Advertisement

Tag: kendasampige

ಬೆಣ್ಣೆಯೊಂದಿಗೆ ಬೆರೆತ ಮಜ್ಜಿಗೆ ಮಂಜುಗುಣಿ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜಲಪಾತದ ಎಡಮಗ್ಗಲಿನ ತಗ್ಗಿನಲಿ ನಿಂತು ನೋಡಿದರೆ ನೀರಿನ ನಡುವೆ ಅಲ್ಲಲ್ಲಿ ಗುಲಾಲಿ ಬಣ್ಣದ ರೇಖೆಗಳು ಕಾಣಿಸಿ ನಿಮ್ಮನ್ನು ತಬ್ಬಿಬ್ಬು ಗೊಳಿಸುತ್ತದೆ. ಯಾವುದು ದಿಟ ಯಾವುದು ಮಿಥ್ಯ ಎಂದರಿಯುವ ಹೊತ್ತಿಗೆ ಜಲಪಾತ ನಿಮ್ಮ ಮನಸ್ಸನ್ನು ಮತ್ತು ಒಡಲನ್ನು ಒದ್ದೆ ಮಾಡಿಸಿರುತ್ತದೆ. ಮೌನದಲ್ಲೇ ನೀವು ಮೇಲೆ ಬಂದು ಜಲಪಾತದ ಎಡ ಭುಜಕ್ಕಾನಿಸಿ ಕುಳಿತು ಧ್ಯಾನಸ್ಥರಾಗುವಿರಿ.
ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಹೊಸ ಬರಹ

Read More

ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ “ನೋಟ”

ಅವರಿಗೀಗಲೂ ಶಬ್ದ ಮಾಡುವವರಿಗಿಂತ, ಆ ಶಬ್ದವೇ ಆಪ್ತವಾಗಿತ್ತು. ಆದರೆ ಮೇಲಿನ ಮನೆಯ ಆ ಶಬ್ದ ಇತ್ತೀಚಿನ ದಿನಗಳಲ್ಲಿ ಎಷ್ಟೊಂದು ಸಹಜ ಎನಿಸಿದೆಯೆಂದರೆ, ಸದ್ದಾಗುವುದೂ ತನಗೀಗ ತಿಳಿಯುತ್ತಿಲ್ಲ ಎನಿಸಿ ಸಾವಿತ್ರಮ್ಮನಿಗೆ ನಗುಬರುತ್ತಿತ್ತು. ಜೊತೆಗೆ, ತನಗೆ ಕಿವಿ ಇನ್ನಷ್ಟು ಮಂದವಾಗುತ್ತಿದೆಯೇ ಎನ್ನುವ ಅನುಮಾನವೂ ಬರುತ್ತಿತ್ತು. ದಿನವಿಡೀ ನಂಜಯ್ಯ ಮಾತಾಡುವುದು ಅಷ್ಟಕ್ಕಷ್ಟೇ. ಮನೆಗೆ ಬರುವವರು ಆಡುವ ಮಾತೂ ಹೆಚ್ಚೇನಿರುವುದಿಲ್ಲ. ಹಾಗಾಗಿ ಸದಾ ತನಗೆ ಜೊತೆಯಾಗುವುದೆಂದರೆ ಅದೊಂದು ಸದ್ದು ಮಾತ್ರ …
ಅಲಕಾ ಕಟ್ಟೆಮನೆ ಬರೆದ ಕತೆ “ನೋಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಯುದ್ಧಕಾಲದಲ್ಲಿ ಸಂಜಿತ್ ಸಂಗೀತ ಸಂಜೆ: ಯೋಗೀಂದ್ರ ಮರವಂತೆ ಬರಹ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕಲಿಕೆ, ಜಾನಪದ ಮತ್ತು ಭಾವಗೀತೆಗಳ ಪ್ರಭಾವ ಎಲ್ಲವೂ ಸೇರಿ ತಾನೇ ಮೈಗೂಡಿಸಿಕೊಂಡ ಉಲ್ಲಾಸಭರಿತ ತಾಜಾ ಶೈಲಿ, ಯಾರಂತೆಯೂ ಅಲ್ಲದ ಆದರೆ ಮತ್ತೆ ಮತ್ತೆ ಕೇಳಬೇಕೆನಿಸುವ ಆಕರ್ಷಕ ಧ್ವನಿ ಮತ್ತು ಸ್ವರಸಂಚಾರ, ಸಿನಿಮಾ ಹಾಡುಗಾರಿಕೆಗೆ ಅತಿ ಅಗತ್ಯವಾದ ವಿಶಿಷ್ಟ ಭಾವ ರಸ ಸ್ಪುರಣೆ, ಎಲ್ಲದಕ್ಕಿಂತ ಮುಖ್ಯವಾಗಿ ಚಲನಚಿತ್ರ ಹಿನ್ನೆಲೆ ಗಾಯನದ ಸಾಂಪ್ರದಾಯಿಕ ಜಾಡಿನ ಜೊತೆಗೆ, ತನ್ನದೇ ನಿರ್ಮಾಣದ ಹಾಡುಗಳಲ್ಲಿ ಕಥನ ಮಾದರಿಯ ಸೃಜನಶೀಲ ನಿರೂಪಣೆಯ ಬಗೆಗಿನ ಕಾಳಜಿ ಮತ್ತು ಜಗತ್ತಿನ ಬೇರೆಬೇರೆ ಸಂಗೀತ ಪ್ರಕಾರಗಳ ಸೂಕ್ಷ್ಮ ಗಮನಿಸುವಿಕೆಯಿಂದ ಹುಟ್ಟಿದ ಪ್ರಯೋಗಗಳು ಸಮ್ಮಿಳಿತವಾಗಿ ಸಂಜಿತ್ ಹೆಗ್ಡೆ ಸಂಗೀತವನ್ನು ವೈಶಿಷ್ಟ್ಯಪೂರ್ಣ ನೆಲೆಯಲ್ಲಿ ನಿಲ್ಲಿಸುತ್ತದೆ.
ಯೋಗೀಂದ್ರ ಮರವಂತೆ ಬರಹ ನಿಮ್ಮ ಓದಿಗೆ

Read More

ಕುಡುಗೊಕ್ಕು ಹರಟೆಮಲ್ಲ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಇವು 22 ಸೆಂಮೀಟರ್ ಗಾತ್ರದ ಹಕ್ಕಿಗಳು. ಕಡುಗಂದು ಬಣ್ಣದ ದೇಹ; ಮುಖದಲ್ಲಿ ಎದ್ದು ಕಾಣುವ ಬಿಳಿ ಹುಬ್ಬು, ಬಿಳಿ ಬಣ್ಣದ ಗಲ್ಲ ಮತ್ತು ಎದೆ; ಕುಡುಗೋಲಿನಂತೆ ಬಾಗಿದ, ಹಳದಿ ಬಣ್ಣದ ಗಟ್ಟಿಮುಟ್ಟಾದ ಕೊಕ್ಕು, ಅಷ್ಟೇ ಬಲಿಷ್ಟವಾದ ಕಾಲು ಮತ್ತು ಪಾದಗಳು; ಬಹುದೂರ ಹಾರಲಾಗದ, ಸಣ್ಣ-ಗುಂಡಾದ ರೆಕ್ಕೆಗಳು. ಸಡಿಲವಾಗಿ ಅಂಟಿಸಿರುವಂತೆ ಕಾಣುವ ಬಾಲ. ಸಾಧಾರಣವಾಗಿ ಆರರಿಂದ ಏಳು ಪಕ್ಷಿಗಳು ಒಟ್ಟಾಗಿ ವಾಸಮಾಡುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕುಡುಗೊಕ್ಕು ಹರಟೆಮಲ್ಲ
ಹಕ್ಕಿಯ ಕುರಿತ ಬರಹ ಇಲ್ಲಿದೆ

Read More

ಶ್ರೀರಂಗನಾಯಕ ರಾಜೀವ ಲೋಚನ ರಮಣ…: ವಿನಾಯಕ ಅರಳಸುರಳಿ ಅಂಕಣ

ಕೋಣೆ ಹಾಗೂ ಅದರ ಹಾಸಿಗೆಗಷ್ಟೇ ಸೀಮಿತವಾಗಿ ಹೋದ ಅಜ್ಜನಿಗೆ ಇಡೀ ಮನೆಯಲ್ಲಿ ಸ್ವಲ್ಪವಾದರೂ ಮನೋರಂಜನೆಗೆ ಒದಗುತ್ತಿದ್ದವನು ನಾನೊಬ್ಬನೇ. ಯಾವ್ಯಾವುದೋ ಸಿನಿಮಾ, ಭೂತ, ಪ್ರೇತದ ಕಥೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅಂಗಳದಲ್ಲಿ ಡಿಶೂಂ ಡಿಶೂಂ ಎಂದು ಗಾಳಿಯೊಡನೆ ಗುದ್ದಾಡುತ್ತ ಸುಳಿದಾಡುತ್ತಿದ್ದ ನನ್ನನ್ನು ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ ‘ಇಲ್ಲಿ ಜಗುಲೀಲಿ, ನನ್ನ ಎದುರೇ ಆಡು ಗಣೇಶಾ’ ಎಂದು ಗೋಗರೆಯುತ್ತಿದ್ದರು.‌
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ