Advertisement

Tag: kendasampige

`ವ್ಯವಹಾರ ಚತುರ’ ಉಲುವಾಟು ಮಂಗಗಳು: ಡಾ. ಜೆ. ಬಾಲಕೃಷ್ಣ ಬರಹ

ಅಧ್ಯಯನದ ಮತ್ತೊಂದು ಪ್ರಮುಖ ಅಂಶವೆಂದರೆ, ಗಂಡು ಮಂಗಗಳು ಹೆಚ್ಚು ಕದಿಯುತ್ತಿದ್ದವು ಹಾಗೂ ಹದಿಹರೆಯದ ಗಂಡು ಮಂಗಗಳು ಈ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದವು. ವಿಜ್ಞಾನಿಗಳು ಹೇಳುವಂತೆ ಹದಿಹರೆಯದ ಮಂಗಗಳು ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುವ ನಡವಳಿಕೆ ಹೊಂದಿರುತ್ತವೆ. ಈ ರೀತಿಯ ನಡವಳಿಕೆಯನ್ನು ಉಲುವಾಟು ಮಂಗಗಳು ಮೊದಲಿಗೆ ಹೇಗೆ ಕಲಿತವು ಎಂಬುದೇ ಅಚ್ಚರಿಯ ವಿಷಯವಾಗಿದೆ. ಬಹುಶಃ ಪ್ರಾರಂಭದಲ್ಲಿ ಮನುಷ್ಯರ ಪ್ರಭಾವವಿದ್ದರೂ ಇರಬಹುದು, ಆದರೆ ನಂತರ ಅದು ಹೇಗೆ ಒಂದು `ಸಾಂಸ್ಕೃತಿಕ ನಡವಳಿಕೆ’ಯಾಗಿ ಸಮುದಾಯದಲ್ಲಿ ಪ್ರಸಾರವಾಗಿದೆ ಎನ್ನುವುದರ ಕುರಿತು ಇನ್ನೂ ಹೆಚ್ಚಿನ ಮನೋವೈಜ್ಞಾನಿಕ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಫ್ಯಾನಿಯವರು.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಕೆಲವು ಬರಹಗಳ ಸರಣಿ ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ನರೇಂದ್ರ ಪೈ ಕತೆ

ಈಗಲೂ ರಾತ್ರಿ ಎರಡೂವರೆ, ನಾಲ್ಕುಗಂಟೆಗೆಲ್ಲ ಒಮ್ಮೊಮ್ಮೆ ಎಚ್ಚರವಾದಾಗ ನಾನು ಆವತ್ತು ಎದೆ ಕಲ್ಲು ಮಾಡಿಕೊಂಡು ನಡೆದು ಬಂದುಬಿಟ್ಟ ಕ್ಷಣ ನೆನಪಾಗಿ ಇನ್ನು ಮಲಗುವುದು ಸಾಧ್ಯವೇ ಇಲ್ಲ ಎಂದು ಎದ್ದು ಕೂರುತ್ತೇನೆ. ಆವತ್ತು ನಾನು ಆ ಭಟ್ಟನ ಮಾತು ಕೇಳಿ ತಿರುಗಿ ನೋಡದೇ ಬಂದು ಬಿಡಬಾರದಾಗಿತ್ತು. ಅಷ್ಟು ಹತ್ತಿರದಿಂದ ಅಮ್ಮ, ಸುಚೀ, ಅಮ್ಮಿ ಮೂವರೂ ಸ್ಪಷ್ಟವಾಗಿ ನನ್ನನ್ನು ಕರೆದಿದ್ದು ಖಂಡಿತಾ ಸುಳ್ಳಲ್ಲ, ಭ್ರಮೆಯಲ್ಲ. ಅವರು ನನಗೆ ಮರಳಿ ಸಿಗುತ್ತಿದ್ದರೋ ಇಲ್ಲವೋ ಆ ಪ್ರಶ್ನೆ ಬೇರೆ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನರೇಂದ್ರ ಪೈ ಕತೆ “ಭೇಟಿ” ನಿಮ್ಮ ಓದಿಗೆ

Read More

ಮಾಗಿ ಮಾವ ಬಂದ ಮಂಜು ಗಿಂಜು ತಂದ: ಚಂದ್ರಮತಿ ಸೋಂದಾ ಸರಣಿ

ಉಳಿದ ದಿನಗಳಲ್ಲಿ ಸ್ನಾನಮಾಡಲು ಹಿಂದೇಟು ಹಾಕುತ್ತಿದ್ದ ನಾವು ಚಳಿಗಾಲದಲ್ಲಿ ಮಾತ್ರ ಸ್ನಾನ ಮಾಡಲು ನಾಮುಂದು ತಾಮುಂದು ಎಂದು ಓಡುತ್ತಿದ್ದೆವು. ಮೈ ಮೇಲೆ ಬಿಸಿನೀರು ಸುರಿದುಕೊಳ್ಳುವುದು ಬಹಳ ಆಪ್ಯಾಯಮಾನ ಎನಿಸುತ್ತಿತ್ತು. ʻಅದೆಷ್ಟು ಹೊತ್ತು? ನಿಂದೊಳ್ಳೆ ಊರ್ಮಿಳೆ ಸ್ನಾನ ಆಯ್ತುʼ ಅಂಥ ಅಮ್ಮನಿಂದ ಮಂತ್ರಾಕ್ಷತೆ ಸಿಗುವುದೂ ಇತ್ತು. ಚಿಕ್ಕವರಿರುವಾಗ ಇದರ ಅರ್ಥ ಗೊತ್ತಿರಲಿಲ್ಲ, ಆಮೇಲೆ ತಿಳಿಯಿತು. ರಾಮಲಕ್ಷ್ಮಣರು ಸೀತೆಯೊಂದಿಗೆ ವನವಾಸಕ್ಕೆ ಹೋಗುವಾಗ ಊರ್ಮಿಳೆ ಸ್ನಾನ ಮಾಡುತ್ತಿದ್ದಳಂತೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹನ್ನೆರಡನೆಯ ಕಂತು

Read More

ಅಡಕತ್ತರಿಯಲ್ಲಿ ನಿಂತು…: ಗುರುಪ್ರಸಾದ ಕುರ್ತಕೋಟಿ ಸರಣಿ

ಬಂದು ಆಗಲೇ ಮೂರು ದಿನಗಳಾಗಿತ್ತು. ನಾನು ತಾಳ್ಮೆ ಕಳೆದುಕೊಳ್ಳತೊಡಗಿದೆ. ಇನ್ನೂ ಎಲ್ಲಿ ಕೆಲಸಕ್ಕೆ ಹೋಗಬೇಕು ಅಂತ ನನ್ನ ದಾಸ್ ಬಾಸ್ ಯಾಕೆ ಹೇಳುತ್ತಿಲ್ಲ ಅಂತ ದಿಗಿಲು ಉಂಟಾಯಿತು. ಫೋನಾಯಿಸಿ ಕೇಳಿದೆ ಕೂಡ. ಇರಿ ಇವತ್ತು ಸಂಜೆ ನಿಮ್ಮ ಹೊಟೇಲ್ ಹತ್ತಿರ ಸಿಗುವೆ ಅಂದರು ದಾಸ್. ಸಂಜೆ ಸ್ವಲ್ಪ ತಡವಾಗಿಯೇ ಆದರೂ ಬಂದರು. ಚಳಿ ಈಗಾಗಲೇ ಶುರುವಾಗಿತ್ತು. ಹೀಗಾಗಿ ಅವರ ಕಾರ್ ಅನ್ನು ಶುರು ಇಟ್ಟುಕೊಂಡೆ ಅದರ ಒಳಗಡೆಯೇ ಮಾತಾಡಲು ಕೂತೆವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಡಾ. ಅಂಬೇಡ್ಕರ್‌ ಬರೆದ ಪ್ರೇಮಪತ್ರ…: ಸದಾನಂದ ಆರ್. ಅನುವಾದ

ಮೊದಲಿಗೆ, ಉಕ್ಕಿ ಹರಿಯುವ ಪ್ರೀತಿಯನ್ನು ನಿಯಂತ್ರಿಸಲು ನಾವು ಕಲಿಯಬೇಕು. ನೀನೀಗ ಪ್ರೀತಿಯ ಬಲಿಪಶುವಾಗಿರುವೆ ಎನ್ನುವ ಆತಂಕ ನನ್ನದು. ನನ್ನಿಂದ ದೂರವಿರಲು ನಿನ್ನಿಂದ ಸಾಧ್ಯವಿಲ್ಲ ಅನ್ನುವುದನ್ನು ನಾನು ಬಲ್ಲೆನು. ನನಗೂ ನೀನು ನನ್ನ ಹತ್ತಿರ ಇರಬೇಕೆಂಬ ಆಸೆಯಿದೆ. ಆದರೆ ನೀನು ನನಗೆ ಒಂದಿಷ್ಟು ಸಮಯಾವಕಾಶ ನೀಡಬೇಕೆಂದು ಕೋರುವೆ. ನಿನ್ನ ತಾಳ್ಮೆಯನ್ನು ನಾನು ಖಂಡಿತ ಪರೀಕ್ಷಿಸುವುದಿಲ್ಲ ಎನ್ನುವುದಂತೂ ಖಾತ್ರಿ.
ಡಾ. ಬಿ.ಆರ್. ಅಂಬೇಡ್ಕರ್‌ ತಮ್ಮ ಮದುವೆಗೂ ಮುನ್ನ ತಮ್ಮ ಪತ್ನಿಗೆ ಬರೆದಿದ್ದ ಪತ್ರವನ್ನು ಸದಾನಂದ ಆರ್. ಕನ್ನಡಕ್ಕೆ ಅನುವಾದಿಸಿದ್ದಾರೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ