Advertisement

ಪುಸ್ತಕ ಸಂಪಿಗೆ

ಕುಪ್ಪಳ್ಳಿಯಲ್ಲಿ ಕೆಟಿಎಸ್ ಜೊತೆ…

ಕುಪ್ಪಳ್ಳಿಯಲ್ಲಿ ಕೆಟಿಎಸ್ ಜೊತೆ…

ಪೂರ್ಣಚಂದ್ರರ ಆತ್ಮೀಯರಲ್ಲೊಬ್ಬರಾದ ಕೆ.ಟಿ. ಅವರ ಖಾಸಾ ಗೆಳೆಯ ಕೂಡ. ವಿಪರ್ಯಾಸ ಎಂದರೆ ಇದೇ ನೋಡಿ, ಕುವೆಂಪು ತೀರಿಕೊಂಡಾಗ ಇದೇ ತೇಜಸ್ವಿ ಜತೆಗೂಡಿ ಕವಿಶೈಲದ ಕುವೆಂಪು ಸ್ಮಾರಕ ಕಲ್ಪನೆಯನ್ನು ಸಾಕಾರಗೊಳಿಸಿದ್ದವರು ಕೆ.ಟಿ. ಮುಂದೆ ತೇಜಸ್ವಿಯ ಸ್ಮಾರಕವನ್ನೂ ಸ್ವತಃ ಕೆ.ಟಿ. ನಿರ್ಮಾಣ ಮಾಡುತ್ತಾರೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ದುರಾದೃಷ್ಠವಶಾತ್ ತೇಜಸ್ವಿ ಸಾವು ಅವರ ಸ್ಮಾರಕ ಕಲ್ಪನೆಯನ್ನೂ ಕೆ.ಟಿ.ಯೇ ಮಾಡುವಂತಾಗಿದ್ದು ವಿಪರ್ಯಾಸ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ಭದ್ರಾ ದಂಡೆಯಲ್ಲಿ ತೇಜಸ್ವಿಯೊಂದಿಗೆ ಮೀನು ಹಿಡಿದಿದ್ದು…

ಭದ್ರಾ ದಂಡೆಯಲ್ಲಿ ತೇಜಸ್ವಿಯೊಂದಿಗೆ ಮೀನು ಹಿಡಿದಿದ್ದು…

ಹೀಗೆ ತೇಜಸ್ವಿ ಮನೆ ಕಟ್ಟುವಾಗ ಪ್ರೊಫೆಸರ್ ಬಂದಿದ್ದರು. ತೇಜಸ್ವಿ ಹಕ್ಕಿಗಳನ್ನು ವೀಕ್ಷಿಸಲು ಬೈನಾಕುಲರ್ ಇಟ್ಟುಕೊಂಡಿದ್ದರು. ಹೀಗೆ ಒಂದು ದಿನ ಕಾರಿನಲ್ಲಿ ಎಲ್ಲರೂ ಹೋಗುತ್ತಿದ್ದೆವು. ಪ್ರೊಫೆಸರ್ ಬೈನಾಕ್ಯೂಲರನ್ನು ತೇಜಸ್ವಿಯಿಂದ ಪಡೆದುಕೊಂಡು ಪಕ್ಷಿ ನೋಡುತ್ತೇನೆ ಎಂದು ಪಡೆದುಕೊಂಡರು. ಸಾಕಷ್ಟು ಏನೇನೋ ಮಾಡಿದರೂ ಹಕ್ಕಿಗಳು ಪ್ರೊಫೆಸರ್‌ಗೆ ಹತ್ತಿರದಿಂದ ಕಾಣಿಸಲಿಲ್ಲ. ಇದರಿಂದ ಬೇಸತ್ತ ಪ್ರೊಫೆಸರ್. ‘ಇದ್ರಲ್ಲಿ ಏನೂ ಕಾಣೋದೆ ಇಲ್ವಲ್ರಿ’ ಎಂದು ತೇಜಸ್ವಿ ಕೈಗೆ ಕೊಟ್ಟರು. ತೇಜಸ್ವಿ ತೆಗೆದುಕೊಂಡು ಒಮ್ಮ ಕಾರಿನಿಂದ ಆಚೆ ವೀಕ್ಷಿಸಿ ‘ರೀ ಪ್ರೊಫೆಸರ್ ನಿಮ್ಗೆ ತಿ.. ಕಡಿಯುತ್ತಾ..ʼ ಎಂದರು. ನನಗೋ ನಗು ತಡೆದುಕೊಳ್ಳಲಾಗಲಿಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ಮನೆ ಕಟ್ಟುವಾಗ ‘ಸೆಂಟರ್ ಲೈನ್’

ಮನೆ ಕಟ್ಟುವಾಗ ‘ಸೆಂಟರ್ ಲೈನ್’

ಮನೆ ಕಟ್ಟುವ ಕಾರ್ಯಕ್ರಮ ಪ್ರಾರಂಭವಾಯಿತು. ಒಂದು ದಿನ ಮೇಸ್ತ್ರಿ ಬಂದವನೇ, ‘ಸೆಂಟರ್ ಲೈನ್’ ಕೊಡಿ ಎಂದ.
ನನಗೋ ಹಾಗಂದರೆ ಏನು ಎಂದು ಗೊತ್ತಿಲ್ಲ. ತೇಜಸ್ವಿಯವರನ್ನು ಕೇಳಿದೆ. ‘ನನಗೂ ಗೊತ್ತಿಲ್ಲ ಶಿವ’ ಎಂದರು. ಬೇರೆಯವರನ್ನು ಕೇಳಿದರೆ ಎಲ್ಲಿ ಏನಂದುಕೊಳ್ಳುತ್ತಾರೋ ಎಂಬ ನಾಚಿಕೆ. ಮೇಸ್ತ್ರಿಯನ್ನು ಕರೆದು ಕೂರಿಸಿಕೊಂಡು ಒಂದು ವಾರ ತಡೆಯಿರಿ ಎಂದೆ. ಸಾಕಷ್ಟು ಪುಸ್ತಕ ರೆಫರ್ ಮಾಡಿಕೊಂಡೆ. ನಾನು ಕೂಡ ಎಂಜಿನಿಯರ್ ಓದಿದ್ದರಿಂದ ಬೇಗ ಕಂಡು ಹಿಡಿದುಕೊಂಡೆ. ಅವರ ಕಲ್ಪನೆಯಂತೆ ಮನೆ ಶುರು ಮಾಡಿ ಬೇಗವೇ ಮುಗಿಸಿದೆವು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ತೇಜಸ್ವಿಯ ಫೋಟೋ ತೆಗೆಯಲಿಲ್ಲ…

ತೇಜಸ್ವಿಯ ಫೋಟೋ ತೆಗೆಯಲಿಲ್ಲ…

ಹೀಗೆ ಮಾತನಾಡುತ್ತಿದ್ದಾಗ, ‘ಈ ಸರಣಿಗೆ ತೇಜಸ್ವಿ ಫೋಟೋ ಹಾಕಿಕೊಳ್ಳಬೇಕು, ಕತೆಗಾರ ಅಬ್ದುಲ್ ರಶೀದ್ ಸಾರ್, ನೀವು ತೆಗೆದಿರುವ ತೇಜಸ್ವಿ ಫೋಟೋ ಕೇಳುತ್ತಿದ್ದಾರೆ ಯಾವುದಾದರೂ ಕೊಡಿ’ ಎಂದೆ. ಅದಕ್ಕವರು ಒಂದು ಕ್ಷಣ ಯೋಚಿಸಿ ನಕ್ಕರು. ‘ಏಕೆ ಸಾರ್ ತೆಗೆದಿಲ್ಲವಾ….?’ ಎಂದು ಮತ್ತೆ ಕೇಳಿದೆ. ‘ಏ ಇಲ್ಲಾ ಕಣೋ ತೇಜಸ್ವಿ ಸಾವಿರಾರು ಫೋಟೋ ತೆಗೆದಿದ್ದಾರೆ. ನಾನೂ ಕೂಡ ತೆಗೆದಿದ್ದೇನೆ. ಎಂತೆಂಥಹವರ ಫೋಟೋ ತೆಗೆದಿದ್ದೇವೆ. ಆದರೆ ಎಂದೂ ನಮ್ಮ ನಮ್ಮ ಫೋಟೋಗಳನ್ನು ಎಂದಿಗೂ ತೆಗೆದುಕೊಳ್ಳಲಿಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ಕೆಟಿಎಸ್‌-ತೇಜಸ್ವಿ ಸ್ನೇಹಕ್ಕೆ ಕಾರಣರಾದವರು ಪ್ರೊಫೆಸರ್ ನಂಜುಂಡಸ್ವಾಮಿ

ಕೆಟಿಎಸ್‌-ತೇಜಸ್ವಿ ಸ್ನೇಹಕ್ಕೆ ಕಾರಣರಾದವರು ಪ್ರೊಫೆಸರ್ ನಂಜುಂಡಸ್ವಾಮಿ

ತೇಜಸ್ವಿ ಜತೆ ಮಾತನಾಡುವುದೇ ಒಂದು ನವೀನ ಅನುಭವ. ಮತ್ತು ತನಗೆ ಗೊತ್ತಿಲ್ಲದ ಒಂದು ವಿಚಾರ ನೋಡಿದರೆ ಅಥವಾ ಗಮನಿಸಿದರೆ ಅವರು ಪಡುತ್ತಿದ್ದ ಅಚ್ಚರಿ, ಅಗಾಧತೆಯನ್ನು ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಹೊಸ ವಿಚಾರವನ್ನು ಕಾತರ, ಕುತೂಹಲದಿಂದ ನೋಡುವ ಅವರ ಕೌತುಕವೇ ಅವರನ್ನು ದೊಡ್ಡ ಮನುಷ್ಯನನ್ನಾಗಿಸಿತು. ಹೊಸತನ್ನು ಕಂಡಿದ್ದೇ ‘ಏ ನೋಡೋ ಶಿವ ಹೇಗಿದೆ!’ ಎಂದು ಅಚ್ಚರಿಯಿಂದ ನೋಡುವ ಆ ನೋಟವನ್ನು ನೆನಪಿಸಿಕೊಂಡರೇ ಅವರ ಜೀವನ ಪ್ರೀತಿಯ ಬಗ್ಗೆ ಕೌತುಕ ಹುಟ್ಟಿಸುತ್ತದೆ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ಕೆಟಿಎಸ್ ಜೊತೆ ನನ್ನ ಒಡನಾಟ

ಕೆಟಿಎಸ್ ಜೊತೆ ನನ್ನ ಒಡನಾಟ

ಅವರು ಅಷ್ಟು ದೊಡ್ಡ ಸಾಹಿತಿ ಆಗಿದ್ದರೂ ಒಂದಷ್ಟು ಹಮ್ಮು ಬಿಮ್ಮಿಲ್ಲದೆ, ಫೋಟೋಕ್ಕೆ ನಿಂತುಕೊಂಡರು. ಹಾಗೆ ಪೇಯಿಂಟಿಂಗ್ ಬಗ್ಗೆ ಅವರು ಕೇಳಿದ ಪ್ರಶ್ನೆಗಳು ಅವರು ಆ ವಯಸ್ಸಿನಲ್ಲೂ ತಿಳಿದುಕೊಳ್ಳುವ ಹಂಬಲ ಮತ್ತು ಗೊತ್ತಿಲ್ಲದನ್ನು ಕೇಳಿ ತಿಳಿದುಕೊಳ್ಳುವ ಅವರ ಪ್ರಾಮಾಣಿಕತೆ ಬಗ್ಗೆ ನನಗೆ ದಿಗ್ಭ್ರಮೆ ಹುಟ್ಟಿಸಿತ್ತು. ಹೀಗೆ ತೇಜಸ್ವಿಗೆ ಯಾರೋ ಹೇಳಿದ್ದರಂತೆ ಟೀ ವಿಥ್ ಬ್ರಾಂಡಿ ಚೆನ್ನಾಗಿರುತ್ತದೆ ಎಂದು. ತೇಜಸ್ವಿಗೆ ಅದೇನೋ ಕುತೂಹಲ. ಒಂದು ದಿನ ನನ್ನ ಕರೆದು ‘ಟೀ ವಿಥ್ ಬ್ರಾಂಡಿ ಚೆನ್ನಾಗಿರುತ್ತದಂತಲ್ಲಾ..? ಕುಡಿಯೋಣ್ವಾ’ ಎಂದರು. ನನಗೋ ನಗು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

read more
ಕೆ.ಟಿ. ಶಿವಪ್ರಸಾದ್ ಎಂಬ ಕಲಾವಿದನ ನೆನಪು….

ಕೆ.ಟಿ. ಶಿವಪ್ರಸಾದ್ ಎಂಬ ಕಲಾವಿದನ ನೆನಪು….

ಖ್ಯಾತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನೆನ್ನೆ ತೀರಿಕೊಂಡರು. ಅಂತರ್‌ರಾಷ್ಟ್ರೀಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದರು, ತಮ್ಮ ಕಲೆ, ತೀರಾ ಹತ್ತಿರದ ಸ್ನೇಹಿತರೊಂದಿಗಿನ ಒಡನಾಟದ ಹೊರತು, ತಮ್ಮ ಬದುಕನ್ನು ಬದುಕಿದ ರೀತಿ ಬಹಳ ಭಿನ್ನವಾಗಿತ್ತು. ಪೂರ್ಣಚಂದ್ರ ತೇಜಸ್ವಿಯವರ ಆಪ್ತ ಒಡನಾಡಿಯೂ ಆಗಿದ್ದ ಇವರ ನೆನಪುಗಳನ್ನು, ಅವರ ಆಪ್ತ ನಾಗರಾಜ್‌ ಹೆತ್ತೂರು “ಶಿವ ಮೇಡ್‌ ಬೈ ತೇಜಸ್ವಿ” ಪುಸ್ತಕದ ಹೆಸರಿನಲ್ಲಿ ಪ್ರಕಟಿಸಿದ್ದರು. ಈ ಕೃತಿಯ ಆಯ್ದ ಭಾಗಗಳು ನಿಮ್ಮ ಓದಿಗೆ ಇಲ್ಲಿವೆ.

read more
`ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ’:  ಎಸ್.ಎಲ್.‌ ಭೈರಪ್ಪ ಓದುಗರ ಸ್ಪಂದನ ಕೃತಿಯ ಬರಹ

`ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ’: ಎಸ್.ಎಲ್.‌ ಭೈರಪ್ಪ ಓದುಗರ ಸ್ಪಂದನ ಕೃತಿಯ ಬರಹ

ಒಬ್ಬ ಲೇಖಕನ ಬರೆಹದಲ್ಲಿ ಮುರಿಯುವ ದಾಂಪತ್ಯವನ್ನು ಮತ್ತೆ ಬೆಸೆಯುವ ಶಕ್ತಿ ಇರುವುದನ್ನು ಕಂಡು ನಾನು ವಿಸ್ಮಿತನಾದೆ. ಮೈಸೂರಿನಲ್ಲಿರುವ ನನ್ನ ಪತ್ರಕರ್ತ ಗೆಳೆಯ ಗಣೇಶ ಅಮೀನಗಡ ಅವರಿಗೆ ಫೋನ್ ಮಾಡಿ ವಿಷಯ ವಿವರಿಸಿದೆ. ಅವರು ಭೈರಪ್ಪನವರನ್ನು ಕಂಡು ವಿಷಯ ತಿಳಿಸುವುದಾಗಿ ಹೇಳಿದರು. ನಂತರ ಉದ್ಯಮಿ, ಅವರ ಮಗಳು ಮತ್ತು ತಾಯಿ ಮೈಸೂರಿಗೆ ಹೋಗಿ ಭೈರಪ್ಪನವರನ್ನು ಭೇಟಿಯಾದರು. ಐದಾರು ತಿಂಗಳುಗಳ ನಂತರ ಉದ್ಯಮಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ನನಗೆ ಭೇಟಿಯಾದರು. ಮಗಳ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿದೆಯೆಂದು ಅವರು ಹೇಳಿದರು. ಭೈರಪ್ಪನವರ ಮಾಂತ್ರಿಕ ಬರೆಹದ ಶಕ್ತಿಯ ಬಗ್ಗೆ ನನಗೆ ನಿಜವಾಗಿಯೂ ಅಚ್ಚರಿಯಾಯಿತು.
ಕೆ. ಸತ್ಯನಾರಾಯಣ ಸಂಪಾದಿತ “ಎಸ್.ಎಲ್.‌ ಭೈರಪ್ಪ ಓದು-ಓದುಗರು” ಕೃತಿಯ ಡಾ. ಸರಜೂ ಕಾಟ್ಕರ್ ಬರಹ ನಿಮ್ಮ ಓದಿಗೆ

read more
“ಲಯ”ದ ಜಾಡು ಹಿಡಿದು: ಸುಭದ್ರಾ ಹೆಗಡೆ ಬರಹ

“ಲಯ”ದ ಜಾಡು ಹಿಡಿದು: ಸುಭದ್ರಾ ಹೆಗಡೆ ಬರಹ

ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ, ಕೆಡುಕಿನೆಡೆಗೆ ಸಾಗಬಾರದೆಂಬ ಕಳಕಳಿ, ಪರೋಪಕಾರ ಮನೋಭಾವ ಎಲ್ಲಾ ಪಾತ್ರಗಳಲ್ಲಿ ಅಡಕವಾಗಿರುವ ಮೂಲದ್ರವ್ಯ. ಹಾಗಾಗಿ ವಿದೇಶಿಯಳಾದರೂ ಸೋಫಿಯಾ ಮತ್ತವಳ ಮಗನನ್ನು ತಮ್ಮೊಳಗೆ ಒಬ್ಬನಂತೆ ಭಾವಿಸುತ್ತಾರೆ. ಗಂಗಾಳ ವಿಧವೆ ಮಗಳಿಗೊಂದು ಬದುಕು ಕಟ್ಟಿಕೊಡುವ ಹಿರಿಯಗುಣ ಇವರೆಲ್ಲರಲ್ಲಿ ಕಾಣಸಿಗುತ್ತದೆ. ಸಹಬಾಳ್ವೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಲ್ಲದು ಎನ್ನುವುದೇ ಲಯದಲ್ಲಿ ಕಂಡುಬರುವ ಪ್ರಮುಖ ಅಂಶ. ವಿವಿಧ ರಂಗದಲ್ಲಿ ವಿಭಿನ್ನ ಬದುಕನ್ನು ಕಟ್ಟಿಕೊಂಡ ಉತ್ತಮ ವಿಚಾರಗಳ, ಸಂಸ್ಕಾರ, ಸಂಸ್ಕೃತಿಪ್ರಿಯರ ಸಮಾವೇಶವೇ ಈ ‘ಲಯ’ ಕಾದಂಬರಿಯಲ್ಲಿದೆ.
ಎಲ್.ಎಸ್.‌ ಶಾಸ್ತ್ರಿ ಅವರ “ಲಯ” ಕಾದಂಬರಿ ಕುರಿತು ಸುಭದ್ರಾ ಹೆಗಡೆ ಬರಹ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ