Advertisement

Category: ಸಂಪಿಗೆ ಸ್ಪೆಷಲ್

ಸೋಲೋ, ಗೆಲುವೋ ಸಾಗುವುದೇ ಹಾದಿ: ಡಿ. ಯಶೋದಾ ಬರಹ

ಅವಳ ರಜೆ ಒಂದು ತಿಂಗಳು ಮುಗಿಯುತ್ತಿದ್ದಂತೆ ಕಚೇರಿಯಿಂದ ಫೋನ್ ಬರಲು ಶುರುವಾಯಿತು, ನೀವು ತಕ್ಷಣ ಬಂದು ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆದೇಶ. ಇವಳಿಗೆ ಆಶ್ಚರ್ಯ ತನ್ನ ಎರಡು ತಿಂಗಳ ರಜೆ ಇನ್ನೂ ಮುಗಿದಿಲ್ಲ, ಮಗುವಿಗೆ ಕೇವಲ ಒಂದೇ ಒಂದು ತಿಂಗಳು, ಈ ಪರಿಸ್ಥಿತಿಯಲ್ಲಿ ಮಗುವನ್ನು ಬಿಟ್ಟು ಹೋಗೋದು ಹೇಗೆ? ಕಡೇಪಕ್ಷ ಇನ್ನೊಂದು ತಿಂಗಳು ಕಳೆದರೆ ಅಷ್ಟರಲ್ಲಿ ತಾನು ಮಗುವಿನ ಆರೈಕೆಗೆ ಬೇರೆ ವ್ಯವಸ್ಥೆ ಮಾಡಿ ಕೆಲಸಕ್ಕೆ ಬರಬಹುದು ಎಂದುಕೊಂಡು ಅದನ್ನೇ ಕಂಪೆನಿಯ ಮುಖ್ಯಸ್ಥರಿಗೆ ತಿಳಿಸಿದಳು. ಆದರೆ ಅವರು ಒಪ್ಪಲಿಲ್ಲ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆಯರ ಪಾಡಿನ ಕುರಿತು ಡಿ. ಯಶೋದಾ ಬರಹ

Read More

ಅನಾಯಾಸೇನ ಮರಣಂ……: ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಹೊರಗೆ ಬಂದು, ರಿಸೆಪ್ಷನಿಸ್ಟ್ ಲೆಕ್ಕ ಹಾಕಿ, “ಇನ್ನು ಎಂಟುನೂರು ಕಟ್ಟಿ ಸಾಕು” ಎಂದು ಔದಾರ್ಯ ತೋರಿ, ಅದರಂತೆ ಮಾಡಿ ಹೊರ ಬಂದಾಗ ನನ್ನ ಹೆಂಡತಿ ತುಂಬಾ ಖುಷಿಯಲ್ಲಿದ್ದಳು. “ಸದ್ಯ ದೇವರು ಕಾಪಾಡಿದ, ನೀವು ಸುಮ್ಮನೆ ಟೆನ್ಶನ್ ಮಾಡಿಕೊಳ್ಳುತ್ತೀರಾ. ಡಾಕ್ಟರ್ ತುಂಬಾ ಒಳ್ಳೆಯವರು, ಬೇರೆಯವರಿಗೂ ರೆಕಮೆಂಡ್ ಮಾಡಬಹುದು. ಇನ್ನು ನೀವು ಸುಮ್ಮನೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿರಿ.” ಹೀಗೆ ಸತತವಾಗಿ ಹೇಳಿ, ನಾನು ಎಲ್ಲದಕ್ಕೂ ತಲೆಯಾಡಿಸಿ “ಆರು ಸಾವಿರ ಅಂದಿದ್ದರೆ ಸುಮ್ಮನೆ ಕೊಡುತ್ತಿದ್ದೆವು, ಇನ್ನೂರು ಉಳಿದಿದೆಯಲ್ಲ ಅದರಲ್ಲಿ ಸ್ವೀಟ್ ತಗೊಂಡು ಹೋಗೋಣ” ಎಂದಾಗ ಅದಕ್ಕೂ ತಲೆಯಾಡಿಸಿದೆ.
ವಸಂತಕುಮಾರ್‌ ಕಲ್ಯಾಣಿ ಪ್ರಬಂಧ “ಅನಾಯಾಸೇನ ಮರಣಂ…”

Read More

ನಮ್ಮೂರ ಮಳೆಗಾಲದ ರಸದೌತಣ: ಭವ್ಯ ಟಿ.ಎಸ್.‌ ಬರಹ

ವಿದ್ಯುತ್ ಇಲ್ಲದ ರಾತ್ರಿಗಳು, ನೆಟ್ವರ್ಕ್ ಇಲ್ಲದೆ ಲೋಕದ ಸಂಪರ್ಕ ಕಡಿದುಕೊಂಡ ಹಗಲುಗಳು. ಇದ್ದಕ್ಕಿದ್ದಂತೆ ಬೀಸುವ ಬಿರುಗಾಳಿ, ಉರುಳಿ ಬೀಳುವ ಮರಗಳು. ಕುಸಿದು ಬೀಳುವ ಗುಡ್ಡ. ಹೀಗೆ ಮಳೆ ಎಂದರೆ ಸಂತಸ, ಸೌಂದರ್ಯಗಳ ಜೊತೆಗೆ ಭಯಾನಕತೆಗಳ ಸಂಮಿಶ್ರಣ. ಕೆಲವೊಮ್ಮೆ ಈ ಮಳೆ ಜಿಗುಪ್ಸೆ ಬೇಸರವೆನಿಸಿದ್ದೂ ಇದೆ. ಆದರೆ‌‌‌ ಮತ್ತೆ ಮತ್ತೆ ಈ ಮನ ಪ್ರತಿ ವರ್ಷದ ವರ್ಷಧಾರೆಗೆ ಹಪಹಪಿಸುತ್ತದೆ.
ಮಲೆನಾಡಿನ ಮಳೆಯ ದಿನಗಳ ಕುರಿತು ಭವ್ಯ ಟಿ.ಎಸ್‌. ಬರಹ ನಿಮ್ಮ ಓದಿಗೆ

Read More

ಹಿಮಾಲಯದಲ್ಲಿ ಹಕ್ಕಿಗಳ ಚಿಲಿಪಿಲಿ: ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿತ ರಸ್ಕಿನ್‌ ಬಾಂಡ್‌ ಬರಹ

ಈ ಹಾಡು ನನ್ನನ್ನು ಯಾವಾಗಲೂ ಮರುಳುಗೊಳಿಸುತ್ತದೆ. ಈ ಪಕ್ಷಿಯು ಅನುಮಾನದಿಂದ ಕೂಗಿ, ಸರಿಯಾದ ರಾಗವನ್ನು ಪ್ರಯತ್ನಿಸುವಂತೆ, ಅನಂತರ ಆತ್ಮವಿಶ್ವಾಸದಿಂದ ಇಂಪಾಗಿ ಪೂರಾ ಹಾಡನ್ನು ಲಯ ಬದ್ಧವಾಗಿ ಬೆಟ್ಟದ ಸುತ್ತಲೂ ಕೇಳುವಂತೆ ಹಾಡಿತು. ಇದ್ದಕ್ಕಿದ್ದಹಾಗೇ ಸಂಗೀತವು ನಿಲ್ಲುವುದು, ಸ್ವರ ಆರೋಹಣದ ಮಧ್ಯೆ; ಮತ್ತು ನಾನು ಆಶ್ಚರ್ಯದಿಂದ ಹಕ್ಕಿ ಹಾಡುವುದನ್ನು ನಿಲ್ಲಿಸುವುದಕ್ಕೆ ಏನಾಗಿರಬಹುದು ಎಂಬುದಾಗಿ ಚಿಂತಿಸಿದೆ.
ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ರಸ್ಕಿನ್‌ ಬಾಂಡ್‌ ಅವರ “ರೇನ್‌ ಇನ್‌ ದ ಮೌಂಟೇನ್ಸ್‌” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ