Advertisement

Tag: ಕೆಂಡಸಂಪಿಗೆ

ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎಂಟನೆಯ ಕಂತು

Read More

ಪುಸ್ತಕ ಲೋಕಾರ್ಪಣೆ ಮತ್ತು ಮಾರಾಟ: ಎಚ್. ಗೋಪಾಲಕೃಷ್ಣ ಸರಣಿ

ಯಾರೋ ನನ್ನನ್ನು ಗಮನಿಸುತ್ತಾ ಇದ್ದಾರೆ ಎಂದೂ ಅನಿಸಬೇಕೇ..? ನರಸಿಂಹಯ್ಯನವರ ಕಾದಂಬರಿ ಓದಿ ಬೆಳೆದವರಿಗೆ ಈ ಸನ್ನಿವೇಶ ಒಟ್ಟಿಗೇ ಎಂಟೋ ಹತ್ತೋ ಭಯಾನಕ ಭೂತಗಳು, ನಡು ಹಗಲಿನಲ್ಲಿ ಮೋಹಿನಿಯ ಕಾಟ, ಮಟಮಟ ಮಧ್ಯಾಹ್ನ ಕಾಡಿತ್ತು ಕರಿ ಮೋಹಿನಿ… ಮೊದಲಾದ ಆಕರ್ಷಕ ಶೀರ್ಷಿಕೆಗಳು ಇರುವ ಹಲವಾರು ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಮತ್ತು ಬರಹದಲ್ಲಿ ತಾನೇ ಸೆಂಟರ್ ಫಿಗರ್ ಆಗಿ ಮಿಂಚುವ ಅವಕಾಶಗಳೂ ಸಹ ಹೇರಳವಾಗಿದ್ದವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೭ನೇ ಬರಹ ನಿಮ್ಮ ಓದಿಗೆ

Read More

ಗೃಹ ತಪಸ್ವಿನಿಯ ಮೌನದ ಮಾತು: “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಬರಹ

ನಿದ್ರೆಯನ್ನು ಯಾರಾದರು ಸ್ವಿಕರಿಸಿದರೆ ಮಾತ್ರ ನಾನು ಒಪ್ಪುವೆ ಎಂದಾಗ ಲಕ್ಷ್ಮಣ ನನ್ನ ನೆನಪಲ್ಲೆ ವಿರಹದಲ್ಲಿರುವೆ ಪತ್ನಿ ಊರ್ಮಿಳೆಗೆ ನನ್ನ ಪರವಾದ ನಿದ್ರೆ ಕರುಣಿಸು. ವನವಾಸದ ಅವಧಿ ಮುಗಿಯುವರೆಗೂ ಎಂದಾಗ ನಿದ್ರಾ ದೇವತೆ ಹಾಗೆ ಆಗಲಿ ತಥಾಸ್ತು ಎಂದು ಊರ್ಮಿಳೆ ಬಳಿ ಬಂದ ದೇವಿ ಊರ್ಮಿಳೆ ನಿನ್ನ ಪತಿ ನಿನಗೆ ಅವನ ಪರವಾದ ನಿದ್ರೆಯನ್ನು ಸ್ವಿಕರಿಸಲು ಹೇಳಿರುವನು.
ವಿಜಯಾ ವಿಷ್ಣುಭಟ್ ಬರೆದ “ಊರ್ಮಿಳಾ” ಕಾದಂಬರಿಯ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ್ ಬರಹ

Read More

ಅದೇ ದಾರಿ… ಅದೇ ತಿರುವು…:  ವಿನಾಯಕ ಅರಳಸುರಳಿ ಅಂಕಣ

ರಾತ್ರಿಯಾದರೆ ಸಾಕು, ಒಂದೊಂದು ಮನೆಯೂ ಒಂದೊಂದು ಬೆಳಕಿನ ಡಬ್ಬಿ. ಒಂದೊಂದು ಕಿಟಕಿಯಲ್ಲಿ ಕತ್ತಲು, ಇನ್ನೊಂದರಲ್ಲಿ ಬೆಳಕು. ಆ ಬೆಳಕಿನ ಪರದೆಯ ಹಿಂದೆಯೇ ಕಪ್ಪು ನೆರಳಾಗಿ ಕದಲುವ ಮನುಷ್ಯರು. ವಾಹನಗಳ ಭರಾಟೆ ತಗ್ಗಿರುವ ರಾತ್ರಿ ಹತ್ತರ ನೀರವದಲ್ಲಿ ಸಮೀಪದಲ್ಲೇ ಕೇಳಿಸುವ ರೈಲಿನ ಕೇಕೆ. ಅರೆರೇ, ರೈಲಿನ ಹಳಿ ಇಷ್ಟು ಹತ್ತಿರದಲ್ಲೇ ಇದೆಯೇ? ಈ ಕ್ಷಣಕ್ಕೆ ಕೇಳಿಸಿದ ಕೇಕೆಯಲ್ಲೇ ಅದು ಹಾದು ಹೋಗಲಿರುವ ನದಿ-ಬೆಟ್ಟ-ಸುರಂಗ-ಕಾಡುಗಳ ಸುಂದರ ಪ್ರಯಾಣದ ಕಲ್ಪನೆಯಾಗಿ ಮನಸ್ಸಿನಲ್ಲೇನೋ ಖುಷಿಯ ಭಾವ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಸ್ವಾಮಿ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ವೃತ್ತ”

ಭಯಗೊಂಡ ವೆಂಕಯ್ಯ ಪಂಜು ಬಿಸಾಡಿ ದೂರ ಓಡಿದ. ಪಂಜು ಕಂಡ ಮಸೀದಿಯವರು ಇದು ಮೇಲಿನ ಕೇರಿಯವರದ್ದೇ ಕಿತಾಪತಿ ಎಂದು ತಾವೂ ನಾಲ್ಕಾರು ಕೊಳ್ಳಿ ತೆಗೆದುಕೊಂಡು ಮೇಲಿನ ಕೇರಿಯತ್ತ ಧಾವಿಸಿದರು. ಹಿಂದೂ ಮುಸ್ಲಿಂ ಕೋಮುಗಲಭೆ ಎಂದು ಪ್ರಚಾರಗೊಂಡ ಅದು ಟೀವಿ ಪೇಪರಿನಲ್ಲಿ ಸುದ್ದಿಯಾಯಿತು. ಯಾವ ಯುದ್ಧಕ್ಕೆ ತಾನೆ ಕೊನೆಯಿರುವುದಿಲ್ಲ? ಮತ್ತೆ ಯಾವ ಯುದ್ಧಕ್ಕೆ ತಾನೆ ನಿರ್ಧಿಷ್ಟವಾದ ಕಾರಣ ಬೇಕಿದೆ? ಕಾರಣವಿಲ್ಲದೆ ಎಷ್ಟೋ ಯುದ್ಧಗಳಾಗಿಲ್ಲವೇ? ಮತ್ತು ಅವು ಇದ್ದಕ್ಕಿದ್ದಂತೆ ನಿಂತೂ ಹೋಗಿಲ್ಲವೇ ?
ಸ್ವಾಮಿ ಪೊನ್ನಾಚಿ ಬರೆದ ಕತೆ “ವೃತ್ತ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ