Advertisement

Tag: kendasampige

ಕನ್ನಡದ ಡಿಜಿಟಲ್ ನವೋದಯ ಮತ್ತು ವಿಜ್ಞಾನ ಬರವಣಿಗೆ: ಎಲ್.ಜಿ.ಮೀರಾ ಅಂಕಣ

ಹಲವಾರು ಲೇಖಕ-ಲೇಖಕಿಯರು ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಾರೆ, ಕೊಡುತ್ತಿದ್ದಾರೆ. ಆದರೂ ಕರ್ನಾಟಕದ ಜನಮಾನಸದಲ್ಲಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ವಿಜ್ಞಾನದ ಅಧ್ಯಾಪಕರಲ್ಲಿ ಮತ್ತು ಸಂಶೋಧಕರಲ್ಲಿ `ವಿಜ್ಞಾನವೆಂದರೆ ಇಂಗ್ಲಿಷಿನಲ್ಲಿ ಇರುವಂಥದ್ದು, ಇರಬೇಕಾದದ್ದುʼ ಎಂಬ ಗಾಢ ಭಾವನೆ ಬೇರೂರಿದೆ. ಈ ಭಾವನೆ-ಚಿಂತನೆಯ ತಿರುಳು ಎಂದರೆ “ತೀರಾ ಗಂಭೀರ ವಿಜ್ಞಾನ ವಿಚಾರಗಳನ್ನು ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಲೇಖನಗಳನ್ನು ಕನ್ನಡದಲ್ಲಿ ಬರೆಯಲಾಗದು, ಹಾಗೆ ಬರೆಯಲು ಸೂಕ್ತ ಪದಗಳೇ ಸಿಗುವುದಿಲ್ಲ” ಎಂಬ ಅನಿಸಿಕೆ ಅಥವಾ ಪೂರ್ವಗ್ರಹ. ಇದು ವಿಜ್ಞಾನಕ್ಷೇತ್ರದ ಹಲವು ಅಧ್ಯಾಪಕರು ಮತ್ತು ವಿಜ್ಞಾನಿಗಳಲ್ಲಿದೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ

Read More

ಮನದಂಗಳದಲ್ಲಿ ಬೆಳಗುವ ಮಲೆನಾಡಿನ ದೀಪಾವಳಿ: ಭವ್ಯ ಟಿ.ಎಸ್. ಸರಣಿ

ಬೇರೆಲ್ಲ ಹಬ್ಬಗಳು ಒಂದು ಎರಡು ದಿನಗಳಲ್ಲಿ ಮುಗಿದುಹೋದರೆ, ದೀಪಾವಳಿ ಮಾತ್ರ ನಾಲ್ಕು ಐದು ದಿನ ಮನೆಗಳಲ್ಲಿ ಸಂಭ್ರಮ ತುಂಬಿಸುತ್ತದೆ. ಕಾರ್ತಿಕ ಮಾಸ ಪೂರ್ತಿ ದೇವಾಲಯಗಳಲ್ಲಿ ಮನೆಗಳಲ್ಲಿ ನಿರಂತರ ದೀಪೋತ್ಸವ ಜರಗುತ್ತದೆ. ದೀಪಾವಳಿ ಹಬ್ಬಕ್ಕೆ ಪೂರ್ವ ಸಿದ್ಧತೆ ಸಾಕಷ್ಟು ಬೇಕು. ಭೂರೆ ತುಂಬಿಸುವುದು ಎಂಬ ಪದ್ಧತಿಯಿಂದ ಶುರುವಾಗುವ ಈ ಹಬ್ಬ ಎಣ್ಣೆ ಸ್ನಾನ, ಗೋಪೂಜೆ ಲಕ್ಷ್ಮೀ ಪೂಜೆ, ನರಕ ಚತುರ್ದಶಿ, ಬಲಿಪಾಡ್ಯಮಿ, ಕರಿ ಎಂಬ ದಿನಗಳನ್ನು ಮುಗಿಸಿ ಹೊಸ ತೊಡಕುವಿನೊಂದಿಗೆ ಬೀಳ್ಕೊಡುತ್ತದೆ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ

Read More

ಬಸ್ ಒಡೆಯನೆಂದು ನಂಬಿ, ನಾನು ಯಾಮಾರಿದ್ದು!!!: ಬಸವನಗೌಡ ಹೆಬ್ಬಳಗೆರೆ ಸರಣಿ

ನಾನು ಅಂದು ಪ್ರವಾಸಕ್ಕೆ ಹೊರಟಿದ್ದೆ. ನನಗಾಗಿ ಹುಡುಗರು ಕಾಯುತ್ತಿದ್ದರು. ಪದೇ ಪದೇ ಕಾಲ್ ಬೇರೆ ಮಾಡುತ್ತಿದ್ದರು. ಹೋಗುವ ಧಾವಂತ ಬೇರೆ. ಆಸಾಮಿ ಬಿಡಲೇ ಇಲ್ಲ. ಅವನ ಮಾತನ್ನು ನಿಜವೆಂದು ನಾನು ಅವನಿಗೆ ಮತ್ತೆ 500 ರುಪಾಯಿಗಳನ್ನು ಕೊಟ್ಟೆ. ಕೊಟ್ಟಾಕ್ಷಣ “ನಾಳೇನೇ ನಿಮ್ಮ ಖಾತೆಗೆ ಹಾಕ್ತೇನೆ” ಎಂದ. ನಾನು ನನ್ನ ಮೊಬೈಲ್ ಸಂಖ್ಯೆಯನ್ನೂ ಕೊಟ್ಟೆ. ಕೊಟ್ಟ ತಕ್ಷಣ ನಾನು ಕಾಯುತ್ತಿದ್ದ ಬಸ್ ಬಂತು. ಅವನು ಲಗುಬಗೆಯಿಂದಲೇ ನನ್ನನ್ನು “ಹೋಗಿ ಹೋಗಿ” ಎಂದು ಬಸ್ ಹತ್ತಿಸಿದ. ಮಾರನೇ ದಿನ ಅವನು ಕಾಲ್ ಮಾಡುತ್ತಾನೆಂದು ಕಾದೆ. ಮಾಡಲಿಲ್ಲ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೇಳನೆಯ ಕಂತು ನಿಮ್ಮ ಓದಿಗೆ

Read More

ತುಳುನಾಡಿನ ದೀಪಾವಳಿ: ಫಕೀರ್ ಮುಹಮ್ಮದ್ ಕಟ್ಪಾಡಿ ನೆನಪುಗಳು

ಪಟಾಕಿ ಸುಡುವುದರ ಬಗ್ಗೆ ಕ್ಲಾಸಿನಲ್ಲಿ ಪಾಠದ ಮಧ್ಯೆ ಸುಮ್ಮನೆ ದಂಡಕ್ಕೆ ಎಂದು ಬೋಧಿಸಿದ್ದ ನಮ್ಮ ನೆರೆಮನೆಯ ದೇಜು ಮಾಸ್ಟ್ರು ತಮ್ಮ ಮಕ್ಕಳು ಕೃಷ್ಣ, ಲಕ್ಷ್ಮಣ, ಪುಟ್ಟ ಮಗು ಮಾರುತಿಯರನ್ನು ಕರೆದುಕೊಂಡು ಬಂದು ನಮ್ಮ ತಂದೆಯವರ ಜೊತೆಗೆ ನಿಂತು ಉತ್ಸವವನ್ನು ನೋಡಿದಂತಾಯಿತೆಂದು ಹೇಳಿಕೊಂಡು, ಖುಷಿ ಪಟ್ಟುಕೊಂಡು, ನಮ್ಮ ಸಂತೋಷದಲ್ಲಿ ಭಾಗಿಯಾಗಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಮ್ಮ ಸುಡು ಮದ್ದು ಬಿರುಸು ಬಾಣಗಳ ವೈಭವವನ್ನು ಸವಿದ ಊರವರು ಮುಂದೆ ವರ್ಷಗಟ್ಟಲೆ ಈ ದೀಪಾವಳಿಯನ್ನು `ಗುರುಕುಲೆ ಇಲ್ಲದ ದೀಪೋಲಿ’ ಎಂತಲೇ ನೆನಸಿ ಕೊಳ್ಳುತ್ತಿದ್ದರು.
ತುಳುನಾಡಿನ ದೀಪಾವಳಿಯ ಆಚರಣೆಗಳ ಕುರಿತು ಫಕೀರ್ ಮುಹಮ್ಮದ್ ಕಟ್ಪಾಡಿ ನೆನಪುಗಳು ನಿಮ್ಮ ಓದಿಗೆ

Read More

ಅನುರೂಪ ವಸ್ತುಗಳ ಸಂಚಯನ ಎಲೆ ಅಡಿಕೆ ಚೀಲ: ಸುಮಾವೀಣಾ ಸರಣಿ

ನಮ್ಮ ಮೊಬೈಲ್‌ಗೆ ಈಗ ಫಿಂಗರ್ ಪ್ರಿಂಟ್ಸ್ ಲಾಕ್ ಇದೆಯಲ್ಲಾ ಹಾಗೆ ಅಜ್ಜಿ ತನ್ನ ಚೀಲಕ್ಕೆ ಹಾಕುತ್ತಿದ್ದ ನ್ನಾಟಿ ನ್ನಾಟ್ ಅನ್ನು ಯಾರಿಗು ಬಿಚ್ಚಲಾಗುತ್ತಿರಲಿಲ್ಲ. ಮುರಿದ ಆಭರಣದ ಚೂರುಗಳು ಬೆಳ್ಳಿಯ ಚೂರುಗಳನ್ನು ಚಿಕ್ಕ ಪ್ಲಾಸ್ಟಿಕ್‌ನಲ್ಲಿ ಹಾಕಿ ಚೀಲದ ಒಳ ಪದರದ ಒಳ ಪದರದಲ್ಲಿ ಇಡುವುದು, ಅವರ ಇವರ ತೋಟಕ್ಕೆ ಹೋದಾಗ ಅಪರೂಪದ ತರಕಾರಿ ಬೀಜ ಸಿಕ್ಕರೆ ಅದನ್ನು ಅದರಲ್ಲೆ ಇಡುವುದು, ಅಲ್ಲೇ ಬಿಡಿಸಿ ಅಲ್ಲೇ ಮುಡಿದುಕೊಳ್ಳಲು ಹೂ ಕಟ್ಟುವ ದಾರವೂ ಅಲ್ಲೇ ಇರುತ್ತಿತ್ತು. ದೇವಸ್ಥಾನಕ್ಕೆ ಹೋದರೆ ಕುಂಕುಮ ಪ್ರಸಾದ, ಗಂಧ ಅದರಲ್ಲೇ ಇಡುವುದು. ತಲೆಸುತ್ತುವಿಕೆಗೆ, ಅಜೀರ್ಣಕ್ಕೆ, ಬಾಯಿ ವಾಸನೆ ಬರದಂತೆ ತಡೆಯಲು, ಹಲ್ಲು ನೋವಿಗೆ, ಶೀತಕ್ಕೆ ನಶ್ಯ ಎಲ್ಲಾ ಅದರಲ್ಲೇ ಇರುತ್ತಿತ್ತು.ಸುಮಾವೀಣಾ ಬರೆಯುವ “ಮಾತು ಖ್ಯಾತೆ” ಸರಣಿ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ