Advertisement

Category: ದಿನದ ಪುಸ್ತಕ

ಹಾಡುಗಬ್ಬದ ಸೊಗಸು ತೋರುವ ‘ವೃಷಭೇಂದ್ರ ವಿಳಾಸ’

 ‘ವೃಷಭೇಂದ್ರ ವಿಳಾಸ’ ಕೃತಿಯಲ್ಲಿ ಚಿತ್ರಭಾಗವೇ ಸಿಂಹಪಾಲು ಪಡೆದಿದೆ. ರಂಗಭೂಮಿಯ ಮೇಲೆ ಯಕ್ಷಗಾನವಾಗಲಿ, ನಾಟಕವಾಗಲಿ ಮಾಡಬೇಕಾದ ಕೆಲಸವನ್ನು ಚಿತ್ರಕಲಾವಿದ ಇಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾನೆ. ‘ಶ್ರವ್ಯ-ದೃಶ್ಯ’ ಮಾಧ್ಯಮಗಳೆರಡೂ ಇಲ್ಲಿ ಬೆಸೆದುಕೊಂಡಿವೆ. ಬಣ್ಣಗಳ ಬಳಕೆಯಲ್ಲಿ ಸಂಪ್ರದಾಯದ ನಿಲುವನ್ನೆ ಅನುಸರಿಸಿದ್ದಾರೆ. ಇದೊಂದು ಅಪೂರ್ವವಾದ ಗ್ರಂಥ. ಯಕ್ಷಗಾನ ಸಾಹಿತ್ಯದಲ್ಲಿ ವಿರಳ ಕೃತಿಯಾಗಿದೆ ಎಂಬುದಾಗಿ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆ ಬರೆದಿದ್ದಾರೆ ಡಾ. ಸುಮಂಗಲಾ ಮೇಟಿ.

Read More

ಸತೀಶ್‌ ಶೆಟ್ಟಿ ವಕ್ವಾಡಿ ಕಥಾಸಂಕಲನಕ್ಕೆ ವಿಕಾಸ್ ನೇಗಿಲೋಣಿ ಬರೆದ ಮುನ್ನುಡಿ

“ಕಥನಕ್ಕಾಗಿ ಇಲ್ಲಿ ಪಾತ್ರಗಳು ದುಡಿಯುವುದಿಲ್ಲ, ಪಾತ್ರಗಳೇ ವಿಶಿಷ್ಟ ರೀತಿಯಲ್ಲಿ ರೂಪುಗೊಂಡು ಒಂದು ಕತೆಯಾಗಿ ಹೊರ ಹೊಮ್ಮುತ್ತವೆ. ಕೊಜೆ ಯಾನೆ ಹೇಲು ಗೋವಿಂದಪ್ಪ- ಎಂಬ ಪಾತ್ರವನ್ನು ಆ ಪಾತ್ರದ ಹೆಸರಿನ ಹಿನ್ನೆಲೆಯಲ್ಲಿ ಕಟ್ಟುವ ಕ್ರಮ, ಅದೇ ಕತೆಯಲ್ಲಿ ಓಡಿ ಹೋದ ಬಸವ ವಾಪಾಸ್ ಪ್ರತ್ಯಕ್ಷವಾದಾಗ ಅವನನ್ನು ತೋರಿಸುವ ರೀತಿ ಇದಕ್ಕೆ ಅತ್ಯುತ್ತಮ ಉದಾಹರಣೆ. ಹಾಗೇ ಸುಮಂತ್- ಪ್ರಾಣೇಶ್ ಮಧ್ಯೆ ಕ್ರಿಕೆಟ್ ವಿಚಾರಕ್ಕೆ ಶುರುವಾದ ಜಗಳ ಪಡೆದುಕೊಳ್ಳುವ ತಿರುವು, ಪಾತ್ರ ಕಟ್ಟುವಿಕೆಗೆ ಬಹಳ ಒಳ್ಳೆಯ ಉದಾಹರಣೆ.”
ಸತೀಶ್‌ ಶೆಟ್ಟಿ ವಕ್ವಾಡಿ ಬರೆದ ‘ಅಜ್ಜ ನೆಟ್ಟ ಹಲಸಿನ ಮರ’ ಕಥಾಸಂಕಲನಕ್ಕೆ ವಿಕಾಸ್‌ ನೇಗಿಲೋಣಿ ಬರೆದ ಮುನ್ನುಡಿ

Read More

ಜೀವನ ಸತ್ವದ ಶೋಧದಂತೆ ಇರುವ ಕೃತಿ : ಡಾ. ಗೀತಾ ವಸಂತ

ಅಂತರ್ಜಾಲ ಮಾಧ್ಯಮ ಅನ್ವೇಷಣೆ ಪ್ರವೃತ್ತಿಯುಳ್ಳ ಯುವಬರಹಗಾರರ ಭವಿಷ್ಯದ ಮಾಧ್ಯಮವಾಗಿದೆ. ಆದರೆ ಅದು ಸಮಾಜದ ಆಗುಹೋಗುಗಳ ಕುರಿತು ವಾಸ್ತವಿಕ ಪ್ರಜ್ಞೆಗೆ ವಿಮುಖವಾಗದೇ, ರಾಜಕೀಯ ಹಾಗೂ ವೈಚಾರಿಕ ಪ್ರಜ್ಞೆಯ ತಳಹದಿಯ ಮೇಲೆ ಬೆಳೆಯಬೇಕೆಂಬ ಮುನ್ನೋಟವನ್ನು ಮಂಜುಳಾ ಗೋನಾಳ ಅವರು ತಮ್ಮ ಕೃತಿಯ ಮೂಲಕ ವ್ಯಕ್ತಪಡಿಸುತ್ತಾರೆ. ’ನುಡಿಯ ನೆರಳು’ ಕೃತಿಗೆ ಡಾ. ಗೀತಾ ವಸಂತ್ ಬರೆದ ಮುನ್ನುಡಿ ಇಲ್ಲಿದೆ.

Read More

‘ಅಮ್ಮನ ಕೋಣೆಗೆ ಏಸಿ’ ಕೃತಿಗೆ ಅರವಿಂದ ಚೊಕ್ಕಾಡಿ ಬರೆದ ಮುನ್ನುಡಿ

“ಲೇಖಕ ವೈಯಕ್ತಿಕವಾಗಿ ಏನೇ ಆಗಿದ್ದರೂ ಸಾಮಾಜಿಕವಾಗಿ ಆತನಿಗಿರುವ; ಸಮಾಜ ಸ್ವೀಕರಿಸುವ ಆತನ ‘ಸ್ಥಿತಿ’ಯು ಆತನ ಕೃತಿಯನ್ನು ಸಮಾಜವು ಬರಮಾಡಿಕೊಳ್ಳುವುದರಲ್ಲಿ ನಿರ್ಧಾರಕ ಅಂಶವಾಗಿರುತ್ತದೆ ಎಂಬ ನೆಲೆಯಲ್ಲಿ ಈ ಕೃತಿಯ ಇನ್ನೊಂದು ಮಗ್ಗುಲನ್ನು ನಾನು ಕಾಣಿಸಬೇಕಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಕುಕ್ಕಿಲ ಅವರು ತಾನು ಮುಸ್ಲಿಂ ಅಲ್ಲ; ಜಾತ್ಯತೀತ ಎಂದು ಘೋಷಿಸಿಕೊಂಡವರಲ್ಲ.”
ಏ.ಕೆ. ಕುಕ್ಕಿಲ ಬರೆದ ‘ಅಮ್ಮನ ಕೋಣೆಗೆ ಏಸಿ’ ಕಥಾ ಸಂಕಲನದ ಕುರಿತು ಅರವಿಂದ ಚೊಕ್ಕಾಡಿ ಬರೆದ ಮುನ್ನುಡಿ

Read More

ರಮೇಶ ಅರೋಲಿ ಪುಸ್ತಕಕ್ಕೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ

“ಈ ಎಲ್ಲ ಯುವಕವಿಗಳು ಬಂಡಾಯದ ಕುದಿಯನ್ನು ಆರಗೊಡದೆ ಕಲಾತ್ಮಕ ತೋಡುಗಾಲುವೆಗಳನ್ನು ನಿರ್ಮಿಸಿಕೊಂಡವರು ಎಂದೆ, ಹೌದು. ಅದರಲ್ಲಿ ಒಬ್ಬೊಬ್ಬರದೂ ಒಂದೊಂದು ಬಗೆ. ಹಾಗಾಗಿಯೇ ಕನ್ನಡಕ್ಕಿದು ಕೇಡುಗಾಲವಲ್ಲ, ಊರ್ಜಿತಕಾಲ. ನಾನಿಲ್ಲಿ ಅರೋಲಿಯವರು ಕಟ್ಟಿಕೊಂಡಿರುವ ಮಾರ್ಗದ ಬಗ್ಗೆ ಹೇಳುವೆ. ಅದು ದೇಸೀ ಪರದೇಸೀಗಳ ಕಸಿ ಮಾಡಿಕೊಂಡ ಮಾರ್ಗ.”
ರಮೇಶ ಅರೋಲಿ ಬರೆದ ‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟುʼ ಕವನ ಸಂಕಲನಕ್ಕೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ