ಸುತ್ತಾಡಿದ ದೇಶಗಳ ಒಳಗೂ-ಹೊರಗೂ: ಕೆ.ಎನ್.ಲಾವಣ್ಯ ಪ್ರಭಾ ಬರಹ
ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್ನಲ್ಲಿ ಕೂತಾಗ ಸಿಂಗಪುರದ ವಿದ್ಯಾರ್ಥಿನಿಯಿಂದಾದ ವರ್ಣಭೇದದ ಅನುಭವದಿಂದ ಲೇಖಕಿಯ ಮನಸ್ಸು ಮುದುಡುವುದು, ಹದಿನಾಲ್ಕು ಅಂತಸ್ತಿನ ತಮ್ಮ ಮಗನ ಮನೆಯಲ್ಲಿ ಲೇಖಕಿ ಒಬ್ಬರೇ ಇರುವಾಗ ಅದೇ ಕಟ್ಟಡದ ಒಂದು ಮಹಡಿಯ ಮನೆಗೆ ಬೆಂಕಿ ಬಿದ್ದು ಫೈರ್ ಇಂಜಿನ್ ಬಂದು ಬೆಂಕಿ ಆರಿಸುವಾಗಲೂ ಸುತ್ತಮುತ್ತಲಿನ ಜನ ಕಿಂಚಿತ್ತೂ ಗಮನ ಹರಿಸದೆ ಕಣ್ಣೆತ್ತಿಯೂ ನೋಡದೆ ಹೋಗುವುದು…. ಇದೆಂಥಾ ಮುಂದುವರಿದ ದೇಶ ಮಾರ್ರೆ?
ಶಾಂತಾ ನಾಗರಾಜ್ ಪ್ರವಾಸ ಕಥನ “ಯಾನ ಸಂಸ್ಕೃತಿ” ಕೃತಿಯ ಕುರಿತು ಕೆ.ಎನ್. ಲಾವಣ್ಯ ಪ್ರಭಾ ಬರಹ
ಸಾಮಾಜಿಕ ಸಾಮರಸ್ಯದ ಸೂಚಕ ‘ಭರಮದೇವರು’: ತೇಜಾವತಿ ಡಿ.ಎಸ್. ಬರಹ
ಪುರಾಣ ಕಥೆಗಳು ನಮ್ಮ ಪೂರ್ವಜರ ಕಥೆಗಳೆಂದು ನಂಬಿರುವ ಜನಪದರು ಅವುಗಳನ್ನು ತಮ್ಮ ಜ್ಞಾನ ಮಾರ್ಗಗಳೆಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಇವು ಮತ ಧರ್ಮಗಳನ್ನಾಧರಿಸಿ ಬೆಳೆಯುತ್ತವೆ. ಬಹು ಸಂಸ್ಕೃತಿಯ ದೇಶವಾಗಿರುವ ನಮ್ಮಲ್ಲಿ ಸೃಷ್ಟಿ ಸ್ಥಿತಿ ಲಯದ ರೂಪಗಳಾದ ತ್ರಿಮೂರ್ತಿಗಳ ಕುರಿತು ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಬ್ರಹ್ಮನನ್ನು ಕುರಿತು ಅವನ ಹುಟ್ಟು, ಶಿರಶ್ಚೇದನ, ಸ್ತ್ರೀ ಸಂಬಂಧ ಆಪಾದನೆಗಳು ಬಹಳಷ್ಟು ಇದ್ದು ಬ್ರಹ್ಮನಿಗೆ ಪೂಜೆ ಸಲ್ಲದಿರಲಿ ಎಂಬ ಶಾಪವಿದೆ. ಇವೆಲ್ಲವೂ ಆಯಾ ಕಾಲಮಾನಕ್ಕೆ ತಕ್ಕಂತೆ ಬ್ರಹ್ಮನ ಪ್ರಸಿದ್ಧಿಯನ್ನು ಕಡಿಮೆ ಮಾಡುವ ಹುನ್ನಾರದಿಂದ ಹುಟ್ಟಿಕೊಂಡ ಕಥೆಗಳಾಗಿ ನಮಗೆ ತೋರುತ್ತವೆ.
ಶ್ರೀರಾಮ ಇಟ್ಟಣ್ಣವರ ಬರೆದ “ಭರಮದೇವರು” ಕೃತಿಯ ಕುರಿತು ತೇಜಾವತಿ ಡಿ.ಎಸ್. ಬರಹ
ಭಾವನೆಗಳ ಬಿರುಕ ಹೊಲಿಯಲಾರ ಸಿಂಪಿಗ: ಚಂದ್ರಶೇಖರ ಪೂಜಾರ ಬರಹ
ಪ್ರೇಮ ಮೋಹ ವ್ಯಾಮೋಹಗಳ ನಡುವೆ ಇದ್ದ ಗಜ಼ಲ್ ಕಾಲ ಹೊರಳಿದಂತೆ ಜೀವನದ ಎಲ್ಲ ಆಯಾಮಗಳನ್ನು ಹೊಂದಿ ಬದುಕಿನ ಸಮಗ್ರ ಕಾವ್ಯವಾಯಿತು. ಗಜ಼ಲ್ ಬರಿ ಶಬ್ಧಾಲಂಕಾರಗಳ ಸರಪಳಿಯಲ್ಲ, ಅಲ್ಲೊಂದು ಕಾವ್ಯದ ಗುಣವಿರಬೇಕು. ಪ್ರತಿಮೆ, ರೂಪಕಗಳ ಮೂಲಕ ಮಾತನಾಡಬೇಕು. ಬೇಟೆಗೆ ಸಿಲುಕಿದ ಜಿಂಕೆಯ ಆಕ್ರಂದನದಂತೆ ಕಾಣುವ ಗಜ಼ಲ್ ಹೃದಯದ ಬಡಿತವಾಗಬೇಕು. ಓದಿದ ಕೂಡಲೇ ಹೃದಯವನ್ನು ಚಕಿತಗೊಳಿಸುವ ಗುಣ, ಓದುಗನೊಬ್ಬನಿಗೆ ನಿಲುಕದ ಅನುಭವಗಳನ್ನು ಒಂದುಗೂಡಿಸುವ ಶಕ್ತಿ ಪಡೆದಿರಬೇಕು. ವ್ಯಕ್ತಿಯೊಬ್ಬನ ಯೋಚನಾ ಲಹರಿಯನ್ನೇ ಬದಲಿಸುವ ಗುಣವನ್ನು ಅದು ಒಳಗೊಂಡಿರಬೇಕು.
ಶಿವಕುಮಾರ ಮೋ. ಕರನಂದಿ ಗಜ಼ಲ್ ಸಂಕಲನ “ನೆರಳಿಗಂಟಿದ ನೆನಪು” ಕುರಿತು ಚಂದ್ರಶೇಖರ ಯ. ಪೂಜಾರ ಬರಹ
ಘಾಂದ್ರುಕ್ ಮತ್ತು ಸೋಫಿಯ ಎನ್ನುವ ಸೂಜಿಮಲ್ಲಿಗೆ: ಎಚ್.ಆರ್. ರಮೇಶ್ ಬರಹ
ಕತೆಗಳು ಹಿಂದಕ್ಕು ಮುಂದಕ್ಕು ಹೋಗುವ ಶೈಲಿ ಹಿಂದುಸ್ತಾನಿ ಸಂಗೀತದ ಯಾವುದೋ ಹೊಸ ರಾಗವೊಂದು ಹೊಮ್ಮಿದಂತೆ ಸಾಗುತ್ತದೆ. ಅದು ಕಾಲದ ಚಲನೆಯಾಗಿ ಓದುಗರನ್ನು ತನ್ನ ಜೊತೆ ಎಳೆದುಕೊಳ್ಳುತ್ತದೆ. ಕ್ಯಾಂಟರ್ ಬರಿ ಟೇಲ್ಸ್ನಲ್ಲಿ ಥಾಮಸ್ ಬಕೆಟ್ನ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಂಡ ಯಾತ್ರಿಕರು ಒಬ್ಬೊಬ್ಬರು ಒಂದೊಂದು ಬದುಕಿನ ಅನನ್ಯ ಅನುಭವದ ಕತೆಯನ್ನು ಹೇಳುವಂತೆ ಇಲ್ಲಿ ಸಿದ್ಧಾರ್ಥ ಮತ್ತು ಸೋಫಿಯಾ ತಮ್ಮ ಬದುಕಿನ ಜೊತೆ ತಮ್ಮ ಬದುಕನ್ನು ಮತ್ತು ಅದನ್ನು ಆವರಿಸಿರುವ ವ್ಯಕ್ತಿಗಳ ಕತೆಯನ್ನು ಹೇಳುತ್ತ ಹೋಗಿರುವ ಪರಿ ಚುಂಬಕ ಶಕ್ತಿಯಂತೆ ಸೆಳೆಯುತ್ತದೆ.
ಸತೀಶ್ ಚಪ್ಪರಿಕೆ ಅವರ “ಘಾಂದ್ರುಕ್” ಕಾದಂಬರಿ ಕುರಿತು ಎಚ್.ಆರ್. ರಮೇಶ್ ಬರಹ ನಿಮ್ಮ ಓದಿಗೆ
ಶಿವಶಿವ ಎಂದರೆ ಭಯವಿಲ್ಲ..: ಕೆ.ಎನ್. ಲಾವಣ್ಯ ಪ್ರಭಾ ಬರಹ
ನೂತನ ಅವರ ಸುಂದರ ರೋಮಾಂಚನದ ಅನುಭವಗಳ ನಡುವೆಯೇ ಚಾರ್ ಧಾಮ್ ಪ್ರವಾಸದ ಗಿರಿಶಿಖರ ಆಳ ಕಣಿವೆಗಳ ಪ್ರಪಾತದ ರೌದ್ರತೆಯನ್ನೂ ಕಾಣಿಸುತ್ತಾರೆ. ಅವರ ಕನಸುಗಳೊಂದಿಗೆ ಮುಂದೆ ಸಂಭವಿಸಬಹುದಾದ ಘೋರ ಅನುಭವಗಳು ಬೆಸೆದುಕೊಳ್ಳುತ್ತವೆ. ಲಕ್ಷಾಂತರ ಪ್ರವಾಸಿಗರ ಕಾರಣದಿಂದ ಸ್ಥಳದ ನೈರ್ಮಲ್ಯ ಕಾಪಾಡುವ ಜರೂರತ್ತನ್ನು ಮನಗಾಣಿಸುತ್ತಾರೆ. ಅಲ್ಲಿನವರ ಬದುಕು ಅತ್ಯಂತ ದುರ್ಭರವಾದರೂ ಬಹು ಸರಳ. ಆದರೆ ಪ್ರವಾಸಿಗರ ದಟ್ಟಣೆಯಿಂದಾಗಿ ಉಂಟಾಗುವ ಮಾಲಿನ್ಯತೆ ಸ್ಥಳೀಯ ಪರಿಸರದ ಹಾನಿಗೆ ಮಾರಕವಾಗಬಹುದು.
ನೂತನ ದೋಶೆಟ್ಟಿ ಪ್ರವಾಸ ಕಥನ “ಸ್ವರ್ಗದೊಂದಿಗೆ ಅನುಸಂಧಾನ”ದ ಕುರಿತು ಕೆ.ಎನ್. ಲಾವಣ್ಯ ಪ್ರಭಾ ಬರಹ
ಪ್ರೇಮ ಕವಿತೆಗಳಿಲ್ಲದ ಸಾಹಿತ್ಯ ಅಪೂರ್ಣ: ಕಮಲಾಕರ ಕಡವೆ
ಪ್ರೇಮಕವನಗಳನ್ನು ಬರೆಯುವ ಕವಿ ಎದುರಿಸುವ ಮುಖ್ಯ ಸವಾಲು ಅಂದರೆ ಅಭಿವ್ಯಕ್ತಿಯ ಸವಕಲು ಗುಣ. ಅತಿಬಳಕೆಯಿಂದಾಗಿ ಪ್ರೇಮದ ಕುರಿತಾಗಿ ಹೇಳಬಹುದಾದ ಅನೇಕ ಮಾತುಗಳು ತೀರಾ ಸವಕಲಾಗಿ, ಈಗ ಕೃತ್ರಿಮ ಅನಿಸಿಬಿಡುವುದು ಸಹಜ. ಈ ನಿಟ್ಟಿನಲ್ಲಿ ನನಗೆ ಜಬಿವುಲ್ಲಾ ಅವರ ಸೃಜನಶೀಲ ಮರುರೂಪಿಸುವಿಕೆ ಇಷ್ಟವಾಯಿತು. ವ್ಯಾಪಕವಾಗಿ ಬಳಕೆಯಾದ ಭಾವನೆಯೊಂದನ್ನು ಬಳಸುವಾಗ ಅವರು ಅದಕ್ಕೊಂದು ಟ್ವಿಸ್ಟ್ ಕೊಡುತ್ತಾರೆ. ಅವರು ಕೊಡುವ ಈ ತಿರುವು ಆ ಭಾವನೆ ಮತ್ತು ಅಭಿವ್ಯಕ್ತಿಗೆ ಹೊಸ ಚಾಲ್ತಿ ಸಾಧ್ಯವಾಗಿಸುತ್ತದೆ:
ಜಬಿವುಲ್ಲಾ ಅಸದ್ ಕವನ ಸಂಕಲನ “ಪ್ರೇಮಾಯತನ”ಕ್ಕೆ ಕಮಲಾಕರ ಕಡವೆ ಮುನ್ನುಡಿ
ಮಾನವೀಯ ಮೌಲ್ಯಗಳ ಪ್ರಯೋಗಶೀಲ ಕಾವ್ಯ: ಪ್ರಶಾಂತ್ ಬೆಳತೂರು
ಕತ್ತಲ ಸಾಮ್ರಾಜ್ಯದಲ್ಲಿ ಹುಟ್ಟಿನ ಜಾಡು ಹಿಡಿದು ಕತೆ ಹೇಳುವ ಮೆಟ್ಟಿನ ಕತೆ ಬರೀ ಕತೆಯಾಗದೆ ಕಾವ್ಯವಾಗುವ ಪರಿಯೇ ಒಂದು ವೈಶಿಷ್ಟ್ಯಪೂರ್ಣ. ತನ್ನ ಕತ್ತಲ ಸಾಮ್ರಾಜ್ಯದ ಕತೆಯನ್ನು ದೇಶಕ್ಕೆ, ಪ್ರಪಂಚಕ್ಕೆ, ಇಡೀ ಭೂಮಂಡಲಕ್ಕೆ ವಿಸ್ತರಿಸಿ ಹೇಳುತ್ತೇನೆನ್ನುವ ಅದರ ತುಡಿತ ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ಪ್ರಕ್ರಿಯೆಯೂ ಆಗಿದೆ. ಈ ನಿಟ್ಟಿನಲ್ಲಿ ಕವಿಗೆ ತನ್ನ ಕಾವ್ಯದ ಉದ್ದೇಶಗಳ ಕುರಿತು ಸ್ಪಷ್ಟತೆ ಇದೆ. ಈ ದಿಶೆಯಲ್ಲಿ ಇದೊಂದು ಅಪಾರವಾದ ಮಾನವೀಯ ಮೌಲ್ಯಗಳ ತಾಯ್ತನ ತುಡಿತದ ಪ್ರಯೋಗಶೀಲ ಕಾವ್ಯ ಅನ್ನಬಹುದು. ಈ ಅಂಶ ಕಾವ್ಯದ ಉದ್ದಕ್ಕೂ ಓದುಗನನ್ನು ಮನಮುಟ್ಟುತ್ತದೆ.
ಎಂ. ಜವರಾಜ್ ಕಥನ ಕಾವ್ಯ “ಮೆಟ್ಟು ಹೇಳಿದ ಕಥಾ ಪ್ರಸಂಗ”ದ ಕುರಿತು ಪ್ರಶಾಂತ್ ಬೆಳತೂರು ಬರಹ
ಕಾಗೆ ಕಾರುಣ್ಯದ ಕಣ್ಣು: ಬರಗೂರು ರಾಮಚಂದ್ರಪ್ಪ ಕೃತಿಯ ಒಂದು ಬರಹ
ಇನ್ನೊಂದು ವಿಷಯವನ್ನೂ ಇಲ್ಲಿ ಹೇಳಬೇಕು. ಚಿತ್ರೀಕರಣಕ್ಕೆಂದು ನಾನು ಆಯ್ಕೆ ಮಾಡಿಕೊಂಡ ಸ್ಥಳಗಳು ಸಾಂಪ್ರದಾಯಿಕ ರಮಣೀಯ ಸ್ಥಳಗಳಲ್ಲ. ಅಂದರೆ ಹಸಿರು, ನದಿ ತೀರ ಇತ್ಯಾದಿಗಳಿಂದ ಕೂಡಿದ ಸ್ಥಳಗಳಲ್ಲ. ಬಯಲು ಸೀಮೆಯ ಬೆಟ್ಟ, ಗುಡ್ಡ, ಹಸಿರಿಲ್ಲದೆ ಒಣಗಿದ ಪರಿಸರಗಳನ್ನು ಆಯ್ಕೆ ಮಾಡಿಕೊಂಡೆ. ಪ್ರಕೃತಿಯಲ್ಲಿರುವ ಸಮಸ್ತವೂ ಮುಖ್ಯವೆಂಬ ತಾತ್ವಿಕತೆ ನನ್ನದು. ನನ್ನ ಸಿನಿಮಾ ಕತೆಗಳು ಬಹುಪಾಲು ನಮ್ಮ ತುಮಕೂರು ಜಿಲ್ಲೆಯ ಸಿರಾ, ಮಧುಗಿರಿ, ಪಾವಗಡ, ದೇವರಾಯನ ದುರ್ಗ, ಚಿತ್ರದುರ್ಗ – ಇವೇ ಮುಂತಾದ ವಲಯಗಳಿಗೆ ಹೊಂದುತ್ತಿದ್ದ ವಸ್ತುವನ್ನು ಒಳಗೊಂಡಿದ್ದವು.
ಬರಗೂರು ರಾಮಚಂದ್ರಪ್ಪ ಅವರ “ಕಾಗೆ ಕಾರುಣ್ಯದ ಕಣ್ಣು” ಆಯ್ದ ಅನುಭವಗಳ ಕಥನದ ಒಂದು ಬರಹ ನಿಮ್ಮ ಓದಿಗೆ
ನಮ್ಮೊಳಗೂ ಒಂದು “ಬೌಲ್” ಇದೆಯೇ?: ಬಿ.ಕೆ. ಸುಮತಿ ಬರಹ
ಮನುಷ್ಯ ಬದುಕಿನ ಎಲ್ಲ ಹೋರಾಟಗಳನ್ನೂ ಆರಂಭದ ಬಿಕು ಮತ್ತು ಮಾಲಿಂಗನ ಯುದ್ಧದಲ್ಲಿಯೇ ಕಾಣಬಹುದು. ಆ ಯುದ್ಧ ಒಂದು ಚಿತ್ರಮಾಲಿಕೆಯ ಹಾಗಿದೆ. ವಸ್ತುವನ್ನು ಅಪ್ಪಿಕೊಳ್ಳುವುದು, ಬಿಟ್ಟು ಕೊಡಲು ಹೆಣಗಾಡುವುದು, ಕಿತ್ತುಕೊಳ್ಳುವುದು, ಇದೇ ಅಲ್ಲವೇ ನಮ್ಮ ಹೋರಾಟ? ಶಬ್ದ ನಿಶ್ಶಬ್ದದ ಹೋರಾಟ. ಕೊಟ್ಟು ಬಿಟ್ಟಿದ್ದರೆ ಏನಾಗುತ್ತಿತ್ತು? ಮಾಲಿಂಗನಿಗೆ ಅದನ್ನು ಪಡೆಯುವ ಅರ್ಹತೆ ಇತ್ತೇ? ಬಿಕು ಆನಂದನ ಅಗಲಿಕೆಯಿಂದ ವಿಚಲಿತನಾಗಿ ಬಳಲಿ ನಿತ್ರಾಣನಾಗುವುದು ಏಕೆ? ಬಿಕುವಿನ ಆರೈಕೆಯಲ್ಲಿ ಅರಳಿದ ಸುಮಲತೆ ಆತನನ್ನು ಬಿಟ್ಟು ಹೊರಡಲು ಮನಸ್ಸು ಮಾಡಿದ್ದಾದರೂ ಹೇಗೆ?
ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿಯ ಕುರಿತು ಬಿ.ಕೆ. ಸುಮತಿ ಬರಹ