Advertisement

Category: ದಿನದ ಪುಸ್ತಕ

“ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕತೆಗಳಾದರೂ ಉಳಿಯುತ್ತವೆ”: ಹೃದಯ ಶಿವ ಕಥಾಸಂಕಲನಕ್ಕೆ ಸ್ವಾಮಿ ಪೊನ್ನಾಚಿ ಬರಹ

ಹೃದಯಶಿವ ಅವರ ಕಥೆಗಳನ್ನು ಓದುವ ಕುತೂಹಲದ ಮಜವೇ ಬೇರೆ. ಕನಕಪುರದ ಕೆಬ್ಬರೆ ಗ್ರಾಮದಲ್ಲಿ ಶುರುವಾದ ಕಥೆ ಬೆಂಗಳೂರಿನ ಸಿನಿಮಾರಂಗದಲ್ಲಿ ಬಂದು ನಿಲ್ಲುತ್ತದೆ. ವೈಯಕ್ತಿಕ ದನಿಯ ಆಚೆಗೆ ಕತೆಗಳು ವಿಸ್ತಾರಗೊಳ್ಳುತ್ತಾ ಸಮಷ್ಟಿಯೆಡೆಗೆ ಹೋಗುತ್ತವೆ. ಬದುಕಿನ ಪರಸ್ಪರ ವೈರುಧ್ಯಗಳೇ ಹೆಚ್ಚು ಕಥೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಥೆ ಓದುವಾಗ ಶುರುವಾಗುವ ನೆಗೆಟಿವ್ ಕಾಂಪ್ಲೆಕ್ಸ್ ಕೊನೆಯಲ್ಲಿ ಪಾಸಿಟಿವ್ ಆಗಿರುತ್ತದೆ. ಭರವಸೆ, ಆಶಾಭಾವ ಕಥೆಗಳಲ್ಲಿ ವ್ಯಕ್ತವಾಗುತ್ತವೆ.
ಹೃದಯ ಶಿವ ಹೊಸ ಕಥಾಸಂಕಲನ “ಸೂಪರ್ ಗಾಡ್ ಸಣ್ಣಯ್ಯ” ಕೃತಿಗೆ ಸ್ವಾಮಿ ಪೊನ್ನಾಚಿ ಮುನ್ನುಡಿ

Read More

ಉಪ್ಪನ್ನು ಹೀರಿಕೊಂಡ ನೀರಿನಂಥ ಕತೆಗಳು: ಮುನವ್ವರ್ ಕಥಾಸಂಕಲನಕ್ಕೆ ವಿನಾಯಕ ಅರಳಸುರಳಿ ಮುನ್ನುಡಿ

ಎಲ್ಲರೂ ಅರ್ಥವಾದಂತೆ ನಟಿಸುವ ಆದರೆ ನಿಜದಲ್ಲಿ ಸಂಕೀರ್ಣ ಸಮೀಕರಣದಂತಿರುವ ಬಡತನವೆನ್ನುವ ಬಾಳೆ ದಿಂಡಿನ ತಿರುಳನ್ನು ಪದರ ಪದರವಾಗಿ ಬಿಚ್ಚಿಟ್ಟು ‘ಇದು ಜಗತ್ತು, ಇದೇ ಜಗತ್ತು’ ಎಂದು ದಿಟ್ಟವಾಗಿ ಹೇಳುವ ಗಟ್ಟಿತನ ಇಲ್ಲಿನ ಹಲವು ಕಥೆಗಳಲ್ಲಿದೆ.‌ ಬಲ್ಬಿಗೆ ಬೆಳಕನ್ನು ತಲುಪಿಸುವ ತಂತಿಯ ವಿದ್ಯುತ್ತಿನಲ್ಲೇ ಪ್ರಾಣ ತೆಗೆಯುವ ಕರೆಂಟೂ ಇದೆ. ದುರಂತವೆಂದರೆ ನಮ್ಮ ಸಮಾಜದ ಕತ್ತಲನ್ನು ಹೋಗಲಾಡಿಸಲು ಕಂಡು ಹಿಡಿದ ನಾನಾ ಕರೆಂಟುಗಳು ಇಲ್ಲಿಯ ತನಕ ಬೆಳಕು ಕೊಟ್ಟಿದ್ದಕ್ಕಿಂತ ಪ್ರಾಣ ತೆಗೆದಿದ್ದೇ ಹೆಚ್ಚು ಎನ್ನುವ ಸೂಕ್ಷ್ಮವನ್ನು ಉಪ್ಪನ್ನು ಹೀರಿಕೊಂಡ ನೀರಿನಂತೆ ಇಲ್ಲಿನ ಕಥೆಗಳು ಕರಗಿಸಿಕೊಂಡಿವೆ.
ಮುನವ್ವರ್ ಜೋಗಿಬೆಟ್ಟು ಹೊಸ ಕಥಾಸಂಕಲನ “ಟಚ್‌ ಮೀ ನಾಟ್”ಕ್ಕೆ ವಿನಾಯಕ ಅರಳಸುರಳಿ ಮುನ್ನುಡಿ

Read More

ಮನುಷ್ಯ ಬದುಕಿನೊಂದಿಗೆ ಮುಖಾಮುಖಿಯಾಗುವ ಪದ್ಯಗಳು: ಕಲ್ಲೇಶ್ ಕುಂಬಾರ್ ಬರಹ

ಕವಿಯಾಗಿ ಮಾಲತಿಯವರಿಗೆ ಕತ್ತಲು ಮತ್ತು ಬೆಳಕಿನ ಕುರಿತಾಗಿ ವಿಶಿಷ್ಟವಾದ ಆಕರ್ಷಣೆಯಿದೆ ಎನ್ನಬಹುದು. ಈ ಮಾತಿಗೆ ಸಾಕ್ಷಿಯಾಗಿ ಈ ಕವನಸಂಕಲನದಲ್ಲಿ ‘ಅಜ್ಜಿ ಮತ್ತು..’ ಎಂಬ ಪದ್ಯವೊಂದಿದೆ. ಇಲ್ಲಿ, ಕತ್ತಲು–ಬೆಳಕಿನ ಆಟವನ್ನು ಕೇಂದ್ರವಾಗಿರಿಸಿಕೊಂಡು ಮನುಷ್ಯ ಬದುಕಿನ ಕ್ರಿಯೆಗಳನ್ನು ಅವರು ಶೋಧಿ‌ಸಲು ಪ್ರಯತ್ನಿಸಿದ್ದಾರೆ.‌ ಈ ಪದ್ಯದ ಶೀರ್ಷಿಕೆಯಲ್ಲಿರುವ ‘ಅಜ್ಜಿ’ ಬೇರಾರೂ ಆಗಿರದೇ ನಮ್ಮೊಳಗಿನ ಅರಿವಿನ ಕೇಡು ಕಳೆಯಲೆಂದು ನಮ್ಮ ಎದೆಯಂಗಳದಲ್ಲಿ ಮುಡಿಸಿಟ್ಟ ಅರಿವಿನ ದೀವಿಗೆಯೇ ಆಗಿದ್ದಾಳೆ!
ಮಾಲತಿ ಗೋರೆಬೈಲ್ ಬರೆದ “ಗುಬ್ಬಿ ಲಾಟೀನು” ಕವನ ಸಂಕಲನದ ಕುರಿತು ಕಲ್ಲೇಶ್‌ ಕುಂಬಾರ್‌ ಬರಹ

Read More

ಕುಸುಮಾ ಆಯರಹಳ್ಳಿ ಬರೆದ ಈ ಭಾನುವಾರದ ಕತೆ

ಮಹೇಶ ಅಷ್ಟು ಸಲ ವಿಧಾನಸೌಧಕ್ಕೆ ಹೋಗಿಬಂದು ಕೆಲಸ ಆಗಲಿಲ್ಲ ಅಂತ ಬೇಸರ ಮಾಡಿಕೊಂಡು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವಾಗೆಲ್ಲ ನನಗೆ ಕೋಪ ಬರ್ತಿತ್ತು ಮೇಷ್ಟ್ರೇ. ಪ್ರಜೆಗಳನ್ನ ಬಾಗ್ಲಲ್ಲಿ ನಿಲ್ಸಿ ಜಾತಿ ಯಾವುದಯ್ಯಾ ಒಳಗೋಗಕೆ? ಅಂತ ಕೇಳಕಾ ಆ ಪುಣ್ಯಾತ್ಮರು ದೇಶಾ ಕಟ್ಟಿದ್ದು? ಅಂತ ಕೋಪ ಉಕ್ಕುಕ್ಕಿ ಬರದು. ರಾತ್ರಿ ನಿದ್ದೆ ಬರ್ತಿರಲಿಲ್ಲ. ಆಚೆ ಭಾಷಣದಲ್ಲಿ ಹೇಳೋದು ಒಂದು. ಒಳಗ್ ಮಾಡದೊಂದು. ಇದಕ್ಕೇ ಏನಯ್ಯಾ ನಿಮಗೆ ಸಂವಿಧಾನ ಬರ್ಕೊಟ್ಟಿದ್ದು? ನೊಂದವರೇ ನೋಯಿಸಿದರೆ ಅದಕ್ಕಿಂತಾ ಕೇಡುಂಟಾ ಲೋಕದಲ್ಲಿ?
ಕುಸುಮಾ ಆಯರಹಳ್ಳಿ ಬರೆದ “ಕಪಿಲೆ ಕಂಡ ಕತೆಗಳು” ಕಥಾಸಂಕಲನ ಇಂದು ಬಿಡುಗಡೆಯಾಗಲಿದ್ದು ಈ ಕೃತಿಯ “ದೈತ್ಯ” ಕತೆ ನಿಮ್ಮ ಓದಿಗೆ

Read More

ಮಾತು ಹೆಪ್ಪುಗಟ್ಟಿ ಕಾವ್ಯವಾದ ಬಗೆ: ಡಾ.ಎ.ರಘುರಾಂ ಬರಹ

ಮಂಜುನಾಥ್ ಪಾಳ್ಯ ಅವರ ಎಲ್ಲ ಕವಿತೆಗಳನ್ನು ಓದಿದಾಗ ಅಲ್ಲಿನ ಭಾಷೆ, ವಸ್ತು, ನಿರ್ವಹಣೆಯ ಬಗ್ಗೆ ನೋಡಬೇಕು. ವಸ್ತು ಸಾಮಾಜಿಕವೇ ಆದರೂ ಕೂಡ ನಿರ್ವಹಣೆಯ ಸಂದರ್ಭದಲ್ಲಿ ಅದು ಭಿನ್ನ ಪಾತಳಿಗಳನ್ನು ಕಾಣುತ್ತದೆ. ಕವಿ ಪ್ರತಿಭಟಿಸುವಲ್ಲಿ ಕಾವ್ಯ ಬಂಡಾಯದ ಚಾಟಿ ಬೀಸುತ್ತದೆ. ಮೌನವಾಗಿ ಪ್ರೇಮಕ್ಕೆ ಮರುಳಾದಾಗ ಅಲ್ಲಿನ ಭಾಷೆ ತೀರ ಕೋಮಲವಾಗಿಬಿಡುತ್ತದೆ. ಭ್ರಷ್ಠತೆ, ಅತ್ಯಾಚಾರ, ಶೋಷಣೆ ವಿಚಾರಗಳು ಬಂದರೆ ಭಾಷೆ ಸ್ವಲ್ಪ ಒರಟಾಗಿಬಿಡುತ್ತದೆ. ಕಾವ್ಯ ಹೀಗೆ ಭಿನ್ನ ಪಾತಳಿಗೆ ಒಳಗಾಗುವುದು ಕವಿಯ ಸಂವೇದನಾಶೀಲ ಗುಣವನ್ನು ತೋರುತ್ತದೆ.
ಡಾ. ಮಂಜುನಾಥ ಪಾಳ್ಯ ಬರೆದ ‘ಹೆಪ್ಪುಗಟ್ಟಿದ ಮಾತುಗಳು’ ಕವನ ಸಂಕಲನದ ಕುರಿತು ಡಾ. ಎ. ರಘುರಾಂ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ