Advertisement

Category: ದಿನದ ಪುಸ್ತಕ

ಕೆ.ವಿ. ತಿರುಮಲೇಶ್‌ ಅವರ ಹೊಸ ಕಾದಂಬರಿಯ ಆಯ್ದ ಭಾಗ

“ಕ್ಲಾಸು ಮುಗಿದು ಮೊದಲು ಸಕಲೇಶನಿರುವ ಹಾಸ್ಟೆಲ್ ಕಡೆ ಹೋಗಬೇಕೆಂದು ಚಿಂತಿಸುತ್ತ ಕುಳಿತ. ಆಮೇಲೆ ಶೀತಲ್ ಮತ್ತು ಮೃಣಾಳಿನಿಯನ್ನು ನೋಡಿಕೊಂಡು ಬರಬೇಕು. ಪಿಕ್‍ನಿಕ್‍ ನ ಘೋರವಾದ ಅನುಭವದಿಂದ ಆತ ಇನ್ನೂ ಚೇತರಿಸಿಕೊಂಡಿರಲಿಲ್ಲ. ಒಮ್ಮೆಲೆ ಎಲ್ಲ ಪೂರ್ತಿ ಬದಲಾಗಿಬಿಟ್ಟಿತ್ತು. ಈ ಕ್ಲಾಸಿಗೂ, ಈ ಅಧ್ಯಾಪಕರಿಗೂ, ಇಲ್ಲಿ ಕೂತಿರುವ ಸಹಪಾಠಿಗಳಿಗೂ ತನಗೂ ಏನೇನೂ ಸಂಬಂಧವಿಲ್ಲದ ಹಾಗೆ ಅವನಿಗನಿಸಿತು. ಅದು ಹೇಗೋ ಕ್ಲಾಸು ಮುಗಿಯುವವರೆಗೆ…”

Read More

ಗುರುಗಣೇಶ ಭಟ್‌ ಪುಸ್ತಕದ ಕುರಿತು ಆರ್.‌ ವಿಜಯರಾಘವನ್‌ ಬರಹ

“ಈ ಕವಿಯ ನೋಟ ನೆಟ್ಟಿರುವುದು ಯಾವುದರ ಮೇಲೆ? ಮೊದಲ ಓದಿಗೇ ನಮಗೆ ತೋರುವುದು ಈತ ಬಿಟ್ಟ ಕಣ್ಣ ಮುಚ್ಚದ ಹುಡುಗನೆಂದು. ತನ್ನ ಸುತ್ತಲಿನ ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಲೇ, ತನಗೇನೂ ಆಗಬೇಕಿಲ್ಲವೆಂಬಂತೆ ನಟಿಸುತ್ತಲೇ ಈ ಬಗೆಯ ನಿರ್ಲಿಪ್ತತೆಯು ಆತ್ಮಘಾತುಕವೆಂಬ ಎಚ್ಚರವನ್ನು ಪ್ರಕಟಿಸುತ್ತಲೇ ಇರುವ ಕವಿ ಈತ.”

Read More

‘ಕಾವ್ಯಾ ಓದಿದ ಹೊತ್ತಿಗೆʼ: ಇನ್ನು ಮುಂದೆ ತಿಂಗಳಿಗೆರೆಡು ಬುಕ್‌ ಚೆಕ್

“ಒಬಾಮಾ ಅಧ್ಯಕ್ಷರಾದರು ಅಂದ ತಕ್ಷಣ ಅಮೆರಿಕದಲ್ಲಿ ಕಪ್ಪು ಜನರ ಕಷ್ಟಗಳೆಲ್ಲ ಮುಗಿಯಿತು ಅಂತ ಅರ್ಥವಲ್ಲ. ಇದೊಂಥರಾ ಇಂದಿರಾ ಪ್ರಧಾನಿಯಾಗಿದ್ದರು ಎಂದು ಭಾರತದ ಹೆಂಗಸರಿಗೆಲ್ಲ ತಮ್ಮ ಕೋಟಲೆಗಳಿಂದ ಮುಕ್ತಿ ಸಿಕ್ಕಿಬಿಟ್ಟಿತು ಎಂದ ಹಾಗಾಗುತ್ತದೆ. ಇಂದಿನ ದಿನಮಾನ ನೋಡಿದರೆ ಬರಾಕ್ ಮತ್ತು ಮಿಶೆಲ್ ನಿರ್ಮಿಸಿದ ಕಾಲುದಾರಿ ಹೆದ್ದಾರಿಯಾಗಲು ಇನ್ನೂ ಬಹಳ ಸಮಯವಿದೆ ಎಂಬುದಂತೂ..”

Read More

ಪ್ರಜ್ಞಾ ಮತ್ತಿಹಳ್ಳಿ ಪುಸ್ತಕಕ್ಕೆ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಮುನ್ನುಡಿ

“ಪ್ರಜ್ಞಾ ಅವರ ಸ್ತ್ರೀ ಪಾತ್ರಗಳ ಜೀವನದಿಗೆ ಗಂಡನೊಬ್ಬನೇ ಜಗತ್ತಲ್ಲ; ಅಥವಾ ಸಂಸಾರವೇ ಸರ್ವಸ್ವವಾಗಿ ತನ್ನ ಸೃಜನಶೀಲತೆಯನ್ನು ಅದರ ತೊಡಕುಗಳ ಬಂಧನದಲ್ಲಿ ಕಳೆದುಕೊಳ್ಳುವ ಬಗೆಯೂ ಇಲ್ಲಿಲ್ಲ. ‘ತುದಿಬೆಟ್ಟದ ನೀರ ಹಾಡುʼ ಕತೆಯ ಸುಬೋಧಿನಿ ತನಗೆ ಸಹಾನುಭೂತಿ ತೋರಿಸಲು ಬಂದ ಗೆಳೆಯ ಪಾರ್ಥನಿಗೆ ಹೇಳುತ್ತಾಳೆ: ‘ನನ್ನೊಳಗಿನ ಚೈತನ್ಯದ ನದಿಗೆ ಮಗಳು, ಸೊಸೆ, ಅಮ್ಮ, ಗೆಳತಿ, ಉದ್ಯೋಗಿ, ಲೇಖಕಿ ಅಂತ ನೂರಾರು ಬಗೆಯ ಚಲನೆಗಳಿವೆ…”

Read More

‘ಕುವೆಂಪು ಸಮಗ್ರ ಸಾಹಿತ್ಯ’ ಸರಣಿಯ ಕುರಿತು ಡಾ. ಮೊಗಳ್ಳಿ ಗಣೇಶ್ ಬರೆದ ಲೇಖನ

“ಬಸವಣ್ಣ ಅವರ ಕ್ರಾಂತಿಯ ವಿಸ್ತರಣೆ ಇಲ್ಲೆಲ್ಲ ಪ್ರಭಾವ ಮಾಡಿದೆ. ಅಷ್ಟಿಲ್ಲದಿದ್ದರೆ ಬುದ್ಧ ಬಸವ ಅಂಬೇಡ್ಕರ್ ಎಂದು ದಲಿತ ಬಂಡಾಯದ ಲೇಖಕರು ಒಪ್ಪಿಕೊಂಡು ಕುವೆಂಪು ಸಾಹಿತ್ಯವನ್ನು ಇಷ್ಟು ಪರಿಯಲ್ಲಿ ಸಮರ್ಥಿಸಲು ಮುಂದಾಗುತ್ತಿರಲಿಲ್ಲ. ಬಸವಣ್ಣ ಅವರ ನಂತರಕ್ಕೆ ದೊಡ್ಡ ಮಟ್ಟದ ಅವೈದಿಕ ಲೇಖಕ ಕಾಣಿಸಿದ್ದು ಕುವೆಂಪು ಅವರಲ್ಲಿ ಮಾತ್ರ. ಎಂತಹ ಯುಗ ಸಂಯೋಜನೆಯ ಸೃಜನಶೀಲತೆಯ ಲೇಖನ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ