Advertisement

Tag: kendasampige

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ”

ಸಿದ್ದಪ್ಪ ಮಾಸ್ತರರ ಮನೆಯ ದೃಶ್ಯ ಮಾತ್ರ ಸಂಪೂರ್ಣ ಬೇರೆಯಾಗಿತ್ತು.ಅಲ್ಲಿ ಯಾವುದೇ ಗಡಿಬಿಡಿಯಿರಲಿಲ್ಲ, ಹೊಗೆಯಿರಲಿಲ್ಲ, ಕೆಮ್ಮಿನ ಸದ್ದಿರಲಿಲ್ಲ. ಮಾಸ್ತರು ಬೆಳಿಗ್ಗೆ ಐದು ಗಂಟೆಗೆ ಎದ್ದು ತಣ್ಣೀರಿನ ಸ್ನಾನ ಮುಗಿಸಿ, ಶುಭ್ರವಾದ ಬಟ್ಟೆ ಧರಿಸಿ ಅಡುಗೆಮನೆಗೆ ಬರುತ್ತಿದ್ದರು. ಹಳೆಯ ಸ್ಟವ್‌ನ ನಾಬ್ ಅನ್ನು ಮೃದುವಾಗಿ ತಿರುಗಿಸುತ್ತಿದ್ದರು. ‘ಚಿಕ್’ ಎಂಬ ಸದ್ದಿನೊಂದಿಗೆ, ಅಲ್ಲಿ ನೀಲಿ ಜ್ವಾಲೆ ಮೃದುವಾಗಿ, ತಾಳಬದ್ಧವಾಗಿ ಉರಿಯಲು ಶುರುವಾಗುತ್ತಿತ್ತು. ಅವರ ಪತ್ನಿ ಶಾಂತಮ್ಮ, ಆ ನೀಲಿ ಜ್ವಾಲೆಯ ಮೇಲೆ ಹಬೆಯಾಡುವ ಮೃದುವಾದ ಇಡ್ಲಿ ಮತ್ತು ಪರಿಮಳ ಬೀರುವ ಸಾಂಬಾರ್ ಮಾಡುತ್ತಿದ್ದರು.
ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಶಿವಪುರದ ಅನಿಲ ದುರಂತ” ನಿಮ್ಮ ಓದಿಗೆ

Read More

ಸುಂದರ ಕಾಡಿನ ರೋಚಕ ಕಥೆಗಳು-೧೦: ರೂಪಾ ರವೀಂದ್ರ ಜೋಶಿ ಸರಣಿ

ಹಾಗೇ ಕಾಡು ಹಳ್ಳದ ಹಸೀ ಮಣ್ಣನ್ನು ಇಡೀ ಬಿರಟೆಗೆ ದಪ್ಪಗೆ ಮೆತ್ತಿ, ಒಂದೆಡೆ ಬೆಂಕಿ ಹಾಕಿ ಅದರೊಳಗೆ ಈ ಅಂಡೆ ಇಡುತ್ತಿದ್ದರಂತೆ. ಮಣ್ಣು ಮೆತ್ತಿರುವುದರಿಂದ ಅಂಡೆ ಸುಡದೇ ಒಳಗಡೆಯ ಅಕ್ಕಿ ಬೆಲ್ಲ ಹಾಲುಂಡು ಮೆತ್ತಗೆ ಬೆಂದು ರುಚಿಕಟ್ಟಾದ ಪಾಯಸ ರೆಡಿಯಾಗುತ್ತಿತ್ತಂತೆ. ಕತ್ತಿಯಲ್ಲಿ ಬಿದರ ಅಂಡೆ ಸೀಳಿ, ಒಳಗಿನ ಪಕ್ವಾನವನ್ನು ಕಾಡೆಲೆಯ ಮೇಲೆ ಹರಡಿಕೊಂಡು ಎಲ್ಲರೂ ಸೇರಿ ಲೊಟ್ಟೆಹೊಡೆಯುತ್ತ ತಿನ್ನುತ್ತಿದ್ದರಂತೆ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹತ್ತೊಂಭತ್ತನೆಯ ಕಂತು

Read More

ಕಮಲಾದಾಸ್, ಅನುವಾದ ಹಾಗೂ ಬರಹವೆಂಬ ಬಿಡುಗಡೆ….: ಡಾ. ಎಲ್.ಜಿ. ಮೀರಾ ಅಂಕಣ

ಆಧುನಿಕ ಭಾರತೀಯ ಸಾಹಿತ್ಯಚರಿತ್ರೆಯ ಲೇಖಕಿಯರ ಪಟ್ಟಿಯೆಂಬ ಆಕಾಶಗಂಗೆಯಲ್ಲಿ ಎದ್ದು ಕಾಣುವ ಒಂದು ವಿಭಿನ್ನ ನಕ್ಷತ್ರವೆಂದರೆ ಅದು ಕಮಲಾದಾಸ್. ಕೇರಳದ ಮಗಳಾದ ಈ ಹೆಣ್ಣುಮಗಳು ಲೋಕವನ್ನು ಕುರಿತ ತನ್ನ ಸೂಕ್ಷ್ಮ ಗ್ರಹಿಕೆಯಿಂದ ಬೇರೆ ಲೇಖಕ, ಲೇಖಕಿಯರು ಹೋಗಲು ಹೆದರುವ ಭಾವಲೋಕಗಳಿಗೆ ದಿಟ್ಟವಾಗಿ ಕಾಲಿಟ್ಟರು. ಪ್ರೀತಿ, ಮದುವೆ, ಜೀವನ, ಸಂಬಂಧಗಳು ಇವೆಲ್ಲವನ್ನೂ ಪುರುಷ ಪ್ರಧಾನ ಜಗತ್ತಿನಲ್ಲಿ ಹುಟ್ಟಿದ್ದರೂ ಅದರ ಬಂಗಾರದ ಸರಪಳಿಗಳಲ್ಲಿ ಬಂಧಿಯಾಗಲೊಪ್ಪದ ಧೈರ್ಯದ ಹೆಣ್ಣಿನ ಕಣ್ಣಿಂದ ನೋಡಿದರು, ಬರೆದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೊಂಭತ್ತನೆಯ ಬರಹ

Read More

ರಾಮಮನೋಹರ ಲೋಹಿಯಾ ಮತ್ತು ರಾಮ ಕೃಷ್ಣ ಶಿವ: ಚಿತ್ರಾ ವೆಂಕಟರಾಜು ಸರಣಿ

ಪ್ರಬಂಧದಲ್ಲಿ ರಾಮಮನೋಹರ ಲೋಹಿಯಾ ಅವರು ರಾಮ, ಕೃಷ್ಣ, ಶಿವ ಮೂವರಲ್ಲಿ ಒಂದೊಂದು ವ್ಯಕ್ತಿತ್ವವನ್ನು ಗುರುತಿಸಿದ್ದಾರೆ. ಆ ಮೂರೂ ವ್ಯಕ್ತಿತ್ವಗಳೂ ಭಾರತಕ್ಕೆ ಹೇಗೆ ಮತ್ತು ಯಾಕೆ ಬೇಕು ಎನ್ನುವುದೇ ಲೇಖನದ ಆಶಯ. ರಾಮನಲ್ಲಿನ ಸೀಮಿತ ವ್ಯಕ್ತಿತ್ವ, ಕೃಷ್ಣ ನ ಸಮೃದ್ಧ ವ್ಯಕ್ತಿತ್ಚ ಮತ್ತು ಶಿವ ನ ಪ್ರಮಾಣಾತೀತ ವ್ಯಕ್ತಿತ್ವ. ಈ ವ್ಯಕ್ತಿತ್ವಗಳನ್ನು ಆ ಪಾತ್ರಗಳ ಘಟನೆಗಳ ಮೂಲಕವೇ ನಿರೂಪಿಸುತ್ತಾರೆ. ರಾಮನೊಳಗೆ ಕೃಷ್ಣ ನ ಸಮೃದ್ಧ ವ್ಯಕ್ತಿತ್ವವೂ, ಕೃಷ್ಣನೊಳಗೆ ರಾಮನ ಸೀಮಿತತೆಯೂ ಬಂದುಬಿಡುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಸರ್ಕಲ್ ಆಫ್ ಲೈಫ್- ಬಾಲ್ಯ, ಹದಿಹರೆಯ, ವೃದ್ಧಾಪ್ಯಗಳ ಆಲಿಂಗನ: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಮಾತೇ ಮಾಣಿಕ್ಯ ಎನ್ನುವವರಿಗೆ ಮಾತು ಮಾಣಿಕ್ಯವಲ್ಲ ಮೌನ ಮಾಣಿಕ್ಯ ಎಂಬ ಸೂತ್ರಕ್ಕೆ ತಕ್ಕಂತೆ ಮಕ್ಕಳು ಅಣಿಯಾಗಿದ್ದರು. ಬೊಂಬೆ ಆಟದಲ್ಲಿ ಪ್ರಾವಿಣ್ಯತೆ ಪಡೆದ ಕ್ರಿಯಾಶೀಲರು ಗೊಂಬೆಯನ್ನು ಬಹಳ ಅಮೋಘವಾಗಿ ಓಡುವುದನ್ನು, ನಡೆಯುವುದನ್ನು, ಹಾರಾಡುವುದನ್ನು, ನಿಧಾನಗತಿಯ ಚಲನೆಯನ್ನು, ಬೈಕ್ ಸವಾರಿ ಮಾಡುವುದನ್ನು, ಕನಸು ಕಾಣುವ ವೈಶಿಷ್ಟ್ಯತೆಯನ್ನು ಅದ್ಭುತವಾಗಿ ರಚಿಸಿಕೊಂಡಿದ್ದರು. ಹದಿಹರೆಯದಲ್ಲಿರುವಾಗ ಮನುಷ್ಯನ ಆಸೆ ಆಕಾಂಕ್ಷೆಗಳು ಕೇವಲ ಮಾತುಗಳಲ್ಲಿಲ್ಲ ಭಾವನೆಗಳಲ್ಲಿವೆ.
ಕಲ್ಬುರ್ಗಿ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ‘ಸರ್ಕಲ್ ಆಫ್ ಲೈಫ್’ ಪಪೇಟ್ ಶೋ ಕುರಿತು ಡಾ. ರಾಜೇಂದ್ರಕುಮಾರ್‌ ಮುದ್ನಾಳ್‌ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ