Advertisement

Category: ಸರಣಿ

ಸಂದರ್ಶಕರಿಗೆ ಆಟ ಹಾಜರಾದವರಿಗೆ ಸಂಕಟ…: ಬಸವನಗೌಡ ಹೆಬ್ಬಳಗೆರೆ ಸರಣಿ

ಈ ಘಟನೆಯಿಂದ ನಾನು ಕಲಿತ, ಪರರೂ ಅನುಸರಿಸಬಹುದಾದ ಒಂದು ಪಾಠವನ್ನು ನಾನಿಲ್ಲಿ ಹಂಚಿಕೊಳ್ಳ ಬಯಸುತ್ತೇನೆ. ನಾವು ಯಾವುದೇ ಸಂದರ್ಶನಕ್ಕೂ ಹಾಜರಾಗುವ ಮುನ್ನ ನಾವು ಅವರು ನೀಡಿದ್ದ ಸಮಯಕ್ಕಿಂತ ಮುಂಚಿತವಾಗಿ ಹೋಗಬೇಕು. ಅಲ್ಲದೇ ಅವರು ಕೋಪ ಬರುವಂತಹ ಯಾವುದೇ ಪ್ರಶ್ನೆಯನ್ನು ಕೇಳಿದ್ರೂ ಅವರು ನಿಮ್ಮ ಮಾತಿನ ಶೈಲಿ ಮತ್ತು ಸಹನೆ ಪರೀಕ್ಷಿಸುತ್ತಿದ್ದಾರೆ ಎಂದು ತಿಳಿಯಬೇಕು. ಸಾಧ್ಯವಾದಷ್ಟು ಸಂದರ್ಶಕರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಬೇಕು. ಉತ್ತರ ಗೊತ್ತಿಲ್ಲದಿದ್ದಾಗ ಪ್ರಾಮಾಣಿಕವಾಗಿ ಗೊತ್ತಿಲ್ಲವೆಂದು ಹೇಳುವುದರ ಜೊತೆಗೆ ನಾನು ಇದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ಹೇಳಬೇಕೇ ಹೊರತು ತಪ್ಪು ಉತ್ತರ ಹೇಳಬಾರದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಒಂದಾದ ಮೇಲೊಂದು…: ಎಚ್. ಗೋಪಾಲಕೃಷ್ಣ ಸರಣಿ

ಬ್ಯಾಚುಲರ್ ಲೈಫ್‌ನ ಅಂದಿನ ನನ್ನ ರಾತ್ರಿ ಶಿಫ್ಟ್ ಕತೆ ಬೇರೆ ತೆರನಾದದ್ದು. ಒಂದು ಕಿಮೀ ಹಿಂದಿನ ಸ್ಟಾಪ್‌ನಲ್ಲಿ ಇಳಿದು ಅಲ್ಲಿ ಬಿಸಿ ಬಿಸಿ ಬಾದಾಮಿ ಹಾಲು ಎರಡು ಲೋಟ ಸುರಿದುಕೊಳ್ಳೋದು. ಅದಕ್ಕೆ ಮೊದಲು ಬನ್ನು ಚೌ ಚೌ ಬ್ರೆಡ್ ಟೋಸ್ಟ್ ಮುಕ್ಕಿ ಹೊಟ್ಟೆ ಹಗುರ ಮಾಡಿಕೊಳ್ಳುವುದು. ಆಗಿನ್ನೂ ಬ್ರೆಡ್ ಬನ್ ಒಳಗೆ ಕಾಂಗ್ರೆಸ್ ಹಾಕಿಕೊಂಡು ಆ ಅಂತ ಬಾಯಿಯನ್ನು ಹಿಪಪಾಟಮಸ್ ತರಹ ಅಗಲಿಸಿ ತಿನ್ನುವ ಕಲ್ಚರೇ ಹುಟ್ಟಿರಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೮೦ನೇ ಬರಹ ನಿಮ್ಮ ಓದಿಗೆ

Read More

ಸುಂದರ ಕಾಡಿನ ರೋಚಕ ಕಥೆಗಳು-೧೦: ರೂಪಾ ರವೀಂದ್ರ ಜೋಶಿ ಸರಣಿ

ಹಾಗೇ ಕಾಡು ಹಳ್ಳದ ಹಸೀ ಮಣ್ಣನ್ನು ಇಡೀ ಬಿರಟೆಗೆ ದಪ್ಪಗೆ ಮೆತ್ತಿ, ಒಂದೆಡೆ ಬೆಂಕಿ ಹಾಕಿ ಅದರೊಳಗೆ ಈ ಅಂಡೆ ಇಡುತ್ತಿದ್ದರಂತೆ. ಮಣ್ಣು ಮೆತ್ತಿರುವುದರಿಂದ ಅಂಡೆ ಸುಡದೇ ಒಳಗಡೆಯ ಅಕ್ಕಿ ಬೆಲ್ಲ ಹಾಲುಂಡು ಮೆತ್ತಗೆ ಬೆಂದು ರುಚಿಕಟ್ಟಾದ ಪಾಯಸ ರೆಡಿಯಾಗುತ್ತಿತ್ತಂತೆ. ಕತ್ತಿಯಲ್ಲಿ ಬಿದರ ಅಂಡೆ ಸೀಳಿ, ಒಳಗಿನ ಪಕ್ವಾನವನ್ನು ಕಾಡೆಲೆಯ ಮೇಲೆ ಹರಡಿಕೊಂಡು ಎಲ್ಲರೂ ಸೇರಿ ಲೊಟ್ಟೆಹೊಡೆಯುತ್ತ ತಿನ್ನುತ್ತಿದ್ದರಂತೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹತ್ತೊಂಭತ್ತನೆಯ ಕಂತು

Read More

ಮಹಿಳಾ ದಿನಾಚರಣೆ ಅಂದರೆ…: ಸುವರ್ಣ ಚೆಳ್ಳೂರು ಸರಣಿ

ಆ ಗ್ವಾಡಿಗಳನ್ನ ಮೇಲಿಂದ ಕೆಳಗ ನೋಡುವಾಗ್ಲೆ ಗೊತ್ತಾದದ್ದು, ಆ ಗ್ವಾಡಿ ನಡಕ ಅವ್ವ, ಅತ್ತಿನೂ ಒದ್ದಾಡತಿದ್ರು. ಆ ಗ್ವಾಡಿಯನ್ನ ನೋಡ್ತಾ ನೋಡ್ತೂ ಅದೆಷ್ಟೊ ಹೆಣ್ಮಕ್ಕಳು ಇದ್ರಲ್ಲೆ ಇರೋದು ನೋಡಿ, ಅವರ ಬಾಯಿಗೆ ಕಟ್ಟಿದ ಹೂವಿನಿಂದ ಸಿಂಗರಿಸಿದ್ದ ಹಗ್ಗ, ದಿನದಿಂದ ದಿನಕ್ಕೂ ಬೆಳಿಯೋದನ್ನ ನೋಡಿ, ಹಗ್ಗದ ಗಂಟು ದಿನ ದಿನಕ್ಕೂ ಬಿಗಿಯಾಗೋದನ್ನ ನೋಡಿ, ಇದ್ಯಾಕೆ ಇದನ್ನ ಯಾರೂ ಬಿಳಸೊಕೆ ಆಗ್ತಿಲ್ಲ? ಯಾರಿದನ್ನ ಹೊರಗಿಂದ ಕಟ್ತಿರೊದು? ಅನ್ನೊ ಪ್ರಶ್ನೆಗಳೆಲ್ಲಾ ತಲೆ ತುಂಬಿದ್ವು. ಆದ್ರ ಇವಾಗ ಸಾಲಿಗೆ ಹೋಗಬಹುದು ಅನ್ನೊದು ನೆನಸ್ಕೊಂಡು ಒಂಥರಾ ಖುಷಿ ಆಯ್ತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಆರನೆಯ ಬರಹ

Read More

ಚಿಲೆ ದೇಶದ ಕವಿ ಎಲಿಕುರಾ ಚಿವಾಯ್‌ಲಾಫ಼್ ಕಾವ್ಯ ಕಥನ: ಎಸ್ ಜಯಶ್ರೀನಿವಾಸ ರಾವ್ ಸರಣಿ

ಚಿವಾಯ್‌ಲಾಫ಼್ ಅವರ ಅನೇಕ ಕವಿತೆಗಳು ಆ ಭೂಮಿಯಲ್ಲಿ ರೂಪಕಾತ್ಮಕವಾಗಿ ವಾಸಿಸುವ ತುರ್ತು ಬಯಕೆಗೆ ಸಾಕ್ಷಿಯಾಗಿವೆ. ಅವರ ಬುಡಕಟ್ಟಿನ ಪೂರ್ವಜರ ಮರೆತುಹೋದ ಅಥವಾ ನಿಗ್ರಹಿಸಲ್ಪಟ್ಟ ಉಪಸ್ಥಿತಿಯನ್ನು ಮಾತ್ರವಲ್ಲದೆ, ‘ಮಾಪುಚೆ’ ಸಂಸ್ಕೃತಿಯಲ್ಲಿ ಪವಿತ್ರವೆಂದು ಪರಿಗಣಿಸಲಾದ ಮತ್ತು ಸಾಂಪ್ರದಾಯಿಕ ಮಾಪುಚೆ ಭೂಮಿಯಲ್ಲಿ ಕೈಗಾರಿಕಾ ಯೋಜನೆಗಳಿಂದ ಹೆಚ್ಚಾಗಿ ಬೆದರಿಕೆಗೆ ಒಳಗಾಗುವ ಪ್ರಕೃತಿಯ ಧ್ವನಿಯನ್ನು ಸಹ ಅವರು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚಿಲೆ (Chile) ದೇಶದ ಮಾಪುಚೆ ಬುಡಕಟ್ಟಿಗೆ ಸೇರಿದ ಮಾಪುಜುಗುನ್‌ (Mapuzugun) ಭಾಷಾ ಕವಿ ಎಲಿಕುರಾ ಚಿವಾಯ್‌ಲಾಫ಼್-ರವರ (Elicura Chihuailaf, 1953) ಕಾವ್ಯದ ಕುರಿತ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ