ಎಂದೂ ಮುಗಿಯದ ಯುದ್ಧ “ಮೀಟೂ”: ವೈಶಾಲಿ ಹೆಗಡೆ ಅಂಕಣ
“ಶತಮಾನಗಳಿಂದ ನಾವು ಹುಡುಗಿಯರಿಗೆ ಹೇಗೆ ಶೋಷಣೆಯನ್ನು “ನಿಭಾಯಿಸಬೇಕು” ಎಂಬ ಶಿಕ್ಷಣ ಕೊಡುತ್ತೇವೆಯೇ ಹೊರತು ಹೇಗೆ ತಿರುಗಿ ಬೀಳಬೇಕೆಂದು ಕಲಿಸುವುದೇ ಇಲ್ಲ. ಹಾಲಿವುಡ್ ನಲ್ಲಿ ಹುಟ್ಟಿಕೊಂಡ ಈ ಹ್ಯಾಶ್ ಟ್ಯಾಗ್ ಇಂದು ಹಲವು ಬಗೆಯ ಶೋಷಣೆಯ ವಿರುದ್ಧದ ಹ್ಯಾಶ್ ಟ್ಯಾಗ್ ಆಗಿ ರೂಪಾಂತರಗೊಳ್ಳುತ್ತಿದೆ.”
ಇಳೆಯ ಹಾಗೆ ಮಳೆಗೆ ಕಾಯುತ್ತಾ: ರೂಪಶ್ರೀ ಕಲ್ಲಿಗನೂರ್ ಅಂಕಣ
“ನಾವಿಷ್ಟಪಟ್ಟ ಸ್ಥಳಕ್ಕೆ ಆದಾಗಲೊಮ್ಮೆ ಭೇಟಿಕೊಡುತ್ತೇವೆ ಅನ್ನೋದು ನಿಜ. ಆದ್ರೆ ಆ ಸ್ಥಳ ಮೊದಲ ಸಲ ಹೋದಾಗ ಇದ್ದಷ್ಟೇ ಚಂದವಾಗಿ ಇದ್ಯ? ಕಳೆದ ಸಲ ಹೋದಾಗ ಅದರ ಪರಿಸ್ಥಿತಿ ಏನಾಗಿತ್ತು? ಒಮ್ಮೆ ಎರಡೂ ಪ್ರವಾಸವನ್ನು ನೆನಪಿಗೆ ತಂದುಕೊಳ್ಳಿ. ಮೊದಲಿಗೆ ಹೋದಾಗ ಆಗಿದ್ದ ಸಂತೋಷ ಮತ್ತೆಮತ್ತೆ ಹೋದಾಗಲೂ ಘಟಿಸುತ್ತಿದೆಯೆಂದರೆ ಆ ಸ್ಥಳವಿನ್ನೂ ಮನುಷ್ಯನ ಅಟ್ಟಹಾಸಕ್ಕೆ ಸಿಕ್ಕಿಹಾಕಿಕೊಂಡಿಲ್ಲ ಎಂದರ್ಥ. ಆದ್ರೆ ಹಾಗೆ ಯಾವುದಾದ್ರೂ ಸ್ಥಳ ಕೇವಲ ಹತ್ತು ವರ್ಷ ಹಿಂದಿದ್ದಷ್ಟೇ ಪ್ರಶಾಂತವಾಗಿ, ಸ್ವಚ್ಛವಾಗಿ, ಚಂದದಿಂದ ಉಳಿದುಕೊಂಡಿರೋದು ಸಾಧ್ಯವೇ ಇಲ್ಲ ಅನ್ನಬಹುದು.”
ಹೆಪ್ಪುಗಟ್ಟಿದ ಎದೆಯೊಳಗಿನ ಉರಿ:ಆಶಾಜಗದೀಶ್ ಅಂಕಣ
“ಕವಿತೆಯ ಧ್ಯಾನಕ್ಕೆ ಕೂತಿರುವ ಅವರ ಧ್ಯಾನ ಇನ್ನಷ್ಟು ಸ್ಫುಟಗೊಂಡರೆ ಅವರಿಂದ ಇನ್ನೂ ಅದ್ಭುತವಾದ ಕವಿತೆಗಳನ್ನು ನಾವು ನಿರೀಕ್ಷಿಸಬಹುದು. ಇಲ್ಲಿನ ಬಹುಪಾಲು ಕವಿತೆಗಳು ಈ ಮಾತನ್ನು ಒಪ್ಪುತ್ತವೆ. ಗಪದ್ಯಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿವೆಯಾದರೂ ಪದ್ಯವೇ ಆಗದಿರುವ ಗದ್ಯದ ತುಣುಕುಗಳು ಕಾವ್ಯದ ಭಾಗವಾಗಲಾರವು. ಅಥವಾ ಕಾವ್ಯವೆನ್ನುವ ಸಣ್ಣ ಭ್ರಮೆಯನ್ನು ಹುಟ್ಟಿಸುವಲ್ಲಿಯೂ ಸೋಲುತ್ತವೆ. ಈ ಒಂದು ಎಚ್ಚರಿಕೆ ಕವಿಗಿರಬೇಕಾಗುತ್ತದೆ.”
ಜಾನ್ ಮ್ಯೂರ್ ಮತ್ತು ಆತನ ಸಾಹಸ ಗಾಥೆಗಳು: ಡಾ.ವಿನತೆ ಶರ್ಮ ಅಂಕಣ
“ಜಾನ್ ಕೈಗೊಂಡ ಅತಿಸಾಹಸಗಳಲ್ಲಿ ಹಲವನ್ನು ಹೆಸರಿಸಬೇಕು ಎಂದು ಆಯ್ದುಕೊಂಡರೆ ಅವರು ಎರಡೂ ಧ್ರುವಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ತಲುಪಿದ್ದು, ಆಸ್ಟ್ರೇಲಿಯಾದ ಉಪ್ಪಿನ ಸರೋವರಗಳ ಮೇಲ್ಮೈ ಮೇಲೆ ನೂರಾರು, ಮರುಭೂಮಿ ಉದ್ದ ಮತ್ತು ಅಗಲಕ್ಕೂ ಹಲವಾರು ಬಾರಿ ಸಾವಿರಾರು ಕಿಲೋಮೀಟರ್ ನಡಿಗೆಯ ಪಯಣಗಳು, ಸಮುದ್ರ ದೋಣಿಯಲ್ಲಿ ತಿಂಗಳಾನುಗಟ್ಟಲೆ ಪಯಣಗಳು, ಜೊತೆಗೆ ಪರ್ವತಾರೋಹಣ. ಅವುಗಳಲ್ಲಿ ಅನೇಕವು ಬಹು ಅಪಾಯಕಾರಿಯಾದವು.”
ಬಾಡುವಿನ ಹಿಂದೆ ಕಾಡು ಹಾದಿಯಲ್ಲಿ: ಪ್ರಸಾದ್ ಶೆಣೈ ಕಥಾನಕ
“ಮಳೆ ಬೀಳುತ್ತಿರುವಾಗ ಮಳೆಗೆ ನೆನೆದು ಕಾಡು ಸುತ್ತೋದು ಎಷ್ಟು ಚೆಂದವೋ, ಮಳೆ ನಿಂತ ಮೇಲೆ ಅಳು ನಿಲ್ಲಿಸಿದ ಮಗುವಿನ ಹಾಗಿರುವ ಮುಗ್ದ ಕಾಡನ್ನು ನೋಡುವ, ಅನುಭವಿಸುವ, ಮೈಯೆಲ್ಲಾ ವಿಚಿತ್ರ ಥಂಡಿಯಲ್ಲಿ ಕಳೆದುಹೋಗುವ ಕ್ಷಣವಿದೆಯೆಲ್ಲಾ ಅದರಷ್ಟು ಸುಖ ಜೋರಾಗಿ ಮಳೆ ಬಂದರೂ ಆಗಲಿಕ್ಕಿಲ್ಲ ಅನ್ನಿಸುತ್ತದೆ ಕೆಲವೊಮ್ಮೆ. ಹಾವಿನಷ್ಟೇ ಸಪೂರಾದ ದಾರಿ, ಸುತ್ತಲೂ ದಟ್ಟ ಮರಗಳ ಹಸುರು ಜೋರಾದ ಗಾಳಿಗೆ ಉದುರಿ ಬಿದ್ದ ಹೂವ ರಾಶಿ..”
ವಿಶ್ವ ಕಪ್ ಮುನ್ನಾದಿನ ಲಾರ್ಡ್ಸ್ ಮೈದಾನದಿಂದ:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್
“ಲಾರ್ಡ್ಸ್, ಕ್ರಿಕೆಟಿನ ತವರು ಎಂದು ಶತಮಾನದಿಂದ ಕರೆಸಿಕೊಳ್ಳುತ್ತ ಹೊಗಳಿಕೆ ಪ್ರೀತಿ ಮತ್ತು ಹೊಣೆಗಾರಿಕೆಯ ಭಾರ ಹೊತ್ತ ಮೈದಾನ. ಲಾರ್ಡ್ಸ್ ನಲ್ಲಿ ಆಡುವುದು ಅಲ್ಲೊಂದು ಬ್ಯಾಟಿಂಗ್ ಅಥವಾ ಬೌಲಿಂಗ್ ಸಾಧನೆ ಗೈಯುವುದು ಕ್ರಿಕೆಟಿಗರಿಗೂ ಮಹತ್ತರ ವಿಷಯ. ಪ್ರೇಮಿಗಳಿಗೆ ಕಾಶ್ಮೀರದ ಕಣಿವೆಯಲ್ಲೋ, ಸ್ವಿಟ್ಜರ್ಲ್ಯಾಂಡಿನ ಹಿಮ ಶಿಖರದಲ್ಲೋ ಸಿಗುವ ರೋಮಾಂಚನವನ್ನು ಲಾರ್ಡ್ಸ್ ಮೈದಾನ…”
ರಂಗನಬೆಟ್ಟದ ಕುಸುಮಾಲೆಯರ ಖುಷಿಗಳ ಕುರಿತು:ಮಧುರಾಣಿ ಅಂಕಣ
“ಪೋಡಿಗೆ ಹೋಗುವ ದಾರಿಯಲ್ಲಿನ ಇಚ್ಚಿಮರದ ಬಸಪ್ಪನ ದೇಗುಲವು ತಪಸ್ಸಿಗೆ ಕುಳಿತಂತೆ ತೋರುತ್ತಿತ್ತು. ಆ ಒಂಟಿ ಗುಡಿಯ ಮೇಲೆ ನನಗೋ, ಇನ್ನಿಲ್ಲದಷ್ಟು ಮೋಹ ಹುಟ್ಟಿತು. ಬಸಪ್ಪನಿಗೆ ಗದ್ದಲ ಆಗುವುದಿಲ್ಲವಂತೆ. ಹಾಗಾಗಿ ಹೆಂಗಳೆಯರ್ಯಾರೂ ಅಲ್ಲಿ ತಮ್ಮ ಮನದ ಹಾಡು ಬಿಚ್ಚಿಡುವುದಿಲ್ಲ. ಹಾಗಾಗಿ ಹಾಡಿಯ ಎದೆಯೊಳಗಿನ ಹಾಡುಗಳು ರಂಗನಿಗೆ ಕೇಳಿದ್ದು ಹೇಗೋ ನನಗೆ ಆಶ್ಚರ್ಯವಾಯ್ತು. ಮುಕ್ತವಾಗಿ ಗಾಳಿ-ಬೆಳಕಿಗೆ ತೆರೆದುಕೊಂಡು ಬದುಕುವ ಜನರ…”
ಕೀಟಹಾರಿ ನಾಚಿಕೆ ಮುಳ್ಳು ಮತ್ತು ಘಾಟಿ ಕೋಳಿ: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥಾನಕ
“ಒಮ್ಮೆ ಹೊರ ಜಗಲಿಯಲ್ಲಿ ಕುಳಿತು ಸುಮ್ಮನೆ ರಸ್ತೆ ನೋಡುತ್ತಿರಬೇಕಾದರೆ ಅಚಾನಕ್ಕಾಗಿ ಕೋಳಿ ವಿಚಿತ್ರವಾಗಿ ಶಬ್ದ ಹೊರಡಿಸಲಾರಂಭಿಸಿತು. ನೋಡ ನೋಡುತ್ತಿದ್ದಂತೆ ಅನತಿ ದೂರದಲ್ಲೇ ಹದ್ದೊಂದು ನೆಲದ ಮಟ್ಟಕ್ಕೆ ಹಾರಿದ್ದು ಕಂಡಿತು. ಮರಿಗಳು ಅವಕ್ಕಾಗಿ ಹೇಂಟೆಯ ಹೊಟ್ಟೆಯೊಳಗಡೆ ಮುದುಡಿಕೊಂಡವು. ಎರಡು ಮರಿಗಳು ತುಂಬಾ ದೂರದಲ್ಲಿದ್ದರಿಂದ ಅವುಗಳಿಗೆ ಕೂಡಿಕೊಳ್ಳಲಾಗಲಿಲ್ಲ.”
ಅಮ್ಮಂದಿರ ತೋಳ ಕೂಸುಗಳು: ಡಾ. ವಿನತೆ ಶರ್ಮಾ ಅಂಕಣ.
“ಅವರಿಗೆ ಸಮಾಧಾನ ಮಾಡುತ್ತ ನಾನು ಆಕೆಯೊಡನೆ ಸಂಭಾಷಣೆ ನಡೆಸುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಓಡಾಡುತ್ತಾ ಆಟವಾಡುತ್ತಿದ್ದ ಮಗು ನಮ್ಮ ಬಳಿ ಬಂತು. ಆಶ್ಚರ್ಯವೆಂಬಂತೆ ತಾಯಿಯ ಕಡೆ ತಿರುಗದೆ ನನ್ನ ಬಳಿ ಬಂದು ತೊಡೆಹತ್ತಿ ಅಪ್ಪಿಕೊಂಡು ಅದರ ಭಾಷೆಯಲ್ಲಿ ಅದೇನನ್ನೋ ಹೇಳಿ ನಕ್ಕಿತು. ದತ್ತು ತಾಯಿಯ ಕಣ್ಣಲ್ಲಿ ನೀರು!! ಇಲ್ಲಿಯವರೆಗೂ ಒಂದು ಬಾರಿಯೂ ಮಗು ತಾನೇ ತಾನಾಗಿ ಬಂದು ಆಕೆಯನ್ನು ಅಪ್ಪಿಕೊಂಡಿಲ್ಲ ಎಂದು ಹೇಳುತ್ತಾ ಆಕೆ ಬೇಸರಿಸಿಕೊಂಡರು.”









