ಭೂಮಿಯ ಒಡಲು, ತೀರದ ಕಡಲು!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ
ವಿಭಾ, “ಅಲ್ಲಾ ಕಾವ್ಯಕ್ಕ, ಆಕ್ಸಿಜನ್ಗೂ, ಸಮುದ್ರಕ್ಕೂ ಏನು ಸಂಬಂಧ? ಮರಗಿಡಗಳು ತಾನೇ ಆಮ್ಲಜನಕ ನೀಡೋದು ನಮ್ಗೆ?” ಎಂದು ಮರು ಪ್ರಶ್ನಿಸಿದಳು. ಆಗ ಕಾವ್ಯ, “ಅಲ್ಲ, ಪ್ರತೀ ವರ್ಷ ‘ಪರಿಸರ ದಿನ’ ಬಂದಾಗ್ಲೂ, ಭಾಷಣಗಳಲ್ಲಿ ಕೇಳಿರ್ತೀವಿ, ಲೇಖನಗಳನ್ನ ಓದಿರ್ತೀವಿ, ಮರಗಳನ್ನ ಕಡೀಬಾರ್ದು. ಮರಗಳೇ ಇಲ್ದೇ ಇದ್ರೆ ನಮಗೆ ಉಸಿರಾಡೋಕೆ ಆಮ್ಲಜನಕ ಎಲ್ಲಿಂದ ಸಿಗತ್ತೆ ಅಂತ! ನಿಜಾ, ಮರಗಳನ್ನ ಕಡೀಬಾರ್ದು. ಪ್ರತೀ ಮರವೂ ತನ್ನದೇ ರೀತೀಲಿ ವಿಶಿಷ್ಟ ಮತ್ತು ಭೂಮಿಗೆ, ಭೂಮಿಯ ಸಣ್ಣ ಪುಟ್ಟ ಕಣ್ಣಿಗೆ ಕಾಣದ ಜೀವಿಗಳಿಂದಾ ಬೃಹತ್ ಜೀವಿಗಳವರೆಗೂ ಎಲ್ಲರಿಗೂ ನೂರಾರು ರೀತಿಯಲ್ಲಿ ಮರಗಳು ಮುಖ್ಯ. ಆದ್ರೆ, ಮರಗಿಡಗಳಿಗಿಂತ್ಲೂ ಹೆಚ್ಚು ಆಮ್ಲಜನಕವನ್ನ ಸಮುದ್ರವು ವಾತಾವರಣಕ್ಕೆ ಕೊಡುಗೆ ನೀಡತ್ತೆ. ಅದು ಹೇಗೆ ಗೊತ್ತಾ?
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೇಳನೆಯ ಕತೆ

