Advertisement

ಸಾಹಿತ್ಯ

ಸದಾಶಿವ ಸೊರಟೂರ ಕವನ ಸಂಕಲನಕ್ಕೆ ಆಶಾಜಗದೀಶ್ ಮುನ್ನುಡಿ

ಸದಾಶಿವ ಸೊರಟೂರ ಕವನ ಸಂಕಲನಕ್ಕೆ ಆಶಾಜಗದೀಶ್ ಮುನ್ನುಡಿ

“ದಿನನಿತ್ಯದ ಸಾಮಾನ್ಯ ವಾರ್ತೆಯೂ ಕವಿತೆಯಾಗಬಲ್ಲದು. ಸಾಮಾನ್ಯ ಎನಿಸುವ ಸಣ್ಣ ವರ್ತಮಾನವೂ ಕವಿಗೆ ಭಿನ್ನವಾಗಿ ಕಾಣಬಹುದು. ಅಂತಹ ಭಿನ್ನತೆಯಲ್ಲಿಯೇ ವರ್ತಮಾನದ ಕಾವ್ಯ ಹೊಸತನ ಪಡೆದುಕೊಳ್ಳುತ್ತದೆ. ಆದರೆ ಕವಿತೆ ಎನ್ನುವುದು ಒಂದು ಭಾಷೆಯ ಸೌಂದರ್ಯ ಸಾಧನವಾಗಿರುತ್ತದೆ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕಾವ್ಯ ನೆರವಾಗುತ್ತದೆ. ಕಾವ್ಯಕ್ಕೆ ಪದಗಳ ದುಂದು, ತುಂಡರಿಸಿಟ್ಟ ಗದ್ಯದ ಭಾಗ ಎನಿಸುವಂತಹ ರಚನೆಗಳು ಸಲ್ಲುವುದಿಲ್ಲ.”

read more
ಚರ್ಮ: ಎಚ್.ಆರ್.ರಮೇಶ ಬರೆದ ಕತೆ

ಚರ್ಮ: ಎಚ್.ಆರ್.ರಮೇಶ ಬರೆದ ಕತೆ

“ಒಂದು ಸಲ ಚಂದ್ರಾಚಾರಿಯನ್ನು ನೋಡಲು ಕತ್ತಲಲ್ಲಿ ಅವನ ಮನೆಯ ಹಿತ್ತಲಿಗೆ ಹೋದಾಗ ಲಕ್ಷ್ಮಿ ಚೇಳು ಕಚ್ಚಿದ್ದ ಗುರುತು ಅವಳ ಎಡಗಾಲ ಹೆಬ್ಬಟ್ಟಿನ ಮೇಲೆ ಅಚ್ಚುಒತ್ತಿದ ರೀತಿ ಇನ್ನೂ ಹಾಗೆ ಇತ್ತು. ಆದರೂ ಆ ಕತ್ತಲಲ್ಲೂ ಅವನು ಕೊಟ್ಟ ಮುತ್ತು ಹಣೆಯ ಮೇಲೆ ಹಸಿಯಾಗಿಯೇ ಇದ್ದು ಹಣೆ ಮುಟ್ಟಿದಾಗೆಲ್ಲಾ ಚಂದ್ರಾಚಾರಿ ಮಿಂಚಿ ಹೋಗುತ್ತಿದ್ದ. ಈ ಲಹರಿಗಳ ಜೊತೆಗೆ ‘ಚಂದ್ರಾಚಾರಿಯನ್ನು ಮದುವೆಯಾಗಿದ್ದರೆ ಅವನ ಮರದ ಕೆತ್ತನೆಗಳ ಸುಂದರ ಗೊಂಬೆಗಳಂತೆ…”

read more
ಚನ್ನಪ್ಪ ಕಟ್ಟಿಯವರ ಕಥಾಸಂಕಲನದ ಕುರಿತು ಸಾಹೇಬಗೌಡ ಬಿರಾದಾರ ಲೇಖನ

ಚನ್ನಪ್ಪ ಕಟ್ಟಿಯವರ ಕಥಾಸಂಕಲನದ ಕುರಿತು ಸಾಹೇಬಗೌಡ ಬಿರಾದಾರ ಲೇಖನ

“ಏಕತಾರಿ ಕತೆಯೊಳಗ ಉಪಮೆ ಹಾಗೂ ಹೋಲಿಕೆಗಳು ತುಂಬಿ ತುಳಕತಾವ. ಕಾಂಡಕೊರೆಯುವ ಹುಳು ಒಳಗೆ ಹೊಕ್ಕವರಂತೆ ದಿನದಿನಕ್ಕೆ ಕೃಶನಾಗುತ್ತ ಹೊರಟಿದ್ದಾನೆ, ಮುರುದು ಮುಟಗಿಮಾಡಿ ನುಂಗಿ ನೀರ ಕುಡಿತಿದ್ರು, ಪಡಸಾಲ್ಯಾಗ ಕುಂತಾವ ಎದ್ದು ಹೊಲಕ ಹೋದವರಂಗ ಹೋಗಿ ಬಿಟ್ಟ ನೋಡ್ರಿ, ಮಳಿಯಪ್ಪ ಗವಿ ಸೆರಿದವರಮಗ ರೈತರ ಕೂಡಾ ಕಣಮುಚಗಿ ಆಟ ಆಡಾಕ ಸುರು ಮಾಡಿದ..”

read more
ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಡ್ಪಿ ವಾಸುದೇವ ಶೆಣೈ ಬರೆದ ಕತೆ

ಓಬಿರಾಯನಕಾಲದ ಕಥಾಸರಣಿಯಲ್ಲಿ ಕುಡ್ಪಿ ವಾಸುದೇವ ಶೆಣೈ ಬರೆದ ಕತೆ

“ಅಂದಿನ ಆ ನಿಶಿ! ವಿಧಾತನು ತನ್ನ ಕಲಾಜ್ಞಾನವನ್ನೆಲ್ಲ ಪ್ರಯೋಗಿಸಿ ಅದನ್ನು ರಚಿಸಿರುವನೆಂಬಂತೆ ತೋರುತ್ತಿತ್ತು. ಆ ಅಂಧಕಾರದ ಭೀಕರ ಸೌಂದರ್ಯವನ್ನು ನೋಡಿ ದೇವಗಣಗಳೂ, ತಾರಾಮಂಡಲವೂ ಮುಗ್ಧವಾದಂತಿತ್ತು. ಸಂಪತನು ಅದರ ಕಡೆಗೆ ತಿಲಾಂಶವೂ ಗಮನಕೊಡದೆ, ಉನ್ಮಾದನಂತೆ ಮನೆಯಿಂದ ಹೊರಬಿದ್ದನು. ಈ ಕೊಲೆಗಡುಕನನ್ನು ಸ್ಪರ್ಶಿಸಲಾರದೆ ವಾಯುದೇವನು ಕೂಗುತ್ತ ದಿಕ್ಕು ತೋಚದೆ ಓಡಾಡಿದನು.”

read more
ವಸುಧೇಂದ್ರರ ‘ತೇಜೋ=ತುಂಗಭದ್ರಾ’ ಕುರಿತು ಎಚ್.ಆರ್. ರಮೇಶ್ ಲೇಖನ

ವಸುಧೇಂದ್ರರ ‘ತೇಜೋ=ತುಂಗಭದ್ರಾ’ ಕುರಿತು ಎಚ್.ಆರ್. ರಮೇಶ್ ಲೇಖನ

“ಹಂಪಕ್ಕಳನ್ನು ಇವರ ಸುಪರ್ದಿಗೆ ಬಿಟ್ಟು ಹೊರಟಾಗ ಹಂಪಕ್ಕಳಿಗೆ ಇವನ ಮೇಲೆ ಆಸೆ ಹುಟ್ಟುತ್ತದೆ. ಆದರೆ ಅವನು ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು… “

read more
ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು: ಮಂಜುನಾಥ್ ಲತಾ ಬರೆದ ಕತೆ

ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು: ಮಂಜುನಾಥ್ ಲತಾ ಬರೆದ ಕತೆ

“‘ಸ್ವಾಮಿ ಮಾದೇಸ್ವಾಮಿಯವರೇ, ನಿಮ್ಮ ಹಾಡುಗಾರಿಕೆಯನ್ನು ಮೆಚ್ಚಿ ಘನ ಸರ್ಕಾರವು ತಮಗೆ ಸೈಟು, ಪ್ರಶಸ್ತಿಗಳನ್ನೆಲ್ಲ ದಯಪಾಲಿಸಿರುವುದು ಸರಿಯಷ್ಟೆ. ಆದರೆ ಅದು ನಿಮ್ಮ ಹಳೆಯ ಮೂಲ ಹಾಡುಗಾರಿಕೆಗೆ ಸಂದ ಬೆಲೆಯಲ್ಲದೆ ಈಗ ನೀವು ಹಾಡಲು ಹೊರಡುತ್ತಿರುವ ಕ್ಯಾಸೆಟ್ ಹಾಡುಗಳಿಗೆ ಸಿಕ್ಕಿದ್ದಲ್ಲ… ನೀವು ನಿಮ್ಮ ಮೂಲವನ್ನು ಮರೆತಂತೆ ಮಾತಾಡುತ್ತಿರುವುದು ಸರಿಯಲ್ಲ… ಇಂಥ ನಿಮ್ಮ ಧೋರಣೆಗೆ ನನ್ನ ಧಿಕ್ಕಾರವಿದೆ…”

read more
ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಪ್ರೊ.ಕಾಳೇಗೌಡ ನಾಗವಾರ ಬರೆದ ಮುನ್ನುಡಿ

ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಪ್ರೊ.ಕಾಳೇಗೌಡ ನಾಗವಾರ ಬರೆದ ಮುನ್ನುಡಿ

“ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಆಗಾಗ್ಗೆ ಸುಕ್ರಜ್ಜಿಯ ಒಡನಾಟವು ನೀಡುವ ಆನಂದದ ಸವಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ಕಾಡುಗೊಲ್ಲರ ಸಿರಿಯಜ್ಜಿ, ಸಾಲುಮರದ ತಿಮ್ಮಕ್ಕ, ಹಾಲಕ್ಕಿ ಒಕ್ಕಲು ಬುಡಕಟ್ಟಿನ ವಿಶಿಷ್ಟ ಪ್ರತಿಭೆ ಸುಕ್ರಿ ಬೊಮ್ಮಗೌಡ- ಮುಂತಾದ ಈ ಪ್ರಕೃತಿಯ ಕಂದಮ್ಮಗಳು ನೀಡುವ ಅನುಭವಲೋಕ ಹಾಗೂ …”

read more
ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಬರೆದ ಕತೆ

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಬರೆದ ಕತೆ

“ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ…”

read more
ವಿ.ಆರ್. ಕಾರ್ಪೆಂಟರ್ ಕಥಾ ಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

ವಿ.ಆರ್. ಕಾರ್ಪೆಂಟರ್ ಕಥಾ ಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

“ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಆ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಈ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ.”

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ