Advertisement

ಸರಣಿ-2

ಪುಸ್ತಕ ಕೊಳ್ಳಲು ಹೋದವನಿಗೆ ಲೈಬ್ರರಿ ಕೊಟ್ಟವರು: ದರ್ಶನ್‌ ಜಯಣ್ಣ ಸರಣಿ

ಪುಸ್ತಕ ಕೊಳ್ಳಲು ಹೋದವನಿಗೆ ಲೈಬ್ರರಿ ಕೊಟ್ಟವರು: ದರ್ಶನ್‌ ಜಯಣ್ಣ ಸರಣಿ

ಮಾತು ಕಥೆಯೆಲ್ಲ ಮುಗಿದಮೇಲೆ ಕಾರಿನ ಡಿಕ್ಕಿ ಮತ್ತೊಮ್ಮೆ ತೆಗೆಯಲು ಹೇಳಿದರು. ನಾನೂ ಹಾಗೆಯೇ ಮಾಡಲಾಗಿ ಸಾರಾ ಮತ್ತು ಆಲ್ವಿನ್ ದಂಪತಿಗಳು ತಮ್ಮ ಕಾರಿನಿಂದ ಹಲವು ಬ್ಯಾಗುಗಳಲ್ಲಿದ್ದ ನೂರಾರು ಪುಸ್ತಕಗಳನ್ನು ನಾನು ಕೇಳದೆಯೇ ಉಚಿತವಾಗಿ ನನ್ನ ಕಾರಿಗೆ ಸೇರಿಸಿದರು. ನಾನು ಇವೆಲ್ಲವನ್ನೂ ಯಾವಾಗ ಓದುವುದು ಎಂದು ಯೋಚಿಸುತ್ತಿದ್ದೆ! ಬೇಡವೆಂದರೂ ಅವರು ಕೇಳಲಿಲ್ಲ. ಹೀಗೆ ಪುಸ್ತಕ ಕೊಳ್ಳಲು ಹೊರಟವನಿಗೆ ಲೈಬ್ರರಿಯೇ ದೊರಕಿದ್ದು ಅತ್ಯಂತ ಚೇತೋಹಾರಿ ಸಂಗತಿ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿ

read more
ಗೌರಮ್ಮನ ಜತ್ಯಾಗೇ ಬರಾ ಗಣಪ್ಪ: ಸುಮಾ ಸತೀಶ್ ಸರಣಿ

ಗೌರಮ್ಮನ ಜತ್ಯಾಗೇ ಬರಾ ಗಣಪ್ಪ: ಸುಮಾ ಸತೀಶ್ ಸರಣಿ

ನಮ್ಮೂರಿನ್ ಗೌರೀಗೆ ಪೂಜೆ ಮಾಡ್ತಿದ್ದಿದ್ದು ವಸಿ ಜನ್ವೇಯಾ. ಆದ್ರೆ ಗಣೇಶುನ್ನ ಬಿಡಾಕೇಂತ್ಲೇ ಊರಿನ್ ಜನ್ವೆಲ್ಲಾ ಮೇಲ್ ಬಿದ್ದು ಕಾದ್ಕಂಡು ಕುಂತಿರ್ತಿದ್ವಿ. ಐದನೇ ದಿನ ಸಂಜೀ ಹೊತ್ನಾಗೆ, ಗೌರಮ್ಮುಂಗೆ ಮಡ್ಲು ತುಂಬಿ, ಮಗುನ್ನ ಮುಂದಿಟ್ಗಂಡು, ಅವ್ವನ್ನ ಹಿಂದ್ ಕುಂಡ್ರಿಸಿ ಮೆರೋಣಿಗೆ ಹೊಂಡುತಿತ್ತು. ರಾಮ ದ್ಯಾವ್ರ ಗುಡೀಗ್ಳಿಂದ ನಮ್ಮನೆ ಆಸಿ, ಕೆರೆ ಏರಿ ಕಡೆ ಊರ ಗಂಡಸರು, ಹೆಂಗಸರು, ಚಳ್ಳೆ ಪಿಳ್ಳೆಗ್ಳು ಜೈಕಾರ ಹಾಕ್ಕಂಡು ಗಣಪತಿ ಬಾಪ್ಪ ಮೋರ್ಯಾ ಅಂತ ಕಿರುಚ್ಕಂಡು ಅವುರ್ ಹಿಂದಿಂದ್ಲೇ ಸಾಗುಸ್ಕಂಡು ಹೋಗ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಗಣೇಶ ಚತುರ್ಥಿಯ ಆಚರಣೆಯ ಕುರಿತು ಹೇಳುತ್ತಲೇ ಈ ಸರಣಿ ಇಲ್ಲಿಗೆ ಮುಕ್ತಾಯವಾಗುತ್ತದೆ

read more
ಮಲೆನಾಡಿನ ಹಬ್ಬಗಳ ಸಂಭ್ರಮ: ರೂಪಾ ರವೀಂದ್ರ ಜೋಶಿ ಸರಣಿ

ಮಲೆನಾಡಿನ ಹಬ್ಬಗಳ ಸಂಭ್ರಮ: ರೂಪಾ ರವೀಂದ್ರ ಜೋಶಿ ಸರಣಿ

ಅಂಥ ಬಡತನದಲ್ಲೂ, ಅಪ್ಪಯ್ಯ ಉಮೇದಿಯಿಂದ, ಅದಕ್ಕೆ ಬೇಕಾಗುವ ವಿವಿಧ ಬಣ್ಣದ ಹಾಳೆ, ಝರಿ ಎಲ್ಲವನ್ನೂ ಕೊಂಡು ತರುತ್ತಿದ್ದರು. ಆಗೆಲ್ಲ ಈಗಿನಂತೆ ವಿದ್ಯುತ್ ಸೌಲಭ್ಯ ನಮ್ಮಲ್ಲಿ ಇರಲಿಲ್ಲ. ಆದರೂ ಅದೊಂದು ಬಗೆಯ ಬಣ್ಣದ ಹಾಳೆಗಳನ್ನು ಕಲಾತ್ಮಕವಾಗಿ ಕತ್ತರಿಸಿ ಅಂಟಿಸಿ, ಕೇವಲ ಎಣ್ಣೆಯ ದೀಪದಲ್ಲೂ ಆ ಮಂಟಪ ಝಗಮಗಿಸುವಂತೆ ಮಾಡುತ್ತಿದ್ದರು. ಕೈಲಿ ಹಿಡಿದರೆ, ಸಣ, ಸಣ ಎಂದು ಸದ್ದಾಗುವಂತಿದ್ದ ಆ ಬಣ್ಣದ ಕಾಗದವನ್ನು “ಸಂತ್ರ ತಗಡು” ಅಂತ ಕರೆಯುತ್ತಿದ್ದರು. ಅದನ್ನು ಕಲಾತ್ಮಕವಾಗಿ ಕತ್ತರಿಸಿ, ಗುಬ್ಬಿ ಮಾಡಿ, ಮಂಟಪದ ಕಂಬಕ್ಕೆ, ಅಕ್ಕ ಪಕ್ಕದ ಪಟ್ಟಿಗಳಿಗೆ ಅಂಟಿಸಿ, ಅದಕ್ಕೆ ಝರಿಯ ಪುಡಿಯನ್ನು ಅಂಟಿಸಿ, ನಮ್ಮಣ್ಣ ಅದ್ಭುತವಾದ ಝಗಮಗ ಮಂಟಪ ಮಾಡುತ್ತಿದ್ದ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ

read more
ಕಲಾ ಅಸೈನ್‌ಮೆಂಟ್ ಪುರಾಣ!!!: ಬಸವನಗೌಡ ಹೆಬ್ಬಳಗೆರೆ ಸರಣಿ

ಕಲಾ ಅಸೈನ್‌ಮೆಂಟ್ ಪುರಾಣ!!!: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಈಗಿನಂತೆ ಇರಲಿಲ್ಲ. ಸಣ್ಣಪುಟ್ಟ ತಪ್ಪಿಗೂ ಅಂಕಗಳನ್ನು ಕಳೆಯಲು ನೋಡಲಾಗುತ್ತಿತ್ತು!! ಆಗ ತಿಂಗಳಿಗೊಮ್ಮೆ ಕಿರುಪರೀಕ್ಷೆಗಳು ಇರಲಾಗುತ್ತಿತ್ತಾದರೂ ಆ ಅಂಕಗಳನ್ನು ವಾರ್ಷಿಕ ಪರೀಕ್ಷೆಯ ಅಂಕಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಸೆಮಿಸ್ಟರ್ ಪದ್ಧತಿ ಇರಲಿಲ್ಲ. ಇಡೀ ವರ್ಷ ಮಾಡಿದ ಪಾಠಗಳನ್ನು ಒಳಗೊಂಡ ವಾರ್ಷಿಕ ಪರೀಕ್ಷೆ ಮಾಡಲಾಗುತ್ತಿತ್ತು. ಪರೀಕ್ಷೆಯಲ್ಲಿ ಕೇಳಲಾಗುತ್ತಿದ್ದ ಪ್ರಶ್ನೆಗಳೂ ಹೆಚ್ಚು ಅಂಕಗಳಿಗೆ, ದೀರ್ಘ ಉತ್ತರ ಬಯಸುವ ಪ್ರಶ್ನೆಗಳನ್ನೂ ಕೇಳಲಾಗುತ್ತಿತ್ತು. ಆಗ ಪರೀಕ್ಷೆಯಲ್ಲಿ 35 ಅಂಕಕ್ಕಿಂತ ಕಮ್ಮಿ ತೆಗೆದರೆ ಫೇಲ್ ಮಾಡುವ ವ್ಯವಸ್ಥೆಯಿತ್ತು. ಈಗ ಆ ವ್ಯವಸ್ಥೆಯು ಸಂಪೂರ್ಣ ಬದಲಾಗಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ನಾಲ್ಕನೆಯ ಕಂತು

read more
ಜಮೈಕಾ ದೇಶದ ಖ್ಯಾತ ಕವಿ ಮರ್ವಿನ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಜಮೈಕಾ ದೇಶದ ಖ್ಯಾತ ಕವಿ ಮರ್ವಿನ್: ಎಸ್. ಜಯಶ್ರೀನಿವಾಸ ರಾವ್ ಸರಣಿ

ಉಗ್ರಮನಸ್ಸಿನ ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಾಭಿಮಾನಿಗಳಲ್ಲಿ ಅವರ ಜನಪ್ರಿಯತೆ ತುಸು ಕಡಿಮೆಯೆಂದೇ ಹೇಳಬೇಕು, ಮತ್ತು ಅವರು ಎಂದಿಗೂ ಮಹಾನ್ ರಾಜಕೀಯ ಕವಿತೆ, ಪ್ರಚಾರಕರ ಸಾಂದರ್ಭಿಕ ಕವಿತೆ ಅಥವಾ ರಾಜಿಯಾಗದ, ಪಟ್ಟುಬಿಡದ ಕ್ರಾಂತಿಕಾರಿಗಳ ಘೋಷಣೆ ತುಂಬಿದ ಕವನಗಳನ್ನು ಬರೆಯುವುದಿಲ್ಲ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇದು 50ರ ಬರಹ! ಇಂದಿನ ಸರಣಿಯಲ್ಲಿ ಜಮೈಕಾ (Jamaica) ದೇಶದ ಖ್ಯಾತ ಕವಿ ಮರ್ವಿನ್ ಮೊರಿಸ್-ರವರ (Mervyn Morris, 1937) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು

read more
ಗೃಹಪ್ರವೇಶದ ಸೀನುಗಳು….: ಎಚ್. ಗೋಪಾಲಕೃಷ್ಣ ಸರಣಿ

ಗೃಹಪ್ರವೇಶದ ಸೀನುಗಳು….: ಎಚ್. ಗೋಪಾಲಕೃಷ್ಣ ಸರಣಿ

ಬೆಳಕಿಗೆ ಅಂತ ಲಾಟೀನು, ಮೊಂಬತ್ತಿ ಬೆಂಕಿ ಪೆಟ್ಟಿಗೆ ತಂದಿಟ್ಟು ಪೆಟ್ರೋಮಾಕ್ಸ್‌ಗೆ ಹೊರಟೆ. ಅದು ಮೂರುನಾಲ್ಕು ಕಿಮೀ ದೂರದಲ್ಲಿ ನೋಡಿದ್ದೆ. ಆದರೆ ಅದನ್ನ ಯಾವತ್ತೂ ಹಚ್ಚಿ ಉಪಯೋಗಿಸಿರಲಿಲ್ಲ. ಅಂಗಡಿಗೆ ಹೋಗಿ ನಾಲ್ಕು ಪೆಟ್ರೋಮಾಕ್ಸ್ ಬಾಡಿಗೆ ತಗೊಂಡೆ. ಹೇಗೆ ಹಚ್ಚೋದು ಅಂತ ಅವನು ಅಂದರೆ ಅಂಗಡಿ ಓನರ್ ತೋರಿಸಿಕೊಟ್ಟ. ನಾಲ್ಕೂ ತಗೊಂಡು ಎರಡು ಶೌರಿ ನಮ್ಮ ವಾಚ್ಮನ್ನು, ಎರಡು ಸೈಕಲ್ ಹ್ಯಾಂಡಲ್‌ಗೆ ನೇತು ಹಾಕಿ ಮನೆ ಸೇರಿದೇವಾ? ಅವತ್ತು ರಾತ್ರಿ ಎಂಟಕ್ಕೆ ಎಲ್ಲರೂ ಸೇರಿ ನಮ್ಮ ಕಲಿತ ವಿದ್ಯೆ ಎಲ್ಲವನ್ನೂ ಖರ್ಚು ಮಾಡಿದರೂ ಒಂದೇ ಒಂದು ಪೆಟ್ರೋಮಾಕ್ಸ್ ಹತ್ತಲಿಲ್ಲ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

read more
ಶ್ರಾವಣ ಸಂಜೆಯ ಮಳೆಯಂಥ ಪ್ರೀತಿ:‌ “ದಡ ಸೇರದ ದೋಣಿ” ಸರಣಿಯಲ್ಲಿ ಮಾರುತಿ ಗೋಪಿಕುಂಟೆ ಬರಹ

ಶ್ರಾವಣ ಸಂಜೆಯ ಮಳೆಯಂಥ ಪ್ರೀತಿ:‌ “ದಡ ಸೇರದ ದೋಣಿ” ಸರಣಿಯಲ್ಲಿ ಮಾರುತಿ ಗೋಪಿಕುಂಟೆ ಬರಹ

ಪರೀಕ್ಷೆಯ ವಿಚಾರ ಮಾತಾಡುವಷ್ಟರಲ್ಲಿ ಅವರ ಸಂಬಂಧಿ ಪ್ರತ್ಯಕ್ಷವಾಗಿದ್ದ. ಗೇಟಿನಲ್ಲೆ ನಮ್ಮಿಬ್ಬರನ್ನು ನೋಡಿರಬೇಕು. ಈಗಾಗಲೆ ಪರಿಚಯವಿದ್ದುದರಿಂದ ನನ್ನನ್ನು ಮಾತಾಡಿಸಿದ. ಮಾತಾಡಿಸಿ ‘ನೀವೇಕೆ ಬಂದಿದ್ದೀರಿ’ ಅಂದ. ನಾನು ಅದೆ ‘ಕ್ಯಾಸ್ಟ್ ಇನ್ಕಮ್’ ನೆಪ ಹೇಳಿದೆ ನನ್ನ ಸ್ನೇಹಿತರು ಬಂದಿದ್ದಾರೆ ಅವರನ್ನು ಮಾತಾಡಿಸುವ ಸಲುವಾಗಿ ಬಂದಿದ್ದೆ’ ಅಂದೆ ಅನುಮಾನ ಪಡುವ ಯಾವ ಘಟನೆಯೂ ನಮ್ಮಿಬ್ಬರ ವಿಷಯದಲ್ಲಿ ನಡೆದಿರಲಿಲ್ಲ. ನನಗೆ ಒಳ್ಳೆಯವನೆಂಬ ಪಟ್ಟ ಊರಲ್ಲಿತ್ತು. ಹಾಗಾಗಿ ಮಾತಾಡಿಸಿದವಳು ಇವಳ ಪರೀಕ್ಷೆ ಮುಗಿದ ಮೇಲೆ ಊರಿಗೆ ಕರೆದುಕೊಂಡು ಹೋಗಲು ಬಂದಿದ್ದೇನೆ ಅಂದ. ನನಗೆ ಏನು ಹೇಳಲು ಮಾತೆ ಇರಲಿಲ್ಲ.
“ದಡ ಸೇರದ ದೋಣಿ” ಸರಣಿಯಲ್ಲಿ ಮಾರುತಿ ಗೋಪಿಕುಂಟೆ ಬರಹ

read more
ಗೋಮಾತೆಯ ಸಾಂಗತ್ಯದಲ್ಲಿ ಕಣ್ತೆರೆಯುವ ಬೆಳಗು: ಭವ್ಯ ಟಿ.ಎಸ್. ಸರಣಿ

ಗೋಮಾತೆಯ ಸಾಂಗತ್ಯದಲ್ಲಿ ಕಣ್ತೆರೆಯುವ ಬೆಳಗು: ಭವ್ಯ ಟಿ.ಎಸ್. ಸರಣಿ

ಕೊಟ್ಟಿಗೆಯಲ್ಲಿ ಯಾವುದಾದರೂ ಹಸು ಕರು ಹಾಕಿದರೆ ಮನೆಯಲ್ಲಿ ಬಾಣಂತಿ ಇದ್ದಷ್ಟೇ ಮುತುವರ್ಜಿ ವಹಿಸಬೇಕು. ಹಸುವಿಗೆ ಖಾರ ಮಾಡಿ ತಿನ್ನಿಸುವುದು, ಪುಟ್ಟ ಕರು ಗಟ್ಟಿಯಾಗುವವರೆಗೂ ಮನೆಯೊಳಗೆ ಸ್ವಲ್ಪ ಬೆಚ್ಚಗಿನ ಸ್ಥಳದಲ್ಲಿ ಇರಿಸಿ ಹಾಲುಣಿಸಲಷ್ಟೇ ತಾಯಿಯ ಬಳಿ ಕರೆದೊಯ್ಯವುದು ಮಾಡುತ್ತಾರೆ. ಕರುವಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುವಷ್ಟೇ ಹಾಲು ಕುಡಿಸಬೇಕು. ಅಜೀರ್ಣವಾದರೆ ಅಪಾಯವೆಂದು ಎಚ್ಚರಿಕೆ ವಹಿಸುತ್ತಾರೆ. ಹಸು ಕರುಗಳಿಗೆ ಮೈ ತೊಳೆಸಿ ಸ್ವಚ್ಛ ಜಾಗದಲ್ಲಿ ಮಲಗಲು ಬಿಡುತ್ತಾರೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

read more
ಕದರಪ್ಪನ ಗುಡೀ‌ ಮುಂದ್ಲ ಕಲ್ಲು: ಸುಮಾ ಸತೀಶ್ ಸರಣಿ

ಕದರಪ್ಪನ ಗುಡೀ‌ ಮುಂದ್ಲ ಕಲ್ಲು: ಸುಮಾ ಸತೀಶ್ ಸರಣಿ

ಅವ್ನೂ ಬಂದ. ಚೆಂದಾಗಿ ಕಲ್ಲು ತೊಳುಸ್ದ‌. ಅತ್ಲಾಗೆ ತಿರುಗ್ದ, ಇತ್ಲಾಗೆ ಬಗ್ಗಿದ, ತಲೆ ಕೆರ್ಕಂಡ. ಯೋನೂ ತಿಳೀವಲ್ದು. ಅಂಗಂತ ಯೋಳೀರೆ ಜನ ಏನ್ ಅನ್ಕಂಬಾಕಿಲ್ಲಾ. ನನ್ ಮರ್ವಾದಿ ಮಣ್ಣಾಗಾಕಿಲ್ವೇ ಅಂದಿದ್ದೇ, ಬ್ಯಾರೇನೇ ಯೋಳ್ದ. ಇದು ನರಮನುಸ್ಯರ ಕೈಲಿ ಓದಾಕಾಗಾಕಿಲ್ಲ. ದೇವನಾಗರೀ ಲಿಪಿ ಅಂಬ್ತಾರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ