Advertisement

Tag: kendasampige

ಕಳ್ಳಿ ಪೀರ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಹಲವು ಕಳ್ಳಿಪೀರಗಳು ಸೇರಿ ಹರ್ಷದಿಂದ ಟ್ರೀ…ಟ್ರೀ.. ಎಂದು ಕೂಗುತ್ತವೆ. ಮಣ್ಣಿನ ಧೂಳಿನಲ್ಲಿ ಸ್ನಾನ ಮಾಡುವುದೆಂದರೆ ಇವುಗಳಿಗೆ ಬಹಳ ಆಸಕ್ತಿ. ಇದು ಅವುಗಳ ದೇಹದ ಹೆಚ್ಚುವರಿ ತೈಲಾಂಶವನ್ನು ತೆಗೆಯುವುದಲ್ಲದೆ, ರೋಗಕಾರಕ ಕೀಟಗಳನ್ನೂ ದೂರ ಮಾಡುವುದು. ಸಂಜೆಯಾದೊಡನೆ, ಗುಂಪಿನಲ್ಲಿ ಮರದ ಎಲೆಗಳ ನಡುವೆ ತಂಗುತ್ತವೆ. ಆದರೆ ಬೆಳಿಗ್ಗೆ ಏಳಲು ಸೋಮಾರಿ. ಮುಂಜಾನೆ ಸೂರ್ಯೋದಯವಾದರೆ ಸಾಲದು. ಬಿಸಿಲೇರಬೇಕು! ಏಕೆಂದರೆ, ಜೇನ್ನೊಣಗಳೂ ತಮ್ಮ ಕಾರ್ಯವನ್ನು ಶುರು ಮಾಡಬೇಕಲ್ಲ?
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕಳ್ಳಿ ಪೀರ ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಬಯಸುವುದು ಒಂದು ಸಿಗುವುದು ಮತ್ತೊಂದು!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಿಲ್ದಾಣಕ್ಕೆ ನಡೆಯುವಾಗ ಆಗಾಗ್ಗೆ ಎದ್ದು ಬರುತ್ತಿದ್ದ ಶೂಗಳು ನನ್ನ ನಡಿಗೆಯ ವೇಗವನ್ನು ಕುಂಠಿತಗೊಳಿಸಿದ್ದವು. ನಾನು ತಡವಾಗುತ್ತದೆಯೆಂದು ಭಾವಿಸಿ ಶೂಗಳನ್ನು ಕೈಯಲ್ಲಿ ಹಿಡಿದು ರೈಲ್ವೇ ನಿಲ್ದಾಣ ಸಿಗುವವರೆಗೆ ಓಡಿದೆ. ನನ್ನ ಅದೃಷ್ಟಕ್ಕೆ ರೈಲು ಇನ್ನೂ ಹೋಗಿರಲಿಲ್ಲ. ಟಿಕೇಟ್ ತೆಗೆದುಕೊಂಡು ರೈಲನ್ನು ಹತ್ತಿ ಕುಳಿತೆ. ಇದೇ ಮೊದಲ ಬಾರಿಗೆ ನಾನು ಧಾರವಾಡಕ್ಕೆ ಹೋಗುತ್ತಿದ್ದೆ. ನನ್ನ ಎದುರಿಗೆ ಕುಳಿತಿದ್ದವರ ಬಳಿ ಹೇಗೆ ಹೋಗಬೇಕೆಂದು ಕೇಳಿದಾಗ ಅವರು ಮಾಹಿತಿ ತಿಳಿಸಿದರಲ್ಲದೇ ನನ್ನ ಬಗ್ಗೆ ಕನಿಕರ ತೋರಿ “ನಿಮಗೆ ಕೆಲಸ ಸಿಗದಿದ್ದರೆ ನನಗೆ ಕರೆ ಮಾಡಿ ನಾನು ನಿಮಗೆ ಬೇರೊಂದು ಕೆಲಸ ಕೊಡಿಸುತ್ತೇನೆ” ಎಂದು ಅವರ ನಂಬರ್ ಕೊಟ್ಟು ಹೋದರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಒಂದು ಡೈಲಾಗ್‌ ಹೇಳಿ!: ಚಿತ್ರಾ ವೆಂಕಟರಾಜು ಸರಣಿ

ಕಲಿಕೆಯ ಪ್ರಾರಂಭದಲ್ಲಿ ಎಲ್ಲಾ ಕಲೆಗಳಲ್ಲೂ ಅದನ್ನು ಕಲಿಸುವವರನ್ನು ಅನುಕರಣೆ ಮಾಡುತ್ತಾರೆ. ಒಂದು ಹಂತದಲ್ಲಿ ಅದು ಅನಿವಾರ್ಯ ಕೂಡಾ. ನಂತರ ನಿಧಾನವಾಗಿ ಅದನ್ನು ಬಿಡಿಸಿಕೊಂಡು ಅಂದರೆ ಕೌಶಲವನ್ನು ಮೀರಿ, ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಒಂದು ಪಾತ್ರದ ನಡವಳಿಕೆ ಹೇಗಿರಬಹುದು ಎನ್ನುವುದರಿಂದ ನಟನೆಯ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ವರ್ಷಗಳ ಹಿಂದೆ ಅನುಕರಣೆ ಮಾಡಿದ ರೀತಿಯಲ್ಲೇ ಎಲ್ಲಾ ಸಂಭಾಷಣೆಗಳನ್ನೂ ಹೇಳುತ್ತೇವೆ. ಕಾಳಿದಾಸನಿಂದ ಹಿಡಿದು ಷೇಕ್ಸ್‌ಪಿಯರ್‌ ನವರೆಗೂ ಎಲ್ಲಾ ನಾಟಕದ ಎಲ್ಲಾ ಪಾತ್ರಗಳೂ ಒಂದೇ ರೀತಿ ಮಾತನಾಡುತ್ತವೆ. ನಿಜ ಜೀವನದಲ್ಲಿ ಮಾತನಾಡುವಂತೆ ರಂಗದ ಪಾತ್ರಗಳು ಮಾತನಾಡಲು ಆಗುವುದಿಲ್ಲ ಅದಕ್ಕೊಂದು ನಾಟಕೀಯತೆ ಇರಬೇಕಾಗುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು”

Read More

ಕಂಡಂಥ ಕನಸುಗಳು… ಮತ್ತೂ…: ಎಚ್. ಗೋಪಾಲಕೃಷ್ಣ ಸರಣಿ

ಈ ಹಿನ್ನೆಲೆಯಲ್ಲಿ ನಾನೂ ಪ್ರಕಾಶಕ ಆದೆ. ಪುಸ್ತಕ ಮಾರಾಟದಲ್ಲಿ, ಗ್ರಂಥಾಲಯಕ್ಕೆ (ರಾಜ್ಯದಲ್ಲಿನ ಗ್ರಂಥಾಲಯಗಳಿಗೆ ಅವರು ಕೇಳಿದಾಗ ಎರಡು ಮೂರು ಪ್ರತಿ ರವಾನಿಸಬೇಕು)ಕೊಡುವಲ್ಲಿ ಮತ್ತು ಕೆಲವು ಸಲ ಲಂಚವನ್ನು ಕೊಡಬೇಕಾದ ಸಂದರ್ಭ ಸಹ ಹುಟ್ಟುತ್ತದೆ… ಈ ಸಮಸ್ಯೆ ಆಳಕ್ಕೆ ಇಳಿದ ಹಾಗೆ ಇದು ನನ್ನಂತಹ ಸಭ್ಯ, ಸಜ್ಜನನಿಗೆ ಸರಿಹೋಗದ ವ್ಯಾಪಾರ ಅನಿಸಿತಾ? ಇನ್ನುಮೇಲೆ ಪ್ರಕಾಶಕ ಎಂದು ಕರೆಸಿಕೊಳ್ಳಬಾರದು ಎಂದು ನಿರ್ಧರಿಸಿದೆ. ಹೀಗೆ ಒಬ್ಬ ಪ್ರಕಾಶಕ ಆಗಿ ಪೆಂಗ್ವಿನ್ ಅಂತಹ ದೊಡ್ಡ ಸಂಸ್ಥೆಗೆ ಪೈಪೋಟಿ ಕೊಡುವ ನನ್ನಾಸೆ ಅಂದೇ ಕಮರಿ ಹೋಯಿತು!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಕುದಿಯದ ಕಡಲು: ವಿನಾಯಕ ಅರಳಸುರಳಿ ಅಂಕಣ

ಇಂದಿಗೂ ನನ್ನನ್ನು ಇದೊಂದು ಪ್ರಶ್ನೆ ಕಾಡುತ್ತಲೇ ಇದೆ: ನಾವು ಓದಿಕೊಳ್ಳುವ ಸಾಹಿತ್ಯ, ಕೇಳಿಸಿಕೊಳ್ಳುವ ಕಿವಿ ಮಾತು, ಪ್ರತಿ ದಿನ ನೋಡುವ ಯಾರದ್ದೋ ಬದುಕಿನ ನಿದರ್ಶನಗಳು, ತತ್ವ, ಸಿದ್ಧಾಂತ, ಆದರ್ಶ, ಭಾಷಣಗಳು… ವೈಯಕ್ತಿಕ ಬದುಕಿನ ತಿರುವುಗಳಿಗೆ ಇವು ಹೇಗೆ ಅನ್ವಯವಾಗುತ್ತವೆ? ಯಾರದೋ ವಿಷಯದಲ್ಲಿ ಎಷ್ಟೆಲ್ಲ ಪ್ರಬುದ್ಧವಾಗಿ ದಾರಿ ಹೇಳುವ ನಾವು ನಮ್ಮ ಪ್ರಯಾಣದಲ್ಲಿ ಮಾತ್ರ ಏಕೆ ಓಲಾಡುತ್ತ ನಡೆಯುತ್ತೇವೆ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ