ಬಡತನದ ಬದುಕು ಮತ್ತು ಶಾಲೆಯ ನೆನಪು: ಮಾರುತಿ ಗೋಪಿಕುಂಟೆ ಸರಣಿ
ಅವರು “ನಾವು ಬೆಳಿಗ್ಗೆ ಹೊತ್ತು ಮುಂಚೆನೆ ಹೋಗ್ತೀವಿ ನಮಗೆ ಬೆಳಗ್ಗೆ ಏನು ಅಡಿಗೆ ಮಾಡುವುದು ಬೇಡ ಎಂದರು”. ಅಮ್ಮ ನಿರಾಳವಾದಳು. ಏಕೆಂದರೆ ಬೆಳಗಿನ ಅಡಿಗೆಗೆ ಮನೆಯಲ್ಲಿ ಅಕ್ಕಿಯೆ ಇರಲಿಲ್ಲ. ಅಕ್ಕಿ ತಗೋಬೇಕು ಅಂದರೆ ಬೀಡಿಯ ಮಾಲೀಕ ಬರಬೇಕಿತ್ತು. ಹಣ ಕೊಡಬೇಕಿತ್ತು ಅನ್ನುವ ಪರಿಸ್ಥಿತಿ ನಮ್ಮದು. ಆದರೆ ಬೆಳಿಗ್ಗೆ ಸಂಬಂಧಿಕರು ಹೋಗುವುದು ತಡವಾಗಿದ್ದರಿಂದ ಬೆಳಗಿನ ಉಪಹಾರವನ್ನು ಮಾಡಬೇಕಾದ ಪರಿಸ್ಥಿತಿ ಅಮ್ಮನದಾಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
ಅಂತ್ಯವಿಲ್ಲದ ವಾಕ್ಯಗಳಲ್ಲಿನ ಕಾವ್ಯ…: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ವಿಷಯಾಧಾರಿತ ಆಯ್ಕೆಗಳ ಹೊರತಾಗಿಯೂ, ಅವರ ಕವಿತೆಗಳ ಭಾಷೆ ಸೊಗಸಾದ ಮತ್ತು ಬಹುತೇಕ ಹರ್ಷದಿಂದ ಕೂಡಿರುತ್ತದೆ. ಅವರ ಕವಿತೆಗಳು ಸಾಮಾನ್ಯವಾಗಿ ವಿನೋದಸ್ವಭಾವದಿಂದ ಕೂಡಿರುತ್ತೆ ಹಾಗೂ ಆಕರ್ಷಕವಾದ ವಿರೋಧಾಭಾಸದ ರೂಪಕಗಳ ಬಳಕೆಯನ್ನು ಪ್ರದರ್ಶಿಸುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಡೆನ್ಮಾರ್ಕ್ ದೇಶದ ಕವಿ ಹೆನ್ರಿಕ್ ನೊರ್ಡ್ಬ್ರಾಂಡ್ಟ್-ರ (Henrik Nordbrandt, 1945 – 2023) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಬೇಸಿಗೆಯ ಬೇಗೆಗೆ ನೆನಪುಗಳ ಸಿಂಚನ: ಚಂದ್ರಮತಿ ಸೋಂದಾ ಸರಣಿ
ವಸಂತ ಋತುಗಳನ್ನು ಎಲ್ಲ ಕಾಲಕ್ಕೂ ಕವಿಗಳು ಹಾಡಿಹೊಗಳುತ್ತ ಬಂದಿದ್ದಾರೆ. ಮಾವಿನ ಚಿಗುರು, ಕೋಗಿಲೆಯ ಕುಕಿಲು, ಮುಂಗಾರಿನ ಆರ್ಭಟ ಎಲ್ಲವೂ ಅವರ ವರ್ಣನೆಗೆ ಕಾರಣವಾಗಿವೆ. ಅದೇಕೋ ಬಿರುಬೇಸಗೆಯ, ಸುಡುಬಿಸಿಲಿನ ಅನಭವಗಳು ಅವರನ್ನು ಕಾಡಿದಂತೆ ಕಾಣುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿಯ ದಗೆಯನ್ನು ಮೀರಿಸುವಂತೆ ಚುನಾವಣೆಯ ಕಾವು ಏರುತ್ತಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ
ಮೂಕ ವೇದನೆ…: ಗುರುಪ್ರಸಾದ ಕುರ್ತಕೋಟಿ ಸರಣಿ
ಅದು ಇದು ಮಾತಾಡುತ್ತ ತನ್ನ ಮಗ ಫಿಲಿಪ್ ಕೂಡ ತುಂಬಾ ಚೆನ್ನಾಗಿ ಸ್ನೂಕರ್ ಆಡುತ್ತಾನೆ ಇಲ್ಲಿದೆ ನೋಡಿ ಅಂತ ಒಂದು ವೀಡಿಯೊ ತೋರಿಸಿದ. ಅದರಲ್ಲಿ ಅವನ ಮಗ ಸ್ನೂಕರ್ ಹೊಡೆತಗಳನ್ನು ತುಂಬಾ ಚೆನ್ನಾಗಿಯೇ ಹೊಡೆಯುತ್ತಿದ್ದುದು ಗಮನಿಸಿದೆ. ಅದರ ಜೊತೆಗೆ ಇನ್ನೊಂದು ವಿಚಿತ್ರವನ್ನೂ ಆಲಿಸಿದೆ. ಆ ವೀಡಿಯೊದಲ್ಲಿ ಅವನ ಮಗ ನಿಚ್ಚಳವಾಗಿ ಮಾತಾಡುತ್ತಿದ್ದ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾಲ್ಕನೆಯ ಬರಹ
ಮಡಿಕೇರಿ ಟು ಬೇಲೂರು: ಸುಮಾವೀಣಾ ಸರಣಿ
ರಿಸಲ್ಟ್ ಮುಗಿದ ನಂತರ ಒಂದು ದಿನವೂ ಮಡಿಕೇರಿಯಲ್ಲಿ ಇರುತ್ತಿರಲಿಲ್ಲ. ಅಷ್ಟರಲ್ಲಿ ಬೇಲೂರಿನ ರಥೋತ್ಸವದ ಸಂದರ್ಭ ಸಂಭ್ರಮ ಎರಡೂ ಆಗಿರುತ್ತಿದ್ದ ಕಾರಣ ಬೇಲೂರಿಗೆ ಹೋಗುತ್ತಿದ್ದೆವು. ಹೋದ ನಂತರ ನಾವು ಯಾರ ಅಣತಿಯನ್ನೂ ಒಪ್ಪುತ್ತಿರಲಿಲ್ಲ. ಪೇರೋಲ್ನಿಂದ ಆಚೆ ಬಂದ ಖೈದಿಗಳಂತೆ ಆಡುತ್ತಿದ್ದೆವು. ಬೇಲೂರು ದೇವಸ್ಥಾನದಲ್ಲಿ ಘಂಟೆ ಬಾರಿಸಿದರೆ ನಮ್ಮಜ್ಜಿ ಮನೆಗೆ ಕೇಳಿಸುತ್ತಿತ್ತು. ಮಹಾಮಂಗಳಾರತಿ ಘಂಟೆ, ನೈವೇದ್ಯದ ಘಂಟೆಗಳು ಒಂದು ನಮೂನೆ ಅಲರಾಂ ಇದ್ದಂತೆ. ಬೇಸಗೆ ಎಂದರೆ ಎಲ್ಲ ಕಡೆ ನೀರಿಗೆ ತೊಂದರೆಯಿರುವಂತೆ ಬೇಲೂರಿನಲ್ಲಿಯೂ ಇತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ಮೂರನೆಯ ಕಂತು ನಿಮ್ಮ ಓದಿಗೆ
ಇಂಗ್ಲೀಷ್ ಪಾಠ ಹಾಗೂ ಜಲಕಂಟಕದ ಕಹಿ ನೆನಪು: ಬಸವನಗೌಡ ಹೆಬ್ಬಳಗೆರೆ ಸರಣಿ
ಇವರ ಸ್ವಂತ ಮಕ್ಕಳು ಆಗಿನ ಕಾಲಕ್ಕೆ ಡಾಕ್ಟರ್, ಇಂಜಿನಿಯರ್, ಲೆಕ್ಚರ್ ಸ್ಥಾನ ಅಲಂಕರಿಸಿದ್ದರೂ ಇವರು ಮಾತ್ರ ತುಂಬಾ ಸಿಂಪಲ್ ಆಗಿ ಇದ್ರು. ಮನೇಲಿದ್ದಾಗ ವ್ಯವಸಾಯದ ಕೆಲಸವನ್ನು ಮಾಡ್ತಿದ್ರು. ಟ್ಯೂಷನ್ ಬಗ್ಗೆ ಇವರು ‘ಸ್ವ ಅಧ್ಯಯನವೇ ಮುಖ್ಯ’ ಎಂದು ಹೇಳುತ್ತಿದ್ದರು. ಇಂಗ್ಲೀಷ್ ಪದದ ಕನ್ನಡ ಅರ್ಥ ಬರೆಸಿ ಅರ್ಥ ಸಮೇತ ಸ್ಪೆಲ್ಲಿಂಗ್ ಕೇಳೋದು, ಪಾಠ ಓದಿಸೋದು, ಪ್ರಶ್ನೋತ್ತರ ಕೇಳೋದು ಹೀಗೆ ಪ್ರಾಮಾಣಿಕವಾಗಿ ಬೋಧಿಸ್ತಾ ಇದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೆರಡನೆಯ ಕಂತು ನಿಮ್ಮ ಓದಿಗೆ
ಸ್ವೋಪಜ್ಞ ಮನಸ್ಸಿನ ಉದಾತ್ತ ಮಾನವ: ರಂಜಾನ್ ದರ್ಗಾ ಸರಣಿ
ಹೊರಗೆ ಸ್ಥಿತಪ್ರಜ್ಞರಂತೆ ಇದ್ದ ಅನಂತಮೂರ್ತಿ ಅವರು ಒಳಗೆ ಸ್ಥಿತಿಪ್ರಜ್ಞರಾಗಿದ್ದರು. ಕುಹಕ ಮಾತುಗಳಿಗೆ ಅವರೆಂದೂ ವಿಚಲಿತರಾಗುತ್ತಿರಲಿಲ್ಲ. ಎಲ್ಲ ಟೀಕೆಗಳನ್ನು ಸಹಿಸಿಕೊಳ್ಳುತ್ತ ಸಮಾಧಾನ ಚಿತ್ತದಿಂದಲೇ ತಾವು ಕಂಡುಕೊಂಡ ನಿಜದ ನಿಲವಿಗೆ ಬದ್ಧರಾಗಿರುತ್ತಿದ್ದರು. ಮನುಷ್ಯನ ಒಳಿತಿಗಾಗಿ ಅವರು ಎಂಥ ಅವಮಾನವನ್ನೂ ಎದುರಿಸಲು ಸಿದ್ಧರಾಗಿದ್ದರು. ಮನುಷ್ಯತ್ವಕ್ಕಿಂತ ಯಾವುದೇ ಧರ್ಮ, ಜಾತಿ, ಕ್ರಾಂತಿ ಮತ್ತು ದೇಶ ಕೂಡ ದೊಡ್ಡದಲ್ಲ ಎಂಬುದರಲ್ಲಿ ಅವರಿಗೆ ಅಚಲವಾದ ವಿಶ್ವಾಸವಿತ್ತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 75ನೇ ಕಂತು ನಿಮ್ಮ ಓದಿಗೆ
ಮಲ್ಲೇಶ್ವರಂನ ಮತ್ತಷ್ಟು ನೆನಪುಗಳು…: ಎಚ್. ಗೋಪಾಲಕೃಷ್ಣ ಸರಣಿ
ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಒಂದು ರೀತಿಯ ಶಿಸ್ತು, ಒಪ್ಪ ಓರಣ ಎದ್ದು ಕಂಡರೆ ಯಶವಂತಪುರದ ಮಾರುಕಟ್ಟೆ ಒಂದು ರೀತಿ ಅವ್ಯವಸ್ಥೆ ಮತ್ತು ಕೊಳಕು. ಅಲ್ಲಿನ ಶಿಸ್ತು ಒಪ್ಪ ಓರಣ ಇಲ್ಲಿ ಮಿಸ್ಸಿಂಗ್. ಆದರೂ ಎರಡೂ ಮಾರುಕಟ್ಟೆ ನೋಡಿರುವ ನನ್ನಂತಹವರಿಗೆ ಮಲ್ಲೇಶ್ವರದ ಮಾರುಕಟ್ಟೆ ಅಷ್ಟಾಗಿ ಹಿಡಿಸದು. ಕಾರಣ ಎರಡೂ ಮಾರುಕಟ್ಟೆ ನೋಡಿರುವುದು ಮತ್ತು ಬೆಲೆ ಇಲ್ಲಿ ಮುಖ್ಯ ಪಾತ್ರ. ಇದೇ ರೀತಿಯ ಪರಿಸ್ಥಿತಿ ನಾನು ನೋಡಿರುವುದು ಎಂದರೆ ಗಾಂಧಿ ಬಝಾರ್ ಮಾರುಕಟ್ಟೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಬದುಕಿನ ಹುಡುಕಾಟ ಜಾರಿಯಲ್ಲಿದೆ: ರಾಮ್ ಪ್ರಕಾಶ್ ರೈ ಕೆ ಸರಣಿ
ಆತ ಪ್ರೀತಿಸಿದ ಹುಡುಗಿಯನ್ನು ಮನೆಯವರು ನಾನಾ ಕಾರಣಗಳಿಂದ ನಿರಾಕರಿಸಿದರೆಂದು ಕೋಪಗೊಂಡು ಮನೆ ಬಿಟ್ಟು ಹೋಗುತ್ತಾನೆ. ಅಧ್ಯಾತ್ಮ ವಲಯದತ್ತ ಆಕರ್ಷಿಸಲ್ಪಟ್ಟು ವಿವಿಧ ಧರ್ಮ, ಮತಗಳ ಮೊರೆ ಹೋಗುತ್ತಾನೆ. ಆದರೆ ಎಲ್ಲಾ ಮತಗಳ ಹಿಂಬಾಲಕರು ದೇವರೇ ಭಯಗೊಳ್ಳುವಷ್ಟು ಪ್ರಚಂಡರಾದ್ದರಿಂದ ಅವೆಲ್ಲವನ್ನೂ ತ್ಯಜಿಸಿ, ಬಿಳಿ ವಸ್ತ್ರಧಾರಣೆಯ ಮಾಡಿ ಸನ್ಯಾಸಿಯಾಗುತ್ತಾನೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ