Advertisement

Category: ಜೂನಿಯರ್ ಸಂಪಿಗೆ

ಭೂಮಿಯ ಒಡಲು, ತೀರದ ಕಡಲು!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ವಿಭಾ, “ಅಲ್ಲಾ ಕಾವ್ಯಕ್ಕ, ಆಕ್ಸಿಜನ್‌ಗೂ, ಸಮುದ್ರಕ್ಕೂ ಏನು ಸಂಬಂಧ? ಮರಗಿಡಗಳು ತಾನೇ ಆಮ್ಲಜನಕ ನೀಡೋದು ನಮ್ಗೆ?” ಎಂದು ಮರು ಪ್ರಶ್ನಿಸಿದಳು. ಆಗ ಕಾವ್ಯ, “ಅಲ್ಲ, ಪ್ರತೀ ವರ್ಷ ‘ಪರಿಸರ ದಿನ’ ಬಂದಾಗ್ಲೂ, ಭಾಷಣಗಳಲ್ಲಿ ಕೇಳಿರ್ತೀವಿ, ಲೇಖನಗಳನ್ನ ಓದಿರ್ತೀವಿ, ಮರಗಳನ್ನ ಕಡೀಬಾರ್ದು. ಮರಗಳೇ ಇಲ್ದೇ ಇದ್ರೆ ನಮಗೆ ಉಸಿರಾಡೋಕೆ ಆಮ್ಲಜನಕ ಎಲ್ಲಿಂದ ಸಿಗತ್ತೆ ಅಂತ! ನಿಜಾ, ಮರಗಳನ್ನ ಕಡೀಬಾರ್ದು. ಪ್ರತೀ ಮರವೂ ತನ್ನದೇ ರೀತೀಲಿ ವಿಶಿಷ್ಟ ಮತ್ತು ಭೂಮಿಗೆ, ಭೂಮಿಯ ಸಣ್ಣ ಪುಟ್ಟ ಕಣ್ಣಿಗೆ ಕಾಣದ ಜೀವಿಗಳಿಂದಾ ಬೃಹತ್ ಜೀವಿಗಳವರೆಗೂ ಎಲ್ಲರಿಗೂ ನೂರಾರು ರೀತಿಯಲ್ಲಿ ಮರಗಳು ಮುಖ್ಯ. ಆದ್ರೆ, ಮರಗಿಡಗಳಿಗಿಂತ್ಲೂ ಹೆಚ್ಚು ಆಮ್ಲಜನಕವನ್ನ ಸಮುದ್ರವು ವಾತಾವರಣಕ್ಕೆ ಕೊಡುಗೆ ನೀಡತ್ತೆ. ಅದು ಹೇಗೆ ಗೊತ್ತಾ?
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೇಳನೆಯ ಕತೆ

Read More

ಬೀಜಾವೃತ ಅಪಘಾತ ವೃತ್ತಾಂತ!: ಕ್ಷಮಾ ವಿ ಭಾನುಪ್ರಕಾಶ್ ಕಥಾ ಸರಣಿ

ವಿಭಾ, “ಅಲ್ಲ ಬಾವ, ಬೀಜಗಳು ಇಲ್ಲದ ಕಲ್ಲಂಗಡಿ, ದ್ರಾಕ್ಷಿ ಇವೆಲ್ಲಾ ತಿನ್ನಕ್ಕೇನೋ ಚೆನ್ನಾಗಿರತ್ತೆ. ಆದ್ರೆ, ಒಂದು ಸಲ ಹಣ್ಣು ಬಿಟ್ರೆ, ಆ ಗಿಡದ ಕಥೆ ಮುಗೀತಾ? ಬೀಜಗಳೇ ಇಲ್ದೇ ಆ ಗಿಡ ಮರಿ ಹಾಕೋದು ಹೇಗೆ? ಅಂದ್ರೆ, ಹೊಸ ಗಿಡ ಬೆಳೆಯೋದು ಹೇಗೆ? ಪ್ರಕೃತಿ ಇಂಥಾ ಕೆಲ್ಸ ಯಾಕೆ ಮಾಡ್ತು ಅಂತ ಆಶ್ಚರ್ಯ ಆಗತ್ತೆ” ಎಂದಳು. ಆಗ ಪ್ರಕಾಶ್, “ನೀನು ಹೇಳಿದ್ದು ನಿಜವೇ ವಿಭಾ. ಯಾವುದೇ ಪ್ರಭೇದವಾಗ್ಲೀ, ತನ್ನ ಉಳಿವಿನ ಕಡೆ, ತನ್ನ ಸಂತತಿಯನ್ನ ಬೆಳೆಸೋ ಕಡೆ ಸಹಜವಾಗಿಯೇ ಗಮನ ಇರತ್ತೆ. ಪ್ರತೀ ಜೀವಿಯ, ಪ್ರತೀ ‘ಸ್ಪೀಶೀ’ ಅಂದ್ರೆ ಪ್ರಭೇದದ ಮೂಲಭೂತ ಕೆಲಸ ಅದು. ಆದ್ರೆ, ನಿಸರ್ಗದಲ್ಲಿ ಕೂಡ ಕೆಲವೊಮ್ಮೆ ‘ಆಕ್ಸಿಡೆಂಟ್’ ಆಗತ್ತೆ!” ಎಂದ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾರನೆಯ ಕತೆ

Read More

‘ಸ್ಟಾರ್ಟ್ ಸ್ಟಾಪ್’ ಆಟ ಮತ್ತು ವಡಬಾನಲ: ಕ್ಷಮಾ ವಿ ಭಾನುಪ್ರಕಾಶ್

ಕಾವ್ಯ “ಅಷ್ಟು ಸರಳವೇ ನಮ್ಮ ದೇಹದ ಕೆಲ್ಸ? ಬಾಯಲ್ಲಿ ಫಿಸಿಕಲೀ ಆಹಾರ ನಜ್ಜುಗುಜ್ಜಾಗಿರತ್ತೆ. ಆದ್ರೆ ಕೆಮಿಕಲೀ ಅದ್ರಲ್ಲಿರೋ ಶಕ್ತಿಯನ್ನ ನಾವಿನ್ನೂ ಹೀರಿಕೊಂಡಿರಲ್ಲ. ನಮ್ಮ ಬಾಯಲ್ಲಿ ಭೌತಿಕವಾಗಿ ಅಂದ್ರೆ ಫಿಸಿಕಲಿ ಮುರಿದುಕೊಂಡ ಆಹಾರ, ಜೊಲ್ಲಿನಲ್ಲಿರೋ ‘ಎಂಝೈಮ್’ಗಳ ಸಹಾಯದಿಂದ ಕೊಂಚಕೊಂಚವಾಗಿ ರಾಸಾಯನಿಕವಾಗಿ ಡೈಜೆಸ್ಟ್ ಆಗೋಕೆ ಪ್ರಾರಂಭಿಸಿರತ್ತೆ. ಆಮೇಲೆ ಮೆಲ್ಲನೇ ನಮ್ಮ ಅನ್ನನಾಳದಲ್ಲಿ ‘ಸ್ಟಾಪ್, ಸ್ಟಾರ್ಟ್, ಸ್ಟಾಪ್, ಸ್ಟಾರ್ಟ್’ ಅಂತ ಆಟ ಆಡತ್ತೆ” ಎಂದಳು.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನೈದನೆಯ ಕತೆ

Read More

ಇಂಧನಾಂತರಂಗ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ಆಗ ಕಾವ್ಯ, “ವಿದ್ಯುತ್ ವಾಹನಗಳದ್ದೂ ಅದೇ ಕಥೆ ತಾನೇ? ಹೊಗೆ ಹೊರಗೆ ಹಾಕಲ್ಲ, ಪರಿಸರ ಸ್ನೇಹಿ ವಿದ್ಯುತ್ ವಾಹನ ಅಂತೀವಿ! ಅದೇ ವಿದ್ಯುತ್ ವಾಹನ ಉತ್ಪಾದಿಸೋಕೆ ಅದೇ ಪಳೆಯುಳಿಕೆ ಇಂಧನವನ್ನ ಎಗ್ಗುಸಿಗ್ಗಿಲ್ಲದೆ ಬಳಕೆ ಮಾಡ್ತೀವಿ. ವಿದ್ಯುತ್ ವಾಹನದ ‘ಬ್ಯಾಟರಿ’ ತಯಾರಿಸೋಕೆ ನಿಸರ್ಗದ ತೊಟ್ಟಿಲಿಗೇ ಕೈಹಾಕಿ, ಭೂಮಿಯನ್ನ ಬಗೆದು ಬರಡು ಮಾಡಿ, ಲೋಹಗಳನ್ನ ಹೊರತೆಗೀತೀವಿ. ಇನ್ನು ಆ ವಿಷಕಾರಿ ಬ್ಯಾಟರಿಗಳ ವಿಲೇವಾರಿ ಮತ್ತೊಂದು ದೊಡ್ಡ ಸಮಸ್ಯೆ. ಆದ್ರೂ ‘ವಿದ್ಯುತ್ ವಾಹನದಿಂದ ಪರಿಸರದ ಎಲ್ಲಾ ಸಮಸ್ಯೆಗಳೂ ಸರಿಹೋಗತ್ತೆ’ ಅನ್ನೋ ಹಾಗೆ ಪೋಸ್ ಕೊಡ್ತೀವಿ. ಮನುಷ್ಯನಂತಹ ದುಷ್ಟಪ್ರಾಣಿ ಮತ್ತೊಬ್ಬನಿಲ್ಲ!” ಎಂದಳು ಬೇಜಾರಿಂದ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿನಾಲ್ಕನೆಯ ಕತೆ

Read More

ಇದು ಕಲ್ಲು ಕರಗುವ ಸಮಯ!: ಕ್ಷಮಾ ವಿ. ಭಾನುಪ್ರಕಾಶ್ ಕಥಾ ಸರಣಿ

ನಮ್ಮ ಯಾಣದ ಈ ಕಪ್ಪುಶಿಖರ ಒಂದಲ್ಲ, ಹತ್ತಲ್ಲ, ನೂರಲ್ಲ, ಬರೋಬ್ಬರಿ ೨೭೦ ಕೋಟಿ ವರ್ಷಗಳಷ್ಟು ಹಳೇದು. ಅಂದ್ರೇ, ಭೂಮಿ ಮೇಲೆ ಮನುಷ್ಯರೇ ಇರ್ಲಿಲ್ಲ; ನಮಗೆ ಗೊತ್ತಿರೋ ಯಾವ ಪ್ರಾಣಿ ಪಕ್ಷಿಗಳೂ ಇರ್ಲಿಲ್ಲ; ನಿನ್ ಫೇವರೆಟ್ ಡೈನೋಸಾರ್ ಕೂಡ ಇರ್ಲಿಲ್ಲ; ಈ ಯಾಣದ ಕಪ್ಪುಶಿಲೆಗಳು ಮೊದಲ ಬಾರಿಗೆ ಹೀಗೆ ಎದ್ದುನಿಂತಾಗ ಕೆಲವೇ ಬಗೆಯ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣುಜೀವಿಗಳು ಇದ್ವು ಅಷ್ಟೇ. ಅಂದಿನಿಂದ ಇಂದಿನವರೆಗೆ ಇಲ್ಲೇ ನಿಂತು, ಇಡೀ ಭೂಮಿ ಬದಲಾಗೋದನ್ನ ಕೋಟ್ಯಾನುಕೋಟಿ ವರ್ಷಗಳಿಂದ ನೋಡ್ತಾ ಇದೆ ನಮ್ಮ ಈ ಯಾಣದ ಶಿಲೆಗಳು! ಎಂಥಾ ಅದ್ಭುತ ಅಲ್ವಾ?” ಎಂದ ಮತ್ತೊಮ್ಮೆ ಆ ಬೃಹತ್ ಶಿಲಾಗುಹೆಗಳನ್ನು ಕಣ್ಣರಳಿಸಿ ನೋಡುತ್ತಾ.
ಕ್ಷಮಾ ವಿ. ಭಾನುಪ್ರಕಾಶ್‌ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ದಲ್ಲಿ ಹದಿಮೂರನೆಯ ಕತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ