Advertisement

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ ಅವರವರ ಗುಣಾವಗುಣಗಳಿಂದ, ವ್ಯಕ್ತಿತ್ವದಿಂದ ನಿರ್ಧಾರವಾಗುವಂತದ್ದು ಎಂಬುದನ್ನು ಮನಗಾಣುತ್ತಾನೆ. “ಇದುವರೆಗೆ ನಿಮ್ಮ ಮೇಲಾದ ವಿವಿಧ ರೀತಿಯ ದೌರ್ಜನ್ಯಗಳಿಗೆ ನಾವು ಹೊಣೆಯಾಗಿದ್ದು, ಇದರಿಂದ ನನಗೆ ನಾಚಿಕೆ ಬರುತ್ತಿದೆ, ನಿಮಗೆ ಮುಂದೆ ನಮ್ಮಿಂದ ಯಾವ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ” ಎಂದು ಹೇಳುತ್ತಾನೆ.
ಈರಣ್ಣ ಬೆಂಗಾಲಿ ಕಾದಂಬರಿ “ಭೂಮಿ”ಯ ಕೆಲವು ಪುಟಗಳು ನಿಮ್ಮ ಓದಿಗೆ

read more
ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌ ಅವರು ಅನೇಕ ಸಾರಿ ನನ್ನ ಜತೆಗೆ ಹಂಚಿಕೊಂಡರು. ʻನೋಡಿ, ನೀವು ನಿಮ್ಮ ಚಿತ್ರ ಹಾಕಿಕೊಂಡು ಬರೆಯುತ್ತೀರಿ. ನಮಗೆ ಹೀಗೆ ಬರೆಯಲು ನಮ್ಮ ಕಾಲದಲ್ಲಿ ಅವಕಾಶವೇ ಇರಲಿಲ್ಲʼ ಎಂದು ಅವರು ಹೇಳುತ್ತಿದ್ದರು.
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರ ವೃತ್ತಿ ಜೀವನದ ನೆನಪುಗಳ ಕೃತಿ “…ಉಳಿದಾವ ನೆನಪು” ಮೇ ೫ ರಂದು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದ್ದು, ಅದರ ಅಧ್ಯಾಯದ ಒಂದು ಭಾಗ ನಿಮ್ಮ ಓದಿಗೆ

read more
ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ ಕೂತಿರುವಾಗ “ಮುಚ್ಚಿದ ಕಿಟಕಿಯಿಂದ…. ಸೋರಿ ಅವಳ ಕೂದಲ ಗುಂಗುರುಗಳ ಮೇಲೆ” ಹೊಳಪು ಸುರಿಯುವ ಬಿಸಿಲು ಕೋಲುಗಳು ನೀಡುವ ಹಿತವನ್ನು ಗಮನಿಸದೇ ಇರುವುದಿಲ್ಲ.
ಕಾವ್ಯಾ ಕಡಮೆ ಕಾದಂಬರಿ “ಪುನರಪಿ”ಯ ಕುರಿತು ರಾಮಪ್ರಸಾದ್ ಬಿ.ವಿ. ಬರಹ

read more
ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಭಿನ್ನ ಚೈತನ್ಯದ ಹುಡುಕಾಟ-ಮಲೆದೇಗುಲ: ದೀಪಾ ಫಡ್ಕೆ ಬರಹ

ಮರಳಿನ ಪುಟ್ಟ ಕಣವೊಂದರಲ್ಲೂ ಸುಪ್ತವಾಗಿರುವ ಚೇತನವೂ `ಪರಮ’ ಎನ್ನುವ ಶಕ್ತಿಯ ಭಾಗ. ಮರಳಿನ ಕಣಗಳು ಘನೀಕರಿಸಿ ಕಲ್ಲಾಗಿ ಕಾಲಾಂತರದಲ್ಲಿ ಕಲ್ಲುಗಳೂ ಬಂಡೆಯಾಗಿ ಮತ್ತೆ ಬಂಟೆ ಸ್ಫೋಟವಾಗಿ ಕಲ್ಲಾಗುವ ಕಲ್ಲು ಮರಳಾಗಿ ರೂಪಾಂತರ ಹೊಂದುವ ಜಗತ್ತಿನ ವಿಸ್ಮಯದ ನಡೆಯಲ್ಲಿ ಮರಳೂ, ಕಲ್ಲೂ ದೈವವಾಗುವುದರಲ್ಲಿ ಏನು ವಿಶೇಷವಿದೆ! ಪುತಿನ ಅವರಿಲ್ಲಿ ಮೂರ್ತಿಯನ್ನೂ ದೇವರಾಗಿ ನೋಡುತ್ತಿಲ್ಲ, ದೇವರಾಗಲು ಹೊರಟಿರುವ ಕಲ್ಲು ಅವರಿಗೆ ಅಚ್ಚರಿಯಾಗಿ ಕಾಣುತ್ತದೆ.
ಜ. ನಾ. ತೇಜಶ್ರೀ ಬರೆದ `ಅರಿವು-ಇರವುಗಳ ಸನ್ನೆಗೈ ಪುತಿನ ಮಲೆದೇಗುಲ’ ಕೃತಿಯ ಕುರಿತು ದೀಪಾ ಫಡ್ಕೆ ಬರಹ

read more
ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಚಿತ್ರಾಕ್ಷರ: ಕೆ ವಿ ಸುಬ್ರಮಣ್ಯಂ ಕಲೆ ಮತ್ತು ಬರಹಗಳ ಬಿಂಬ

ಯಾವುದೇ ಒಬ್ಬ ಕಲಾವಿದ ಕಲಾಕೃತಿಗಳನ್ನು ತನ್ನ ಸ್ವಂತ ಅಭಿರುಚಿಯಂತೆ ಮಾಡುವುದನ್ನು ಕಲಿಯುವ ಮೊದಲು ನಕಲು ಮಾಡುವುದರಿಂದ ಪ್ರಾರಂಭಿಸುವಂತೆ ಇವರು ಕೂಡ ಮೊದಲು ನಕಲು ಮಾಡಿಯೇ ಪ್ರಾರಂಭಿಸಿದ್ದು. ನೋಡಿದ್ದನ್ನು ಹಾಗೆ ಚಿತ್ರಿಸಲು ಪ್ರಯತ್ನಿಸುವುದು, ಚಂದಮಾಮ ಪತ್ರಿಕೆಯ ಚಿತ್ರಗಳನ್ನು ಚಿತ್ರಿಸುವುದು, ಪತ್ರಿಕೆಗಳಲ್ಲಿ ಬರುವ ಗಾಂಧಿ, ಶ್ರವಣಬೆಳಗೊಳದ ಬಾಹುಬಲಿ ಮೊದಲಾದ ಚಿತ್ರಗಳನ್ನು ನೋಡಿ ನಕಲು ಮಾಡಿ ಚಿತ್ರಿಸುವುದರ ಮೂಲಕ ನಡೆದಬಂದರು. ಕೆ. ವಿ. ಸುಬ್ರಹ್ಮಣ್ಯಂರವರಿಗೆ ಈ ಆಸಕ್ತಿ 7-8ನೇ ತರಗತಿಗಳಲ್ಲಿ ಶುರುವಾಗಿತ್ತು.
ಕಲಾ ವಿಮರ್ಶಕ ಕೆ.ವಿ. ಸುಬ್ರಮಣ್ಯಂ ಅವರ ಕುರಿತು ಹರಿಶ್ರೀ ವೈ.ಜೆ. ಬರೆದ “ಚಿತ್ರಾಕ್ಷರ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗ

read more
ನೀರಿಗೊಡ್ಡಿದ ಗಾಳಿ-ಬೆಳಕು: ಆಲೂರು ದೊಡ್ಡನಿಂಗಪ್ಪ ಕಾದಂಬರಿಗೆ ರಘುನಾಥ ಚ.ಹ. ಮುನ್ನುಡಿ

ನೀರಿಗೊಡ್ಡಿದ ಗಾಳಿ-ಬೆಳಕು: ಆಲೂರು ದೊಡ್ಡನಿಂಗಪ್ಪ ಕಾದಂಬರಿಗೆ ರಘುನಾಥ ಚ.ಹ. ಮುನ್ನುಡಿ

ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ.
ಆಲೂರು ದೊಡ್ಡನಿಂಗಪ್ಪ ಕಾದಂಬರಿ “ಚಂದ್ರನ ಚೂರು” ಗೆ ರಘುನಾಥ ಚ.ಹ. ಮುನ್ನುಡಿ

read more
ದುಪಡಿ; ಬಂಧುತ್ವದ ಹೆಣಿಗೆ: ಡಾ. ಗೀತಾ ವಸಂತ ಮುನ್ನುಡಿ

ದುಪಡಿ; ಬಂಧುತ್ವದ ಹೆಣಿಗೆ: ಡಾ. ಗೀತಾ ವಸಂತ ಮುನ್ನುಡಿ

ಅಚ್ಚಿಯ ಬನವಾಸಿ ಅಕ್ಕಯ್ಯ ನಾಗವೇಣಿಯ ಬದುಕು ಬಂಜೆಯೆಂಬ ಕಾರಣಕ್ಕೆ ಭಗ್ನವಾದ ರೀತಿ ಹೆಣ್ಣಿನ ಅಸ್ತಿತ್ವದ ಕುರಿತು ಹಲವು ಪ್ರಶ್ನೆಗಳನ್ನೆಬ್ಬಿಸುತ್ತದೆ. ಹೆಣ್ಣು ಅಂದರೆ ತಾಯಿ. ಅದೇ ಅಸ್ತಿತ್ವ. ತಾಯಿಯಾಗದ ನಾಗವೇಣಿ ತನ್ನೊಳಗೇ ತಾನು ಖಾಲಿಯಾಗುತ್ತ ಹೋಗುವುದು, ಹಾಗೆಯೇ ಇಡೀ ಕುಟುಂಬ ಅವಳನ್ನು ಕಡೆಗಣಿಸುವುದು, ಅವಳ ಖಿನ್ನತೆ ಉನ್ಮಾದಕ್ಕೆ ತಿರುಗುವುದು ಇದೆಲ್ಲ ಅವಳ ಮನೋಲೋಕಕಕ್ಕೆ ಪಾತಾಳಗರಡಿ ಹಾಕಿದಂತಿದೆ.
ಡಾ. ಚಂದ್ರಮತಿ ಸೋಂದಾ ಕಾದಂಬರಿ “ದುಪಡಿ”ಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ

read more
ಮಾನಸಿಕ ಹಿಂಸೆಯೂ ಕ್ರೌರ್ಯವೇ: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಮಾನಸಿಕ ಹಿಂಸೆಯೂ ಕ್ರೌರ್ಯವೇ: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಕಾರಂತರದ್ದು ಸದಾ ಕ್ರಿಯಾಶೀಲವಾಗಿರುವ ಮನಸ್ಸು. ಅವರಿಗೇ ‘ತಾನು ಖಾಲಿಯಾದೆ’ ಅಂತನ್ನಿಸಬೇಕಾದರೆ ಆ ಭೂಪಾಲ್ ಘಟನೆ ಎಂತಹ ಆಘಾತ ತಂದಿರಬೇಕು. ಅವರ ಮನಸ್ಸು ಮುದುಡುವಂತೆ ಮಾಡಿ, ತಮ್ಮಿಂದ ಇನ್ನು ಸೃಜನಾತ್ಮಕವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಅನ್ನಿಸುವಂತೆ ಮಾಡಿದರಲ್ಲಾ, ಅದುವೇ ಕ್ರೌರ್ಯ. ಭೂಪಾಲ್‌ನ ಆ ಘಟನೆ ನಿಜವಾಗಿಯೂ ನಡೆದದ್ದೋ ಅಲ್ಲವೋ ನನಗೆ ತಿಳಿಯದು. ಅಲ್ಲಿನ ರಾಜಕೀಯ ರಂಗಮಂಡಲದ ಮುಖ್ಯಸ್ಥರಾಗಿದ್ದ ಕಾರಂತರನ್ನು ಬಲಿಪಶು ಮಾಡಿದರು ಎಂದು ಅವರ ಕೆಲವು ಸ್ನೇಹಿತರು ಹೇಳಿದ್ದನ್ನು ನಾನು ಕೇಳಿದ್ದೇನೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಕ್ರೌರ್ಯ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

read more
ಎದೆ ಸೀಳಿತು ಕೆಂಪುಲಾವದ್ಹಕ್ಕಿ…: ಗೋಳೂರ ನಾರಾಯಣಸ್ವಾಮಿ ಬರಹ

ಎದೆ ಸೀಳಿತು ಕೆಂಪುಲಾವದ್ಹಕ್ಕಿ…: ಗೋಳೂರ ನಾರಾಯಣಸ್ವಾಮಿ ಬರಹ

“ಪ್ರೀತಿಸುವುದಕ್ಕಿಂತ ಕ್ರಾಂತಿಯಾವುದಾದರೂ ಇದಿಯಾ; ನನ್ನ ಕವಿತೆ ಇದನ್ನಷ್ಟೇ ಬಯಸುತ್ತದೆ” ಎನ್ನುವಾಗ, ಜಂಬೂದ್ವೀಪದ ಅಪ್ಪ ಅವ್ವ ಅನ್ನ ಉತ್ಪಾದಿಸುವ ಘನಕಾರ್ಯಕ್ಕೆ ಕಣ್ಣು ಬಂದು, ಅದೆಲ್ಲೋ ಬಲೂನು ಮಾರುತ್ತಿರುವ ಬಡಜನರ ಮೇಲೆ ದೃಷ್ಟಿ ಹಾಯಿಸುತ್ತಾ ಇರುತ್ತದೆ. ಒಂದೇ ಮನೆಯಲ್ಲಿದ್ದು, ಒಂದೇ ತಟ್ಟೆಯಲ್ಲಿ ಅನ್ನ ತಿಂದ ಜನರೇ ಹಣ, ಆಸ್ತಿ ಆಸೆಗಾಗಿ ಸಾವನ್ನೇ ಕತ್ತು ಹಿಸುಕಿ ಕೊಲ್ಲುತ್ತಿರುವಾಗ, ಬಡಜನರ ಬಗ್ಗೆ ದನಿಯಾಗಬೇಕೆಂಬ ಇವರ ಹುಂಬುತನಕ್ಕೆಷ್ಟೊಂದು ಧೈರ್ಯವಿರಬೇಕು ಎಂದುಕೊಳ್ಳುವಾಗಲೆ, ಅದಕ್ಕವರು ಉತ್ತರವಾಗಿ ‘ನದಿಗೆ ತಡೆಯೊಡ್ಡಬಹುದು, ಬತ್ತಿಸಲಾಗುವುದೇ ಒಳಗಿನ ಒರತೆ” ಎಂದುಬಿಡುತ್ತಾರೆ.
ಎಸ್.ಕೆ. ಮಂಜುನಾಥ್‌ ಕವನ ಸಂಕಲನ “ಗಾಳಿಯ ಎದೆಸೀಳಿ ಹೊರಟ ಹಕ್ಕಿ” ಕುರಿತು ಗೋಳೂರ ನಾರಾಯಣಸ್ವಾಮಿ ಬರಹ

read more

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ