ಪ್ರಯತ್ನಿಸಿದೆ. ‘ಆಚಾರ್ಯರನ್ನು ಕೇಳಿ,’ ಎಂಬ ಆದೇಶ ಬಂತು. ಸರಿ, ಕೇಳಿದೆ. ಪ್ರೈಮರಿ ಸ್ಕೂಲಿನಲ್ಲಿ ‘ಮಿಸ್, ಮಿಸ್, ನಂಗೆ ಬಾತ್ ರೂಮಿಗೆ ಹೋಗಬೇಕು, ಅರ್ಜೆಂಟೂ…’ ನೆನಪಿಗೆ ಬಂದು ಮುಖದಲ್ಲಿ ನಗು ಮೂಡಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿಮೂರನೆಯ ಬರಹ










