Advertisement

Category: ಸಂಪಿಗೆ ಸ್ಪೆಷಲ್

ಮಳೆ ದೇವರು ಬರೆದ ಕವಿತೆ..

ಮಳೆಯು ಮಳೆಗಾಲವನು ತೊರೆದಿದೆ. ಈಗ ಎಲ್ಲಾ ತಿಂಗಳಲ್ಲಿ ಆತ ಒಮ್ಮೆಯಾದರೂ ಇಣುಕುವ ಅತಿಥಿ. ಅಲ್ಲೆಲ್ಲೊ ಸಮುದ್ರದ ಮೇಲೆ ಆಗಾಗ್ಗೆ ನೂರೆಂಟು ಭಾರಗಳು. ಮಳೆಗೆ ಅಲ್ಲಲ್ಲಿ ಎಕ್ಸ್ಟ್ರಾ ಡ್ಯೂಟಿ. ತರಗತಿಯಲ್ಲಿ ನೋಡಿ ಮಕ್ಕಳೇ ಕಾಲಗಳು ಮೂರು, ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಅಂದೆ. ಒಬ್ಬ ಪೋರ ಕಿಕೀಕ್ ಅಂತ ನಕ್ಕು ಹೇಳಿದ “ಬಿಸಿಲು ಇದ್ದಾಗ ಬರುತ್ತೆ ಚಳಿ‌ ಇದ್ದಾಗಲೂ ಬರುತ್ತಲ್ಲ” ಅಂತ. “ಹೌದು ಮಳೆಗೆ ಈಗ ವಿಶೇಷ ಸೀಸನ್ ಪಾಸ್ ಸಿಕ್ಕಿದೆ” ಎಂದೆ. ಹೇಳು ಮಳೆಯೆ ಮಕ್ಕಳ ಮುಂದೆ ಹೀಗೆ ನೀನು ಅವಮಾನಿಸುವುದು ಸರಿಯೇ..?
ಸದಾಶಿವ್ ಸೊರಟೂರು ಬರಹ

Read More

ಕಥೆಕೂಟ ಎಂಬ ಕಥಾ ವ್ಯಾಮೋಹಿಗಳ ಜಗತ್ತು

ಕಥೆಕೂಟವೆಂಬ ವಾಟ್ಸ್ ಆಪ್ ಗ್ರೂಪ್ ಆರು ವರ್ಷಗಳಿಂದ ಸದ್ದು ಮಾಡುತ್ತಿದೆ. ಹೊಸತಲೆಮಾರಿನ ಕತೆಗಾರರು , ಹಿರಿಯ ಬರಹಗಾರರು ಸೇರಿಕೊಂಡು ಸಾಹಿತ್ಯದ ನೆಪದಲ್ಲಿ ಬದುಕಿನ ಅನೇಕ ವಿಚಾರಗಳನ್ನು, ಸಿದ್ಧಾಂತಗಳನ್ನು ಚರ್ಚಿಸುತ್ತಾರೆ. ಅನುಭವಲೋಕದ ಜಿಜ್ಞಾಸೆಗಳೊಂದಿಗೆ ಆ ಮಾತಿನ ಮಂಟಪ ರಂಗೇರುತ್ತದೆ. ಜೂನ್ 25 ಮತ್ತು 26ರಂದು ಆರನೇ ವರ್ಷದ ಸಮಾವೇಶ ನೆಲಮಂಗಲದ ಬಳಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಥೆಕೂಟದ ಕತೆಗಾರ್ತಿ ಪ್ರಿಯಾ ಕೆರ್ವಾಶೆ ಡಿಜಿಟಲ್ ಲೋಕದ ತಮ್ಮ ಅನುಭವಗಾಥೆಯನ್ನು ಇಲ್ಲಿ ಮಂಡಿಸಿದ್ದಾರೆ.

Read More

ಗುಬ್ಬಕ್ಕ ಸಿಕ್ಕಳು ಸುಮ್-ಸುಮ್ನೆ ನಕ್ಕಳು!

ಕೈ ಬೊಗಸೆಯಲ್ಲಿ ನೀರು ಹಿಡಿದು ಬಂದಾಗ ನನ್ನ ಕೈ ಮೇಲೆ ಎಗರಿ ಬಂದು ಕುಳಿತು, ನೀರನ್ನು ಗುಟುಕು ಗುಟುಕಾಗಿ ಕುಡಿದು ನನ್ನ ಮುಖ ನೋಡಿದ ಗುಬ್ಬಕ್ಕ “ನಮ್ಮ ಪೂರ್ವಜರು, ನಿಮ್ಮ ತರಹ ಸಹಾಯ ಮಾಡಿದವನ್ನೆಲ್ಲ ಹುಡುಕಿ ನಮ್ಮೆಲ್ಲರ ಪರವಾಗಿ ಕೃತಜ್ಞತೆ ಹೇಳಲು ಆಜ್ಞೆ ಮಾಡಿದ್ದರು. ನಿಮ್ಮ ಪೂರ್ವಜರಿಗೆಲ್ಲರಿಗೂ, ನಿನ್ನ ಮೂಲಕ ನಮ್ಮೆಲ್ಲರ ನಮಸ್ಕಾರಗಳು. ಈ ಸಣ್ಣ ಪ್ರಯತ್ನದಿಂದ ನಮ್ಮೆಲ್ಲ ಬಂಧುಗಳಿಗೆ ಶಾಂತಿ ದೊರೆಯುತ್ತದೆ.
ಬೆಂಗಳೂರಿನಂಥ ಮಹಾನಗರಗಳನ್ನು ತೊರೆದುಹೋದ ಗುಬ್ಬಚ್ಚಿಗಳ ಕುರಿತು ಬರೆದಿದ್ದಾರೆ ವಾಸುದೇ ಕೃಷ್ಣಮೂರ್ತಿ

Read More

ಔದಾರ್ಯದ ಉರುಳಲ್ಲಿ ಚಿಕ್ಕೋಳೂ ಹಿರಿದಿಮ್ಮಿ

ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂಬುದು ನಿಜವಾದರೂ, ಔದಾರ್ಯವು, ನೀಡುವವನ ಬದುಕನ್ನೆ ಕಸಿದುಕೊಳ್ಳುವಷ್ಟು ಅತಿಯಾಗಿ ಇರಬಾರದೇನೋ. ಜನಪದ ಕಥನ ಕಾವ್ಯವಾದ ‘ಚಿಕ್ಕೋಳು ಹಿರಿದಿಮ್ಮಿ’ಯಲ್ಲಿ ಮನುಷ್ಯರ ಔದಾರ್ಯ, ಪ್ರಾಣಿಗಳ ಪ್ರಾಮಾಣಿಕತೆಯ ಉತ್ತುಂಗದ ಪರಿಚಯವಾದಂತೆಯೇ, ಮನುಷ್ಯರು ಮೃಗಕ್ಕಿಂತಲೂ ಕೀಳಾಗಿ ವರ್ತಿಸುವ ಮತ್ತೊಂದು ಪಾತ್ರದ ಪರಿಚಯವೂ ಆಗುತ್ತದೆ. ಈ ಖಂಡ ಕಾವ್ಯದ ಕತೆಯನ್ನು ಹೇಳಿದ್ದಾರೆ ಲೇಖಕಿ ಸುಮಾವೀಣಾ.

Read More

ತಪ್ಪು ಮಾಡುವುದಿಲ್ಲವೆಂದು ಎಷ್ಟೇ ನಿರ್ಣಯಿಸಿದರೂ…

ತಾಯಿಯ ಗರ್ಭದಲ್ಲಿರುವ ಭ್ರೂಣವೊಂದು ಹಿಂದಿನ ಜನ್ಮದಲ್ಲಿ ತಾನು ಮಾಡಿದ ತಪ್ಪುಗಳನ್ನೆಲ್ಲ ನೆನಪಿಸಿಕೊಳ್ಳುತ್ತದೆ. ಮುಂದಿನ ಜನ್ಮದಲ್ಲಿ ಅಂತಹ ತಪ್ಪುಗಳನ್ನು ಖಂಡಿತಾ ಮಾಡುವುದಿಲ್ಲವೆಂದು ನಿಕ್ಕಿ ಮಾಡಿಕೊಳ್ಳುತ್ತದೆ. ಯಾವುದು ಆ ತಪ್ಪುಗಳು ಎಂದು ಸಿಂಹಾವಲೋಕನ ಮಾಡಿದರೆ -ಅವುಗಳೇ ಜೀವನದ ಹತ್ತು ಅವಸ್ಥೆಗಳು. ಗುರುಗ್ರಂಥದಲ್ಲಿರುವ ‘ಗುರುಬನಿ’ಯೊಂದನ್ನುಆಯ್ದುಕೊಂಡು ಪ್ರಸಿದ್ಧ ಭರತನಾಟ್ಯ ಕಲಾವಿದೆ ರಮಾವೈದ್ಯನಾಥನ್ ಅವರು ಅದನ್ನು ರಸಿಕವರ್ಗಕ್ಕೆ ಉಣಬಡಿಸಿದ ನೃತ್ಯರೂಪಕವೇ ಜೀವದಶಾವಸ್ಥಾ. ಈ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಲೇಖನವೊಂದು ಇಂದಿನ ಓದಿಗಾಗಿ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ