Advertisement

Category: ಸರಣಿ

ಎರಡು ಮನೆಗಳ ನಡುವೆ…: ಎಚ್. ಗೋಪಾಲಕೃಷ್ಣ ಸರಣಿ

ಗೋಪಣ್ಣ ಮಾರನೇ ದಿವಸ ಫೋನಿನ ಮಾತುಕತೆ ಮುಂದುವರೆಸಲು ರೆಡಿ ಇರಲಿಲ್ಲ. ಅದರಿಂದ ಅವನು ನನ್ನ ಕಡೆ ಒಂದು ನೋಟ ಬಿಟ್ಟ ಅಂದರೆ ದೃಷ್ಟಿ ಹರಿಸಿದ. ಅದರಲ್ಲಿ ದೈನ್ಯತೆ ಇತ್ತು. ಅದರಲ್ಲಿ ಒಂದು ರೀತಿಯ ಕಮಾಂಡಿಂಗ್ ಸಹ ಇತ್ತು. ಎರಡೂ ಎರಡು ವಿಭಿನ್ನ ದೃಷ್ಟಿಯವು ಅದು ಹೇಗೆ ನಿಮಗೆ ಒಂದೇ ನೋಟದಲ್ಲಿ ಎರಡೂ ಕಂಡವು ಅಂತ ನೀವು ವಿಮರ್ಶಕರ ಹಾಗೆ ಕೇಳುತ್ತೀರಿ ಎಂದು ನನಗೆ ಗೊತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೧ನೇ ಬರಹ ನಿಮ್ಮ ಓದಿಗೆ

Read More

ಸಮೃದ್ಧ ಕಾಡಿನ ರೋಚಕ ಕಥೆಗಳು-೧೧: ರೂಪಾ ರವೀಂದ್ರ ಜೋಶಿ ಸರಣಿ

ಆದರೆ ಎಲ್ಲ ವೇಳೆ ಒಂದೇ ಥೆರನಾಗಿರದು. ಸತತವಾಗಿ ನಡೆಯುತ್ತಿದ್ದ ಅವರ ಕಳ್ಳ ದಂಧೆ ಮಟ್ಟ ಹಾಕಲು ಅದೆಷ್ಟೋ ದಿನಗಳಿಂದ ಅಧಿಕಾರಿಗಳು ಹೊಂಚು ಹಾಕುತ್ತಲೇ ಇದ್ದರೆನ್ನಿಸುತ್ತದೆ. ಒಮ್ಮೆ ಪೋಲೀಸರು ಅವರೆಲ್ಲರನ್ನೂ ಕೆಲಸದ ಜಾಗದಲ್ಲೇ ಅಡ್ಡ ಹಾಕಿದರು. ನಮ್ಮ ಆಳಿನ ಕಿರಿಯ ಮಗನೂ ಅದರೊಳಗಿದ್ದನಂತೆ. ಹೇಗೋ ಕಣ್ಣು ತಪ್ಪಿಸಿಕೊಂಡು ಓಡಿ ಬಂದು ಮನೆಯಲ್ಲಿ ಅಡಗಿದ್ದ. ಅವನಿಗೆ ಕೆಲಸ ಕೊಟ್ಟ ಹೆಗಡೆಯವರು ಇಲಾಖೆಯವರಿಗೆ ದುಡ್ಡು ತಿನ್ನಿಸಿ, ಅವನೇ ಆ ಕಳ್ಳ ನಾಟಾ ಕಡಿಯುವವರಿಗೆ ಮುಖ್ಯಸ್ಥ ಎಂದು ಬಿಂಬಿಸಿ, ಜಾರಿಕೊಂಡರು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಇಪ್ಪತ್ತನೆಯ ಕಂತು

Read More

ಸ್ತ್ರೀ ಎಂದರೆ ಅಷ್ಟೇ ಸಾಕೆ?: ಸುವರ್ಣ ಚೆಳ್ಳೂರು ಸರಣಿ

ಅವರಿಗೆ ಊಟಕ್ಕಿಟ್ಟಾಗ ಎಲ್ಲಾ ಸವನಾಗಿರಬೊಕು. ಮೆತ್ತನ ರೊಟ್ಟಿ, ಪಲ್ಯ, ಶೇಂಗಾ ಪುಡಿ, ಅನ್ನ, ಬ್ಯಾಳಿ ಎಲ್ಲಾನೂ ಮಾಡಬೇಕಿತ್ತು, ಸ್ವಲ್ಪ ಉಪ್ಪು ಖಾರ ಆಚೀಚೆ ಆದ್ರು ಅವರ ಮುಖದಾಗ ಗೊತ್ತಾಕಿತ್ತು. ‘ಏನ್ ಅಡಗಿ ಮಾಡತಾವ ಏನ! ಉಪ್ಪಿಲ್ಲ ಹುಳಿ ಇಲ್ಲ ಖಾರಿಲ್ಲ’ ಅಂತ ಬೈಯ್ಯೊದು ಯಾವಾಗಲೂ ಇರ್ತಿತ್ತು. ಆದ್ರ ನನಗ್ಯಾವಾಗಲೂ ಅನ್ಸೊದು, ಒಂದು ರೊಟ್ಟಿ ಮಾಡಬೊಕಂದ್ರ ಹಿಂದ ಒಂದು ತಾಸಿನ ಕೆಲಸ ಮಾಡಿರ್ತಿವಿ, ನಾದಾದು, ತಟ್ಟಾದು, ಬೇಯ್ಸಾದು ಆಮ್ಯಾಗದಕೊಂದು ಪಲ್ಯ ಮಾಡಿ ಜೋಡಸಾದು, ಒಲಿಮುಂದ ಕುಂತು ಬೇವರು ಸುರಿಸಿಗ್ಯಂತ, ಬೆನ್ನಿನ್ಯಾಗ ಬೇವರೆಲ್ಲ ನೀರು ಹರದಂಗ ಹರದಿರುತ್ತ…
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಎಲೆಹಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಎಲೆಹಕ್ಕಿಗಳಿಗೆ ಕೀಟಗಳು, ಜೇಡಗಳು, ಹಣ್ಣು, ಮಕರಂದ ಮುಂತಾದುವುಗಳೇ ಆಹಾರ. ಕುಳಿತಲ್ಲಿಂದಲೇ ಗುರಿಯಿಟ್ಟು ಎಗರಿ ಹಾರುತ್ತಿರುವ ಹುಳಗಳನ್ನು ಹಿಡಿದು ತಿಂದು, ಕೀಟ ನಿಯಂತ್ರಣ ಕಾರ್ಯವನ್ನು ಸಮರ್ಥವಾಗಿ ಮಾಡುತ್ತವೆ. ಹೂವುಗಳಿಂದ ಮಕರಂದ ಹೀರಲು ಎಲೆಹಕ್ಕಿಗಳು ಮಾಡುವ ಸರ್ಕಸ್ ನೋಡಲು ಬಹಳ ಚಂದ! ಹಣ್ಣು-ಮಕರಂದವಿರುವ ಮರದಲ್ಲಿ ನಾಲ್ಕಾರು ಎಲೆಹಕ್ಕಿಗಳು ಸೇರಿದರೆ ಇತರ ಪ್ರಭೇದದ ಹಕ್ಕಿಗಳಿಗೆ ಪ್ರವೇಶವೇ ಇಲ್ಲ!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿ

Read More

ರಂಗ ಕಲಾವಿದೆಯರ ಬದುಕು…: ಚಿತ್ರಾ ವೆಂಕಟರಾಜು ಸರಣಿ

ಹಾಗೆ ನೋಡಿದರೆ, ನಾಟಕಗಳಲ್ಲಿ ಅಭಿನಯಿಸುವ ಹೆಣ್ಣುಮಕ್ಕಳು ಸಮಾಜದ ಉಳಿದ ಹೆಣ್ಣುಮಕ್ಕಳಿಗಿಂತ ದಿಟ್ಟರಾಗಿರುತ್ತಾರೆ. ಹಾಗೆ ಮುಕ್ತವಾಗಿಲ್ಲದಿದ್ದರೆ ರಂಗಭೂಮಿಯಲ್ಲಿ ಕೆಲಸ ಮಾಡಲು ಸಾಧ್ಯವೇ ಆಗುವುದಿಲ್ಲ. ನಾಟಕಾಭ್ಯಾಸದಲ್ಲಿ ಮೊದಲು ಹೇಳಿಕೊಡುವ ಪಾಠವೇ ಮುಜುಗರವನ್ನು ಬಿಟ್ಟು ಧೈರ್ಯವಾಗಿ ಅನಿಸಿದ್ದನ್ನು ಮಾಡುವುದು. ಹಾಗಾಗಿಯೇ ನಾಟಕದಲ್ಲಿ ಅಭಿನಯಿಸುವ ನಟಿಯರ ವ್ಯಕ್ತಿತ್ವ ಗುಂಪಿನಲ್ಲಿ ಎದ್ದುಕಾಣುವಂತಿರುತ್ತದೆ. ಹೊಸದಾಗಿ ನಾಟಕಕ್ಕೆ ಬಂದಾಗ ಗುಬ್ಬಿಯಂತಿರುವ ನಟಿಯರು ದಿನ ಕಳೆದಂತೆ ರಂಗದ ಆಕಾಶದಲ್ಲಿ ಗರಿಬಿಚ್ಚಿ ಹಾರುತ್ತಾರೆ, ಬೀಳುತ್ತಾರೆ‌, ಸಾವರಿಸಿಕೊಂಡು ಮತ್ತೆ ಏಳುತ್ತಾರೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ