Advertisement

Tag: ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ

ನೇಪಾಳವೆಂಬ ಮತ್ತೊಂದು ಭಾರತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ನೇಪಾಳದ ಜನರು ಶ್ರಮಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪರ್ವತ ಪ್ರದೇಶಗಳನ್ನು ಅವರು ಏರುವ ಮತ್ತು ಇಳಿಯುವ ರೀತಿ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ. ಮೊದಮೊದಲು ಪರ್ವತಾರೋಹಣಕ್ಕೆ ಹೊರಟವರಿಗೆ ಖಾಲಿ ಕೈಯ್ಯಲ್ಲಿ ಪರ್ವತದ ತುದಿ ತಲುಪುವುದೇ ಅಬ್ಬಬ್ಬಾ ಎನಿಸಿಬಿಡುತ್ತದೆ. ಆದರೆ ನೇಪಾಳದವರು ತಮ್ಮ ಬೆನ್ನ ಮೇಲೆ ಭಾರವಾದ ಚೀಲಗಳನ್ನು ಇಲ್ಲವೇ ವಸ್ತುಗಳನ್ನು ಹೊತ್ತುಕೊಂಡು ಪರ್ವತವನ್ನು ಏರುತ್ತಾರೆ; ಇಳಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ನೇಪಾಳದ ಕುರಿತ ಬರಹ ನಿಮ್ಮ ಓದಿಗೆ

Read More

ಪರಿಸರ ರಕ್ಷಣೆಯ ಕಠಿಣ ವಜ್ರ ನಮೀಬಿಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ನಿಸರ್ಗವನ್ನು ಆಧಾರವಾಗಿಟ್ಟುಕೊಂಡ ಜೀವನಶೈಲಿಯನ್ನು ಈಗಲೂ ಉಳಿಸಿಕೊಂಡಿರುವ ಅಲ್ಲಿನ ಹಲವು ಸಮುದಾಯಗಳು ಬದುಕನ್ನು ನಡೆಸುವುದರ ಜೊತೆಗೆ ಪ್ರಕೃತಿಯನ್ನೂ ಉಳಿಸಿ, ಬೆಳೆಸುತ್ತಿವೆ. ಇದರಿಂದಾಗಿ ನಮೀಬಿಯಾದ ಪ್ರವಾಸೋದ್ಯಮವೂ ಸಹ ಅಭಿವೃದ್ಧಿ ಕಂಡಿದೆ. ಪ್ರವಾಸೋದ್ಯಮಕ್ಕೆ ದೊರಕಿರುವ ಉತ್ತೇಜನದಿಂದಾಗಿ ಈ ಬುಡಕಟ್ಟು ಸಮುದಾಯಗಳು ಸಶಕ್ತಗೊಳ್ಳುತ್ತಿವೆ. ನಮೀಬಿಯಾದ ಬುಡಕಟ್ಟು ಸಮುದಾಯಗಳು ಅಲ್ಲಿನ ನಿಸರ್ಗವನ್ನು ಸಂರಕ್ಷಿಸಲು ನೀಡಿರುವ ಕೊಡುಗೆಯನ್ನು ವಿಶ್ವ ವನ್ಯಜೀವಿ ನಿಧಿ ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಗುರುತಿಸಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಯುದ್ಧದ ಬಿಸಿ ನೀಗಿಕೊಂಡು ತಂಪಗಾಗಬೇಕಿದೆ ರಷ್ಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಕಮ್ಯುನಿಸ್ಟ್‌ ಆಳ್ವಿಕೆಯ ಸಮಯದಲ್ಲಿ ರಷ್ಯನ್ ಬರಹಗಾರರು ನಿರ್ಬಂಧಕ್ಕೆ ಒಳಗಾದರು. ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗದ ದುಃಸ್ಥಿತಿಗೆ ಸಿಲುಕಿಕೊಂಡರು. ಮರೀನಾ ಟ್ವೆಟೇವಾ ಅವರು ರಷ್ಯಾದ ಹೊರಗಡೆ ಇದ್ದುಕೊಂಡೇ ಕಾವ್ಯರಚನೆ ಮಾಡಿದ್ದು, ರಷ್ಯಾಕ್ಕೆ ಮರಳಿ ಬಂದು ಎರಡೇ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು ಇವೆಲ್ಲಾ ಸಾಹಿತ್ಯ ಕ್ಷೇತ್ರದ ಮೇಲೆ ಕಮ್ಯುನಿಸ್ಟ್‌ ಪ್ರಾಬಲ್ಯವನ್ನು ಸೂಚಿಸುತ್ತವೆ. ಸ್ಟಾಲಿನ್ ಮರಣದ ಬಳಿಕ ರಷ್ಯನ್ ಸಾಹಿತ್ಯದಲ್ಲಿ ಹೊಸ ಬಗೆಯ ಬರಹಗಳು ಮತ್ತು ಪ್ರವೃತ್ತಿಗಳು ಕಾಣಿಸಿಕೊಂಡವು.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಉತ್ತರ ಕೊರಿಯಾ, ಇದು ಸರಿಯಾ?: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಉತ್ತರ ಕೊರಿಯಾದಲ್ಲಿ ಕಲೆ, ಸಂಸ್ಕೃತಿ ಇವೆಲ್ಲವೂ ಕೂಡಾ ಬೆಳವಣಿಗೆ ಕಾಣುತ್ತಿರುವುದು ರಾಷ್ಟ್ರೀಯತೆಯ ಹೆಸರಿನಲ್ಲಿ. ಎಲ್ಲಾ ರೀತಿಯ ಕಲಾಕೃತಿಗಳ, ಪ್ರದರ್ಶನ ಕಲೆಗಳ ಅಂತಿಮ ಉದ್ದೇಶ ರಾಷ್ಟ್ರದ ಪ್ರಗತಿ ಮತ್ತು ರಾಷ್ಟ್ರಕ್ಕೆ ಸಾಂಸ್ಕೃತಿಕ ಅಸ್ಮಿತೆಯನ್ನು ಒದಗಿಸಿಕೊಡುವುದು ಎಂಬ ಭಾವನೆಯನ್ನು ಬಲವಾಗಿ ರೂಪಿಸಲಾಗುತ್ತಿದೆ. ಉತ್ತರ ಕೊರಿಯಾದ ಪ್ರಮುಖ ಶಿಲ್ಪಕಲಾಕೃತಿಗಳು ಯಾವುವು ಎಂದು ಗಮನಹರಿಸಿದಾಗ ಕಿಮ್ ಇಲ್ ಸುಂಗ್ ಅವರ ಪ್ರತಿಮೆಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ತಿಳಿವಳಿಕೆಯ ಚಳುವಳಿಗಳಿಂದ ಅರಳಿನಿಂತ ಫ್ರಾನ್ಸ್: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಫ್ರಾನ್ಸ್ ಕಲಾವಲಯದ ಕುರಿತ ವಿವರಣೆಯು ಪ್ಯಾಬ್ಲೋ ಪಿಕಾಸೊ ಅವರ ಪ್ರಸ್ತಾಪವಿಲ್ಲದೆ ಪೂರ್ಣವಾಗಲಾರದು. ಶಿಲ್ಪಕಲೆಯನ್ನು ಪ್ರಧಾನವಾಗಿಸಿಕೊಂಡು ಇತರ ಕಲೆಗಳಲ್ಲಿಯೂ ತೊಡಗಿಸಿಕೊಂಡ ಇವರು ಸ್ಪೇನ್ ಮೂಲದವರು. ಇಪ್ಪತ್ತನೇ ಶತಮಾನದ ಫ್ರಾನ್ಸ್ ಶಿಲ್ಪಕಲೆಯ ಮೊದಲ ಅರ್ಧಭಾಗ ಪಿಕಾಸೊ ಅವರಿಗೆ ಮೀಸಲಾಗಿದೆ. ‘ಮ್ಯಾನ್ ವಿದ್ ಅ ಲ್ಯಾಂಬ್’ ಎನ್ನುವ ಅವರ ಶಿಲ್ಪಕಲಾ ಕೆತ್ತನೆಯಲ್ಲಿ ಮಾನವೀಯತೆ ಅಭಿವ್ಯಕ್ತಗೊಂಡಿದ್ದರೆ, ‘ಡೆತ್ಸ್ ಹೆಡ್’ ಎನ್ನುವ ಕೆತ್ತನೆಯು ಯುದ್ಧದ ಭೀಕರತೆಯನ್ನು ಮನದಟ್ಟು ಮಾಡಿಕೊಡುವಂತಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ