Advertisement

Tag: kendasampige

ಮರೆತುಹೋಗುತ್ತಿದ್ದೆ ಬಿಲ್ಲು ಪಾವತಿಸಲು!: ಎಚ್. ಗೋಪಾಲಕೃಷ್ಣ ಸರಣಿ

ಮದುವೆ ಆದ ಮೇಲೆ ನನ್ನಾಕೆಗೆ ಈ ಕೇಸರಿಬಾತ್ ಕತೆ ಹೇಳಿದ್ದೆ. ನಂತರ ನಾನೂ ಅವಳೂ ಬೆಳಿಗ್ಗೆ, ನನಗೆ ಸೆಕೆಂಡ್ ಶಿಫ್ಟ್ ಇದ್ದಾಗ ಕೇಸರಿ ಭಾತ್‌ಗೆ ಲಗ್ಗೆ ಹಾಕ್ತಾ ಇದ್ದೆವು. ಆಗ ತಿಂದ ಡಬರಿ ಗಟ್ಟಲೆ ಕೆಸರಿಭಾತಿನ ರುಚಿ ನನಗೆ ಈಗಲೂ ಬಾಯಿ ಸಮುದ್ರ ಮಾಡುತ್ತೆ. ಸಣ್ಣ ವಯಸ್ಸು, ಕಲ್ಲು ತಿಂದು ಅರಗಿಸಿಕೊಳ್ಳುವ ಯೌವ್ವನ ಹಾಗೂ ಸಕ್ಕರೆ ಖಾಯಿಲೆ ಅಂಟುವ ವಯಸ್ಸಲ್ಲ, ಅದರಿಂದ ಅದೆಷ್ಟೋ ಕ್ವಿಂಟಾಲ್ ಕೇಸರಿಬಾತ್‌ಗೆ ಮುಕ್ತಿ ಕಾಣಿಸಿದ್ದೆವು. ಇದು ಸುಮಾರು 83ನೇ ಇಸವಿಯವರೆಗೆ ಅನೂಚಾನವಾಗಿ ನಡೆದುಕೊಂಡು ಬಂತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ನೀನೆ ಭುವನಕ್ಕಾರಾಧ್ಯನೈ… ಚೂತರಾಜಾ: ಚಂದ್ರಮತಿ ಸೋಂದಾ ಸರಣಿ

ಮಲೆನಾಡು, ಕರಾವಳಿ ಭಾಗದಲ್ಲಿ ಕೊಸಗಾಯಿ ಅಥವಾ ಕುಚ್ಚುಮಾವಿನಕಾಯಿ ಎನ್ನುವುದು ಮಳೆಗಾಲದಲ್ಲಿ ಅಡಿಗೆಗೆ ಸಹಾಯಕ. ಕುದಿಯುವ ಹಂತದಲ್ಲಿದ್ದ ನೀರಿಗೆ ತೊಳೆದು ಶುದ್ಧಗೊಳಿಸಿದ ಮಾವಿನಕಾಯಿಗಳನ್ನು ಹಾಕಿ ಒಂದು ಕ್ಷಣಬಿಟ್ಟು ಅದನ್ನು ಅಲ್ಲಿಂದ ತೆಗೆದು ಆರಿದ ಮೇಲೆ ಉಪ್ಪುನೀರಿನಲ್ಲಿ ಹಾಕಿಡಬೇಕು. ಇದರಿಂದಲೂ ಹಸಿಮಾವಿನಕಾಯಿಯಲ್ಲಿ ಮಾಡುವ ವ್ಯಂಜನಗಳನ್ನೆಲ್ಲ ಮಾಡಬಹುದು. ಇದಕ್ಕೂ ಅಷ್ಟೆ, ಎಲ್ಲ ಮಾವಿನಕಾಯಿಯೂ ಬಾರದು. ಸಿಪ್ಪೆ ದಪ್ಪವಿದ್ದು ಉಪ್ಪಿನಲ್ಲಿ ಕರಗಬಾರದು. ಜೋಓಓ ಎಂದು ಹೊಯ್ಯುವ ಮಳೆಯಲ್ಲಿ ಕಮ್ಮಗೆ ಉಂಡು, ಬೆಚ್ಚನೆ ಹೊದ್ದು ಮಲಗಿದರೆ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದ….ʼ
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ನಾಲ್ಕನೆ ಕಂತು

Read More

ಗೋಧಿ ಹುಗ್ಗಿ ಗಂಗಯ್ಯ: ಮಂಜಯ್ಯ ದೇವರಮನಿ ಲಲಿತ ಪ್ರಬಂಧ

ಅವರಿಗೆ ಯಾರಾದರೂ ಎದುರಾಡಿದರೆ ಅವರ ಮದುವೆ ಮಾಡುವ ಬದಲು ತಿಥಿ ಮಾಡಿಬಿಡುತ್ತಿದ್ದ. ಏನಾದರೂ ಒಂದು ನವ ಹೇಳಿ ಯಾವ ಹೆಣ್ಣು ಹತ್ತದಂತೆ ಮಾಡಿ… ಮದುವೆ ಬದಲಿಗೆ ತಿಥಿ ಮಾಡಿ ಬಿಡುತ್ತಿದ್ದ. ಹಾಗಾಗಿ ಗಂಗಯ್ಯನನ್ನು ಎದುರು ಹಾಕಿಕೊಳ್ಳಲು ಊರಲ್ಲಿ ಯಾರಾದರೂ ಹೆದರುತ್ತಿದ್ದರು. ಈವಯ್ಯನ ಸುದ್ದಿ ಬೇಡ ಎಂದು ಸುಮ್ಮನಾಗುತ್ತಿದ್ದರು. ಮದುವೆಯಾಗದ ಅದೆಷ್ಟೋ ಹೆಣ್ಣು ಗಂಡಗಳನ್ನು ಗಂಟು ಹಾಕಿ ಶಾದಿಭಾಗ್ಯ ಕರುಣಿಸಿದ ರೂವಾರಿ ನಮ್ಮ ಗಂಗಯ್ಯ.
ಮಂಜಯ್ಯ ದೇವರಮನಿ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

Read More

ಪೆಟ್ಟಿಗೆ ಅಂಗಡಿಯಲ್ಲಿ ಭದ್ರವಾದ ನೆನಪುಗಳು: ಮಾಲತಿ ಶಶಿಧರ್ ಅಂಕಣ

ಅವರು ದೂರ ಹೋಗುತ್ತಾ ಕಣ್ಮರೆಯಾಗುತ್ತಿದ್ದ ಹಾಗೆ ನನ್ನ ಕುಚುಕು ಗೆಳತಿಯರು ಒಗ್ಗಟ್ಟಿನಿಂದ ನನಗಿಂತಲೂ ಎತ್ತರದಲ್ಲಿದ್ದ ಬಾಗಿಲು ಹತ್ತಲು ಸಹಕರಿದ್ದರು. ಅದೇನಾಯಿತೋ ಏನೋ ಅಷ್ಟರಲ್ಲೇ ಹೋದ ತಾತ ಮಗ ಗಿರಿಯಣ್ಣನ ಜೊತೆ tvs ಲೂನಾದಲ್ಲಿ ಬರುವುದನ್ನು ಕಂಡ ನನ್ನ ಮಿತ್ರದ್ರೋಹಿಗಳು ನನ್ನನ್ನೊಬ್ಬಳನ್ನೇ ಬಿಟ್ಟು ಓಡಿ ಹೋಗಿ ಪಕ್ಕದಲ್ಲೇ ಇದ್ದ ತೃಪ್ತಿ ಕ್ಯಾಂಟೀನ್ ಕಟ್ಟಡದ ಮಹಡಿ ಹತ್ತಿ ಅವಿತುಕೊಂಡು ಬಿಟ್ಟರು. ಯಾರ ಸಹಾಯವು ಇಲ್ಲದೇ ಒಳಗಿಂದ ಹತ್ತಿ ಆಚೆ ನೆಗೆಯಲು ಬಾರದೆ ಪರದಾಡುತ್ತಿದ್ದ ನನ್ನನ್ನ ತಾತ ಒಂದೇ ಹಿಡಿತದಲ್ಲಿ ಎತ್ತಿ ಆಚೆ ಹಾಕಿದ್ದರು.
ಮಾಲತಿ ಶಶಿಧರ್ ಬರೆಯುವ “ಹೊಳೆವ ನದಿ” ಅಂಕಣ

Read More

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್: ಇ.ಆರ್. ರಾಮಚಂದ್ರನ್ ಅಂಕಣ

ಟೆಸ್ಟ್ ಕ್ರಿಕೆಟ್ ಚೆನ್ನಾಗಿ ಆಡದಿದ್ದರೆ, ಬಿಸಿಸಿಐಅನ್ನು ಬಹಳ ಭಾರತೀಯರೇ ದೂರುತ್ತಾರೆ. ಒಂದು ರೀತಿಯಲ್ಲಿ ಇದು ಸಹಜ. ಭಾರತ ಟೆಸ್ಟ್ ಮ್ಯಾಚ್‌ಗಳನ್ನು ಚೆನ್ನಾಗಿ ಆಡುತ್ತಿಲ್ಲ ಅದಕ್ಕೆ ಹಣದ ವಾಸನೆ ಬಂದಿದೆ, ಅಲ್ಲಿ ಆಡುವವರೆಲ್ಲಾ ಹಣದಾಸೆಯಿಂದ ಟೆಸ್ಟ್ ಚೆನ್ನಾಗಿ ಆಡುತ್ತಿಲ್ಲ ಎಂಬ ಮಾತೂ ಈಗೀಗ ಕೇಳಿಬರುತ್ತಿದೆ. ಈ ಮಧ್ಯೆ ಭಾರತ ಯಾವ ಕಪ್ /ಟ್ರೋಫಿ, ಅದರಲ್ಲೂ ಐಸಿಸಿ ಟ್ರೋಫಿಯನ್ನು ಕಳೆದ 10 ವರ್ಷದಿಂದ ಗೆದ್ದಿಲ್ಲ. ಅದಕ್ಕೆ ಎಷ್ಟೋ ಅಭಿಮಾನಿಗಳೂ ಐಪಿಎಲ್‌ನ ಜರಿಯುತ್ತಾರೆ!
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ