Advertisement

Category: ಸರಣಿ

ಪದಗಳಲ್ಲಡಗಿದ ಅನೇಕಾರ್ಥ ಮತ್ತು ನ್ಯಾಂಡೊ ಪೆರಾಡೊ: ಸುಮಾವೀಣಾ ಸರಣಿ

ಈ ‘ಮಾನ’ ಎಂದಾಗ ಮೊನ್ನೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತವೇ ನೆನಪಾಗುತ್ತದೆ. ‘ವಿಮಾನ’ ಬರೆ ಪ್ರಯಾಣಿಕರನ್ನು ಹೊತ್ತು ಸಾಗುವುದಲ್ಲ. ದೇವಾಲಯದ ಗರ್ಭಗುಡಿಯ ಮೇಲ್ಭಾಗದ ಗೋಪುರಕ್ಕೂ ‘ವಿಮಾನ’ ಎಂದು ಕರೆಯುತ್ತಾರೆ. ವಿಚಿತ್ರ ಎಂದರೆ ಪಾರ್ಥೀವ ಶರೀರವನ್ನು ಸಾಗಿಸುವ ಬಿದಿರಿನ ಜೋಡಣೆಗೂ ವಿಮಾನವೆನ್ನುವರು. ಒಂದೊಮ್ಮೆ ತಿರುಪತಿ ಗೋವಿಂದರಾಜ ದೇವಸ್ಥಾನವನ್ನು ವೀಕ್ಷಣೆ ಮಾಡುತ್ತಾ ಇದು ‘ವಿಮಾನ ಗೋಪುರ’ ಎಂದು ವಿವರಿಸುತ್ತಿದ್ದಂತೆ ನಿಜವಾಗಿ ವಿಮಾನವೊಂದು ಹಾರಿ ಹೋಗಿದ್ದು ಇಲ್ಲಿ ನೆನಪಾಗುತ್ತಿದೆ…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

Read More

ಮಲೆನಾಡಿನ ಗದ್ದೆಗಳಲ್ಲಿ ನೆಟ್ಟಿ ಸಂಭ್ರಮ: ಭವ್ಯ ಟಿ. ಎಸ್. ಸರಣಿ

ಹೂಟಿ ಮಾಡಿದ ನೆಲದ ಮಣ್ಣು ಉಬ್ಬು ತಗ್ಗುಗಳಿಂದ ಕೂಡಿದ್ದು ಅದನ್ನು ನೆಟ್ಟಿಗೆ ಸಹಾಯಕವಾಗುವಂತೆ ಸಮತಟ್ಟು ಮಾಡಲು ನಳ್ಳಿ ಬಳಸುತ್ತಾರೆ. ಹಿಂದೆ ಎತ್ತುಗಳನ್ನು ಬಳಸಿ ಹೂಟಿ ಮಾಡುತ್ತಿದ್ದರಿಂದ ಇದಕ್ಕಾಗಿ ಬಳಸುವ ನೊಗ ಮತ್ತು ನೇಗಿಲು ಪ್ರತಿ ಮನೆಗಳಲ್ಲಿ ಇರುತ್ತಿತ್ತು. ಕಾಲ ಬದಲಾದಂತೆ ಇವುಗಳ ಸ್ಥಾನವನ್ನು ಆಧುನಿಕ ಕೃಷಿ ಸಲಕರಣೆಗಳು ಆಕ್ರಮಿಸಿವೆ. ಈ ಎತ್ತುಗಳಿಗೆ ಆಹಾರವಾಗಿ ಕೊಡಲು ಹುರುಳಿಯನ್ನು ಬೇಯಿಸುತ್ತಿದ್ದರು. ಇದನ್ನು ಬೇಯಿಸಿದ ನೀರೇ ಹುರುಳಿಕಟ್ಟು. ಮಳೆಗಾಲದಲ್ಲಿ ಹುರುಳಿ ಕಟ್ಟಿನ ಘಮ ತೇಲಿ ಬಂದರೆ ಆಹಾ ಎಷ್ಟು ಸುಂದರ ಅನುಭೂತಿ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಸೌದಿ ದೇಶದ ಹಿನ್ನೆಲೆ…: ದರ್ಶನ್‌ ಜಯಣ್ಣ ಸರಣಿ

ಈ ದೇಶದ ಮೊದಲ ಹೆಸರು ನಜ್ದ್ ಮತ್ತು ಹೇಜಾಜ್ ಎಂದಾಗಿತ್ತು. ಹೆಜಾಜ್‌ನಲ್ಲಿಯೇ ಮೆಕ್ಕಾ- ಮದೀನಾ ಎಲ್ಲ ಇರುವುದು ಮತ್ತು ನಜ್ದ್ ಎಂದರೆ ಇಂದಿನ ಸೌದಿಯ ಮಧ್ಯ ಭಾಗವಾಗಿದೆ. ಅಬ್ದುಲ್ ಅಜೀಜ್(1875 – 1953) ಈ ಎರಡು ಭಾಗಗಳ ಜೊತೆಗೆ ತಂಪಾದ ಬೆಟ್ಟಗುಡ್ಡಗಳಿಂದ ಕೂಡಿರುವ ಯೆಮೆನ್‌ಗೆ ಹೊಂದಿಕೊಂಡಿರುವ ದಕ್ಷಿಣದ ನಜ್ರನ್, ಅಸಿರ್ ಮತ್ತು ಉತ್ತರದ ಅಂದರೆ ಸಿರಿಯಾ ಇರಾಕ್‌ನ ಕಡೆಯ ನಾರ್ದರ್ನ್ ಗಡಿಯನ್ನು ಹಾಗೆಯೇ ಇಂದಿನ ತೈಲದ ತೊಟ್ಟಿಲಾದ ಈಸ್ಟರ್ನ್ ಪ್ರಾವಿನ್ಸ್ ಅನ್ನು ನಂತರದ ವರ್ಷಗಳಲ್ಲಿ ದಂಗೆ ಹೊರಟು ಸೌದಿಗೆ ಸೇರಿಸಿಕೊಳ್ಳುತ್ತಾನೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ನಾಲ್ಕನೆಯ ಬರಹ

Read More

ಬರೀ ನಾಲ್ಕು ಗೋಡೆಯ ಮಧ್ಯೆ ಕಲಿಯುವುದೇ ಶಿಕ್ಷಣವಲ್ಲ…!!: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ಪಟ್ಟಣದ ಮಕ್ಕಳಿಗೆ ಭತ್ತ, ಕುಂಬಳಕಾಯಿ ಇಟ್ಟು ಭತ್ತ ಬೆಳೆಯುವ ಗಿಡ ತೋರಿಸಿ ಕುಂಬಳಕಾಯಿ ಬೆಳೆಯುವ ಗಿಡ ಹೇಗಿರಬಹುದು ಎಂದು ಕೇಳಿದರಂತೆ. ಆಗ ಅವರು ಚಿಕ್ಕ ಭತ್ತವನ್ನು ಬೆಳೆಯುವ ಗಿಡವೇ ಈ ರೀತಿ ಇರಬೇಕಾದರೆ ಇಷ್ಟು ದಪ್ಪನೆಯ ಕುಂಬಳಕಾಯಿಯ ಬೆಳೆಯುವ ಗಿಡದ ಕಾಂಡ ಇನ್ನೂ ದಪ್ಪದಾಗಿರಬೇಕು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಕಾವ್ಯದ ಮಳೆ ಸುರಿಸಿ ಮುಕ್ತರಾದ ವೆಂಕಟೇಶಮೂರ್ತಿಗಳು: ಸುಮಾವೀಣಾ ಸರಣಿ

ಬೆಂಗಳೂರಿನ ಸಂತಜೋಸೆಫರ ಕಾಲೇಜಿನಲ್ಲಿ ಸತತ 27 ವರ್ಷ ಒಂದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಮಾಯವಾಗಿದ್ದ ಕನ್ನಡವನ್ನು ಕನ್ನಡ ಸಂಘ ಮಾಡುವ ಮೂಲಕ ಕನ್ನಡಮಯವಾಗಿಸಿದ್ದರು. ತಮ್ಮ ಪುಸ್ತಕಗಳಲ್ಲದೆ ತಮ್ಮ ವಿದ್ಯಾರ್ಥಿಗಳಿಂದಲೂ ಪುಸ್ತಕವನ್ನು ಹೊರತಂದವರು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹತ್ತೊಂಭತ್ತನೆಯ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ