ಪಿಕ್ ನಿಕ್ ಎಂದು ಯಾಮಾರಿಸಿದ್ದು!!!: ಬಸವನಗೌಡ ಹೆಬ್ಬಳಗೆರೆ ಬರಹ
ಊರಿಂದ ಇನ್ನೇನು ಸ್ವಲ್ಪ ದೂರ ಹೋಗಿರಲಿಲ್ಲ, ಅವನ ವಿರೋಧಿಗಳು ಕೈಯಲ್ಲಿ ಕಣಿಗೆ (ಮರದ ಬಡಿಗೆ) ಹಿಡಿದು ನಮ್ಮ ರಸ್ತೆಗೆ ಅಡ್ಡವಾಗಿ ನಿಂತಿದ್ದರು. ವ್ಯಾನು ನಿಲ್ಲಿಸಿ ‘ಯಾಕೆ?’ಎಂದು ಕೇಳಿದಾಗ ಅವರು ವ್ಯಾನಿನ ಸುತ್ತಲೂ ನಿಂತು ‘ನೋಡಲು ನರಪೇತಲ ನಾರಾಯಣರಂತೆ ಇದೀರ ಬೋ… ಮಕ್ಕಳಾ.. ರೌಡಿಗಳೇನ್ರೂ ನೀವು, ತಲೆ ಸೀಳಿ ಬಿಡ್ತೀವಿ’ ಎಂದು ಸಿಟ್ಟಾಗಿ ಕಣಿಗೆ ಎತ್ತುತ್ತಾ ಬೈಗುಳ ಶುರು ಮಾಡಿದರು. ಆಗ ನಾವು ನಡುಗುತ್ತಾ ಕಣ್ಣೀರಿಡುತ್ತಾ ನಮ್ಮ ಹಿನ್ನೆಲೆ ತಿಳಿಸಿದೆವು. ತಾಳ್ಮೆಯಿಂದ ನಮ್ಮ ಮಾತನ್ನು ಅವರು ಕೇಳಿದ್ದರಿಂದಲೋ ಏನೋ ಅವರು ನಮಗೇನೂ ಮಾಡದೇ, ಹೋಗಲು ಸುಮ್ಮನೆ ಬಿಟ್ಟರು!
ಬಸವನಗೌಡ ಹೆಬ್ಬಳಗೆರೆ ಬರಹ ನಿಮ್ಮ ಓದಿಗೆ
ಚಂದವಳ್ಳಿ ತೋಟದ ನೆನಪುಗಳು: ಡಾ. ಸದಾಶಿವ ದೊಡಮನಿ ಬರಹ
ಭೀಮವ್ವ ಆಯಿ ಮಲ್ಲಪ್ಪ ಮುತ್ಯಾನ ಮಾತು, ಮೀರುವಂಗ ಇರಲಿಲ್ಲ. ನನ್ನ ಕೈಯೊಳಗಿನ ಗಂಗಾಳ ತೊಗೊಂಡು, ಬಾ ಅಂತ ಒಳಗ ಕರ್ದು, ವಣಗಿ ಹಾಕಿ ನನ್ನ ಕೈಯಾಗ ಗಂಗಾಳ ಕೊಡುವುದರೊಳಗ ಮಲ್ಲಪ್ಪ ಮುತ್ಯಾ ತಾನ ಎದ್ದು ಬಂದು, ನನ್ನ ಕೈಯೊಳಗಿನ ಗಂಗಾಳ ಇಸಗೊಂಡು, ಒಳಗೆ ಹೋಗಿ, ಇಡೀ ಗಡಗೀನ ಗಂಗಾಳಕ್ಕ ಸುರುವಿ, ‘ತೊಗೊಂಡು ಹೋಗ’ ಅಂತ ಕೊಟ್ಟು ಕಳಿಸಿ ಬಿಡುತ್ತಿದ್ದ.
ತಮ್ಮ ಬಾಲ್ಯಕಾಲದ ನೆನಪನ್ನು ಹಂಚಿಕೊಂಡಿದ್ದಾರೆ ಡಾ. ಸದಾಶಿವ ದೊಡಮನಿ
ಮನಸ್ಸೆಂಬೊ ಮಾಯಾವಿ..: ವಿಶ್ವನಾಥ ನೇರಳೆಕಟ್ಟೆ ಬರಹ
ಮನಸ್ಸು ಎನ್ನುವುದೇ ಹಾಗೆ, ಅನೂಹ್ಯವಾದದ್ದು, ಅಸದೃಶವಾದದ್ದು. ಮನುಷ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಅತೀ ದುರ್ಬಲ ಅಸ್ತ್ರವೆಂದರೆ ಅದು ಮನಸ್ಸು. ನಮ್ಮ ಬದುಕಿನಲ್ಲಿ ಯಾವತ್ತೋ ನಡೆದ ಘಟನೆಗಳು, ನೋಡಿದ ಸನ್ನಿವೇಶಗಳು ಬದುಕಿನ ಇನ್ಯಾವುದೋ ಕಾಲಘಟ್ಟದಲ್ಲಿ ನಮ್ಮ ಮನಸ್ಸನ್ನು ನಿಯಂತ್ರಿಸುವ ಬಗೆಯಂತೂ ಅತ್ಯದ್ಭುತ. ಮನಸ್ಸನ್ನು ನಿಭಾಯಿಸುವ ಕಲೆಯನ್ನು ಕಲಿತುಕೊಂಡರೆ ಮನುಷ್ಯ ಯಶಸ್ಸನ್ನು ಗಳಿಸಿಕೊಳ್ಳುವುದು ಸುಲಭವಾಗುತ್ತದೆ. ಹಾಗೆಂದು ಈ ಪ್ರಯತ್ನದಲ್ಲಿ ಎಡವಿದರೆ ಬದುಕು ಸಮಸ್ಯೆಗಳ ಗೂಡಾಗುತ್ತದೆ.
ನೇರಳೆಕಟ್ಟೆ ಅವರು ಮನಸ್ಸಿನ ಅಗಾಧತೆಯ ಕುರಿತು ಬರೆದ ಲೇಖನ ಇಂದಿನ ಓದಿಗಾಗಿ.
ನನ್ನಜ್ಜನೂ… ಮತ್ತು ಅವನ ಸೈಕಲ್ಲೂ….: ಬಸವನಗೌಡ ಹೆಬ್ಬಳಗೆರೆ ಪ್ರಬಂಧ
ಮನೆಯಲ್ಲಿ ಸೈಕಲ್ ಇಲ್ಲದ ಹುಡುಗರು ಆ ಊರಲ್ಲಿದ್ದ ಸಬ್ಬೀರಣ್ಣನ ಪಂಕ್ಚರ್ ಶಾಪ್ನಲ್ಲಿ ಬಾಡಿಗೆ ಇರಿಸಿದ್ದ ಸಣ್ಣ ಸೈಕಲ್ಲುಗಳನ್ನು ಹೊಡೆಯುತ್ತಿದ್ದರು. ಇಪ್ಪತ್ತೈದು ಪೈಸೆಗೆ ಅರ್ಧ ಘಂಟೆ ಕಾಲ ಬಾಡಿಗೆ ಕೊಡುತ್ತಿದ್ದನವನು! ಅದ್ಯಾವ ನಂಬಿಕೆ ಮೇಲೆ ಕೊಡುತ್ತಿದ್ದನೋ ಗೊತ್ತಿಲ್ಲ. ಹೊಲಕ್ಕೆ ಬುತ್ತಿ ಒಯ್ಯಬೇಕಾದಾಗ ಮಾತ್ರ ಖುಷಿಯಿಂದ ಸೈಕಲ್ ಕೊಡುತ್ತಿದ್ದ ಅಜ್ಜ ಬೇರೆ ಸಮಯದಲ್ಲಿ ಅದನ್ನು ಮುಟ್ಟೋಕು ಬಿಡ್ತಾ ಇರಲಿಲ್ಲ. ಪೆಟ್ರೋಲ್ ಡೀಸೆಲ್ ಅಂತಾ ಏನೂ ಖರ್ಚು ಆಗೋಲ್ಲ. ಅದ್ಯಾಕಂಗೆ ಆಡ್ತಿದ್ರು ನಮ್ಮಜ್ಜ ಅನ್ನೋದೆ ಇಂದಿಗೂ ನನಗೆ ಉತ್ತರ ಹೊಳೆಯದ ಪ್ರಶ್ನೆಯಾಗಿದೆ!
ಬಸವನಗೌಡ ಹೆಬ್ಬಳಗೆರೆ ಬರೆದ ಪ್ರಬಂಧ ನಿಮ್ಮ ಓದಿಗೆ
ಒರಗಿಕೊಳ್ಳುವ ಮುನ್ನ….
ರಜಾದಿನಗಳ ಮಧ್ಯಾಹ್ನಗಳಲ್ಲಿ ನಾನು ಆಕೆ ಮನೆಯ ಆ ನೀಲಿ ಬಾಗಿಲನ್ನ ಧಡ ಧಡ ಬಡಿಯುತ್ತ ನಿಂತು ಬಿಡುತ್ತಿದ್ದೆ, ಮೊದಮೊದಲು, ಬಾಗಿಲು ತೆಗೆದು ಆಮೇಲ್ ಬಾ ಮಾಮ ಮಕ್ಕೊಂಡಾರು ಅನ್ನುತ್ತಿದ್ದ ಅಕ್ಕ, ಆಮೇಲೆ ಒಳಗಿನಿಂದಲೇ ಕೂಗಲು ಶುರು ಮಾಡಿದಳು. ಆನಂತರ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಆಗೆಲ್ಲ ಸಿಕ್ಕಾಪಟ್ಟೆ ಅವಮಾನವಾಗಿ ಕಣ್ಣು ತುಂಬಿಕೊಂಡು ಮನೆಗೆ ಹೋಗುತ್ತಿದ್ದೆ. ನನ್ನ ಅಳುವಿಗೆ ಕಾರಣ ಕೇಳುವಷ್ಟು ವ್ಯವಧಾನ ಯಾರಿಗೂ ಇರಲಿಲ್ಲ. ನನ್ನ ದೋಸ್ತರಾಗಿದ್ದ ಮರಗಳು ಕೂಡ ನನ್ನ ಹತ್ತಿರ ಮಾತು ಬಿಟ್ಟಂತೆ ನನಗೆ ಭಾಸವಾಗುತ್ತಿತ್ತು, ಯಾಕೆಂದರೆ ಅಕ್ಕ ಸಿಕ್ಕಿದ್ದೇ ಸಿಕ್ಕಿದ್ದು… ಮೌನವಾಗಿ ಮಾತನಾಡುವ ಸ್ನೇಹಿತರಿಗಿಂತ ಮಾತನಾಡುವ ಜೀವಕ್ಕೆ ನಾನು ಆದ್ಯತೆ ಕೊಟ್ಟಿದ್ದು ಅವಕ್ಕೂ ಸಿಟ್ಟು ಬಂದಿತ್ತೇನೋ.
ಅಮಿತಾ ರವಿಕಿರಣ್ ಬರಹ ನಿಮ್ಮ ಓದಿಗೆ
ಅಡ್ಮಿನ್ ಸೂತ್ರಧಾರಿ, ನಾವ್ ಪಾತ್ರಧಾರಿ
ಸಮಾನ ಮನಸ್ಕರ ನಡುವೆ ಸಂವಹನ ಸಾವಧಾನವಾಗಿ ಆದಾಗ ಒಳ್ಳೆಯದೆ ಆಗುತ್ತದೆ. ಅಲ್ಲಿಯೇ ಆರೋಗ್ಯಕರ ಚರ್ಚೆಗಳು ಪ್ರಾಂಭವಾಗುತ್ತವೆ. ಗುಂಪಿನಲ್ಲಿ ನಡೆಯುವ ಚರ್ಚೆಗಳು ಅನ್ಯ ಗುಂಪಿಗೂ ಹರಿಯಬಹುದು. ಪರಸ್ಪರ ಅಭಿನಂದನೆಗಳಿಗೆ ಧನ್ಯವಾದಗಳು ಒಂದು ಹಂತಕ್ಕೆ ಇದ್ದರೆ ಚಂದ ಅತಿಯಾದರೆ ಅಸಹ್ಯ! ಕ್ಷಮಿಸಿ ‘ಅಸಹ್ಯ’ ಎಂದರೆ ‘ಹೊಲಸು’ ಎಂದಲ್ಲ ಇತ್ತೀಚೆಗೆ ಹೀನಾರ್ಥ ಪಡೆದುಕೊಂಡಿರುವುದು ಅ-ಸಹ್ಯ ಎಂದರೆ ಸಹಿಸಲು ಸಾಧ್ಯವಾಗದೆ ಇರುವುದೆಂದು. ಸಂದೇಶಗಳು, ಸುತ್ತೋಲೆ, ಜ್ಞಾಪಕ ಇದ್ದಂತೆ, ಏಕ ಕಾಲಕ್ಕೆ ಅನೇಕರಿಗೆ ಸಂದೇಶ ರವಾನೆಯಾಗುತ್ತದೆ ಉದಾಹರಣೆಗೆ, ಸರಕಾರದ ಆದೇಶ ಮದುವೆ ದಿನಾಂಕ, ಕೆಲಸಗಾರರಿಗೆ ಏಕ ಕಾಲದಲ್ಲಿ ಸಂದೇಶ ತಲುಪಿಸಲು ಬಹಳ ಅನುಕೂಲವಾಗಿದೆ ಇತ್ಯಾದಿ.
ಸುಮಾವೀಣಾ ಬರಹ ನಿಮ್ಮ ಓದಿಗೆ.
ಭಾವಗೀತೆಗಳ ಭಾವಗುಚ್ಛ….
ರಾಜಕೀಯ ಭಾಷಣಗಳ ಮುನ್ನ ಜನರನ್ನು ಮೈದಾನಗಳಿಗೆ ಕರೆತರುತ್ತಿದ್ದುದೇ ಈ ಜೋರಾಗಿ ಕೇಳಿಸುತ್ತಿದ್ದ ಹಾಡುಗಳು. ಎಲ್ಲೆಲ್ಲೂ ಈ ಹಾಡುಗಳು ಮೊಳಗುತ್ತಿದ್ದವು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಎಲ್ಲಿಯಾದರೂ ಉತ್ಸವಗಳಲ್ಲಿ ಹಾಡಲು ಬಂದಾಗ ಈ ಗೀತೆಗಳನ್ನು ಹಾಡಲಿ ಎಂದು ಜನ ಅಪೇಕ್ಷೆ ಪಡುತ್ತಿದ್ದರು. ಸಿ. ಅಶ್ವಥ್ ಅವರ ಸಂಗೀತ ಮತ್ತು ವೈದ್ಯನಾಥನ್ ಅವರ ವಾದ್ಯಸಂಯೋಜನೆಯಲ್ಲಿ ಮೂಡಿ ಬಂದ ಭಾವಗೀತೆಗಳು ಇವು. ಒಂದು ರೀತಿ ಸಿನಿಮಾ ಗೀತೆಗಳು ಭಾಸವಾಗುತ್ತಿದ್ದವು.
ಕವಿ ದೊಡ್ಡರಂಗೇಗೌಡರ ಕವಿತೆಗಳನ್ನಿಟ್ಟುಕೊಂಡು ಸುಚೇಂದ್ರ ಪ್ರಸಾದ್ ನಿರ್ದೇಶಿಸಿರುವ ಸಿನಿಮಾ “ಮಾವು ಬೇವು” ಕುರಿತು ಬಿ.ಕೆ. ಸುಮತಿ ಬರಹ
ಹೆತ್ತವರು ನೆಂಟರಾದಾಗ….
ಬೇಸಿಗೆ ರಜೆ ಬಂದರೆ ಸಾಕು ನಾನು ಅಮ್ಮನ ತವರೂರಿಗೆ ದೌಡಾಯಿಸುತ್ತಿದ್ದೆ. ಅಂಥದ್ದೇ ಒಂದು ಬೇಸಿಗೆ ರಜೆಯಲ್ಲಿ ತಿಂಗಳೆಲ್ಲ ಅಲ್ಲೇ ಟಿಕಾಣಿ ಹೂಡಿದ್ದ ನನ್ನ ಬಿಟ್ಟಿರಲಾಗದ ಅಪ್ಪ ಅಚಾನಕ್ಕಾಗಿ ನೋಡಲೆಂದು ಊರಿಗೆ ಬಂದಿದ್ದಾರೆ. ತಾತ ಮಾವಂದಿರು ಹೊಲಕ್ಕೆ ಹೋಗಿದ್ದು ಮನೆಯಲ್ಲಿದ್ದು ಅವ್ವ ಮಾತ್ರ. ಅಲ್ಲೇ ಹಜಾರದ ಬಾಗಿಲ ಬಳಿ ಮೊರದಲ್ಲಿ ರಾಗಿ ಕೇರುತ್ತಾ ಕುಳಿತಿದ್ದ ಅಳಿಯನ ನಿರೀಕ್ಷೆ ಇಲ್ಲದವಳ ಮುಂದೆ ಪ್ಯಾಂಟ್ ತೊಟ್ಟ ಎರಡು ಕಾಲುಗಳು ಕಾಣಿಸಿಕೊಂಡಿವೆ. ಮನೆಯ ಹೊಸಲು ಸ್ಪರ್ಶಿಸುವ ಪ್ಯಾಂಟುಧಾರನ ಪಾದಗಳೆಂದರೆ ಅದು ಅಳಿಯನೊಬ್ಬನದ್ದೆ ಎಂಬುದನ್ನು ಗ್ರಹಿಸಿದ ಅವಳು ತಲೆಯೆತ್ತಿಯೂ ನೋಡದೆ ಕೈಯಲ್ಲಿದ್ದ ಮೊರವನ್ನು ಗಾಬರಿಯಿಂದ ಬಿಸಾಡಿ ಓಡಿ ಹೋಗಿ ನಡುಮನೆಯನ್ನು ಸೇರಿಕೊಂಡಿದ್ದಳು.
ಮಾಲತಿ ಶಶಿಧರ್ ಬರಹ ನಿಮ್ಮ ಓದಿಗೆ
ಹಲವು ಹೃದಯಗಳ ಮುಟ್ಟಿದ ಚಲನಚಿತ್ರೋತ್ಸವ..
ಮೂರನೇ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻಫೋಟೋʼ ಚಿತ್ರದ್ದು ಬೇರೆಯದೇ ರೀತಿಯ ಛಾಪು. ಚಿತ್ರೋತ್ಸವದ ಎರಡನೇ ದಿನ 4ನೇ ಪರದೆಯಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿದು ತುಂಬಿದ್ದರು. ಆಸನಗಳು ಸಾಲದಕ್ಕೆ ಚಿತ್ರಮಂದಿರದ ನಿಯಮವನ್ನೂ ಮುರಿದು ಮೆಟ್ಟಿಲುಗಳ ಮೇಲೆ ಕುಳಿತು ಸಹ ಹಲವರು ಚಿತ್ತ ಬದಲಿಸದೇ ನೆಟ್ಟ ದೃಷ್ಟಿಯಲ್ಲೇ ಚಿತ್ರವನ್ನು ವೀಕ್ಷಿಸಿದರು.
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ನೋಡಿದ ಸಿನಿಮಾಗಳ ಕುರಿತು ಕುಮಾರ ಬೇಂದ್ರೆ ಬರಹ









