ನಮ್ಮನು ಪ್ರಭಾವಿಸಿದ ಮೇಷ್ಟ್ರುಗಳಿವರು…: ಬಸವನಗೌಡ ಹೆಬ್ಬಳಗೆರೆ ಸರಣಿ
ಒಂದು ಮಗು ದಿನದ 24 ಗಂಟೆಯಲ್ಲಿ ಶಾಲೆಯಲ್ಲಿ ಬರೀ 8 ಗಂಟೆ ಇರುತ್ತಾನೆ. ಆದರೆ ಇನ್ನುಳಿದ 16 ಗಂಟೆ ಮನೇಲಿ ಇರುತ್ತಾನೆ. ಸಮಾಜದಲ್ಲಿರುವ ಉಳಿದವರೂ ಕೂಡ ಮಕ್ಕಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ‘ಸಂಗದಂತೆ ಬುದ್ಧಿ ಊಟದಂತೆ ಲದ್ಧಿ’ ಎಂಬಂತೆ ಸಹವಾಸವೂ ಕೂಡ ಮುಖ್ಯ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಬದುಕಲು ಕಲಿತೆವು: ರಂಜಾನ್ ದರ್ಗಾ ಸರಣಿ
ಕಿಚ್ಚಿನಲ್ಲಿ ಕೋಲ ಬೈಚಿಟ್ಟಾಗ ಎರಡೂ ಕೋಲುಗಳು ಕಿಚ್ಚಿನಿಂದಾಗಿ ನಿಗಿನಿಗಿ ಕೆಂಡಗಳಾಗುತ್ತವೆ. ಅವು ನಿಗಿನಿಗಿ ಕೆಂಡವಾದ ನಂತರ ಒಂದೇ ತೆರನಾದಂತೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿಕೊಂಡಾಗ ಆ ಎರಡೂ ದೀಪಗಳು ಒಂದೇ ರೀತಿಯ ಬೆಳಕು ಕೊಡುತ್ತವೆ. ಹೀಗೆ ಬಸವಣ್ಣನವರು ಗುರು-ಶಿಷ್ಯ ಸಂಬಂಧದ ಕುರಿತು ಹೇಳಿದ್ದಾರೆ. ಕೆಂಡಗಳ ಶಾಖ, ದೀಪಗಳ ಬೆಳಕು ಒಂದೇ ರೀತಿಯವು ಆಗುತ್ತವೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ನಾನಾ… ಸನ್ಯಾಸಿನಾ…!: ಎಚ್. ಗೋಪಾಲಕೃಷ್ಣ ಸರಣಿ
ಖಾದಿ ಬೋರ್ಡ್ಗೆ ಹೋಗೋದು, ಅಲ್ಲಿಂದ ಈ ಕೇಸರಿ ಅಥವಾ ಕಾವಿ ದಟ್ಟಿ ತರೋದು ಅದನ್ನು ಮೂರೂ ಹೊತ್ತು ಸುತ್ತಿಕೊಂಡು ಓಡಾಡೋದು. ಇದು ನಮ್ಮ ಅಮ್ಮನಿಗೆ ಇಷ್ಟ ಇಲ್ಲ. ಕಾರಣ ಇವನು ರಾಮಕೃಷ್ಣ ಆಶ್ರಮಕ್ಕೆ ಹೋಗಿದ್ದ, ಅಲ್ಲಿ ಪ್ರಭಾವ ಇವನೂ ಸನ್ಯಾಸಿ ಆಗಿಬಿಡ್ತಾನೆ ಎನ್ನುವ ಭಯ. ಇದನ್ನು ಅಮ್ಮ ನನ್ನ ಮದುವೆ ಆದ ಎಷ್ಟೋ ವರ್ಷದ ನಂತರ ತನ್ನ ಸೊಸೆಗೆ ಅಂದರೆ ನನ್ನ ಹೆಂಡತಿಗೆ ಹೇಳಬೇಕಾದರೆ ನನ್ನ ಕಿವಿಗೆ ಬಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಶುರು….
ಅಮ್ಮ ‘ಬೆಳಗಾರುತಿ ಬೆಳಗಾರತಿ ದತ್ತಾತ್ರೇಯನಿಗೆ’ ಎಂದು ಹಾಡುತ್ತಿದ್ದರೆ ಅದಕ್ಕೆಷ್ಟು ಅರ್ಥವಾಗಿತ್ತೋ… ಒಳಗೆ ಬರಲೊಲ್ಲೆ ಎಂಬಂತೆ ಹೊಸ್ತಿಲಿಗೆ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದ ಅದರ ಬಲಗಾಲನ್ನು ಎತ್ತಿ ಒಳಗೆ ಇಡಿಸಿದ್ದೆವು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಅದು ಮನೆಯೊಳಗೆ ಓಡಾಡುವಾಗ ಅದನ್ನು ಎಷ್ಟು ನೋಡಿದರೂ ಸಾಲದು. ನಾವು ಕರೆದರೂ ಹತ್ತಿರ ಬರದೇ ಕುರ್ಚಿಯ ಅಡಿಗೆ ಹೋಗಿ ಮಲಗುತ್ತಿತ್ತು.
ತಮ್ಮ ಮುದ್ದು ನಾಯಿಯ ಕುರಿತು ಸಂಜೋತಾ ಪುರೋಹಿತ ಬರೆಯುವ ಹೊಸ ಸರಣಿ “ಕೂರಾಪುರಾಣ”
ಭಾಷೆಯ ಮುಖವಾಡಗಳನ್ನು ತೆಗೆಸುವ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಲೀಪ್ಸ್ಕರವರು ವಿಸ್ತಾರವಾದ ರೂಪಕಗಳು ಹಾಗೂ ಕಾವ್ಯಾತ್ಮಕವಾದ ಪರಿಕಲ್ಪನೆಗಳನ್ನು ಮುಕ್ತವಾಗಿ ಬಳಸತೊಡಗಿದರು, ಹಾಗೇ ಅವುಗಳ ಅರ್ಥಗಳನ್ನು ಕೂಡ ಸಂಕೀರ್ಣಗೊಳಿಸುತ್ತಾ ಹೋದರು. ಅವರ ಕವನಗಳಲ್ಲಿನ ಆಗುಹೋಗುಗಳು ಒಂದು ತರಹದ ಅತಿವಾಸ್ತವಿಕವಾದ ಸ್ವಪ್ನವ್ಯೋಮದಲ್ಲಿ ನಡೆಯುತ್ತದೆ. ಆದ್ದರಿಂದ ಕವನಗಳಲ್ಲಿ ಬರುವ ಪಾತ್ರಗಳಿಗೆ ಕಲ್ಪನೆಯೊಂದೇ ಬಿಡುಗಡೆಯ ಮಾರ್ಗವಾಗುತ್ತದೆ.
ಮದುವೆ ಎನ್ನುವ ಊರ ಸಂಭ್ರಮ: ಚಂದ್ರಮತಿ ಸೋಂದಾ ಸರಣಿ
ಈಗಿನಂತೆ ಅವರಪಾಡಿಗೆ ಅವರು ಮದುವೆಗೆ ಹೋಗುವ ರಿವಾಜಿರಲಿಲ್ಲ. ಎಲ್ಲರನ್ನೂ ಒಳಗೊಂಡು ಹೋಗುವುದಿತ್ತು. ಹೋಗುವಾಗ ಬರುವಾಗ ಹಾಡುಗಳ ಸ್ಪರ್ಧೆ ಇರುತ್ತಿತ್ತು. ಯಾರು ಎಷ್ಟು ಹಾಡನ್ನು ಹೇಳುತ್ತಾರೆ ಅಂತ. ಹೆಣ್ಣುಮಕ್ಕಳು ತಮ್ಮ ಹಾಡಿನ ಸಾಮರ್ಥ್ಯವನ್ನು ಒರೆಹಚ್ಚುವ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಮದುಮಗನನ್ನು ಎದುರುಗೊಳ್ಳುವುದಿರಲಿ, ಸಭಾಪೂಜೆಯೋ, ವರಪೂಜೆ ಅಥವಾ ಧಾರೆ ಯಾವುದೇ ಸನ್ನಿವೇಶವನ್ನು ಬಿಡದೆ ಹಾಡುತ್ತಿದ್ದರು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ
ಮಿಲನ-ಸುಂದರ ಅನುಬಂಧದ ಕವನ: ರಾಮ್ ಪ್ರಕಾಶ್ ರೈ ಕೆ ಸರಣಿ
ಆಕಾಶ್ ಮತ್ತು ಅಂಜಲಿಯೇ ಕಥೆಯ ಬಹು ಭಾಗದ ಕೇಂದ್ರ ಬಿಂದುವಾಗಿರುವುದರಿಂದ ಸಂಬಂಧದ ಪರಿಕಲ್ಪನೆ, ಶೂನ್ಯ ಪುರುಷ ಮೇಲರಿಮೆ, ಅವಳ ಖುಷಿಯಲ್ಲಿ ಅವನು ಕಾಣುವ ನೆಮ್ಮದಿ ಎಲ್ಲವೂ ಬದುಕಿಗೊಂದು ಮಾದರಿ. ಬಂಧಗಳು ಬಿಗಿಯಾಗುವುದೇ ತಾನು, ತನ್ನದೆಂಬ ಭಾವ ಶೂನ್ಯವಾಗಿ, ನಿನ್ನ ಸಂತಸವೇ ನನ್ನದು ಎಂಬ ಯೋಚನೆ ಮುನ್ನೆಲೆಗೆ ಬಂದಾಗ ಎಂದು ಸಾರುವ ಕಥೆಯ ತೆರೆಯ ಮೇಲಿನ ಚಿತ್ರಣವೇ ಮನ ಮಿಡಿಯುವಂಥದ್ದು.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ನಾವು… ನಮ್ಮದು..: ಗುರುಪ್ರಸಾದ ಕುರ್ತಕೋಟಿ ಸರಣಿ
ಸ್ವಚ್ಚತೆ, ಇಂಡಿಪೆಂಡೆನ್ಸ್, ತಮಗನಿಸಿದ್ದನ್ನು ನಿರ್ಭಿಡೆಯಿಂದ ಹೇಳುವ ಅವರ ಶೈಲಿ ಇನ್ನೂ ಎಷ್ಟೋ ಒಳ್ಳೆಯ ಗುಣಗಳನ್ನು ಖಂಡಿತ ಅಮೆರಿಕನ್ನರಿಂದ ಕಲಿಯಬಹುದು. ಆದರೆ ಇನ್ನೂ ಎಷ್ಟೋ ವಿಷಯಗಳಲ್ಲಿ ಅವರು ಮಾಡೋದು ಅತಿ ಅನಿಸುತ್ತದೆ. ಅದೇ ರೀತಿ ನಾವೂ ಕೂಡ ಕೆಲವು ವಿಷಯಗಳಲ್ಲಿ ಅತಿ ಮಾಡುತ್ತೇವೆ. ಹೀಗಾಗಿ ಅವರ ಕೆಲವು ವಿಷಯಗಳನ್ನು ಸ್ವೀಕರಿಸಿ ನಮ್ಮತನವನ್ನೂ ಉಳಿಸಿಕೊಂಡ ಒಂದು ಮಧ್ಯದ ಶೈಲಿ ಅಳವಡಿಸಿಕೊಂಡರೆ ಎಷ್ಟು ಚೆನ್ನ ಅನಿಸುತ್ತದೆ. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ
ಮುಂಗಾರಿನ ಸವಿ ಸಂಜೆ: ಸುಮಾವೀಣಾ ಸರಣಿ
ಅಂತೂ ಶೆಟ್ಟಿ ಬೇಕರಿಗೆ ಹೋಗಿ ಕಾಲು ಕೆ.ಜಿ. ಲಡ್ಡುವನ್ನು 17.50 ಪೈಸೆ ಕೊಟ್ಟು ತೆಗೆದುಕೊಂಡು ಹೋಗಿ ಸೀತವ್ವಗೆ ಕೊಟ್ಟೆ. ಸ್ವೀಟ್ ತೆಗೆದುಕೊಂಡ ನಂತರ “ಎಷ್ಟುನೆ ಹಣ ಬಂದಿದು ನಿಂಗೆ….” ಅಂದರೆ “25” ಎಂದೆ “ಅಷ್ಟೆಯಾ…..?” ಎಂದು ಜೋರಾಗಿ ನಕ್ಕರು. ಪಾಪ ಅವರಿಗೆ ಇವೆಲ್ಲಾ ಹೇಗ್ ತಿಳಿಯಬೇಕು…?
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ










