Advertisement

Category: ಸರಣಿ

ಸೂಫಿ ಕಥಾನಕ

ಮಕ್ಕಳ ಈ ಮಾತುಗಳು ಹಬೀಬ್‌ರವರಿಗೆ ಬಹಳವಾಗಿ ನಾಟಿತು. ಅವರು ತನ್ನ ದಾರಿ ಬದಲಿಸಿ ಶುಕ್ರವಾರ ಮಸೀದಿಯ ಸಭೆಗೆ ನಡೆಯ ತೊಡಗಿದರು. ಅಲ್ಲಿ ಹಸನ್ ಅಲ್ ಬಸ್ರೀಯವರ ಪ್ರವಚನದ ಕೆಲವು ವಾಕ್ಯಗಳು ಅವರ ಹೃದಯಕ್ಕೆ ನೇರವಾಗಿ ತಾಗಿ ಅವರಿಗೆ ಸ್ಮೃತಿ ತಪ್ಪಿದಂತಾಯಿತು.

Read More

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ – ೩

ಕೃಷ್ಣ ಹೇಳಿದ: ನಮ್ಮ ಒಳಗಿನ ನಿಜ ನಮ್ಮನ್ನು ಹೇಗೆ ಸಹಿಸಿಕೊಂಡಿದೆ ಗೊತ್ತೇನು? ಆ ಒಳಗಿನ ನಿಜವನ್ನು ಬೇಕಾದರೆ ದೇವರೆನ್ನಿ. ಅದು ಈ ಲೋಕಕ್ಕೆ ನಮ್ಮನ್ನು ಒಪ್ಪಿಸಿ ತಾನು ಸದಾ ವಿದಾಯದ ಭಾವದಲ್ಲಿ ಇರುವಂತಿದೆ. ಸತ್ಯ ಅಡಗಿದೆ ಎನ್ನುತ್ತಾರಲ್ಲ- ತಿಳಿದಮಂದಿ. ಅಡಗಿದೆ ಎಂದರೆ ಸತ್ಯ ನಮ್ಮ ವಿರಹವನ್ನು ಅನುಭವಿಸುತ್ತಿದೆ. ನಮ್ಮನ್ನು ಅದಕ್ಕೆ ಒಪ್ಪಿಸದೆ ನಾವದನ್ನು ಪಡೆಯಲಾರೆವು. ಮತ್ತು ಒಪ್ಪಿಸುವುದೆಂದರೆ ನಮಗೆ ನಾವೇ ವಿದಾಯವನ್ನು ಕೋರಿದಂತೆ. ಅದಿರಲಿ; ನಿಮ್ಮ ವಿರಹ ನನ್ನನ್ನು ಎಂದೂ ಬಿಟ್ಟಗಲುವುದಿಲ್ಲ’

Read More

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ – ೨

ಅಮೃತ ಕುಡಿದ ಸೊಕ್ಕಿನಿಂದ ದೇವತೆಗಳು ಗೆದ್ದರೇನೋ ನಿಜ. ಆಗ ದೈತ್ಯರ ದೊರೆಯಾಗಿದ್ದ ಬಲಿಚಕ್ರವರ್ತಿ ವಜ್ರಾಘಾತದಿಂದ ಸಾಯಬಿದ್ದ. ದೈತ್ಯಗುರುಗಳಾಗಿದ್ದ ಶುಕ್ರಾಚಾರ್ಯರು ತಮ್ಮ ಮಂತ್ರಬಲದಿಂದ ಬಲಿ ಚೇತರಿಸುವಂತೆ ಮಾಡಿದರು.

Read More

ಲಕ್ಷ್ಮೀಶ ತೋಳ್ಪಾಡಿ ವಿರಚಿತ ಸಂಪಿಗೆ ಭಾಗವತ ಮೊದಲ ಭಾಗ.

ವೇದ, ಉಪನಿಷತ್, ಮಹಾಕಾವ್ಯ,ಪರಿಸರ, ಸೌಂದರ್ಯ ಹಾಗೂ ಮಾನವ ಜೀವನದ ಕುರಿತು ಆಳವಾಗಿ, ಸ್ಪಷ್ಟವಾಗಿ ಮಾತನಾಡಬಲ್ಲ, ಬರೆಯಬಲ್ಲ ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಈ ತಲೆಮಾರಿನ ಬಹಳ ಒಳ್ಳೆಯ ವಿದ್ವಾಂಸರಲ್ಲಿ ಒಬ್ಬರು. ತೋಳ್ಪಾಡಿಯವರು ಬರೆಯುವ ಭಾಗವತ ಕಥಾ ಸರಣಿ ಇನ್ನು ಮುಂದೆ ಪ್ರತೀ ಬುಧವಾರ ಕೆಂಡಸಂಪಿಗೆಯಲ್ಲಿ ಮೂಡಿಬರಲಿದೆ.ವರ್ತಮಾನದ ಕಥೆಗಳನ್ನೂ ಪುರಾಣಗಳ ಅಲೌಕಿಕ ಲೋಕವನ್ನೂ ಒಂದೇ ಕಡೆ ಹಿಡಿದಿಡುವ ಕೆಂಡಸಂಪಿಗೆಯ ಪ್ರಯತ್ನಗಳು ನಿಮಗೆಲ್ಲಾ ಇಷ್ಟವಾಗಬಹುದು ಎಂಬ ಆಶೆ ನಮ್ಮದು…

Read More

ರಮೇಶ್ ನಾಯಕ್ ಬರೆದ ಲಂಬಾಣಿ ಕಥಾಪ್ರಸಂಗಗಳು

ನಮ್ಮ ಗು೦ಪಿನ ನಾಲ್ಕು ಹುಡುಗ್ರು ಅವನ ಮನೆ ಕಡೆ ಹೋಗುವ ದಾರಿಯಲ್ಲೆ ಕಾದು ಕೂತೆವು. ಈ ವಿಷ್ಯ ನಮ್ಮ ತಾ೦ಡೆಯ ಹಿರಿಯ ನಾರಾಯಣ ಬುಡ್ದನಿಗೆ ಮೊದಲೆ ಹೇಳಿದ್ವಿ. ನಾರಾಯಣ ಬುಡ್ದನಿಗೆ ಪೆಮಲ್ಯಾನ ಮೇಲೆ ಯಾವುದೋ ಕಾರಣಕ್ಕೆ ಸಿಟ್ಟು ಇತ್ತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ