Advertisement

Category: ದಿನದ ಅಗ್ರ ಬರಹ

ಕಾರಂತರ ದಾರಿಯಲ್ಲಿ ಸಾಗಿದ ಬಾಲಕ: ಡಾ. ಮಹೇಂದ್ರಮೂರ್ತಿ ದೇವನೂರು

ಪ್ರಸನ್ನರ ಕತೆಗಳು ಆಧುನಿಕ ಬದುಕಿನ ಸಂವೇದನೆಗಳನ್ನೂ ದಾಖಲಿಸುತ್ತವೆ. ವಿಜ್ಞಾನ, ತಂತ್ರಜ್ಞಾನದ ಅನೇಕ ಸಂಗತಿಗಳು ಕತೆಯಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಕತೆಗಳು ವರದಿಯಾಗಬಾರದು. ಸಾಹಿತ್ಯ ಕೃತಿಗಳಾಗಬೇಕು. ಸಂದೇಶವನ್ನು ರವಾನಿಸಬೇಕು. ಸಮಾಜದ ಪ್ರಗತಿಗೆ ಬೆಳಕಿಂಡಿಗಳನ್ನು ತೆರೆಯಬೇಕು ಎಂದು ನಂಬಿದವನು ನಾನು. ಕೆಲವು ಕತೆಗಳು ಆ ಕೆಲಸವನ್ನು ಪೂರೈಸಿವೆ. ವಿಜ್ಞಾನ, ದೇಶ-ವಿದೇಶಗಳ ವಸುಗಳು ಕತೆಯಾಗುತ್ತಿರುವುದು ವಿಶೇಷ. ಆದರೆ ಮೌಢ್ಯವನ್ನು ಬಿತ್ತಬಾರದು.
ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಡಾ. ಮಹೇಂದ್ರಮೂರ್ತಿ ದೇವನೂರು ಬರಹ

Read More

‘ನಿಜಸತ್ಯ’ದ ನಿತ್ಯ ಕವಿತೆಗಳು: ಪ್ರದೀಪ್ ಕುಮಾರ್ ಹೆಬ್ರಿ ಬರೆದ ಮುನ್ನುಡಿ

ವ್ಯಭಿಚಾರಿ ಹೂವು ಕವನ ಸಂಕಲನದ ಕವನಗಳನ್ನು ಓದಿದಂತೆ, ಓದಿಯಾಯಿತು ಎಂದು ಪೂರ್ಣವಿರಾಮ ಹಾಕಲು ಆಗುವುದೇ ಇಲ್ಲ. ಇನ್ನೊಮ್ಮೆ ಓದೋಣ, ಮತ್ತೊಮ್ಮೆ ಓದೋಣ ಎಂದೆನಿಸುತ್ತಲೇ ಇರುತ್ತದೆ. ಅರ್ಜುನನಿಗೆ ಶ್ರೀಕೃಷ್ಣನಂದು ಗೀತೆ ಬೋಧಿಸಿದ. ಕವಿ ಮನು ಗುರುಸ್ವಾಮಿಯವರು ‘ಕವಿತೆ’ ಬೋಧಿಸುತ್ತಿದ್ದಾರೆ. ಹಾಗಾಗಿ ನನ್ನ ದೃಷ್ಟಿಯಲ್ಲಿ ಈ ಕವನ ಸಂಕಲನ ‘ಆತ್ಮಗೀತೆ!’ ಮಾನವ ಬದುಕಿಗೆ ಸ್ವಾರ್ಥ, ಮೋಸ, ವಂಚನೆ, ತಲ್ಲಣ, ತಳಮಳ….ಗಳೆಲ್ಲವೂ‌ ಬಿತ್ತರವಾಗಿವೆ. ಮನದ ಅಸಹನೆಯನ್ನು ‘ಸತ್ಯನುಡಿ’ಗಳ ಮೋಹಕತೆಯಲ್ಲಿ ರಂಗೇರಿಸುತ್ತದೆ.
ಮನು ಗುರುಸ್ವಾಮಿ ಕವನ ಸಂಕಲನ “ವ್ಯಭಿಚಾರಿ ಹೂವು”ಕ್ಕೆ ಪ್ರದೀಪ್ ಕುಮಾರ್ ಹೆಬ್ರಿ ಬರೆದ ಮುನ್ನುಡಿ

Read More

ಸ್ಯಾಂಕಿ ಟ್ಯಾಂಕ್ ಎಂಬ ಬೆಂಗಳೂರಿಗರ ಕಾಶಿ!: ದೀಪಾ ಫಡ್ಕೆ ಬರಹ

ಸ್ಯಾಂಕಿಯ ಇನ್ನೊಂದು ಮೂಲೆಗೆ ತಲುಪುವ ಹೊತ್ತಿಗೆ ನೀರಿನಲ್ಲಿರುವ ತುಂಡು ಮರದ ಮೇಲೆ ಈ ನೀರುಕಾಗೆಗಳದು ಸನ್ ಬೇದಿಂಗ್ ನಡೆಯುತ್ತಿರುತ್ತದೆ. ಎರಡೂ ರೆಕ್ಕೆಗಳನ್ನು ಇಷ್ಟಗಲಕ್ಕೆ ಬಿಡಿಸಿಕೊಂಡು ತಿರುಗುವ ಟೇಬಲ್ ಫ್ಯಾನಿನಂತೇ ಸೂರ್ಯನ ಮುಂದೆ ಮೈಯೊಣಗಿಸಿಕೊಂಡು ನಿಂತಿರುತ್ತದೆ. ಇಲ್ಲಿರುವ ಮರಗಳ ಮೇಲಿನ ಸಂಸಾರದ ಕತೆಯೂ ವಿಶಿಷ್ಟವೇ. ಗೂಬೆಗಳ, ಮಿಂಚುಳ್ಳಿಗಳ ಸಂಸಾರ ಬೆಳೆಯುವುದನ್ನು ಕಂಡಿದ್ದೇವೆ. ಒಂದೇ ಒಂದು ಸಾರಿ ಅಚ್ಚ ಹಳದಿ ಬಣ್ಣದ ಗೋಲ್ಡನ್ ಓರಿಯಲ್ ನೋಡಿದ ಧನ್ಯತೆ ನಮ್ಮದು.
ಬೆಂಗಳೂರಿನ ಸುಪ್ರಸಿದ್ಧ ಸ್ಯಾಂಕಿ ಕೆರೆಯ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ

Read More

ಕ್ಯಾಸೆಟ್ಟಿನೊಳಗೆ ಅಡಗಿ ಕೂತ ನೆನಪುಗಳು: ಮಾಲತಿ ಶಶಿಧರ್‌ ಬರಹ

ಆ ಹಾಡಿನ ಅರ್ಥ ಭಾವ ತಿಳಿಯದ ವಯಸ್ಸಿನಲ್ಲಿ ನಾನು ಆ ಚಿತ್ರದ “ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ” ಎನ್ನುತ್ತಾ ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಎಂದು ರಾಗವಾಗಿ ಹೇಳುವಾಗ ಅಕ್ಕಪಕ್ಕದ ಮನೆಯವರೆಲ್ಲಾ ನನ್ನ ನೋಡಿ ನಗುತ್ತಿದ್ದರೆ ನನಗೆ ಇನ್ನಷ್ಟು ಹುಮ್ಮಸ್ಸು ಬಂದು ಮತ್ತಷ್ಟು ಜೋರಾಗಿ ಹಾಡುತ್ತಿದ್ದದ್ದು ಈಗ ನೆನೆಸಿಕೊಂಡರೆ ಮುಖ ಮುಚ್ಚಿಕೊಳ್ಳುವಂತಾಗುತ್ತದೆ.
ಟೇಪ್‌ ರೆಕಾರ್ಡರ್‌ನಲ್ಲಿ ಹಾಡನ್ನು ಕೇಳುತ್ತಿದ್ದ ದಿನಗಳ ಕುರಿತು ಮಾಲತಿ ಶಶಿಧರ್‌ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್ ಕಥೆ

ಈ ದೃಶ್ಯಕ್ಕೆ ಅನತಿ ದೂರದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆಯುತ್ತಿದೆ. ಲಚ್ಚಣ್ಣನಿಗೆ ಎರಡು ದಶಕಗಳ ಕಾಲ ಈ ಊರಿನಲ್ಲಿ ಅನ್ನದ ವ್ಯಾಪ್ತಿ ತೋರಿಸಿದ್ದ ದೇವಿ ಪ್ರಸಾದ ಹೋಟೆಲಿನ ವಸ್ತ್ರಾಪಹರಣ ಮಾಡುತ್ತಿರುವಂತೆ ನಾಲ್ವರು ಕೆಲಸಗಾರರು ಅದರ ಮಾಡಿನ ಹಂಚುಗಳನ್ನು ಕಳಚಿ ಇಳಿಸುತ್ತಿದ್ದಾರೆ. ಆ ಹೋಟೆಲನ್ನು ಮೂರು ದಶಕಗಳ ಕಾಲ ನಡೆಸಿದ್ದ ಗೋಪಾಲಕೃಷ್ಣ ಮಂಜಿತ್ತಾಯರು ಕೊನೆಯುಸಿರೆಳೆದ ತಾಯಿಯ ಶವದೆದುರು ಶತಪಥ ಹಾಕುವ ಆಘಾತಗೊಂಡ ಮಗನಂತೆ ಅತ್ತಿಂದಿತ್ತ ಹೋಗುತ್ತಿದ್ದಾರೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್‌ ಬರೆದ ಕತೆ “ವಿದಾಯ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ