Advertisement

Category: ಅಂಕಣ

ಕಡೆಪಾನ್ ಬಸ್ಯಾನ ಲೀಲಾವಳಿ

ಅವನು ಹೇಳುತ್ತಿರುವುದು ಬರಿ ಕಥೆಯೇ. ಸುಳ್ಳು ಕಥೆ. ಅವನ ಕಲ್ಪನೆಯಲ್ಲಿ ಅರಳುವ ಕಥೆ ಎನ್ನುವುದಕ್ಕೆ ಪುರಾವೆ ಎಂಬಂತೆ ನನ್ನ ಬಳಿ ಹಲವಾರು ನಿದರ್ಶನಗಳಿವೆ. ಅವನು ತನ್ನೆಲ್ಲಾ ದಿನಚರಿಯಲ್ಲಿ ನಟ ಯಶ್ ಅನ್ನು ಅನುಕರಿಸುತ್ತಿದ್ದ. ಕೆ. ಜಿ. ಎಫ್. ಸಿನಿಮಾದ ಅವನ ಗೆಟಪನ್ನು ಅನುಕರಿಸುವುದು. ಪುರುಷ ಪ್ರಾಧಾನ್ಯದ ಮುಖ್ಯವಾಹಿನಿಯ ಮಾಸ್ ಸಿನಿಮಾಗಳಲ್ಲಿ ಹೀರೋಗಳು ಹೊಡೆಯುವ ಅಸೂಕ್ಷ್ಮ ಡೈಲಾಗುಗಳನ್ನು ಅವನು ವಾಟ್ಸಪ್ಪ್ ರೀಲಾಗಿ ಇಡುತ್ತಿದ್ದ. ಅವನು ಕನಸುತ್ತಿದ್ದ ಭವಿಷ್ಯದ ಬಸವರಾಜನ ಪೂರ್ವ ಬಿಂಬದ ಪರಿಕರಗಳನ್ನು ಪುಷ್ಟೀಕರಿಸುವಂತೆ ಅವು ಇರುತ್ತಿದ್ದವು.
ದಾದಾಪೀರ್‌ ಜೈಮನ್ ಬರೆಯುವ ‘ಜಂಕ್ಷನ್‌ ಪಾಯಿಂಟ್‌’ ಅಂಕಣ

Read More

ಓಮಿಕ್ರೋನ್ ಜೊತೆ ಹೊಸವರ್ಷ ಆರಂಭದ ಪಲುಕು

ವಿಷಯದಲ್ಲೀಗ ಬಗೆಬಗೆಯ ವಾಗ್ವಾದಗಳು. ಲಸಿಕೆ-ಪರ ಮತ್ತು ವಿರೋಧಗಳ ಜನರು ನೇರಾನೇರ ಎರಡು ಗುಂಪುಗಳಲ್ಲಿದ್ದಾರೆ. ಅವರನ್ನು ಬಿಟ್ಟು ರಾಜಕೀಯದಲ್ಲಿ, ವ್ಯಾಪಾರಸ್ಥರಲ್ಲಿ, ಪರಿಸರ ಸಂರಕ್ಷಣೆ ಹಿತಾಸಕ್ತಿ ಗುಂಪು, ಮಾನವ ಹಕ್ಕುಗಳ ಪ್ರತಿಪಾದಕರು, ಶಾಲಾಶಿಕ್ಷಕರು ಮತ್ತು ಅವರ ಯೂನಿಯನ್, ಆರೋಗ್ಯಸೇವಾ ಸಿಬ್ಬಂದಿ ವರ್ಗ, ತಂದೆತಾಯಂದಿರು, ಶಾಲಾ ಮಕ್ಕಳು, ಎಲ್ಲರೂ ಈ ವಾದ-ಪ್ರತಿವಾದಗಳಲ್ಲಿ ಸೇರಿಕೊಂಡುಬಿಟ್ಟಿದ್ದಾರೆ. ವರದಿಗಾರರು, ಸುದ್ದಿವಾಹಿನಿಗಳಿಗಂತೂ ಪರಮ ಸಂತೋಷ. ಯಾಕೆಂದರೆ ನಾಡಿನಲ್ಲಿ…

Read More

ಮಾನವೀಯತೆಯ ಹಾದಿಯನ್ನು ಆರಿಸಿಕೊಂಡವರು..

ಭಾರತವೂ ಸೇರಿದಂತೆ ನಾಲ್ಕು ಖಂಡಗಳಲ್ಲಿ ಅಲ್ಪ ಸ್ವಲ್ಪ ದಿನ ಜೀವಿಸಿ, ಮನುಷ್ಯರಲ್ಲಿ ಎಷ್ಟೊಂದು ಸಹಾಯ ಜೀವಿಗಳು ಇದ್ದಾರೆ ಎಂದು ಸಂತಸವಾಗುತ್ತದೆ. ಕೆನಡಾಗೆ ಬಂದು ಮೂರು ವರ್ಷಗಳಲ್ಲಿ ಮೂರು ಊರುಗಳನ್ನು ಸುತ್ತಾಡಿ ಈಗ ಬಂದಿರುವುದು ಬ್ರಾಂಪ್ಟನ್ ಎನ್ನುವ ಸುಂದರ ನಗರಕ್ಕೆ. ಈ ಊರನ್ನು ಹೂವುಗಳ ಊರು ಎಂದು ಕರೆಯುತ್ತಾರೆ, ಭಾರತೀಯರೇ ಹೆಚ್ಚಾಗಿರುವ ಈ ಊರಿನಲ್ಲಿ, ಕನ್ನಡಿಗರೂ ಹೆಚ್ಚಾಗಿದ್ದಾರೆ. ಕನ್ನಡದ ಜನ ಕೆನಡಾಗೆ ಬಂದಾಗ ಮೊದಲು ಹುಡುಕುವುದೆ ‘ಕನ್ನಡ ಸಂಘ’.

Read More

ಭೋಳೇತನದ ನಡುವೆಯೂ ಅರಳುವ ರಿಫ್ರೆಶಿಂಗ್ ಚಿಂತನೆಗಳು

ಈ ಜಗದ ಆಟವನ್ನು ನಿಚ್ಚಳವಾಗಿ ಮತ್ತು ಕಲಾತ್ಮಕವಾಗಿ ಕಾಣಿಸುವ ಹೊಣೆಹೊತ್ತ ರಂಗಭೂಮಿಯವರು ಕೊರೋನ ಕೊಟ್ಟ ವಿರಾಮದಲ್ಲಿ ಕೊಂಚ ನಿರಾಳವಾಗಿದ್ದರು. ನಿಧಾನಕ್ಕೆ ರಂಗಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿವೆ ಅನಿಸುವ ಹೊತ್ತಿಗೇ ಒಮೈಕ್ರಾನ್ ನಮ್ಮನ್ನು ಬೆರಳೆಣಿಸುತ್ತ ಕೂರುವಂತೆ ಮಾಡುತ್ತಿದೆ. ಇದು ಏರಿಕೆ ಕಂಡು ರಂಗಮಂದಿರಗಳು ಮತ್ತೆ ಮುಚ್ಚಲ್ಪಟ್ಟರೆ ಅಥವಾ ಕೇವಲ ಅರ್ಧದಷ್ಟು ಭರ್ತಿಗೆ ಅವಕಾಶ ಅಂತಾದರೆ ಮುಂದಿನ ಕಥೆ ಏನು ಎಂದು ಕೇಳಿಕೊಳ್ಳುವಂತಾಗಿದೆ. ಆದರೆ ಈ ಎರಡೂ ಎರಡೂವರೆ ವರ್ಷಗಳ ಪರ್ವ ಸಮಯದಲ್ಲಿ…

Read More

ದಾದಾಪೀರ್ ಜೈಮನ್ ಹೊಸ ಅಂಕಣ “ಜಂಕ್ಷನ್ ಪಾಯಿಂಟ್” ಇಂದು ಆರಂಭ

‘ನಾವು ಯಾವಾಗಲೂ ಹಾಗೆಯೇ ಅಲ್ಲವಾ? ನಮಗೆ ಗೊತ್ತಿರುವ ಯಾವುದೋ ಎಳೆ, ಬೇರೆಯವರ ಮಾತುಗಳಲ್ಲಿ ಬಂದಾಗ ಮಾತ್ರ ಅವರ ಮೇಲಿನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚುತ್ತದೆ. ಅಲ್ಲೂ ಹೀಗೆ ಆಯಿತು’ ಎನ್ನುತ್ತ ಪೀಜಿ ಹಾಸ್ಟೆಲ್ ರೂಮ್ ನಲ್ಲಿ ನಡೆದ ಭೇಟಿಯೊಂದರ ಕುರಿತು ಬರೆದಿದ್ದಾರೆ ಹೊಸ ತಲೆಮಾರಿನ ಕಥೆಗಾರ ದಾದಾಪೀರ್ ಜೈಮನ್. ತಮ್ಮ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಯ ಸಂದರ್ಭದಲ್ಲಿ ಹೀಗೆ ಭೇಟಿಯಾದ ವ್ಯಕ್ತಿಗಳ ಕುರಿತು, ಸನ್ನಿವೇಶಗಳ ಕುರಿತು ಅವರು ತಮ್ಮ ಹೊಸ ಅಂಕಣ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ