Advertisement

ಸರಣಿ

ಬೆಂಗಳೂರಿನ “ಸ್ಮಶಾನ”ದ ಕತೆಗಳು: ಎಚ್. ಗೋಪಾಲಕೃಷ್ಣ ಸರಣಿ

ಬೆಂಗಳೂರಿನ “ಸ್ಮಶಾನ”ದ ಕತೆಗಳು: ಎಚ್. ಗೋಪಾಲಕೃಷ್ಣ ಸರಣಿ

ಆಗಿನ್ನೂ ಶವ ವಾಹನ ಇರಲಿಲ್ಲ. ಬದಲಿಗೆ ಟ್ರಾಕ್ಟರ್, ಎತ್ತಿನ ಗಾಡಿ ಅಥವಾ ಜಟಕಾ ಗಾಡಿಯನ್ನು ಕೆಲವರು ಉಪಯೋಗಿಸಿದರೆ ಮತ್ತೆ ಸುಮಾರು ಜನ ಹೆಣ ಹೊತ್ತು ಹೋಗುವರು. ನಮ್ಮ ಕಾಲೋನಿಯ ಕೆಲವು ಕಾರ್ಮಿಕರು ಅವರದ್ದೇ ಒಂದು ಗುಂಪು ಮಾಡಿಕೊಂಡು ಯಾವುದಾದರೂ ಸಾವಿನ ಸುದ್ದಿ ಬಂದಕೂಡಲೇ ಶವ ಸಾಗಿಸಲು ಹೆಗಲು ಕೊಡಲು ಸಿದ್ಧರಿರುತ್ತಿದ್ದರು. ಚಟ್ಟ ಕಟ್ಟುವ ಸ್ಪೆಷಲಿಸ್ಟ್‌ಗಳೂ ಸಹ ಇದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

read more
ದಸರೆಯ ನಂತರದ ದರ್ಶನ!…: ಸುಮಾವೀಣಾ ಸರಣಿ

ದಸರೆಯ ನಂತರದ ದರ್ಶನ!…: ಸುಮಾವೀಣಾ ಸರಣಿ

ಅದೇ ರಸ್ತೆಯಲ್ಲಿ ಮುಂದೆ ಬಂದರೆ ಸಿಂಧೂರ್ ಮತ್ತು ಶಾಹಿನ್ಸ್ ಬಟ್ಟೆ ಅಂಗಡಿಗಳು… ಅವರು ಗೊಂಬೆಗಳಿಗೆ ಉಡಿಸುತ್ತಿದ್ದ ಸೀರೆಗಳನ್ನು ನೋಡಿದರೂ ನೋಡದ ಹಾಗೆ ಮುಂದೆ ಸಾಗುವ ಕಾರ್ಯಕ್ರಮ. ಅಲ್ಲಿಗೆ ನಗರದ ಹೃದಯ ಭಾಗ ಚೌಕಿಗೆ ಬಂದು ಬಿಡುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ

read more
ದೇವರ ಉತ್ಸವ, ಅಭಿಮಾನ, ಬಾಲ್ಯದ ನೆನಪು: ಮಾರುತಿ ಗೋಪಿಕುಂಟೆ ಸರಣಿ

ದೇವರ ಉತ್ಸವ, ಅಭಿಮಾನ, ಬಾಲ್ಯದ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಒಮ್ಮೆ ನಾನು ನನ್ನ ಓರಗೆಯವ ಇದೇ ಕ್ರಿಕೆಟ್‌ ಕಾರಣಕ್ಕೆ ಜಗಳಕ್ಕೆ ಬಿದ್ದಿದ್ದೆವು. ನನಗೂ ಎಲ್ಲಿಲ್ಲದ ಕೋಪ ಬಂದು ಉಸಿರು ಕಟ್ಟುವಂತೆ ಅವನ ಕೊರಳಿಗೆ ಕೈ ಹಾಕಿ ಒಬ್ಬರನ್ನೊಬ್ಬರು ಬಿಗಿಯಾಗಿ ಹಿಡಿದುಕೊಂಡು ಹೊರಳಾಡುವಾಗ ಕರ್ಕೆಯ (ಹಸಿರು ಹುಲ್ಲು) ದಂಟು ನನ್ನ ಭುಜವನ್ನು ಗಾಯ ಮಾಡಿತ್ತು. ಅದರ ಮಾರ್ಕ್ ಈಗಲೂ ಇದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

read more
ಕೆ. ಸತ್ಯನಾರಾಯಣ ಬರೆಯುವ ಹೊಸ ಸರಣಿ “ಜೈಲು ಕತೆಗಳು” ಇಂದಿನಿಂದ

ಕೆ. ಸತ್ಯನಾರಾಯಣ ಬರೆಯುವ ಹೊಸ ಸರಣಿ “ಜೈಲು ಕತೆಗಳು” ಇಂದಿನಿಂದ

ನನಗೆ ಖೈದಿಗಳ ಬಗ್ಗೆ ತಿರಸ್ಕಾರವಾಗಲೀ, ಅವಮಾನವಾಗಲೀ, ಪೋಲೀಸರ ಬಗ್ಗೆ ಅನಗತ್ಯ ಭಯ-ಗೌರವಗಳಾಗಲೀ ಬೆಳೆಯಲಿಲ್ಲ. ಇವರೆಲ್ಲ ನಮ್ಮ ಕುಟುಂಬಗಳಿಂದ ಭಿನ್ನರಾದವರು ಎಂದೂ ಅನಿಸಲಿಲ್ಲ. ಆದರೆ ಕ್ರೀಡಾಪಟುಗಳು, ವಿಜ್ಞಾನಿಗಳು, ನಟರು, ಸಂಗೀತಗಾರರನ್ನು ಈ ಸಮಾಜ ರೂಪಿಸಿದೆ ಎಂಬುದು ಎಷ್ಟು ನಿಜವೋ, ಖೈದಿಗಳು, ಖೈದಿಗಳಾಗಬೇಕಾಗಿ ಬಂದವರು, ಅವರನ್ನು ಕೂಡ ಈ ಸಮಾಜವೇ ರೂಪಿಸಿದೆ ಎಂಬುದನ್ನೂ ಒಪ್ಪಬೇಕು.
ಖ್ಯಾತ ಕತೆಗಾರ ಕೆ. ಸತ್ಯನಾರಾಯಣ ಬರೆಯುವ ಸರಣಿ “ಜೈಲು ಕತೆಗಳು”

read more
ಗುರುಪ್ರಸಾದ ಕುರ್ತಕೋಟಿ ಹೊಸ ಸರಣಿ “ಅಮೆರಿಕದಲ್ಲಿ ಕುರ್ತಕೋಟಿ” ಇಂದಿನಿಂದ

ಗುರುಪ್ರಸಾದ ಕುರ್ತಕೋಟಿ ಹೊಸ ಸರಣಿ “ಅಮೆರಿಕದಲ್ಲಿ ಕುರ್ತಕೋಟಿ” ಇಂದಿನಿಂದ

ನನಗೆ ಇದು ಕನಸೊ ನನಸೊ ಎಂಬ ಸಂಶಯ ಶುರುವಾಯ್ತು! ಎಷ್ಟೋ ಜನರು ವಿದೇಶಕ್ಕೆ ಹೊಗಲೇಬೇಕು ಅಂತ ಗುದ್ದಾಡಿದರೂ ಅವರಿಗೆ ಅವಕಾಶ ಸಿಗೋದಿಲ್ಲ. ಆದರೆ ಈ ಅವಕಾಶ ನಾನು ಬೇಡ ಬೇಡ ಅಂದರೂ ನನ್ನನ್ನು ಹುಡುಕಿಕೊಂಡು ಬಂದಿತ್ತು. ಅಪಾಯಿಂಟ್ಮೆಂಟ್ ಲೆಟರ್ ಬರುವವರೆಗೂ ಯಾರಿಗೂ ಹೇಳೋದು ಬೇಡ ಅಂತ ನಿರ್ಧಾರ ಮಾಡಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ ಹೊಸ ಸರಣಿ “ಅಮೆರಿಕದಲ್ಲಿ ಕುರ್ತಕೋಟಿ”

read more
ಜೀವನ ಬಿಂಬದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಜೀವನ ಬಿಂಬದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಚೆಪಾವ್ಸಕಾಯ್ಟೆಯವರು ನೆಲದ ಮೇಲೆ ಭದ್ರವಾಗಿ ನಿಂತಿರುವ ಕವಿ. ಅವರ ರೂಪಕಗಳು ಒರಟಾಗಿರುತ್ತವೆ, ಮಣ್ಣಿನ ಕಂಪು ಸೂಸುತ್ತವೆ, ಕೆಲವೊಮ್ಮೆ ಸರ್ವೇಸಾಮಾನ್ಯವಾಗಿರುತ್ತವೆ. ಯಾವ ವಿಷಯವೂ ಅವರನ್ನು ಬುಡಸಮೇತ ಕಿತ್ತುಹಾಕಲು ಅಥವಾ ಸ್ವರ್ಗಕ್ಕೆ ಏರಿಸಲು ಸಾಧ್ಯವಿಲ್ಲ. ಅವರ ಕಾವ್ಯ ಪ್ರಪಂಚ ವಿಶೇಷವಾಗಿ ಬೆಚ್ಚನೆಯ ಹಿತವಾದ ಪ್ರಪಂಚ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

read more
ಗ್ರಹಣವೆಂದವರ “ಗ್ರಹಚಾರ” ಬಿಡಿಸುತ್ತಿದ್ದವರು ನಾವು!: ಎಚ್. ಗೋಪಾಲಕೃಷ್ಣ ಸರಣಿ

ಗ್ರಹಣವೆಂದವರ “ಗ್ರಹಚಾರ” ಬಿಡಿಸುತ್ತಿದ್ದವರು ನಾವು!: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ಅಣ್ಣ ಫಿಲ್ಮ್ ರೋಲ್ ಅನ್ನ ಅವನ ಸ್ನೇಹಿತರ ಮೂಲಕ ಮಿಲಿಟರಿ ಕ್ಯಾಂಟೀನ್‌ನಿಂದ ತರಿಸುತ್ತಿದ್ದ. ಹತ್ತು ರೂಪಾಯಿ ಕಡಿಮೆ ಬೀಳೋದು. ಆಗಲೇ ನನ್ನ ಫೋಟೋ ನಾನೇ ತೆಗಿತಿದ್ದೆ, ಈಗಿನ ಸೆಲ್ಫಿ ಹಾಗೇ. ಕ್ಯಾಮೆರಾ ತಿರುಗಿಸಿ ನನ್ನ ಮುಖ ಅಂದಾಜಿನ ಮೇಲೆ ಲೆನ್ಸ್ ಎದುರು ಇಟ್ಟುಕೊಂಡು ಕ್ಲಿಕ್ ಮಾಡೋದು. ಸೆಲ್ಫಿ ಕಲ್ಪನೆ ಆಗಲೇ ನಾನು ಕಂಡು ಹಿಡಿದಿದ್ದೆ. ಅದು ಚರಿತ್ರೆಯಲ್ಲಿ ಎಲ್ಲೂ ದಾಖಲು ಆಗಲಿಲ್ಲ, ನನ್ನ ಎಷ್ಟೋ ಇನ್ವೆನ್ಷನ್‌ಗಳ ಹಾಗೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

read more
ಅವರವರ ಭಾವಕ್ಕೆ……:  ಚಂದ್ರಮತಿ ಸೋಂದಾ ಸರಣಿ

ಅವರವರ ಭಾವಕ್ಕೆ……: ಚಂದ್ರಮತಿ ಸೋಂದಾ ಸರಣಿ

ಹಬ್ಬಗಳಲ್ಲಿ, ಅದರಲ್ಲಿಯೂ ನವರಾತ್ರಿಯಲ್ಲಿ ಕೊಡುವ ದಕ್ಷಿಣೆ ನಮಗೆ ಪಾಕೆಟ್‌ಮನಿ ತರಹ. ಆಗ ನಮಗೆ ಕೊಡುತ್ತಿದ್ದುದು ಹತ್ತು ನಯಾಪೈಸೆ. ಎಲ್ಲ ಹಬ್ಬಗಳಲ್ಲಿ ಕೊಡುತ್ತಿದ್ದ ದಕ್ಷಿಣೆಯನ್ನು ಜೋಪಾನವಾಗಿ ಕಾಪಿಟ್ಟು ಅದರಿಂದ ಬಣ್ಣದ ದಾರ, ಮಣಿಗಳನ್ನು ತರಿಸಿಕೊಂಡು ಲೇಸು, ಬಾಗಿಲತೋರಣ, ಕಸೂತಿ, ಮಣಿಗಳಿಂದ ಆರತಿ ಕಟ್ಟು ತಯಾರಿಸಿ ನಮ್ಮ ನಮ್ಮ ಕೌಶಲಗಳನ್ನು ಮೆರೆಯಲು ಈ ಹಣ ಸಹಕಾರಿಯಾಗಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಒಂಭತ್ತನೆಯ ಕಂತು

read more
ನಿಯಂತ್ರಿತ ಕ್ರೋಧದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ನಿಯಂತ್ರಿತ ಕ್ರೋಧದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಕೆಲವೊಮ್ಮೆ ಎನ್ಸೆನ್ಸ್‌ಬರ್ಗರ್ ಅವರ ಕವನಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜ, ಏಕೆಂದರೆ ಅವರ ಕವನಗಳಲ್ಲಿ ಪ್ರಾಸವು ಅಪರೂಪವಾಗಿರುತ್ತೆ ಹಾಗೂ ರೂಪಕಗಳು ಮತ್ತು ಪದಗುಚ್ಛಗಳ ದಟ್ಟವಾದ ಕೊಲಾಜ್‌-ಗಳನ್ನು ರಚಿಸುವ ಏಕಾಗ್ರತೆಯಲ್ಲಿ ಲಯವು ದ್ವಿತೀಯ ಸ್ಥಾನಕ್ಕೆ ಹೋಗುತ್ತೆ. ಅವರು ವಿಷಯದ ವಿಸ್ತಾರವನ್ನು ಹೊಂದಿದ್ದಾರೆ, ವಿವಿಧ ಶೈಲಿಗಳನ್ನು ಬಳಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ