Advertisement
ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

ವಿಜಯಶ್ರೀ ಎಂ. ಹಾಲಾಡಿ ಬರೆದ ಈ ದಿನದ ಕವಿತೆ

ದಡ ತಲುಪಲಿ

ರೇಖೆಗಳನ್ನು ಬಿಡಿಸುತ್ತಿರುವೆ
ತೋಚಿದಂತೆ ಗೀಚಿದಂತೆ
ಬೇಕಾದ ಆಕಾರಗಳು
ಮೂಡುತ್ತವೆಯೋ ಬಿಡುತ್ತವೆಯೋ
ಅದರ ಹಂಗು ಯಾರಿಗಿದೆ
ಎಲ್ಲ ತೊರೆದಾದ ಮೇಲೆ
ನಿರೀಕ್ಷಿಸಿಯೇ ಇರದ
ಚಿತ್ರ ಚಿತ್ತಾರಗಳು
ಧುತ್ತನೆ ಎದುರಾಗಬಹುದೋ
ಮೈಮರೆಸಿ ದಾರಿ ತಪ್ಪಿಸಬಹುದೋ!

ಪುಟಗಳು ಮುಗಿವವರೆಗೆ
ಪೆನ್ನಿನ ಶಾಯಿ ತೀರುವವರೆಗೆ
ಇರುಳು ಕೊನೆಗೊಳ್ಳುವವರೆಗೆ
ನೆರಳು ಬೆಳಕುಗಳ ಕೊರೆದು
ಮೌನ ತೀರವ ಗುರುತಿಸುವಾಸೆ

ನಿರ್ಜನ ರಾತ್ರಿಯುದ್ದಕ್ಕೂ
ನದಿ ಸಾಗರ ಕೊಳ್ಳಗಳು
ಕಾಡು ಕಣಿವೆ ಕರಿ ಮೋಡಗಳು
ಮಳೆಮಾರುತ ಹಿಮಪ್ರವಾಹಗಳು
ಬಡಿ ಬಡಿದು ಅಪ್ಪಳಿಸಿ
ಆಸೆಗಳ ಕುಡಿದುಬಿಡಲಿ
ರೇಖೆಗಳು ಚದುರಿ
ಬಿಂದುಗಳಾಗಿ ಸೀಳಿ
ದಡ ತಲುಪಲಿ!

About The Author

ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು. ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು. ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ