Advertisement

Tag: kendasampige

ಸ್ನೇಹ-ಸಂಬಂಧಗಳ ಮೊಕದ್ದಮೆಗಳಲ್ಲಿ ಸಾಕ್ಷಿ ಕೊಡಬೇಕಾದವರು ನಿರಪರಾಧಿಗಳೇ!: ವಿನಾಯಕ ಅರಳಸುರಳಿ ಅಂಕಣ

ನಿಜವಾದ ಸಂಗತಿಯೇನೆಂದರೆ ಎಷ್ಟೋ ಬಾರಿ ಇಂಥಾ ಅಪವಾದ, ಅಪನಂಬಿಕೆಗಳು ಆ ಕ್ಷಣಕ್ಕೆ ಹುಟ್ಟಿದವುಗಳಾಗಿರುವುದೇ ಇಲ್ಲ. ಒಬ್ಬ ವ್ಯಕ್ತಿಯ ಸ್ನೇಹ, ಸಾಂಗತ್ಯದಲ್ಲಿರುವಾಗಲೇ ಮನುಷ್ಯ ಇಂಥಾದ್ದೊಂದು ಅಗಲಿಕೆಗೆ ತಯಾರಿ ಮಾಡಿಕೊಳ್ಳುತ್ತಿರುತ್ತಾನೆ. ತನಗೆ ಇಷ್ಟವಾಗದ ಆತನ ವ್ಯಕ್ತಿತ್ವಗಳನ್ನು ಹೆಕ್ಕಿಟ್ಟುಕೊಳ್ಳುತ್ತಿರುತ್ತಾನೆ! ಇಂಥಾದ್ದೊಂದು ಸಮಯ ಬಂದಾಗ ಥಟ್ಟನೆ ಅವನ್ನೆಲ್ಲ ಆಚೆ ತೆಗೆದು ‘ಅಕಾರ್ಡಿಂಗ್ ಟೂ ಆ್ಯಕ್ಟ್ ತ್ರೀ ನಾಟ್ ಟೂ’ ಎಂದು ಅವನ್ನು ಹಾಜರುಪಡಿಸಿಯೇ ಬಿಡುತ್ತಾನೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

Read More

ಭರವಸೆಯ ಬುತ್ತಿ, ಶಾಂತಿದೂತೆ – ಜೇನ್ ಗುಡಾಲ್: ಕ್ಷಮಾ ವಿ.ಭಾನುಪ್ರಕಾಶ್ ಬರಹ

ಸಂಶೋಧನೆಗಳಿಗಾಗಿ ಸೆರೆಯಲ್ಲಿರುವ ಪ್ರಾಣಿಗಳ ಆರೈಕೆಯ ಬಗ್ಗೆ, ವನ್ಯಜೀವಿಗಳ ಅಕ್ರಮ ಸಾಗಾಣಿಕೆ ಹಾಗೂ ಮಾರಾಟದ ವಿರುದ್ಧ ತಮ್ಮ ಸಂಸ್ಥೆಯ ಮೂಲಕ ಜೇನ್ ವಿಶ್ವಮಟ್ಟದಲ್ಲಿ ಪ್ರಭಾವಿ ಹೆಸರಾಗಿದ್ದು, ಪರಿಣಾಮಕಾರಿ ಕೆಲಸಗಳನ್ನು ಮಾಡಿದ್ದಾರೆ. ಜೇನ್ ಗುಡಾಲ್ ಇನ್ಸ್ಟಿಟ್ಯೂಟ್ ನ ‘ರೂಟ್ಸ್ ಆಂಡ್ ಶೂಟ್ಸ್’ ಎಂಬ ಶಾಖೆಯು ಯುವಪೀಳಿಗೆಯನ್ನು ಪರಿಸರ ರಕ್ಷಣೆಯ ನಿಜವಾದ ಸವಾಲುಗಳಿಗೆ ಸಿದ್ಧ ಪಡಿಸುವೆಡೆಗೆ, ಪರಿಸರದ ಬಗ್ಗೆ ಜವಾಬ್ದಾರಿಯಿಂದ ನಡೆದುಕೊಳ್ಳುವ ಕಡೆಗೆ ಅನೇಕ ಯೋಜನೆಗಳ ಮುಖಾಂತರ ಮಾರ್ಗದರ್ಶನ ನೀಡುತ್ತಿದೆ.
ಇತ್ತೀಚ್ಚೆಗೆ ತೀರಿಕೊಂಡ ವಿಜ್ಞಾನಿ ಜೇನ್‌ ಗುಡಾಲ್‌ ಕುರಿತು ಕ್ಷಮಾ ವಿ. ಭಾನುಪ್ರಕಾಶ್‌ ಬರಹ ನಿಮ್ಮ ಓದಿಗೆ

Read More

ಅಮ್ಮಮ್ಮನಾದ ಹೊತ್ತು…: ಡಾ. ಎಚ್.ಎಸ್.‌ ಅನುಪಮಾ ಮಾತುಗಳು

ಅಲ್ಲಿಂದ ಇಲ್ಲಿಯವರೆಗೆ ಅನುದಿನ ಪುಟ್ಟನ ಸುದ್ದಿ, ನೆನಪುಗಳಿಂದಲೇ ಬೆಳಕು ಹರಿಯುತ್ತದೆ, ಕತ್ತಲಾಗುತ್ತದೆ. ಅವ ಮಗುಚಿದ, ಕೂತ, ತೊದಲು ಮಾತನಾಡಿದ, ಎದ್ದ, ನಿಂತ ಎನ್ನುವುದೆಲ್ಲ ನಮ್ಮದೇ ಸಾಧನೆ ಎಂಬಂತಾಗಿದೆ. ಹಲ್ಲು ಕಡಿದು ಮುದ್ದು ಮಾಡುತ್ತ ಮಾಡುತ್ತ ಮುಂದಿನ ಹಲ್ಲು ಸವೆದೇ ಹೋದಂತಿದೆ! ಸಣ್ಣ ಅವಕಾಶ, ಪುರುಸೊತ್ತು ಸಿಕ್ಕರೂ ಬೆಂಗಳೂರಿಗೆ ಹೋಗಿ ಪುಟ್ಟನ ಕಂಡುಬರುವಾ ಅನಿಸುತ್ತದೆ. ಈ ಅಮ್ಮ ತಮ್ಮನ್ನಿಷ್ಟು ಪ್ರೀತಿಸಿದ್ದಳೋ ಇಲ್ಲವೋ ಎಂದು ನಮ್ಮ ಮಕ್ಕಳು ಶಂಕಿಸಬಹುದಾದಷ್ಟು ಬದುಕು ಸೂರ್ಯಮಯವಾಗಿದೆ!
ಡಾ. ಎಚ್.ಎಸ್.‌ ಅನುಪಮಾ ಕವನ ಸಂಕಲನ “ಅಮ್ಮಮ್ಮನ ಕವಿತೆಗಳು” ಕೃತಿಯ ಕುರಿತು ಅವರ ಬರಹ ನಿಮ್ಮ ಓದಿಗೆ

Read More

ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಡಾ।। ಮಧು ಚಿತ್ತರ್ವು ಕತೆ

ಎಲಿಜಿಯಂ ಕಾಲಮಾನ ಮಧ್ಯರಾತ್ರಿ 12:00. ಕತ್ತಲೆ. ಮಧ್ಯರಾತ್ರಿಯಾಗಿದೆ. ತಗ್ಗದ ಬಿರುಗಾಳಿ, ತೀವ್ರವಾಗಿ ಮಳೆ. ಪವರ್ ಇಲ್ಲ. ಯಾವ ವ್ಯವಸ್ಥೆಗಳೂ ಕೆಲಸ ಮಾಡುತ್ತಿಲ್ಲ. ಎಲ್ಲರೂ ಹೋಗಿದ್ದಾರೆ. ಆದರೆ ನಾನು ಹೋಗಲು ಸಾಧ್ಯವಾಗುತ್ತಿಲ್ಲ. ನನಗೆ ಏನೋ ಆಗಿದೆ. ನನ್ನ ದೇಹವೆಲ್ಲಾ ದುರ್ಬಲವಾಗಿದೆ. ನನ್ನ ಅಂಗಾಂಗಗಳು ಚಲಿಸುತ್ತಿಲ್ಲ. ಆ ಮಳೆ ನೀರಿಗೆ ಆಶ್ಚರ್ಯಕರವಾಗಿ ನನ್ನ ದೇಹವೆಲ್ಲಾ ಗಾಯಗಳಾಗಿವೆ. ಅವು ಹಸಿರು ಬಣ್ಣದಲ್ಲಿವೆ. ಬಹುಶಃ ಇದೇ ನನ್ನ ಕೊನೆಯ ದಿನ. ಇದೇ ಕೊನೆಯ ಸಂದೇಶ… ಏಕೆಂದರೆ ಕೈಗಳು, ಮೆದುಳು ಮಾತ್ರ ಕೆಲಸ ಮಾಡುತ್ತಿವೆ.
ಕೋಡಿಹಳ್ಳಿ ಮುರಳಿಮೋಹನ್ ಅನುವಾದಿಸಿದ ತೆಲುಗಿನ ಡಾ।। ಮಧು ಚಿತ್ತರ್ವು ಕತೆ “ಸಿಂಬಯಾಸಿಸ್” ನಿಮ್ಮ ಈ ಭಾನುವಾರದ ಓದಿಗೆ

Read More

ಹಿರಿಮೆ-ಗರಿಮೆ ಲೋಕದಲ್ಲಿ ಸಿಕ್ಕ ಆಸ್ಟ್ರೇಲಿಯನ್ ಹಕ್ಕಿ: ಡಾ. ವಿನತೆ ಶರ್ಮಾ ಅಂಕಣ

ಕುತೂಹಲಕಾರಿ ವಿಷಯವೆಂದರೆ ಈ ವರ್ಷ ೨೦೨೫ರಲ್ಲಿ ಅಮೆರಿಕಾ ದೇಶವು ಹನ್ನೆರಡನೇ ಸ್ಥಾನಕ್ಕೆ ಇಳಿದಿದೆ. ಯು.ಎಸ್.ಎ ಪಾಸ್ಪೋರ್ಟ್ ಇರುವವರು ೧೮೦ ದೇಶಗಳಿಗೆ ವೀಸಾ ಪಡೆಯದೆ ಹೋಗಬಹುದು. ಹೆನ್ಲಿ ಸಂಸ್ಥೆಯ ಅಧ್ಯಯನದ ಪ್ರಕಾರ ೨೦೧೪ ನೇ ಇಸವಿಯಲ್ಲಿ ಅಮೆರಿಕೆಯು ಮೊಟ್ಟಮೊದಲ ಸ್ಥಾನದಲ್ಲಿದ್ದು ಪ್ರಪಂಚದ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಎನ್ನುವ ಹಿರಿಮೆ, ಮಾನ್ಯತೆಯಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ